12 ರಾಶಿಗಳಲ್ಲಿ ಒಂದೊಂದು ರಾಶಿಯ ವಿಶೇಷತೆ ವಿಭಿನ್ನವಾಗಿ ಇರುತ್ತದೆ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 2024ರ ಕುಂಭ ರಾಶಿಯ ಮಾರ್ಚ್ ತಿಂಗಳಿನ ಮಾಸ ಭವಿಷ್ಯ ನೋಡೋಣ.

ಬುಧ ಗ್ರಹ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. ಶುಕ್ರ ಗ್ರಹ ಕುಂಭ ರಾಶಿಯನ್ನು ಪ್ರವೇಶ ಮಾಡುತ್ತದೆ. ಈ ಎರಡು ಗ್ರಹಗಳ ಬದಲಾವಣೆ ಕುಂಭ ರಾಶಿಚಕ್ರದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 14ನೇ ತಾರೀಖು ರವಿ ಗ್ರಹ ಮೀನ ರಾಶಿಗೆ ಪ್ರವೇಶ ಮಾಡುತ್ತದೆ. 15ನೇ ತಾರೀಖು ಕುಜ ಗ್ರಹ ಕುಂಭ ರಾಶಿಗೆ ಪ್ರವೇಶ ಮಾಡುತ್ತದೆ. 25ನೇ ತಾರೀಖು ಬುಧ ಗ್ರಹ ಮೇಷ ರಾಶಿಗೆ ಪ್ರವೇಶ ಮಾಡುತ್ತದೆ. 31ನೇ ತಾರೀಖು ಶುಕ್ರ ಗ್ರಹ ಮೀನ ರಾಶಿಗೆ ಪ್ರವೇಶ ಮಾಡುತ್ತದೆ.

1ನೇ ಮತ್ತು 2ನೇ ಮನೆಯಲ್ಲಿ ರವಿ ಗ್ರಹ, 12ನೇ ಹಾಗೂ 1ನೇ ಮನೆಯಲ್ಲಿ  ಕುಜ ಗ್ರಹ, 1ನೇ, 2ನೇ ಮತ್ತು 3ನೇ ಮನೆಯಲ್ಲಿ ಬುಧ ಗ್ರಹ, 3ನೇ ಮನೆಯಲ್ಲಿ ಗುರು ಗ್ರಹ, 12ನೇ, 1ನೇ ಮತ್ತು 2ನೇ ಮನೆಯಲ್ಲಿ  ಶುಕ್ರ ಗ್ರಹ ,1ನೇ ಮನೆಯಲ್ಲಿ ಶನಿ ಗ್ರಹ, 2ನೇ ಮನೆಯಲ್ಲಿ ರಾಹು ಗ್ರಹ, 8ನೇ ಮನೆಯಲ್ಲಿ ಕೇತು ಗ್ರಹ ಸಂಚಾರ ಮಾಡುತ್ತವೆ.

8ನೇ ತಾರೀಖು ಮಹಾ ಶಿವರಾತ್ರಿ. 25ನೇ ಹೋಳಿ ಹುಣ್ಣಿಮೆ ಇವು ಮಾರ್ಚ್ ತಿಂಗಳಿನಲ್ಲಿ ಬರುವ ವಿಶೇಷ ದಿನಗಳು. ಮಾರ್ಚ್ ತಿಂಗಳು ಕುಂಭ ರಾಶಿಯ ಭವಿಷ್ಯ ನೋಡುವುದಾದರೆ ಹೆಚ್ಚು ಶುಭ ಫಲಗಳು ಸಿಗುತ್ತದೆ. ಸಂತಾನ ಇಲ್ಲದ ಜನರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಆಸ್ತಿ ವಿಚಾರದಲ್ಲಿ ಲಾಭ ಸಿಗುತ್ತದೆ.

ದೇವರ ಕಾರ್ಯ ಮಾಡುವ ಯೋಗವಿದೆ. ಪುಣ್ಯ ಕ್ಷೇತ್ರಗಳ ಭೇಟಿ ಮಾಡುವ ಸಾಧ್ಯತೆ ಇದೆ, ಈ ತಿಂಗಳು ಅಚ್ಚರಿಯಿಂದ ಕೂಡಿದ ಪ್ರಯಾಣ ಮಾಡುವ ಯೋಗವಿದೆ. ಪರಿವಾರದಲ್ಲಿ ಇದ್ದ ತೊಂದರೆಗಳು ದೂರವಾಗಿ ಸುಖ, ಶಾಂತಿ, ನೆಮ್ಮದಿ ಬಂದು ನೆಲೆಸುತ್ತದೆ. ವಿಧ್ಯಾರ್ಥಿಗಳಿಗೆ ಓದಿನಲ್ಲಿ ಒಳ್ಳೆಯ ಅಭಿವೃದ್ದಿ ಸಿಗುತ್ತದೆ. ಕಟ್ಟಡ ನಿರ್ಮಾಣ ಮಾಡುವ ಕಂಪನಿಗಳು, ಗುತ್ತಿಗೆದಾರರು, ಐ. ಟಿ. ( I.T. )  ಬಿ. ಟಿ. ( B.T. )  ಕಂಪನಿಯಲ್ಲಿ ಕೆಲಸ ಮಾಡುವವರು, ಆರ್ಕಿಟೆಕ್ಟ್ ಕೆಲಸ ಮಾಡುವ ಜನರಿಗೆ ಉತ್ತಮ ಫಲ ಸಿಗುತ್ತದೆ. ಕುಂಭ ರಾಶಿಯ ಜನರಿಗೆ ಈ ತಿಂಗಳು ಸುಯೋಗ ಬಂದು ನೆಲೆಸುತ್ತದೆ. ಕುಂಭ, ಮಕರ, ಮೀನ ರಾಶಿಯ ಜನರಿಗೆ ಸಾಡೇಸಾತಿ ನಡೆಯುತ್ತಿರುವ ಕಾರಣ ಪ್ರತಿ ಅಶುಭ ಘಟನೆಗೆ ಅದೇ ಕಾರಣ ಆಗುವುದಿಲ್ಲ.

ಶನಿ ಮಹಾತ್ಮ ಕರ್ಮಗಳ ಅನುಸಾರ ಫಲ ಕೊಡುವುದು ಅದಕ್ಕೆ, ಅವರು ಮಾಡುವ ಕಾರ್ಯಕ್ಕೆ ತಕ್ಕ ಫಲ ಸಿಗುತ್ತದೆ. ಸ್ವಲ್ಪ ಶತ್ರು ಕಾಟಗಳು ಇರುತ್ತದೆ ಅದರ ಕಡೆ ಗಮನ ಕೊಡಬೇಕು. ದೇವರ ಮೊರೆ ಹೋದರೆ ಅದು ಎಷ್ಟೇ ಕಠಿಣವಾದ ಸಮಸ್ಯೆ ಎದುರಾದರು ಪರಿಹಾರ ಸಿಗುತ್ತದೆ.

ಪರಿಹಾರಗಳು :-ಶ್ರೀ ನೃಸಿಂಹಾಷ್ಟಕಂ ಸ್ತೋತ್ರ ಜಪ ಮಾಡಬೇಕು ಅದು ರಕ್ಷೆಯ ಸ್ತೋತ್ರವಾಗಿ ಕೆಲಸ ಮಾಡುತ್ತದೆ. ಇದು ಕೇವಲ ಗೋಚಾರದ ಸೂಚಕ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *