2024ರ ಫೆಬ್ರವರಿ ತಿಂಗಳಿನಲ್ಲಿ ಕಟಕ ರಾಶಿಯವರ ತಿಂಗಳ ಭವಿಷ್ಯ ಹೇಗಿದೆ ನೋಡೋಣ. ಗ್ರಹಗಳ ಸ್ಥಾನದ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಫೆಬ್ರವರಿ ತಿಂಗಳಿನ 1ನೇ ತಾರೀಖು ಬುಧ ಗ್ರಹ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಕಟಕ ರಾಶಿಯ 7ನೇ ಮನೆಗೆ ಬರುತ್ತಾನೆ ಅದು ಶುಭ ಸ್ಥಾನ, 5ನೇ ತಾರೀಖು ಕುಜ ಗ್ರಹ ಮಕರ ರಾಶಿಗೆ 7ನೇ ಮನೆಗೆ ಪ್ರವೇಶ ಮಾಡುತ್ತಾನೆ. 11ನೇ ತಾರೀಖು ಶುಕ್ರ ಗ್ರಹ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಮಿತ್ರ ಸ್ಥಾನದಲ್ಲಿ ಇರುವನು.

13ನೇ ತಾರೀಖು ಸೂರ್ಯ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುವರು ಅದು ಕಟಕ ರಾಶಿಗೆ ಅಶುಭ, 19ನೇ ತಾರೀಖು ಬುಧ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಅದು ಕೂಡ ಕಟಕ ರಾಶಿಗೆ ಅಶುಭ. 15ನೇ ತಾರೀಖು ಕುಮಾರ ಷಷ್ಠಿ ಮತ್ತು 16ನೇ ತಾರೀಖು ಸೂರ್ಯ ಜಯಂತಿ ಅಥವಾ ರಥ ಸಪ್ತಮಿ.

ಕಟಕ ರಾಶಿಯ 6ನೇ ಮನೆ ಅಧಿಪತಿ ಗುರು ದಶಮ ಸ್ಥಾನದಲ್ಲಿ ಇರುವುದು ಅದು ಕಟಕ ರಾಶಿಯವರಿಗೆ ರಾಜಯೋಗ ತಂದುಕೊಡುತ್ತದೆ. ಗುರು ಗ್ರಹ ಇನ್ನು ಮೂರು ಮಾಸದಲ್ಲಿ ತನ್ನ ಸ್ಥಾನ ಬದಲಾವಣೆ ಮಾಡುತ್ತದೆ. ಅದು, ಕಟಕ ರಾಶಿಗೆ ಅಷ್ಟು ಯಶಸ್ಸು ತರುವುದಿಲ್ಲ.

ಆಧ್ಯಾತ್ಮಿಕ ಚಿಂತನೆ ಮತ್ತು ಆಧ್ಯಾತ್ಮಿಕ ಜ್ಞಾನ ಪ್ರಾಪ್ತಿ ಆಗುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೋಗಬೇಕಾ, ಯಾವ ಕೋರ್ಸ್ ಆಯ್ಕೆ ಮಾಡಬೇಕು, ಸರ್ಕಾರಿ ಸಿಟ್ ಅಥವಾ ಪೇಯ್ಡ್ ಸಿಟ್ ಈ ತರಹದ ಗೊಂದಲಗಳಿಗೆ ಫೆಬ್ರವರಿ ತಿಂಗಳಲ್ಲಿ ಒಳ್ಳೆ ಫಲಿತಾಂಶ ಸಿಗುವ ಸಾಧ್ಯತೆ ಇದೆ.

ತರ್ಕ, ವಾದವಿವಾದ ಮಾಡುವ ವೃತ್ತಿ ಲಾಯರ್ ವೃತ್ತಿ ಮತ್ತು ನ್ಯಾಯ ನೀಡುವ ವೃತ್ತಿ, ವೇದ ವೇದಾಂತ ಕಲಿಯುವ ತಿಂಗಳು ಫೆಬ್ರವರಿ ತಿಂಗಳು. ಗುರು ಗ್ರಹ ಬಲವಾಗಿ ಇರುವುದರಿಂದ ಪತ್ರಿಕೋದ್ಯಮ, ಮಾತುಗಾರರು, ಶಿಕ್ಷಕರು, ಪುರೋಹಿತ ವರ್ಗದವರಿಗೆ ಹೆಚ್ಚು ಲಾಭ ತರುತ್ತದೆ.

