ಮೇಷ ರಾಶಿಯವರಿಗೆ ದೈವಬಲ ಇರುವುದರಿಂದ 2024 ರಲ್ಲಿ ಶುಭಫಲಗಳೇ ಹೆಚ್ಚು ಆದ್ರೆ..

0 12,424

2024ರಲ್ಲಿ ಮೇಷ ರಾಶಿಯವರ ವಾರ್ಷಿಕ ಭವಿಷ್ಯ ಹೇಗಿದೆ ನೋಡೋಣ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಯಾವ ರೀತಿಯ ಶುಭಫಲ ಮತ್ತು ಅಶುಭ ಫಲಗಳು ದೊರಕುತ್ತದೆ ಎಂದು ನೋಡೋಣ.

ಧನುರ್ ಲಗ್ನದಲ್ಲಿ ಕುಜ ಗ್ರಹ ಮತ್ತು ರವಿ ಗ್ರಹ ಪ್ರವೇಶ ಮಾಡುವುದು. ಇನ್ನು ರಾಹು ಗ್ರಹ ಕನ್ಯಾ ರಾಶಿಯಲ್ಲಿ ಮತ್ತು ಕೇತು ಗ್ರಹ ಮೀನ ರಾಶಿಯಲ್ಲಿ ಇರುತ್ತವೆ. ಗುರು ಗ್ರಹ ಮೇ ತಿಂಗಳಿನಲ್ಲಿ ಮೇಷ ರಾಶಿಯ ಎರಡನೇ ಮನೆಗೆ ಪ್ರವೇಶ ಮಾಡುತ್ತದೆ ಅಲ್ಲಿಯ ತನಕ ಗುರು ಗ್ರಹ ಮೇಷ ರಾಶಿಯಲ್ಲಿ ಇರುತ್ತದೆ. ಜನ್ಮ ರಾಶಿಯಲ್ಲಿ ಗುರು ಗ್ರಹ, 6ನೇ ಮನೆಯಲ್ಲಿ ಕೇತು ಗ್ರಹ, 8ನೇ ಮನೆಯಲ್ಲಿ ಬುಧ ಗ್ರಹ ಮತ್ತು ಶುಕ್ರ ಗ್ರಹ ಪ್ರವೇಶ ಮಾಡುತ್ತಾರೆ. ಭಾಗ್ಯ ಸ್ಥಾನದಲ್ಲಿ ಅಂದ್ರೆ 9ನೇ ಮನೆಯಲ್ಲಿ ಕುಜ ಗ್ರಹ ಮತ್ತು ರವಿ ಗ್ರಹ. 11ನೇ ಮನೆಯಲ್ಲಿ ಶನಿ ಗ್ರಹ ಮತ್ತು 12ನೇ ಮನೆಯಲ್ಲಿ ರಾಹು ಗ್ರಹ ಸಂಚಾರ ಮಾಡುತ್ತವೆ.

ಮೇಷ ರಾಶಿಯವರಿಗೆ ಗ್ರಹ ಸ್ಥಿತಿ ಆಧಾರದ ಮೇಲೆ ಈ ವರ್ಷ ಶೇಕಡಾ 60-70% ಶುಭ ಫಲ ಸಿಗುತ್ತದೆ.  ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಒಳ್ಳೆಯದು. ವೃತ್ತಿಯಲ್ಲಿ ಮಿಶ್ರ ಫಲ ಸಿಗುತ್ತದೆ, ಆರ್ಥಿಕ ಸ್ಥಿತಿಯ ಸ್ವಲ್ಪ ಏರು ಪೇರು ಕಂಡು ಬರುತ್ತದೆ. ಹೊಸ ವಾಹನ ಖರೀದಿ ಮಾಡುವ ಅವಕಾಶ ಇದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಸಾಮರಸ್ಯ ಕಡಿಮೆ ಆಗುತ್ತದೆ.

ಆರ್ಥಿಕ ಜೀವನದಲ್ಲಿ ಹೆಚ್ಚು ಗಟ್ಟಿಯಾಗುತ್ತದೆ ಮತ್ತು ಪ್ರಭಲವಾಗುತ್ತದೆ. ವಿಧ್ಯಾರ್ಥಿಗಳಿಗೆ ಹೆಚ್ಚಿನ ಪ್ರಗತಿ ಸಾಧನೆ ಮಾಡಲು ಸುಸಮಯ. ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವ ಅವಕಾಶ ಇದೆ, ಓದನ್ನು ಮುಂದುವರಿಸಲು ಬಯಸುವ ಜನರಿಗೆ ಈ ಸಮಯ ಒಳ್ಳೆಯದು.
ವಿದ್ಯಾ ಸಂಸ್ಥೆ ನಡೆಸುವವರಿಗೆ ಕೂಡ ಒಳ್ಳೆ ಪ್ರಗತಿ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಜನರಿಗೂ ಈ ವರ್ಷ ಒಳ್ಳೆ ಫಲ ಕೊಡುತ್ತದೆ. ಬೇರೆ ಯಾವ ದೇಶಕ್ಕೆ ಬೇಕಾದರೂ ಹೋಗಿ ಶಿಕ್ಷಣ ಮುಂದುವರೆಸಬಹುದು.

ವಿವಾಹ ಲಗ್ನ ಕೂಡಿ ಬಾರದೆ ಇರುವ ಜನರಿಗೆ ಕೂಡ ಈ ವರ್ಷ ಮದುವೆ ಆಗುತ್ತದೆ. ಗುರು ಗ್ರಹದ ಬಲದಿಂದ ವಿವಾಹ ಯೋಗ ಪ್ರಾಪ್ತಿಯಾಗುತ್ತದೆ. ಕಂಕಣ ಬಲ ಕೂಡ ಕೂಡಿ ಬರುತ್ತದೆ. ವೈವಾಹಿಕ ಜೀವನ ಹೆಚ್ಚು ಸುಗಮವಾಗುತ್ತದೆ ಹೊಂದಾಣಿಕೆ ಹೆಚ್ಚಾಗುತ್ತದೆ. ಸಂತಸ, ಸುಖ ನೆಮ್ಮದಿ ಬಂದು ನೆಲೆಸುತ್ತದೆ. ಹಣದ ಒಳ ಹರಿವು ಹೆಚ್ಚಾಗುತ್ತದೆ ಹಲವು ಮೂಲಗಳಿಂದ ಹಣ ಗಳಿಕೆ ಮಾಡುವುದು ಮತ್ತು ಉಳಿತಾಯ ಮಾಡುವ ಯೋಚನೆ ಮಾಡುತ್ತೀರಿ.

ಆದಾಯ ಬಂದಂತೆ ಖರ್ಚು ಕೂಡ ಹೆಚ್ಚಾಗುತ್ತಾ ಹೋಗುತ್ತದೆ.  ವ್ಯವಹಾರದ ವಿಷಯಕ್ಕೆ ಸಂಬಂಧಿಸಿದ ಹೂಡಿಕೆ ಮಾಡಲು ಇದು ಉತ್ತಮ ಕಾಲ, ಅದರ ಬಗ್ಗೆ ಜ್ಞಾನ ಪಡೆದು ಮುಂದುವರೆಯುವುದು ಉತ್ತಮ. ಇಲ್ಲದೆ ಹೋದರೆ ನಷ್ಟ ಅನುಭವಿಸಬೇಕಾಗುತ್ತದೆ. ಯಾವುದೇ ರೀತಿ ಹಣಕ್ಕೆ ಶ್ಯುರಿಟಿ ಹಾಕುವುದು, ಸಾಲ ಕೊಡುವುದು, ಕೊಡಿಸುವುದು ಒಳ್ಳೆಯದು ಅಲ್ಲ ನಂಬಿಕೆ ದ್ರೋಹ ಆಗುವ ಸಾಧ್ಯತೆ ಇದೆ ಅದರಿಂದ ದೂರ ಉಳಿಯುವುದು ಉತ್ತಮ.

ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟ, ಮಾರ್ಕೆಟಿಂಗ್ ಟೀಮ್’ಗಳಲ್ಲಿ ಕೆಲಸ ಮಾಡುವ ಜನರಿಗೆ, ಎಂಜಿನಿಯರ್, ಲಾಯರ್ , ಫ್ಲೋರಿ ಕಲ್ಚರ್, ಇಂಪೋರ್ಟ್ ಮತ್ತು ಎಕ್ಸ್ಪೋರ್ಟ್ ಉದ್ಯಮದವರಿಗೆ ಹಾಗೂ ವೈದ್ಯಕೀಯ ವೃತ್ತಿ ಮಾಡುವ ಜನರಿಗೆ ಒಳ್ಳೆ ಲಾಭ ಸಿಗುತ್ತದೆ. ಒಳ್ಳೆ ಪದವಿ ಮತ್ತು ಪುರಸ್ಕಾರ ಸಿಗುವ ಸಾಧ್ಯತೆ ಹೆಚ್ಚಾಗಿ ಇದೆ. ವ್ಯಾಪಾರ ವ್ಯವಹಾರ ಒಳ್ಳೆ ಲಾಭ ತರುತ್ತದೆ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ವೃತ್ತಿಯಲ್ಲಿ ಮೇ ತಿಂಗಳ ತನಕ ಮೇಲಿನ ಅಧಿಕಾರಿಗಳ ಕಿರುಕುಳ ನೀಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ನಿರೀಕ್ಷೆ ಮಾಡಿದ ಕೆಲಸಗಳಲ್ಲಿ ವಿಳಂಬ ಆಗುತ್ತದೆ. ಪ್ರಗತಿ ನಿಧಾನ ಗತಿಯಲ್ಲಿ ಸಾಗುತ್ತದೆ. ಮೇ ತಿಂಗಳ ನಂತರ ಅಭಿವೃದ್ದಿ ಆಗುತ್ತದೆ. ನೂತನ ಕೆಲಸ ಮತ್ತು ವಿದೇಶದಲ್ಲಿ ಕೆಲಸ ಸಿಗುವ ಹೆಚ್ಚಿನ ಅವಕಾಶ ಇರುತ್ತದೆ. ಭರಣಿ ನಕ್ಷತ್ರದ ವ್ಯಕ್ತಿಗಳಿಗೆ ಏಪ್ರಿಲ್ ತಿಂಗಳಿಂದ ಒಳ್ಳೆಯದು ಆಗುತ್ತದೆ. ಕಛೇರಿಗಳಲ್ಲಿ ಒಳ್ಳೆ ಉನ್ನತ ಸ್ಥಾನ ಸಿಗುತ್ತದೆ.

ರಾಜಕೀಯದಲ್ಲಿ ಒಳ್ಳೆ ಉನ್ನತ ಭವಿಷ್ಯ ಇರುತ್ತದೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಹಳೆ ಪ್ರೀತಿಯಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ. ಹೊಸದಾಗಿ ಪ್ರಾರಂಭ ಮಾಡುವವರಿಗೆ ಹೆಚ್ಚಿನ ತೊಂದರೆಗಳು ಇರುವುದಿಲ್ಲ. ಆರೋಗ್ಯದಲ್ಲಿ ಜ್ವರ, ಕಫ, ಪಿತ್ತ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚಿಗೆ ಇದೆ. ಸಾಂಕ್ರಾಮಿಕ ರೋಗ ಬೇಗ ಕಾಡುವಂತದ್ದು. ಇದಕ್ಕೆ ಕಾರಣ ರವಿ ಗ್ರಹ ಮತ್ತು ಕುಜ ಗ್ರಹ. ಆಹಾರ ಕ್ರಮಗಳು ಕಡೆ ಗಮನ ವಹಿಸಬೇಕು.

ಅದೃಷ್ಟದ ಬಾಗಿಲು ತೆರೆದಿದೆ ಈ ವರ್ಷ ಮೇಷ ರಾಶಿಗೆ. ಇವು ಕೇವಲ ಗೋಚರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಇದಕ್ಕೂ ಸಂಬಂಧ ಇರುವುದಿಲ್ಲ. ಪರಿಹಾರಗಳು ಮಾಡಿಕೊಳ್ಳಬೇಕು ಎನ್ನುವುದನ್ನು ನೋಡೋಣ :-ಓಂ, ಐಯಾಂ ರೀಮ್ ಶ್ರೀಂ ಓಂ ಭ್ರಮೀ ದೇವೈಯ್ ನಮಃ ಈ ಮಂತ್ರವನ್ನು ಉತ್ತರಾಭಿ ಮುಖವಾಗಿ ಕುಳಿತು ಪ್ರತಿದಿನ 108 ಬಾರಿ ಜಪ ಮಾಡಬೇಕು.

ಅಶ್ವಿನಿ ನಕ್ಷತ್ರದವರು ಕಾರ್ತಿಕೇಯ ಸ್ತೋತ್ರ ಕದಂಬಂ ಪ್ರತಿದಿನ ಓದಬೇಕು. ಸಂಧ್ಯಾ ಕಾಲದಲ್ಲಿ ದೇವರ ಆರಾಧನೆ ಮಾಡಬೇಕು.ಭರಣಿ ನಕ್ಷತ್ರದವರು ವೆಂಕಟೇಶ ಅಷ್ಟಕಂ ಜಪ ಮಾಡಬೇಕು.ಕೃತಿಕಾ ನಕ್ಷತ್ರ ಒಂದನೇ ಪಾದದಲ್ಲಿ ಹುಟ್ಟಿದವರು ಶ್ರೀ ರಾಮ ರಕ್ಷಾ ಸ್ತೋತ್ರ ಪಟನೆ ಮಾಡಬೇಕು. ದೇವರ ಕೃಪೆ ಸಿಗುತ್ತದೆ ಮತ್ತು ಇಷ್ಟ ಎಲ್ಲಾ ನೆರವೇರುತ್ತವೆ. ಒಳ್ಳೆ ರೀತಿಯ ಫಲ ದೊರಕುತ್ತದೆ ಈ ವರ್ಷ ಮೇಷ ರಾಶಿಯವರಿಗೆ ಆರೋಗ್ಯ ಕಡೆ ಜಾಗರೂಕತೆ ವಹಿಸಬೇಕು.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.