ಮಕರ ರಾಶಿಯವರಿಗೆ ಶುಕ್ರನಿಂದ ಒಳ್ಳೆ ಲಾಭವಿದೆ ಆದ್ರೆ ಅರೋಗ್ಯ ವಿಚಾರದಲ್ಲಿ ಏನಾಗುತ್ತೆ ಗೊತ್ತಾ..

0 703

2024ರ ಫೆಬ್ರವರಿ ತಿಂಗಳಿನಲ್ಲಿ ಮಕರ ರಾಶಿಯವರ ತಿಂಗಳ ಭವಿಷ್ಯ ಹೇಗಿದೆ ನೋಡೋಣ. ಗ್ರಹಗಳ ಸ್ಥಾನದ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಫೆಬ್ರವರಿ 1ನೇ ತಾರೀಖು ಬುಧ ಗ್ರಹ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ, 5ನೇ ತಾರೀಖು ಕುಜ ಗ್ರಹ ಮಕರ ರಾಶಿಗೆ 12ನೇ ಮನೆಗೆ ಪ್ರವೇಶ ಮಾಡುತ್ತಾನೆ. 11ನೇ ತಾರೀಖು ಶುಕ್ರ ಗ್ರಹ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಮಿತ್ರ ಸ್ಥಾನದಲ್ಲಿ ಇರುವನು.13ನೇ ತಾರೀಖು ಸೂರ್ಯ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುವರು, 19ನೇ ತಾರೀಖು ಬುಧ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ, ಅಷ್ಟಮಾಧಿಪತಿ ಸೂರ್ಯ ಗ್ರಹದ ಪ್ರಭಾವ ನಕಾರಾತ್ಮಕವಾಗಿ ಇರುತ್ತದೆ.

15ನೇ ತಾರೀಖು ಕುಮಾರ ಷಷ್ಠಿ ಮತ್ತು 16ನೇ ತಾರೀಖು ಸೂರ್ಯ ಜಯಂತಿ ಅಥವಾ ರಥ ಸಪ್ತಮಿ.ಮಕರ ರಾಶಿಯವರಿಗೆ ಫೆಬ್ರವರಿ ತಿಂಗಳು ಅನುಕೂಲವಾಗಿ ಇರುತ್ತದೆ. ಕೆಲವು ಸಮಸ್ಯೆಗಳು ಎದುರಾದರು ಸರಿ ಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಾಗಿ ಇರುತ್ತದೆ. ಬದಲಾವಣೆಗೆ ಇನ್ನು ಮೂರು ಮಾಸ ಕಾಯಬೇಕು.

ಮಕರ ರಾಶಿಯವರಿಗೆ ಹೆಚ್ಚು ಲಾಭದಾಯಕ ಈ ಫೆಬ್ರವರಿ ತಿಂಗಳು. ಚರ್ಮ ಕುರಿತು ರೋಗ, ಗಾಯಗಳು, ಆರೋಗ್ಯ ಸಮಸ್ಯೆಗಳು ಇದ್ದರು ದೂರವಾಗುತ್ತದೆ. ಆರೋಗ್ಯದಲ್ಲಿ ಸಮತೋಲನ ಸಿಗುತ್ತದೆ ಎಲ್ಲಾ ಅನಾರೋಗ್ಯ ದೂರವಾಗುತ್ತದೆ. ಸಾಹಸಿಗಳು, ಬಲಿಷ್ಟವಾದ ಮಾತು ಮತ್ತು ತೂಕದಿಂದ ಕೂಡಿರುತ್ತದೆ. ಕಣ್ಣು ಹೆಚ್ಚು ಚೆನ್ನಾಗಿ ಕೆಲಸ ಮಾಡುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಿಮ್ಮ ವಸ್ತುಗಳು ದೂರ ಆಗುವುದಿಲ್ಲ ಅದನ್ನು ರಕ್ಷಣೆ ಮಾಡುವ ಶಕ್ತಿ ನಿಮ್ಮಲ್ಲಿ ಇರುತ್ತದೆ.

ಮುಖದಲ್ಲಿ ಹೆಚ್ಚು ಆರ್ಕರ್ಷಣೆ ಮೂಡುತ್ತದೆ, ಸಾತ್ವಿಕ ರೂಪ ಮತ್ತು ಕಳೆ ಬರುತ್ತದೆ. ವಿಶಿಷ್ಟ ಜ್ಞಾನ ಲಭಿಸುತ್ತದೆ, ಬಾಯಿ ಹುಣ್ಣು, ಹಲ್ಲು ನೋವು ಈ ರೀತಿಯಾಗಿ ತೊಂದರೆ ಎದುರಾಗಬಹುದು. ಸಂಶೋಧನಾ ವೃತ್ತಿ ಮಾಡುವವರಿಗೆ ಹೆಚ್ಚಿನ ಲಾಭ,. ಈ ರಾಶಿಯವರು ಒಳ್ಳೆ ಪಂಡಿತರು, ಹಾಸ್ಯ ಪ್ರವೃತ್ತಿ ಉಳ್ಳವರು, ವಾಕ್ ಚತುರತೆ ಹೆಚ್ಚಾಗಿ ಇರುತ್ತದೆ. ಚೆಸ್ ಮತ್ತು ಕ್ರಿಯಾತ್ಮಕ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವರು.

