ಫೆಬ್ರವರಿ ತಿಂಗಳಿನ 12ನೇ ತಾರೀಖು ಸಂಪತ್ತನ್ನು ತರುವ ಶುಕ್ರ ಗ್ರಹ. ಶನಿ ಗ್ರಹ ಅಧಿಪತಿಯಾಗಿರುವ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಇದರಿಂದಾಗಿ ಯಾವ ರಾಶಿಗಳಿಗೆ ಧನ ಲಾಭವಾಗುತ್ತದೆ ಎಂದು ತಿಳಿಯೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನ ಮತ್ತು ಸಂತಸವನ್ನು ಕೊಡುವ ಶುಕ್ರ ಗ್ರಹ ಫೆಬ್ರವರಿ ತಿಂಗಳಿನ 12ನೇ ತಾರೀಖು ಮುಂಜಾನೆ 4.41ಕ್ಕೆ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಸೂರ್ಯ ಗ್ರಹ, ಮಂಗಳ ಗ್ರಹ ಮತ್ತು ಬುಧ ಗ್ರಹ ಪ್ರಸ್ತುತ, ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಶುಕ್ರ ಗ್ರಹ ಬಂದ ನಂತರ 4 ಪ್ರಮುಖ ಗ್ರಹಗಳ ಸಂಯೋಗ ಮಕರ ರಾಶಿಯಲ್ಲಿ ನಡೆಯುವ ಕಾರಣ ಹೆಚ್ಚಿನ ಶುಭ ಫಲಗಳು ರೂಪುಗೊಳ್ಳುತ್ತವೆ.

ಬುಧ ಗ್ರಹ ಮತ್ತು ಶುಕ್ರ ಗ್ರಹ ಒಂದಾಗಿ ಲಕ್ಷ್ಮಿ ನಾರಾಯಣ ಯೋಗವನ್ನು ಸೃಷ್ಟಿ ಮಾಡುತ್ತದೆ. ಇದು ಫೆಬ್ರವರಿ ತಿಂಗಳಿನ 12ನೇ ತಾರೀಖು ಕೆಲವು ರಾಶಿಗಳಿಗೆ ಉತ್ತಮ ದಿನಗಳ ಆರಂಭವನ್ನು ಸೂಚಿಸುತ್ತದೆ. ಶುಕ್ರ ಗ್ರಹ ಮಕರ ರಾಶಿಯನ್ನು ಪ್ರವೇಶ ಮಾಡುವ ಕಾರಣ.

ಯಾವ ರಾಶಿಗಳಿಗೆ ಹೆಚ್ಚು ಶುಭ ಮತ್ತು ಅಶುಭ ಫಲಗಳು ದೊರಕುತ್ತದೆ ಮತ್ತು ಯಾವು ಆ ಅದೃಷ್ಟವಂತ ರಾಶಿಗಳು ಎಂದು ತಿಳಿಯೋಣ.

ಮೇಷ ರಾಶಿ :-ಮೇಷ ರಾಶಿಯವರ ಪ್ರೇಮ ಸಂಬಂಧಗಳಲ್ಲಿ ಮಾಧುರ್ಯತೆ ತುಂಬಿರುತ್ತದೆ. ವೈವಾಹಿಕ ಜೀವನದಲ್ಲಿ ಎದುರಾದ ಸಮಸ್ಯೆಗಳಿಂದ ಮುಕ್ತಿ ಪಡೆಯುವರು. ಹಣ ಸಂಪಾದನೆ ಮಾಡಿ ಅದರಲ್ಲಿ ಗೆಲುವನ್ನು ಸಾಧಿಸುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆದು ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ. ವ್ಯವಹಾರದಲ್ಲಿ ಲಾಭ ಸಿಗುತ್ತದೆ ಮತ್ತು ಆರ್ಥಿಕ ಸ್ಥಿತಿ ಕೂಡ ಉತ್ತಮವಾಗುತ್ತದೆ.

ಮಿಥುನ ರಾಶಿ :- ಈ ಕಾಲದಲ್ಲಿ ಮಿಥುನ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸವಾಲುಗಳನ್ನು ದೃಢವಾಗಿ ಎದುರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಸಕ್ತಿ ಹೆಚ್ಚಾಗುತ್ತದೆ. ಮಾಡುವ ಕೆಲಸದಲ್ಲಿ ಪರಿವಾರದ ಸಹಾಯ ಸಿಗುತ್ತದೆ ಮತ್ತು ಲಾಭ ಲಭಿಸುತ್ತದೆ. ಆದಾಯವನ್ನು ಹೆಚ್ಚಿಗೆ ಮಾಡಲು ಹೊಸ ದಾರಿಗಳು ಸೃಷ್ಟಿ ಆಗುತ್ತವೆ.

ಸಿಂಹ ರಾಶಿ :- ಶುಕ್ರ ಗ್ರಹದ ಸಂಚಾರ ಸಿಂಹ ರಾಶಿಯವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಸಂಬಂಧಗಳಲ್ಲಿ ಇರುವ ಪ್ರೀತಿ ಇನಷ್ಟು ಹೆಚ್ಚಾಗುತ್ತದೆ ಮತ್ತು ಬಲಗೊಳ್ಳುತ್ತದೆ. ಮಕ್ಕಳು ಹೆತ್ತವರಿಗೆ ಹೆಚ್ಚು ಸಂತಸ ತಂದುಕೊಡುವರು. ಸಂಪತ್ತು ವೃದ್ಧಿಯಾಗುವ ಸಾಧ್ಯತೆ ಇರುತ್ತದೆ. ಕೌಟುಂಬಿಕ ಜೀವನ ಆನಂದ ಮತ್ತು ಸುಖಕರವಾಗಿ ಇರುತ್ತದೆ. ಈ ಕಾಲದಲ್ಲಿ ಮಿಥುನ ರಾಶಿಯವರ ಜೀವನ ಸುಗಮವಾಗಿ ಸಾಗುತ್ತದೆ.

ಧನಸ್ಸು ರಾಶಿ :- ಧನು ರಾಶಿಯವರ ಸಾಮಾಜಿಕ ಪ್ರತಿಷ್ಠೆ ಈ ಸಮಯದಲ್ಲಿ ಉತ್ತಮವಾಗುತ್ತದೆ. ಸಾಂಸಾರಿಕ ಜೀವನದಲ್ಲಿ ಹೆಚ್ಚು ಸಂತೋಷ ಬಂದು ನೆಲೆಸುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿ ಕೂಡ ಹೆಚ್ಚಿನ ಗೆಲುವು ಸಿಗುತ್ತದೆ.

ಕಾಮಗಾರಿ ಮಾಡುವ ಸಮಯದಲ್ಲಿ ಎದುರಾಗಿ ಬರುವ ಅಡೆತಡೆಗಳು ದೂರವಾಗುತ್ತದೆ. ಈ ರಾಶಿಯವರು ಮಕ್ಕಳಿಂದ ಹೆಚ್ಚು ಸಂತೋಷ ಪಡೆಯುವರು.

ಕುಂಭ ರಾಶಿ :- ಕುಂಭ ರಾಶಿಯವರಿಗೆ ಈ ಸಮಯದಲ್ಲಿ ಆಧ್ಯಾತ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಎಲ್ಲರಿಗೂ ಈ ರಾಶಿಯವರು ಆಕರ್ಷಣೆಯ ಕೇಂದ್ರಬಿಂದು. ಮನೆಯಲ್ಲಿ ಶುಭ ಕಾರ್ಯಗಳನ್ನು ನೆರವೇರುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬರುತ್ತದೆ. ವ್ಯವಹಾರದಲ್ಲಿ ಪರಿಸ್ಥಿತಿ ಗಟ್ಟಿಯಾಗಿ ನಿಲ್ಲುತ್ತದೆ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

Leave a Reply

Your email address will not be published. Required fields are marked *