ಲಿವರ್ ಶುದ್ದೀಕರಿಸುವ ಸೂಪರ್ ಮನೆಮದ್ದು ನೋಡಿ

0 31

ದೇವರು ಸೃಷ್ಟಿಸಿರುವ ದೇಹವನ್ನು ಮರುಸೃಷ್ಟಿ ಮಾಡಲು ವಿಜ್ಞಾನಿಗಳು ಇನ್ನಿಲ್ಲದೆ ಪ್ರಯತ್ನ ಮಾಡುತ್ತಲಿದ್ದರೂ ಅದು ಸಂಪೂರ್ಣವಾಗಿ ಇದುವರೆಗೆ ಸಾಧ್ಯವಾಗಿಲ್ಲ. ದೇಹದ ಪ್ರತಿಯೊಂದು ಅಂಗಾಂಗಗಳು ಕೂಡ ತನ್ನದೇ ಆದ ವೈಶಿಷ್ಯ ಹಾಗೂ ಕಾರ್ಯವೈಖರಿಯನ್ನು ಹೊಂದಿಕೊಂಡಿದೆ. ಹೀಗಾಗಿ ಯಾವುದೇ ಒಂದು ಅಂಗದ ಮೇಲೆ ಪರಿಣಾಮವಾದರೂ ಅದರಿಂದ ಬೇರೆ ಅಂಗಗಳಿಗೆ ಹಾನಿ ಆಗುವುದು. ಇಂತಹ ಸಮಯದಲ್ಲಿ ಮುಖ್ಯವಾಗಿ ದೇಹದ ಒಳಗಿನ ಅಂಗಾಂಗಗಳ ಕಡೆ ಹೆಚ್ಚು ಗಮನ ಹರಿಸಬೇಕು. ನಾವು ತಿನ್ನುವಂತಹ ಪ್ರತಿಯೊಂದು ಆಹಾರವು ದೇಹದೊಳಗಿನ ಅಂಗಾಂಗಗಳ ಆರೋಗ್ಯ ಕಾಪಾಡುವುದು. ಇದರಿಂದ ಆರೋಗ್ಯಕಾರಿ ಆಹಾರ ಸೇವನೆ ಮಾಡಿದರೆ, ಅದು ನಮ್ಮ ದೇಹದ ಅಂಗಾಂಗಗಳ ಆರೋಗ್ಯದ ಜತೆಗೆ ನಮ್ಮ ಆರೋಗ್ಯವನ್ನು ಕಾಪಾಡುವುದು. ಧೂಮಪಾನ, ಮದ್ಯಪಾನದಂತಹ ಕೆಲವೊಂದು ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ನಮ್ಮ ದೇಹದ ಒಳಗಿನ ಅಂಗಾಂಗಗಳಿಗೆ ಹಾನಿ ಆಗಿರುವುದು ತಿಳಿಯುವುದೇ ಇಲ್ಲ. ಇದರಲ್ಲಿ ಮುಖ್ಯವಾಗಿ ಯಕೃತ್ ಗೆ ಹಾನಿಯಾದರೆ ಅದು ಕೆಲವೊಂದು ಲಕ್ಷಣಗಳು ತೋರಿಸಿಕೊಡುತ್ತದೆ. ಹಾಗಿದ್ದರೆ ನಾವು ಮನೆಯಲ್ಲಿಯೇ ಕೆಲವು ಔಷಧಗಳನ್ನು ಮಾಡಿಕೊಳ್ಳುವ ಮೂಲಕ ನಮ್ಮ ಲಿವರ್ ಅನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಾವು ತಿಳಿಸುವ ಈ ಮನೆಮದ್ದನ್ನು ತಪ್ಪದೇ ಒಂದು ತಿಂಗಳುಗಳ ಕಾಲ ಮಾಡಬೇಕು ಹಾಗೂ ಇದರ ಜೊತೆಗೆ ಖಾರದ ಪದಾರ್ಥಗಳನ್ನು ಕಡಿಮೆ ಮಾಡಬೇಕು ಹಾಗೂ ಮುಖ್ಯವಾಗಿ ಧೂಮಪಾನ ಮದ್ಯಪಾನ ಇವುಗಳನ್ನು ತ್ಯಜಿಸಲೇಬೇಕು. ಇವುಗಳ ಜೊತೆಗೆ ಈ ಇಂದು ಮನೇಮದ್ದನ್ನು ಮಾಡುವುದರಿಂದ ನಾವು ಮನೆಯಲ್ಲಿಯೇ ನಮ್ಮ ಲಿವರನ್ನು ಸ್ವಚ್ಚ ಮಾಡಿಕೊಳ್ಳಬಹುದು. ಈ ಮನೆಮದ್ದಿಗೆ ಮುಖ್ಯವಾಗಿ ಬೇಕಿರುವುದು ಕಡಲೆ. ಪ್ರತೀ ದಿನ ರಾತ್ರಿ ಐವತ್ತು ಗ್ರಾಂ ಅಷ್ಟು ಕಡಲೆಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಅದನ್ನು ಬೇಯಿಸಿಕೊಳ್ಳಬೇಕು. ಇದಕ್ಕೆ ಸೈಂಧವ ಲವಣ ಅಥವಾ ಸಮುದ್ರದ ಕಲ್ಲುಪ್ಪು ಇದನ್ನು ಒಂದು ಚಿಟಿಕೆ ಅಷ್ಟು ಹಾಕಿಕೊಂಡು ಮಿಕ್ಸ್ ಮಾಡಿ ಇದೆ ರೀತಿಯಾಗಿ ಹದಿನೈದು ದಿನಗಳ ಕಾಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಹದಿನಾರನೇ ದಿನದಿಂದ ಮೊದಲಿನ ಹಾಗೆ ಐವತ್ತು ಗ್ರಾಂ ಕಡಲೆ ನೆನಸಿಕೊಂಡು ಅದನ್ನು ಬೆಯಿಸಬಾರದು. ಅದರ ಬದಲಿಗೆ ಎಣ್ಣೆ ಹಾಕದೆಯೇ ಹಾಗೆಯೇ ಹುರಿದುಕೊಳ್ಳಬೇಕು. ಇದಕ್ಕೆ ಎರಡು ಚಿಟಿಕೆ ಅಷ್ಟು ಸೈಂಧವ ಲವಣ ಅಥವಾ ಸಮುದ್ರದ ಕಲ್ಲುಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಂಡು ಇದನ್ನು ಹದಿನಾರನೇ ದಿನದಿಂದ ಮುವತ್ತನೆ ದಿನದವರೆಗೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ರೀತಿಯಾಗಿ ಕಡಲೆಯನ್ನು ಒಂದು ತಿಂಗಳ ಕಾಲ ಸತತವಾಗಿ ತಿನ್ನುವುದರಿಂದ ನಿಮ್ಮ ಲಿವರ್ ಸಂಪೂರ್ಣವಾಗಿ ಸ್ವಚ್ಛವಾಗುವುದು. ಲಿವರ್ ಗೆ ಸಂಬಂಧಿಸಿ ಯಾವುದೇ ರೀತಿಯ ತೊಂದರೆ ಇದ್ದರೂ ಸಹ ಅದು ನಿವಾರಣೆ ಆಗುವುದು. ಹಾಗೂ ಇದರ ಜೊತೆಗೆ ಪ್ರತೀ ದಿನ ನಾಲ್ಕು ಲೀಟರ್ ನೀರನ್ನು ಸಹ ಕುದಿಯಲೇಬೇಕು. ಈ ಮೂಲಕ ನಾವು ನಮ್ಮ ಲೀವರನ್ನು ಸ್ವಚ್ಛವಾಗಿ ಆರೋಗ್ಯವಾಗಿ ಇಟ್ಟುಕೊಳ್ಳಬಹುದು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.