ಕಾರ್ಮಿಕ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರದಿಂದ 3 ಸಾವಿರ ಸಹಾಯಧನ
ರಾಜ್ಯ ಸರ್ಕಾರವು ಕಾರ್ಮಿಕರಿಗೆ ಬರ್ಜರಿಯಾದ ಸಿಹಿ ಸುದ್ದಿಯನ್ನು ನೀಡಿದೆ ಅದೇನೆಂದರೆ ಕೋವಿಡ್ 19 ಎರಡನೇ ಅಲೆಯ ಸಂದರ್ಭದಲ್ಲಿ ಮೂರು ಸಾವಿರ ರೂಪಾಯಿ ಸಹಾಯಧನವನ್ನು ನೀಡಲು ಸರ್ಕಾರವು ಘೋಷಣೆ ಮಾಡಿತ್ತು. ಕೆಲವು ಕಾರ್ಮಿಕರಿಗೆ ಮೂರು ಸಾವಿರ ರೂಪಾಯಿ ಸಹಾಯಧನ ದೊರೆತಿದೆ ಆದರೆ ಕೆಲವು ಕಾರ್ಮಿಕರಿಗೆ ಮೂರು ಸಾವಿರ ರೂಪಾಯಿ ಸಹಾಯಧನ ದೊರೆತಿಲ್ಲ ಅದಕ್ಕಾಗಿ ಕರ್ನಾಟಕ ಸರ್ಕಾರವು ಯಾರಿಗೆಲ್ಲಾ ಮೂರು ಸಾವಿರ ರೂಪಾಯಿ ಸಹಾಯಧನ ದೊರೆತಿಲ್ಲ ಅವರು ಮತ್ತೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಘೋಷಿಸಿದೆ.
ಹಾಗಾದರೆ ಅದಕ್ಕೆ ಅರ್ಜಿಯನ್ನು ಯಾವ ರೀತಿಯಾಗಿ ಸಲ್ಲಿಸಬೇಕು ಅರ್ಜಿ ಸಲ್ಲಿಸುವುದಕ್ಕೆ ಯಾವೆಲ್ಲ ದಾಖಲೆಗಳು ಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬ ಮಾಹಿತಿಗಳನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಮೂರು ಸಾವಿರ ರೂಪಾಯಿಗಳ ನೇರ ನಗದು ವರ್ಗಾವಣೆ ಅಂದರೆ ಡಿಪಿಟಿ ಆಧಾರ್ ಮೂಲಕ ಪಾವತಿಸಲು ಇಲಾಖೆಗೆ ಕಳುಹಿಸಲಾಗಿದ್ದು ಈ ರೀತಿ ಕಳುಹಿಸಲಾದ ಡೇಟಾ ದಲ್ಲಿ ಶೇಕಡ ತೊಂಬತ್ತರಷ್ಟು ಕಾರ್ಮಿಕರಿಗೆ ಸಹಾಯಧನ ಪಾವತಿ ಆಗಿರುತ್ತದೆ.
ಇನ್ನು ಉಳಿದ ಶೇಕಡ ಹತ್ತರಷ್ಟು ಕಾರ್ಮಿಕರಿಗೆ ವಿವಿಧ ಕಾರಣಗಳಿಂದಾಗಿ ಸಹಾಯಧನ ಪಾವತಿ ಆಗಿರುವುದಿಲ್ಲ. ಅಂದರೆ ಕಾರ್ಮಿಕರ ಆಧಾರ್ ಸಂಖ್ಯೆ ಅವರ ಬ್ಯಾಂಕ್ ಖಾತೆಗೆ ಜೋಡಣೆ ಆಗದೇ ಇರುವುದು ಹಾಗೂ ಬ್ಯಾಂಕಿನವರು ಬ್ಯಾಂಕ್ ಖಾತೆಯನ್ನು ಎನ್ ಸಿ ಪಿ ಐ ಗೆ ಮ್ಯಾಪಿಂಗ್ ಮಾಡಿರುವುದಿಲ್ಲ ಆದಕಾರಣ ನೊಂದಾಯಿತ ಕಟ್ಟಡ ಕಾರ್ಮಿಕರ ಖಾತೆಗೆ ಮೂರು ಸಾವಿರ ರೂಪಾಯಿ ಸಹಾಯಧನ ಪಾವತಿ ಆಗಿರುವುದಿಲ್ಲ.
ಹಾಗಾಗಿ ಆ ಸಹಾಯಧನವನ್ನು ಪಡೆದುಕೊಳ್ಳುವುದಕ್ಕೆ ನೀವು ಮತ್ತೆ ಅರ್ಜಿಯನ್ನು ಸಲ್ಲಿಸಬಹುದು ಯಾರು ಸಹಾಯಧನವನ್ನು ಪಡೆದುಕೊಂಡಿರುವುದಿಲ್ಲ ಅಂತಹ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ಗೆ ಜೋಡಣೆಯಾಗಿರುವ ಬಗ್ಗೆ ಹಾಗೂ ಬ್ಯಾಂಕಿನವರು ಈ ಬ್ಯಾಂಕ್ ಖಾತೆಯನ್ನು ಎನ್ ಸಿ ಪಿ ಐ ಗೆ ಮ್ಯಾಪಿಂಗ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರ ನೀವು ಅಗತ್ಯ ದಾಖಲೆಗಳೊಂದಿಗೆ ನವೆಂಬರ್ ಮುವತ್ತರ ಒಳಗಾಗಿ ನಿಮ್ಮ ಜಿಲ್ಲೆ ಅಥವಾ ತಾಲೂಕಿನಲ್ಲಿರುವ ಕಾರ್ಮಿಕ ಇಲಾಖೆಗೆ ಸಂಪರ್ಕಿಸಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ರೀತಿಯಾಗಿ ಯಾವ ಕಾರ್ಮಿಕರು ಇದುವರೆಗೂ ಕೋವಿಡ್ 19ರ ಎರಡನೇ ಅಲೆಯಲ್ಲಿ ಕಾರ್ಮಿಕರಿಗಾಗಿ ಘೋಷಿಸಿದ ಸಹಾಯಧನವನ್ನು ಪಡೆದುಕೊಂಡಿಲ್ಲ ಅಂತಹ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆ ಯನ್ನು ಜೋಡಣೆ ಮಾಡಿಕೊಂಡು ಬ್ಯಾಂಕಿನವರು ನಿಮ್ಮ ಖಾತೆಯನ್ನು ಎನ್ ಸಿ ಪಿ ಐ ಗೆ ಮ್ಯಾಪಿಂಗ್ ಮಾಡಿದ್ದಾರೆ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ನೀವು ಅರ್ಜಿಯನ್ನು ಸಲ್ಲಿಸುವ ಮೂಲಕ ಕಾರ್ಮಿಕರಿಗಾಗಿ ಘೋಷಣೆ ಮಾಡಿರುವ ಮೂರು ಸಾವಿರ ರೂಪಾಯಿ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.
ನೀವು ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತ ಸದಸ್ಯರಾಗಿದ್ದು ಇದುವರೆಗೂ ಯಾವುದೇ ಸಹಾಯಧನವನ್ನು ಪಡೆದುಕೊಳ್ಳದಿದ್ದರೆ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ಸಹಾಯಧನವನ್ನು ಪಡೆದುಕೊಳ್ಳಿರಿ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಅಕ್ಕಪಕ್ಕದವರಿಗೆ ಮಾಹಿತಿಯನ್ನು ತಿಳಿಸಿರಿ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430