ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಗ್ರಹಗಳು ಸಂಚಾರ ಮಾಡುವ ಪರಿಣಾಮ ಕೆಲವು ಶುಭ ಮತ್ತು ಅಶುಭ ಫಲಗಳನ್ನು ತರುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹ ಕುಂಭ ರಾಶಿಯಲ್ಲಿ ಸಂಚಾರ ಆರಂಭ ಮಾಡುತ್ತದೆ. ಈ ಸಂಚಾರ 3 ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಮತ್ತು ಮಂಗಳಕರ ಫಲಗಳನ್ನು ಕೊಡುತ್ತದೆ.

ವೈದಿಕ ಜ್ಯೋತಿಷ್ಯದ ಪ್ರಕಾರ, 9 ಗ್ರಹಗಳಲ್ಲಿ ಬುಧ ಗ್ರಹ ತುಂಬ ಚಿಕ್ಕ ಗ್ರಹ. ಬುಧ ಗ್ರಹ ಹೆಚ್ಚು ಸಮಯ ಒಂದೇ ರಾಶಿಯಲ್ಲಿ ಸಂಚಾರ ಮಾಡುವುದಿಲ್ಲ. ಈ ಗ್ರಹ ಒಂದು ಮಾಸದ ನಂತರ ಇನ್ನೊಂದು ರಾಶಿಗೆ ಪ್ರವೇಶ ಮಾಡುತ್ತದೆ. ಬುಧ ಗ್ರಹ ಈಗ ಮಕರ ರಾಶಿಯಲ್ಲಿ ಮಕರ ಸಂಕ್ರಾಂತಿಯ ಸಮಯದಿಂದ ಸಂಚಾರ ಮಾಡುತ್ತಿದೆ ಹಾಗೂ ಅದು ಫೆಬ್ರವರಿ 20 ರಂದು ಕುಂಭ ರಾಶಿಯನ್ನು ಪ್ರವೇಶ ಮಾಡುತ್ತದೆ. ಕುಂಭ ರಾಶಿಯ ಅಧಿಪತಿ ಶನಿ ಗ್ರಹ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಗ್ರಹ ಮತ್ತು ಬುಧ ಗ್ರಹದ ನಡುವೆ ಸ್ನೇಹ ಭಾವವಿದೆ.

ಬುಧ ಗ್ರಹ ಮಕರ ಸಂಕ್ರಾಂತಿಯ ಸಮಯದಿಂದ ಕೆಲವು ರಾಶಿಗಳಿಗೆ ಒಳ್ಳೆಯ ಶುಭ ಫಲ ತರುತ್ತದೆ. ವೃತ್ತಿ ಹಾಗೂ ವ್ಯವಹಾರದಲ್ಲಿ ಪ್ರಗತಿಯನ್ನು ಸಾಧಿಸುವ ಸಾಧ್ಯತೆ ಇದೆ. ಆ 3 ಅದೃಷ್ಟ ಪಡೆದ ರಾಶಿಗಳು ಯಾವುದು ಎಂದು ತಿಳಿಯೋಣ.

ಕುಂಭ ರಾಶಿ :- ಬುಧ ಗ್ರಹದ ಸಂಚಾರ ಕುಂಭ ರಾಶಿ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಬುಧ ಗ್ರಹ ಈ ರಾಶಿಯ ಅವಿವಾಹಿತ ಜನರಿಗೆ ಕಂಕಣ ಭಾಗ್ಯ ತಂದು ಕೊಡುತ್ತದೆ. ಈ ಕಾಲದಲ್ಲಿ ವ್ಯವಹಾರ ಮಾಡುವ ವಿಧಾನ ಬದಲಾಗುತ್ತದೆ ಮತ್ತು ಅಭಿವೃದ್ಧಿ ತಂದುಕೊಡುತ್ತದೆ.

