ಮೀನ ರಾಶಿಯವರಿಗೆ ಹೇಳಿ ಮಾಡಿಸಿದಂತಿದೆ ಮಾರ್ಚ್ ತಿಂಗಳು ಯಾಕೆಂದರೆ

0 18,835

2024ರ ಮೀನ ರಾಶಿಯವರ ಮಾರ್ಚ್ ತಿಂಗಳಿನ ಮಾಸ ಭವಿಷ್ಯ ನೋಡೋಣ. ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಮೀನ ರಾಶಿಯ ಜನರಿಗೆ ಪ್ರಸ್ತುತ ಸಾಡೇಸಾತಿ ನಡೀತಾ ಇದೆ. ಶ್ರಮ ಜೀವಿಗಳಿಗೆ ಯಾವ ತೊಂದರೆಗಳು ಹೆಚ್ಚಾಗಿ ಇರುವುದಿಲ್ಲ. ಆದರೆ, ಸುಮ್ಮನೆ ಇರುವ ಜನರಿಗೆ ಯೋಚನೆಗಳು, ಚಿಂತೆಗಳು, ರೋಗಗಳು  ಹೆಚ್ಚಾಗಿ ಇರುತ್ತದೆ.

ಭವಿಷ್ಯದ ಚಿಂತೆ ಮಾಡುವ ಜನರಿಗೆ ಹೆಚ್ಚು ಒತ್ತಡ ಇರುತ್ತದೆ. ಬದುಕು ಬಂದಂತೆ ಸ್ವೀಕಾರ ಮಾಡುವವರಿಗೆ ಹೆಚ್ಚಿನ ಸಮಸ್ಯೆಗಳು ಎದುರಾಗುವುದಿಲ್ಲ. ಇನ್ನು ನೀವು ಕೆಲಸ ಮಾಡುವ ಸಂದರ್ಭ, ಕ್ಷೇತ್ರ, ವಾತಾವರಣದ ಮೇಲೆ ಕೂಡ ಇದು ಅವಲಂಬಿತವಾಗಿ ಇರುತ್ತದೆ.

ನೀವು ಆ ಸಂದರ್ಭವನ್ನು ಎದುರಿಸಲು ಎಷ್ಟು ಸಾಮರ್ಥ್ಯ ಇರುವುದು ಎನ್ನುವುದು ಕೂಡ ಗಣನೆಗೆ ತೆಗೆದುಕೊಳ್ಳಬೇಕು. ಭೂಮಿ, ಹಾರ್ಡ್ ವೇರ್ ಸಾಮಗ್ರಿಗಳು, ಉಪಕರಣಗಳು, ಟ್ರ್ಯಾಕ್ಟರ್, ಉಳುಮೆ ಮಾಡುವ ಮಶೀನ್’ಗಳು ಈ ರೀತಿ ಕೆಲಸಕ್ಕೆ ಉಪಯುಕ್ತ ಆಗುವ ಸಾಧನಗಳ ಕೆಲಸ ಮಾಡುವುದಕ್ಕೆ ಅನಿವಾರ್ಯವಾಗಿ ಬೇಕು ಅದು ಕೂಡ ಲಾಭ ಕೊಡುತ್ತದೆ.

ಕುಜ ಗ್ರಹ ಈ ಎಲೆಕ್ಟ್ರಾನಿಕ್ ಸಂಬಂಧಪಟ್ಟ ಕೆಲಸದಲ್ಲಿ ಇರುವ ಜನರಿಗೆ ಹೆಚ್ಚು ಲಾಭ ತರುತ್ತದೆ. ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ಕಲೆ, ಸಾಹಿತ್ಯ, ಸಂಗೀತ, ಜರ್ನಲಿಸಂ ಈ ರೀತಿಯ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಲಾಭ ಸಿಗುತ್ತದೆ.

