ತುಲಾ ರಾಶಿಯವರ ಪಾಲಿಗೆ 2024 ಯುಗಾದಿ ತಿಂಗಳು ಹೇಗಿರತ್ತೆ? ತಿಳಿಯಿರಿ

0 11,888

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಚೈತ್ರ ಸಂವತ್ಸರದ ಮೊದಲ ಹಬ್ಬ ಯುಗಾದಿ. 2024ರ  ತುಲಾ ರಾಶಿಯವರ ಯುಗಾದಿ ವಾರ್ಷಿಕ ಭವಿಷ್ಯ ಹೇಗಿದೆ ನೋಡೋಣ.

2025ರ ಮಾರ್ಚ್ ತಿಂಗಳಿನ 31 ನೇ ತಾರೀಖಿನ ವರೆಗೂ ತುಲಾ ರಾಶಿಯವರಿಗೆ ಪಂಚಮ ಶನಿ ಇರುತ್ತದೆ. ಶನಿ ಗ್ರಹ ಮತ್ತು ಶುಕ್ರ ಗ್ರಹ ಆತ್ಮೀಯ ಸ್ನೇಹಿತರು. ಇದರಿಂದ, ತುಲಾ ರಾಶಿಯವರಿಗೆ ಪಂಚಮ ಶನಿ ಗ್ರಹದ ಪ್ರಭಾವ ಕಡಿಮೆ. ಇನ್ನು ತುಲಾ ರಾಶಿಯವರಿಗೆ ಶನಿ ಗ್ರಹ ಸುಖ ಕೊಡುತ್ತದೆ, ಪೂರ್ವ ಪುಣ್ಯ ಪ್ರಾಪ್ತಿ ಮಾಡುತ್ತದೆ. ಸಂತಾನ ಭಾಗ್ಯ ಕೊಡುವ ಗ್ರಹ. ಒಳ್ಳೆಯ ಮಕ್ಕಳು ಸಿಗುವರು. ದೇವರ ಆಶೀರ್ವಾದ ಮತ್ತು ಅನುಗ್ರಹ ಸಿಗುತ್ತದೆ.

ಈ ರಾಶಿಯವರು ಧಾನ ಮಾಡುವ ಬುದ್ದಿ, ಧಾರ್ಮಿಕ ಮತ್ತು ಸಾಮಾಜಿಕ ಚಿಂತೆ ಮಾಡುವರು. ಮಾನಸಿಕ ನೆಮ್ಮದಿ ಸಿಗುತ್ತದೆ. ಹೆಸರು ಹೆಚ್ಚು ಪ್ರಖ್ಯಾತಿ ಪಡೆಯುತ್ತದೆ. ದ್ವೇಷ, ಕೋ,ಪ, ರಾಜಸಿಕ ಹಾಗೂ ತಾಮಸಿಕ ಎಲ್ಲಾ ದೂರ ಆಗುತ್ತದೆ ಮತ್ತು ಸಾತ್ವಿಕ ಜೀವನವನ್ನು ತುಲಾ ರಾಶಿಯವರು ನಡೆಸುವರು. ಬುದ್ದಿ ಅಭಿವೃದ್ದಿ ಆಗುತ್ತದೆ, ಅಜ್ಞಾನದಿಂದ ಜ್ಞಾನದೆಡೆಗೆ ನಡೆಯುವರು.

ಸಂಪತ್ತು ವೃದ್ಧಿಯಾಗುವ ಸಾಧ್ಯತೆ ಇದೆ, ದುಷ್ಟ ಬುದ್ದಿ ದೂರ ಆಗುತ್ತದೆ. ಕಲಹಗಳು ಎಲ್ಲಾ ನಿವಾರಣೆ ಆಗುತ್ತದೆ. ಆರೋಗ್ಯ ವೃದ್ಧಿಯಾಗುತ್ತದೆ. ಮಾನಸಿಕ ರೋಗ, ಹಠಮಾರಿತನ ದೂರವಾಗುತ್ತದೆ. 2024ರ ಮಾರ್ಚ್ ತಿಂಗಳಿನ 31 ನೇ ತಾರೀಖು ಗುರು ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ಇದರಿಂದ ತುಲಾ ರಾಶಿಯವರಿಗೆ ಗುರು ಬಲ ಇರುವುದಿಲ್ಲ.

ದ್ವೇಷ, ಕೋಪ ಎಲ್ಲಾ ಉತ್ಪತ್ತಿಯಾಗುತ್ತದೆ ಅದರಿಂದ ಧ್ಯಾನ, ಯೋಗದ ಮೋರೆ ಹೋಗಬೇಕು. ಸಾಲ ಆಗುತ್ತದೆ, ಹಣ ಸಂಪಾದನೆಯಲ್ಲಿ ವ್ಯತ್ಯಾಸ ಆಗುತ್ತದೆ.  ವೃತ್ತಿ ರಂಗದಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾಗುತ್ತದೆ. ಸುಖ ಶಾಂತಿ ನೆಮ್ಮದಿ ಕಡಿಮೆಯಾಗುತ್ತದೆ, ಶ್ರಮ ಹೆಚ್ಚಾಗುತ್ತದೆ. ವಿದ್ಯಾಭ್ಯಾಸದಲ್ಲಿ  ಗೊಂದಲ ಎದುರಾಗುತ್ತದೆ. ವಿವಾಹದಲ್ಲಿ ತೊಂದರೆ ಬರುವುದು. ಸ್ವಂತ ಮನೆ ನಿರ್ಮಾಣ ಮಾಡುವ ಯೋಗವಿದೆ. ಹಣವನ್ನು ಸಾಲ ಕೊಡುವುದು ( ಕೊಡಿಸುವುದು ), ಪಡೆಯುವುದು ಹೆಚ್ಚು ಶ್ರೇಯಸ್ಸು ತರುವುದಿಲ್ಲ. ಶತ್ರು ಕಾಟ ಇರುತ್ತದೆ. ತೀರ್ಥ ಕ್ಷೇತ್ರಗಳ ದರ್ಶನ ಮಾಡಬೇಕು. ಶರೀರ ಮತ್ತು ಆಯುಷ್ಯ ಗಟ್ಟಿಯಾಗಿ ಇರುತ್ತದೆ.

ಪರಿಹಾರ :- ತಿಂಗಳಿಗೆ ಒಂದು ಬಾರಿ ಶನಿ ದೇವರ ದೇವಸ್ತಾನಕ್ಕೆ ಹೋಗಿ ದೇವರ ದರ್ಶನ ಮಾಡಬೇಕು. ಒಂದು ಎಳ್ಳೆಣ್ಣೆ ತೈಲ ಅಭಿಷೇಕ ಮಾಡಿಸಬೇಕು ಅದರಿಂದ, ಒಳ್ಳೆಯ ಫಲಗಳು ಲಭಿಸುತ್ತವೆ. ಗುರು ಶಾಂತಿ ಮೂಲ ಜಾತಕದಲ್ಲಿ ಅಗತ್ಯವಿದ್ದರೆ ಮಾಡಿಸಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.