ಈ ಸಮಯದಲ್ಲಿ ಈ ರಾಶಿಯವರು ಕೆಲಸ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವರು. ಸಂಪತ್ತು ವೃದ್ದಿ ಆಗಲು ಹೆಚ್ಚು ಅವಕಾಶಗಳಿವೆ, ಆರ್ಥಿಕ ಪರಿಸ್ಥಿತಿ ಗಟ್ಟಿಯಾಗಿ ಸಮೃದ್ದಿಯಾಗುತ್ತದೆ ಮತ್ತು ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ. ವಿವಾಹಿತ ಜನರ ಕೌಟುಂಬಿಕ ಜೀವನ ಹೆಚ್ಚು ಸುಖಕರವಾಗಿ ಇರುತ್ತದೆ. ಪಾಲುದಾರಿಕೆಯಲ್ಲಿ ಜಂಟಿ ವ್ಯವಹಾರವನ್ನು ಆರಂಭ ಮಾಡಲು ಬಯಸುವ ಜನರಿಗೆ ಈ ಸಮಯ ಹೆಚ್ಚು ಲಾಭ ತರುತ್ತದೆ.

ಮಿಥುನ ರಾಶಿ :- ಮಿಥುನ ರಾಶಿಯ ಜನರಿಗೆ ಈ ಬುಧ ಗ್ರಹ ಹೆಚ್ಚು ಅನುಕೂಲ ತರುತ್ತದೆ. ಮಿಥುನ ರಾಶಿಯ ಅಧಿಪತಿ ಬುಧ ಗ್ರಹ. ಬುಧ ಗ್ರಹ ಮಿಥುನ ರಾಶಿಯಿಂದ 9ನೇ ಮನೆಗೆ ಪ್ರವೇಶ ಮಾಡುತ್ತದೆ.

ಈ ಅವಧಿಯಲ್ಲಿ ಮಿಥುನ ರಾಶಿಯವರ ಅದೃಷ್ಟ ಬದಲಾಗುತ್ತದೆ. ಧಾರ್ಮಿಕ ಅಥವಾ ಶುಭಕರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ವ್ಯಾಪಾರ ಹಗಲು ಹೊತ್ತಿನಲ್ಲಿ ದ್ವಿ ಗುಣವಾಗುತ್ತದೆ ಹಾಗೂ ರಾತ್ರಿಯಲ್ಲಿ 4 ಪಟ್ಟು ಹೆಚ್ಚಾಗುತ್ತದೆ. ಬ್ಯಾಂಕ್ ಬ್ಯಾಲೆನ್ಸ್ ಕೂಡ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಈ ದೇಶ ಮತ್ತು ವಿದೇಶಗಳಲ್ಲಿಯೂ ಸಹ ಪ್ರಯಾಣ ಮಾಡುವ ಅವಕಾಶ ಇರುತ್ತದೆ. ಅದು, ಶುಭ ಫಲವನ್ನು ತರುತ್ತದೆ. ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಅಧ್ಯಯನ ಮಾಡುವ ಅವಕಾಶ ಇರುತ್ತದೆ.

ಮಕರ ರಾಶಿ :- ಬುಧ ಗ್ರಹದ ಸಂಚಾರ ಮಕರ ರಾಶಿಗೆ ಆರ್ಥಿಕವಾಗಿ ಶುಭಕರ. ಬುಧ ಗ್ರಹ ಸಂಕ್ರಮಣದ ಜಾತಕದ ಹಣ ಮತ್ತು ಮಾತಿನ ಮನೆಗೆ ಭೇಟಿ ನೀಡಲಿದೆ. ಇದರಿಂದ, ಈ ಅವಧಿಯಲ್ಲಿ ಅನಿರೀಕ್ಷಿತ ಆರ್ಥಿಕ ಲಾಭ ಸಿಗುತ್ತದೆ.

ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಶ್ರಮ ಪಡುವರು ಹಾಗೂ ಈ ರಾಶಿಯವರು ಮಾತುಗಳಿಂದ ಬೇರೆಯವರನ್ನು ಸುಲಭವಾಗಿ ಆಕರ್ಷಣೆ ಮಾಡುವರು. ಈ ಕಾಲದಲ್ಲಿ, ಉದ್ಯಮಿಗಳು ಹೆಚ್ಚು ಲಾಭ ಗಳಿಕೆ ಮಾಡುವರು. ದಿನ ನಿತ್ಯ ಬರುವ ಆದಾಯ ಕೂಡ ಕ್ರಮೇಣ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇವು ರಾಶಿಗಳ ಗೋಚಾರ ಫಲಗಳು ಅಷ್ಟೇ ಇದಕ್ಕೂ ಜನ್ಮ ಜಾತಕಕ್ಕೆ ಯಾವುದೇ ಸಂಬಂಧ ಇರುವುದಿಲ್ಲ.

Leave a Reply

Your email address will not be published. Required fields are marked *