ವೈದ್ಯಕೀಯ ವೃತ್ತಿ, ಎಂಜಿನಿಯರ್, ಟೆಕ್ನಿಕಲ್ ಫೀಲ್ಡ್ ಈ ಎಲ್ಲಾ ಕ್ಷೇತ್ರದ ಜನರ ಕೆಲಸ ತುಂಬಾ ಮೃದುವಾಗಿ ಸಾಗುತ್ತದೆ ಈ ಮಾರ್ಚ್ ತಿಂಗಳಿನಲ್ಲಿ. ಅಲಂಕಾರಿಕ ವಸ್ತುಗಳು, ಇಂಟೀರಿಯರ್ ಡಿಸೈನ್, ವಸ್ತ್ರ, ಆಭರಣಗಳು ಮಾರುವ ವ್ಯಕ್ತಿಗಳಿಗೂ ಈ ಸಮಯ ಚೆನ್ನಾಗಿದೆ.

ವಸ್ತುಗಳನ್ನು ಖರೀದಿ ಮಾಡುವ ಸಮಯದಲ್ಲಿ ಅದರ ದರದ ಬಗ್ಗೆ ಎಚ್ಚರಿಕೆ ವಹಿಸಬೇಕು ನಷ್ಟ ಸಂಭವಿಸುವ ಅವಕಾಶಗಳು ಹೆಚ್ಚಾಗಿ ಕಂಡುಬರುತ್ತದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಈ ತಿಂಗಳು. ಮನೆ ನಿರ್ಮಾಣ ಮಾಡುವ ಜನರಿಗೆ ಈ ತಿಂಗಳು ಸಕಾರಾತ್ಮಕವಾಗಿ ಇರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಜನರಿಗೆ ಹೆಚ್ಚು ಲಾಭ ಸಿಗುತ್ತದೆ. ಮಾರ್ಚ್ ತಿಂಗಳಿನ 15ನೇ ತಾರೀಖಿನ ತನಕ ಎಲ್ಲಾ ನಿರಾಳವಾಗಿ ಸಾಗುತ್ತದೆ ಅದರ ನಂತರ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಇರುತ್ತದೆ.

ಆರೋಗ್ಯದಲ್ಲಿ ಏರು ಪೇರು, ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು, ದೇಹದ ಉಷ್ಣಾಂಶ ಹೆಚ್ಚಾಗಿ ಅದರಿಂದ ಆರೋಗ್ಯ ತೊಂದರೆ ಕಾಡಬಹುದು. ಹೊಸ ವ್ಯವಹಾರಕ್ಕೆ ಕೈ ಹಾಕಲು ಇದು ಒಳ್ಳೆಯ ಸಮಯ ಅಲ್ಲ. ದುಡ್ಡು ಹೆಚ್ಚಾಗಿ ವ್ಯೇಯ ಆಗುವ ಸಂದರ್ಭಗಳು ಸೃಷ್ಟಿ ಆಗುತ್ತದೆ. ಪರಿವಾರದಲ್ಲಿ ಸಂಘರ್ಷ ಎದುರಾಗುತ್ತದೆ. ವಿಧ್ಯಾರ್ಥಿಗಳಿಗೆ ಒಳ್ಳೆಯ ಅಭಿವೃದ್ದಿ ಆಗುತ್ತದೆ. ಇಂಟರ್ವ್ಯೂ ಅಟೆಂಡ್ ಮಾಡುವ ವ್ಯಕ್ತಿಗಳಿಗೂ ಕೂಡ ಇದು ಸಕಾಲ.

ಬಂಧುಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು, ಜಂಟಿ ವ್ಯವಹಾರದಲ್ಲಿ ಕೂಡ ಗಮನ ಕೊಡಬೇಕು ಮೋಸ ಆಗುವ ಸಾಧ್ಯತೆ ಇರುತ್ತದೆ. ವಿಧ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ ಕಾಡಬಹುದು ಆದ್ದರಿಂದ ಹೆಚ್ಚಿನ ಅಭ್ಯಾಸ ಮಾಡಬೇಕು. ಇದು ರಾಶಿಯ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.