ಮೇಘನಾ ರಾಜ್ ಅವರಿಗೆ ದರ್ಶನ್ ಕೊಟ್ರು ಸ್ಪೆಷಲ್ ಉಡುಗೊರೆ

0 1

ಮೇಘನಾ ರಾಜ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಮೊದಲು ಅವರು ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಇವರ ಪುತ್ರಿ. ನಂತರ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿದ್ದರು. 2018ರಲ್ಲಿ ಅದ್ದೂರಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ ಮದುವೆ ಆದ 2 ವರ್ಷಕ್ಕೆ ಚಿರು ಅವರು ಮರಣ ಹೊಂದಿದರು. ಮೇಘನಾ ಅವರ ಸೀಮಂತ ಮತ್ತು ದರ್ಶನ್ ಅವರ ಉಡುಗೊರೆ ಬಗ್ಗೆ ನಾವು ಇಲ್ಲಿ ತಿಳಿಯೋಣ.

ಚಿರು ಸತ್ತ ನಂತರ ಮೊದಲ ಸಂತೋಷದ ಕಾರ್ಯಕ್ರಮ ಮೇಘನಾ ರಾಜ್ ಅವರ ಸೀಮಂತ.ಮೇಘನಾ ರಾಜ್ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಮೇಘನಾ ಅವರ ಸೀಮಂತ ಶಾಸ್ತ್ರವನ್ನು ಬಹಳ ಅದ್ದೂರಿಯಾಗಿ ನಡೆಸಲಾಗಿದೆ.ಎರಡೂ ಕುಟುಂಬಗಳು ಚಿರು ಅಗಲಿಕೆಯ ನೋವಿನಲ್ಲಿ ಅಂದರೆ ದುಃಖದ ನಡುವೆಯೂ ಕೂಡ ಸೀಮಂತ ಶಾಸ್ತ್ರವನ್ನು ಮಾಡಿ ಮುಗಿಸಿದ್ದಾರೆ.ಕುಟುಂಬದ ಆಪ್ತರು ಮಾತ್ರ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.ಹುಟ್ಟುವ ಮಗುಗೆ ಹಾರೈಸಿದ್ದಾರೆ. ಇಲ್ಲಿ ವಿಶೇಷತೆ ಎಂದರೆ ನೆನಪಿಗಾಗಿ ಚಿರು ಅವರ ಸೆಟ್ ಹಾಕಿಸಲಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಕುಟುಂಬಕ್ಕೆ ಬಹಳ ಆಪ್ತರಾಗಿದ್ದಾರೆ.ಆದರೆ ಕೊರೊನ ಕಾರಣದಿಂದ ಸೀಮಂತ ಕಾರ್ಯಕ್ರಮಕ್ಕೆ ಬರಲು ಆಗಲಿಲ್ಲ. ಆದರೂ ಇವರು ಒಂದು ದೊಡ್ಡ ಉಡುಗೊರೆಯನ್ನು ನೀಡಲಿದ್ದಾರೆ. ಅದೇನೆಂದರೆ ಇಲ್ಲಿಗೆ ಬರಲಾಗದ ಕಾರಣ ಮೇಘನಾ ಅವರಿಗೆ ಕರೆ ಮಾಡಿದ್ದಾರೆ. ಕರೆಯಲ್ಲಿ ಶುಭ ಹಾರೈಸಿದ್ದಾರೆ. ಹಿಂದೆ ಯಶ್ ಮಗಳಿಗೆ ಅಂಬರೀಶ್ ಅವರು ತೊಟ್ಟಿಲನ್ನು ಉಡುಗೊರೆಯಾಗಿ ಕೊಟ್ಟಿದ್ದರು.ಹಾಗೆಯೇ ದರ್ಶನ್ ಅವರು ಕೂಡ ಚಿರುವಿನ ಕುಡಿಗಾಗಿ ತೊಟ್ಟಿಲನ್ನು ಕೊಡಲಿದ್ದಾರೆ. ತೊಟ್ಟಿಲು ತಯಾರಿಸುವ ಪ್ರತಿಷ್ಠಿತ ಕಂಪನಿಯ ಜೊತೆ ತೊಟ್ಟಿಲು ಮಾಡಲು ಆರ್ಡರ್ ಕೊಟ್ಟಿದ್ದಾರೆ.ಇನ್ನು ಒಂದು ವಾರಕ್ಕೆ ಅದು ತಯಾರಿ ಆಗಲಿದೆ. ವಿಷಯ ತಿಳಿದು ಭಾವುಕರಾದ ಮೇಘನಾ ಚಿರು ಅವರ ಬಗ್ಗೆ ದರ್ಶನ್ ಅವರಿಗೆ ಇರುವ ಅಭಿಮಾನಕ್ಕೆ ಬಹಳ ಹೆಮ್ಮೆ ಪಟ್ಟಿದ್ದಾರೆ.

Leave A Reply

Your email address will not be published.