ತಂದೆ ತಾಯಿಯರ ಸಹಕಾರ ಸಿಗುತ್ತದೆ. ವಿವಾಹ ಯೋಗ ಪ್ರಾಪ್ತಿಯಾಗುತ್ತದೆ. ಆಹಾರ ತಯಾರಿಕೆ ಮತ್ತು ಹೋಟೆಲ್ ಉದ್ಯಮ ಎಲ್ಲದರಲ್ಲಿ ಉತ್ತಮ ಫಲ ಸಿಗುತ್ತದೆ. ಹೊಸ ವ್ಯವಹಾರದಲ್ಲಿ ಆದಾಯ ಗಳಿಕೆ ಮಾಡುವುದು, ವಿವಿಧ ಮೂಲಗಳಿಂದ ಹಣ ಗಳಿಕೆ ಮಾಡುವುದು ಸಿದ್ಧಿಯಾಗುತ್ತದೆ.

ಉದ್ಯೋಗದಲ್ಲಿ ಬದಲಾವಣೆ ಆರಂಭ ಆಗುತ್ತದೆ, ಆದರೆ ಬದಲಾವಣೆಗೆ ಸಮಯ ತೆಗೆದುಕೊಳ್ಳುತ್ತದೆ. ಸಾಮಾಜಿಕ ಜಾಲತಾಣಲ್ಲಿ ಪ್ರಸಿದ್ದಿ ಹೊಂದುವ ಸಾಧ್ಯತೆ ಇದೆ. ಎಪ್ರಿಲ್ ತಿಂಗಳಿನ ನಂತರ ಗುರು ಗ್ರಹ ಬಲ ಸಿಗುತ್ತದೆ ಆ ನಂತರ ಹೆಚ್ಚು ವೃದ್ಧಿ ಆಗುತ್ತದೆ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸುತ್ತದೆ. ಸಂಪತ್ತು ದ್ವಿಗುಣ ಆಗುತ್ತದೆ.

ಪತ್ನಿಯಿಂದ, ತಾಯಿಯಿಂದ, ಸಹೋದರಿಯಿಂದ ಸ್ನೇಹಿತೆಯಿಂದ ಅನುಕೂಲ ಆಗುತ್ತದೆ ಅಂದರೆ ಹೆಣ್ಣಿನಿಂದ ಹಣದ ವಿಚಾರವಾಗಿ ಅನುಕೂಲ ಲಭಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ. ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಸೂರ್ಯ ಗ್ರಹ 2ನೇ ಮನೆಗೆ ಪ್ರವೇಶ ಮಾಡುತ್ತಿರುವುದರಿಂದ ಕೆಟ್ಟ ಆಹಾರ ಪದ್ಧತಿ ಅನುಕರಣೆ ಮಾಡುವುದು, ಮುಖದ ಚರ್ಮಕ್ಕೆ ಸ್ವಲ್ಪ ಹಾನಿ ಆಗುವುದು, ರಾಜ ಯೋಗ ಕಡಿಮೆ ಮಾಡಿ ದೈಹಿಕ ಪೀಡೆ ಆವರಿಸುತ್ತದೆ.

ಸರ್ಕಾರಿ ಅಧಿಕಾರಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ, ಉನ್ನತ ಸ್ಥಾನದಲ್ಲಿ ಇರುವ ಜನರಿಗೆ ಸ್ವಲ್ಪ ಮಟ್ಟದ ಮುಜುಗರ, ಮಾನ ನಷ್ಟ ಜೊತೆಗೆ ಧನ ನಷ್ಟ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ ಅದಕ್ಕೆ ಕಾರಣ ಸೂರ್ಯ ಗ್ರಹ. ಜಂಟಿ ವ್ಯವಹಾರದಲ್ಲಿ ಶುಭ ಫಲ ಸಿಗುತ್ತದೆ, ಆರೋಗ್ಯ ಸುಸ್ಥಿತಿಗೆ ಬರುತ್ತದೆ, ಎಲ್ಲವನ್ನು ಎದುರಿಸುವ ಸಾಮರ್ಥ್ಯ ಮತ್ತು ಛಲ ಇರುತ್ತದೆ, ರೈತರಿಗೆ ಸಣ್ಣ ವ್ಯಾಪಾರ ಮಾಡುವವರಿಗೆ ಲಾಭ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.