ಧಾರ್ಮಿಕ ವೃತ್ತಿ ಮಾಡುವವರು ಅಂದ್ರೆ ದೇವರಿಗೆ ಸಂಬಂಧ ಪಟ್ಟಂತೆ ಇರುವ ವೃತ್ತಿಗಳು ಎಲ್ಲದಕ್ಕೂ ಅನುಕೂಲ ಆಗುತ್ತದೆ. ಬಂಗಾರ, ಲವಣ ( ಉಪ್ಪು ),  ಆನೆ, ಕುದುರೆಗೆ ಸಂಬಂಧಿಸಿದ ವೃತ್ತಿ, ಯಜ್ಞ, ಧಾನೋಪಾಸನ, ತೀರ್ಥ ಯಾತ್ರೆ, ಗುರು ಸೇವೆ ಮಾಡುವವರಿಗೆ ಎಲ್ಲಾ ರೀತಿಯ ಸಂಪತ್ತು ಅಭಿವೃದ್ದಿ ಆಗುತ್ತದೆ.

ಹೆಚ್ಚಿನ ಕೀರ್ತಿ ಸಿಗುತ್ತದೆ, ಬೆಲ್ಲ, ಸಕ್ಕರೆ, ಸಿಹಿ ಉದ್ಪಾದನೆ, ಅರಿಶಿಣ ಒಗ್ಗರಣೆ ಸಾಮಗ್ರಿ, ಮಸಾಲೆ ಸಾಮಗ್ರಿ ಪ್ಯಾಕ್ ಮಾಡುವ ಜನ, ತಯಾರಿಕೆ ಮಾಡುವ ಜನ ಎಲ್ಲರಿಗೂ ಒಳ್ಳೆ ಫನ ಸಿಗುತ್ತದೆ. ವಿಮಾನ ಯಾನ ಗಗನ ಸಖಿ, ಪೈಲೆಟ್ ಈ ರೀತಿಯ ವೃತ್ತಿ ಮಾಡುವವರಿಗೆ, ರೇಶಿಮೆ ಉದ್ದಿಮೆ, ಧಾನ್ಯ ಉದ್ದಿಮೆ ಎಲ್ಲದಕ್ಕೂ ಗುರು ಗ್ರಹ ಗಟ್ಟಿಯಾಗಿಮೇಲೆ ನಿಂತು ಹೆಚ್ಚು ಶುಭ ಫಲ ತರುತ್ತದೆ.

ಭಾಷೆಯಲ್ಲಿ ಒಳ್ಳೆ ವ್ಯಾಕರಣ ಸಿಗುತ್ತದೆ ಮೂರು ನಾಲ್ಕು ರೀತಿಯ ಭಾಷೆಗಳನ್ನು ಚೆನ್ನಾಗಿ ಮಾತಾಡುವ ಯೋಗವಿದೆ. ಪರರಿಗೆ ಉಪಕಾರ ಮಾಡುವ ಬುದ್ದಿ ಹೆಚ್ಚಾಗಿ ಇರುತ್ತದೆ.
ಯಶಸ್ಸು ಎಲ್ಲಾ ರೀತಿಯ ಕೆಲಸಗಳಿಗೂ ಸಿದ್ಧಿಸುತ್ತದೆ. ಗುರು ಗ್ರಹ ಮತ್ತು ಶುಕ್ರ ಗ್ರಹದ ಸಹಾಯದಿಂದ ಸಫಲತೆ ಸಿಗುತ್ತದೆ. ಅಷ್ಟಮದಲ್ಲಿ ಶನಿ ಗ್ರಹ ವರ್ಷ ಪೂರಾ ಇರುವುದರಿಂದ ಅದಕ್ಕೆ ಯಾವ ಪ್ರತೇಕ ಪರಿಹಾರ ಇಲ್ಲ.

ಸೂರ್ಯ ಗ್ರಹ ಶತ್ರು ಸ್ಥಾನದಲ್ಲಿ ಇರುವ ಕಾರಣ ಅದನ್ನು ಸಂಭಾಳಿಸಬೇಕು. ಪರಿಹಾರ ಏನು ಎಂದರೆ :-ಪ್ರತಿ ರವಿವಾರ ನವಗ್ರಹ ದೇವಸ್ತಾನಕ್ಕೆ ಹೋಗಿ ಮಧ್ಯದಲ್ಲಿ ಇರುವ ಸೂರ್ಯನಿಗೆ ಕೆಂಪು ವಸ್ತ್ರ ಸಮರ್ಪಣೆ ಮಾಡಿ ಮತ್ತು ಕೆಂಪು ಬಣ್ಣದ ಹೂವಿನಿಂದ ಅಷ್ಟೋತ್ತರ ಪಠಿಸಬೇಕು ಪೂರ್ತಿ ಫೆಬ್ರವರಿ ತಿಂಗಳಿನಲ್ಲಿ ಮಾಡಬೇಕು. ಇದು ಗ್ರಹಗಳ ಗೋಚರ ಫಲಗಳು ಅಷ್ಟೇ ಯಾವುದೇ ಜನ್ಮ ಜಾತಕಕ್ಕೆ ಸಂಬಂಧ ಪಟ್ಟಿರುವುದಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *