ಪ್ರತಿಯೊಬ್ಬ ಮನುಷ್ಯನಿಗು ತನ್ನ ಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಇನ್ನೇನು ಹೊಸ ವರ್ಷ ಸಮೀಪದಲ್ಲಿದೆ ಮುಂದಿನ ವರ್ಷ ನಮ್ಮ ಜೀವನ ಯಾವ ರೀತಿಯಾಗಿ ಇರುತ್ತದೆ ಅಲ್ಲಿ ಯಾವ ಯಾವ ರೀತಿಯಾಗಿ ಫಲಗಳು ಇವೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ನಾವಿಂದು ನಿಮಗೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ಮೇಷ ರಾಶಿಯವರ ರಾಶಿ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಮೇಷ ರಾಶಿ, ಮೇಷ ಲಗ್ನ, ಯಾವುದೇ ತಿಂಗಳಿನಲ್ಲಿ ಒಂಬತ್ತು ಹದಿನೆಂಟು ಮತ್ತು ಇಪ್ಪತ್ತೆಳನೇ ದಿನಾಂಕದಂದು ಹುಟ್ಟಿದವರು ಯಾರೇ ಇದ್ದರೂ ಅವರೆಲ್ಲರಿಗೂ ಮಂಗಳಗ್ರಹ ಅಧಿಪತಿಯಾಗಿರುತ್ತಾನೆ. ಮೇಷ ರಾಶಿ ಮೇಷ ಲಗ್ನ ಯಾವುದೇ ತಿಂಗಳಿನಲ್ಲಿ ಒಂಬತ್ತು ಹದಿನೆಂಟು ಮತ್ತು ಇಪ್ಪತ್ತೆಳನೇ ದಿನಾಂಕದಂದು ಹುಟ್ಟಿದವರು ಯಾರೇ ಇರಲಿ ಅವರು ಕುಜ ಗ್ರಹದ ಆದಿತ್ಯಕ್ಕೆ ಒಳಗಾಗುತ್ತಾರೆ.

ಅದರಲ್ಲಿ ರಾಶಿಯವರು ಸ್ವಲ್ಪ ಹೆಚ್ಚು ಒಳಗಾಗುತ್ತಾರೆ ತಾರೀಕಿನಂದು ಹುಟ್ಟಿದವರು ಹೆಚ್ಚು ಒಳಗಾಗಿರುತ್ತಾರೆ ಲಗ್ನದಲ್ಲಿ ಹುಟ್ಟಿರುವವರು ಸ್ವಲ್ಪ ಕಡಿಮೆ ಒಳಗಾಗುತ್ತಾರೆ. ಇವರೆಲ್ಲರಿಗೂ ಮಂಗಳಗ್ರಹ ಅಧಿಪತಿಯಾಗಿರುತ್ತಾನೆ ಅದರ ಅಧಿದೇವತೆ ಕುಮಾರಸ್ವಾಮಿ ಅಂದರೆ ಶಣ್ಮುಖ. ಅದರಿಂದ ಈ ಸಂಖ್ಯೆಯಲ್ಲಿ ಹುಟ್ಟಿರುವವರಿಗೆ ಧೈರ್ಯ ಹೆಚ್ಚಿರುತ್ತದೆ ಇವರಿಗೆ ಎರಡು ಸಾವಿರದ ಇಪ್ಪತ್ತೆರಡು ಶುಭ ವರ್ಷವಾಗಿದೆ.

ಮೇಲೆ ತಿಳಿಸಿರುವ ದಿನಾಂಕದಂದು ಹುಟ್ಟಿರುವಂತಹ ವಿದ್ಯಾರ್ಥಿಗಳಿಗೆ ಎರಡು ಸಾವಿರದ ಇಪ್ಪತ್ತೆರಡು ತುಂಬಾ ಒಳ್ಳೆಯ ಸಮಯವಾಗಿರುತ್ತದೆ. ಇನ್ನು ಕೆಲಸ ಕಾರ್ಯಗಳನ್ನು ಮಾಡುತ್ತಿರುವವರಿಗೆ ಅವರು ಯಾವುದೇ ಕ್ಷೇತ್ರದಲ್ಲಿ ಕಾರ್ಯವನ್ನು ಮಾಡುತ್ತಿದ್ದರು ಅವರಿಗೆ ತುಂಬಾ ಒಳ್ಳೆಯದಾಗುತ್ತದೆ. ನೀವು ಮಾಡುತ್ತಿರುವ ಕೆಲಸದಲ್ಲಿ ತೊಂದರೆ ಇದ್ದಾಗ ನೀವು ಆ ಕೆಲಸವನ್ನು ಬದಲಾಯಿಸಬಹುದು. ಕೆಲಸದಲ್ಲಿ ಕೂಡ ಒಳ್ಳೆ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಮದುವೆಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಒಳ್ಳೆಯ ಸಂಬಂಧ ಹುಡುಕಿಕೊಂಡು ಬರುತ್ತದೆ. ಇನ್ನು ಹಲವಾರು ವರ್ಷಗಳಿಂದ ಮಕ್ಕಳಿಲ್ಲದೆ ಕೊರಗುತ್ತಿರುವವರಿಗೆ ಸಂತಾನಭಾಗ್ಯ ಲಭಿಸಲಿದೆ.

ಇನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವೇನಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದೆಲ್ಲವೂ ಕೂಡ ದೂರವಾಗುತ್ತದೆ. ಹಣಕಾಸಿನ ವಿಷಯದಲ್ಲಿಯು ಕೂಡ ತುಂಬಾ ಒಳ್ಳೆಯದಾಗುತ್ತದೆ ನಿಮ್ಮ ಜಮೀನನ್ನು ಮಾರಾಟ ಮಾಡಬೇಕು ಎಂದು ಕೊಂಡಿರುತ್ತೀರಿ ಆದರೆ ಅದು ಸಾಧ್ಯವಾಗಿರುವುದಿಲ್ಲ ಆದರೆ ಎರಡು ಸಾವಿರದ ಇಪ್ಪತ್ತೆರಡರಲ್ಲಿ ನಿವು ಅಂದುಕೊಂಡ ಹಾಗೆ ಜಮೀನು ಮಾರಾಟವಾಗುತ್ತದೆ.

ಈ ರೀತಿಯಾಗಿ ಮೇಷ ರಾಶಿ ಮೇಷ ಲಗ್ನ ಮತ್ತು ಒಂಬತ್ತು ಹದಿನೆಂಟು ಮತ್ತು ಇಪ್ಪತ್ತೆಳು ಈ ದಿನಾಂಕದಂದು ಹುಟ್ಟಿದವರಿಗೆ ಒಳ್ಳೆಯದಾಗಲಿದೆ. ಜೊತೆಗೆ ಮೇಶರಾಶಿಯವರಿಗೆ ಪೂರ್ಣ ಫಲ ದೊರೆಯುವುದಕ್ಕೆ ನೀವು ಮಾಡಬೇಕಾದ ಸುಲಭವಾದ ಕೆಲಸ ಏನು ಎಂದರೆ ಹತ್ತಿರದಲ್ಲಿರುವ ಷಣ್ಮುಖ ಅಥವಾ ಕುಮಾರಸ್ವಾಮಿಯ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಸಾಧ್ಯವಾದಷ್ಟು ಕೆಂಪು ಹೂವು ಮತ್ತು ಕೆಂಪು ಬಣ್ಣದ ಕುಂಕುಮವನ್ನು ಸ್ವಲ್ಪ ಪನ್ನೀರನ್ನು ಇವುಗಳೆಲ್ಲವನ್ನು ತೆಗೆದುಕೊಂಡು ಮಂಗಳವಾರ ಷಣ್ಮುಖನ ದೇವಸ್ಥಾನಕ್ಕೆ ನೀಡಿ ಜೊತೆಗೆ ಪಂಚಾಮೃತ ಅಭಿಷೇಕವನ್ನು ಮಾಡಿದರೆ ನಿಮಗೆ ಎಲ್ಲಾ ಶುಭಫಲಗಳು ದೊರೆಯುತ್ತವೆ.

ನೀವು ಅಂದುಕೊಂಡಂತೆ ಕೆಲಸ ಕಾರ್ಯಗಳನ್ನು ಸಾಧಿಸುವುದಕ್ಕೆ ಇದು ಒಳ್ಳೆಯ ಸಮಯ. ಹೆಣ್ಣುಮಕ್ಕಳು ಎಡಗೈಗೆ ತಾಮ್ರದ ಸಣ್ಣ ಬೆಳೆಯನ್ನು ಹಾಕಿಕೊಳ್ಳಬೇಕು. ಗಂಡು ಮಕ್ಕಳು ಬಲಗೈಗೆ ತಾಮ್ರದ ಬೆಳೆಯನ್ನು ಹಾಕಿಕೊಳ್ಳಬೇಕು ಜೊತೆಗೆ ಹೆಣ್ಣು ಮಕ್ಕಳಾಗಲಿ ಅಥವಾ ಗಂಡು ಮಕ್ಕಳಾಗಲಿ ಎಡಗೈಯ ಉಂಗುರದ ಬೆರಳಿಗೆ ಒಂದು ತಾಮ್ರದ ಉಂಗುರವನ್ನು ಹಾಕಿಕೊಳ್ಳಬೇಕು. ಜೊತೆಗೆ ತಾಮ್ರದಿಂದ ಮಾಡಿಸಿರುವ ಸಣ್ಣದಾದ ಷಣ್ಮುಖನ ಡಾಲರನ್ನು ಹಳದಿ ದಾರದೊಂದಿಗೆ ಕತ್ತಲ್ಲಿ ಹಾಕಿಕೊಳ್ಳಬೇಕು.

ಈ ರೀತಿ ಮಾಡಿಕೊಳ್ಳುವುದರಿಂದ ನಿಮ್ಮ ಊಹೆಗೂ ಮೀರಿದ ಒಳ್ಳೆಯ ಸಂಗತಿಗಳು ನಿಮ್ಮ ಜೀವನದಲ್ಲಿ ನಡೆಯುತ್ತವೆ. ಈ ರೀತಿಯಾಗಿ ಎರಡು ಸಾವಿರದ ಇಪ್ಪತ್ತೆರಡು ಮೇಷ ರಾಶಿಯವರ ಪಾಲಿಗೆ ತುಂಬಾ ಒಳ್ಳೆಯ ಫಲವನ್ನು ಹೊತ್ತು ತಂದಿದೆ ನೀವು ಅದರ ಸಂಪೂರ್ಣ ಫಲವನ್ನು ಪಡೆಯುವುದಕ್ಕಾಗಿ ಮೇಲೆ ಹೇಳಿರುವ ಪರಿಹಾರೋಪಾಯಗಳನ್ನು ಮಾಡಿಕೊಳ್ಳಿ ಜೊತೆಗೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮಗೆ ಪರಿಚಯವಿರುವ ಮೇಷ ರಾಶಿಯವರಿಗು ಈ ವಿಷಯವನ್ನು ತಿಳಿಸಿರಿ.

Leave a Reply

Your email address will not be published. Required fields are marked *