ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಚೈತ್ರ ಮಾಸದ ಮೊದಲ ಹಬ್ಬ ಯುಗಾದಿ 2024ರಲ್ಲಿ ಕುಂಭ ರಾಶಿಯವರು ಯುಗಾದಿ ಭವಿಷ್ಯ ಹೇಗಿದೆ ಎಂದು ತಿಳಿಯೋಣ :-

ಕುಂಭ ರಾಶಿಯ ಜನರಿಗೆ ಶನಿ ಗ್ರಹದಲ್ಲಿ ಯಾವುದೇ ರೀತಿಯ ಬದಲಾವಣೆ ಆಗುವುದಿಲ್ಲ. ಗುರು ಗ್ರಹದ ಬಲ ಕೂಡ ಇಲ್ಲ ಆದರೆ ಗುರು ಗ್ರಹ ಸ್ಥಾನ ಬದಲಾವಣೆ ಮಾಡುವ ಕಾರಣ ಒಳ್ಳೆಯ ಫಲಗಳು ಲಭಿಸುತ್ತವೆ. ಈ ರಾಶಿಯಲ್ಲಿ ಜನ್ಮ ಶನಿ ಇರುತ್ತದೆ. 2025ರ ಮಾರ್ಚ್ ತಿಂಗಳ 28ನೇ ತಾರೀಖು ಜನ್ಮ ಶನಿ ಸಮಾಪ್ತಿ ಆಗುತ್ತದೆ. ಅಂದಿನಿಂದ ಅಂತ್ಯ ಶನಿ ಪ್ರಾರಂಭ ಆಗುತ್ತದೆ. ಕತ್ತಿನ ತೊಂದರೆಗಳು ಕಾಡುವ ಸಾಧ್ಯತೆ ಇರುತ್ತದೆ. ನರ ನಾಡಿಗಳು ಬಲಗೊಳ್ಳುತ್ತದೆ.

ಮಾತಿನಲ್ಲಿ ಮಾಧುರ್ಯತೆ ಇರುವುದಿಲ್ಲ ಧ್ವನಿ ಕರ್ಕಶವಾಗುತ್ತದೆ. ಕೂದಲು ಉದುರುವಿಕೆಗೆ ಜಾಸ್ತಿ ಆಗುತ್ತದೆ. ಕೈ ಕಾಲುಗಳ ನೋವು ಆರಂಭ ಆಗುತ್ತದೆ. ಸೌಂದರ್ಯ ಕಡಿಮೆ ಆಗುತ್ತದೆ. ಉಪನ್ಯಾಸಕರಿಗೆ, ಗುರುಗಳಿಗೆ, ಅರ್ಚಕರಿಗೆ, ಪುರೋಹಿತರಿಗೆ, ಜೋತಿಷ್ಯರಿಗೆ, ಲೇಖಕರಿಗೆ, ಆಧ್ಯಾತ್ಮಕ ಚಿಂತಕರಿಗೆ, ದೇವರಿಗೆ ಸಂಬಂಧಪಟ್ಟ ಶಿಲ್ಪಿಗಳಿಗೆ, ವಿಶ್ವ ಕರ್ಮಗಳಿಗೆ, ದೇವಸ್ಥಾನ ಕಟ್ಟುವ ವ್ಯಕ್ತಿಗಳಿಗೆ ಈ ರೀತಿ ಕೆಲಸ ಮಾಡುವ ಜನರಿಗೆ ಒಳ್ಳೆಯ ಮತ್ತು ಶುಭ ಫಲಗಳು ದೊರೆಯುತ್ತವೆ.

ಆಲಸ್ಯ ದೂರ ಆಗುತ್ತದೆ, ಜಡತ್ವ ಬಿಟ್ಟು ಹೋಗುತ್ತದೆ, ಹೆಚ್ಚು ನಿದ್ರೆ ಮಾಡುವ ಸಾಧ್ಯತೆ ಇದೆ, ಹೆಚ್ಚಿನ ಊಟದ ಮೇಲೆ ಗಮನ ಇಡಬೇಕು ಇಲ್ಲದೆ ಹೋದರೆ ಈ ವರ್ಷ ಹೊಟ್ಟೆಗೆ ಸಂಬಂಧಪಟ್ಟ ಸರ್ಜರಿ ಆಗುವ ಸಾಧ್ಯತೆಗಳು ಇವೆ ಮತ್ತು ಹೊಟ್ಟೆಗೆ ಸಂಬಂಧಪಟ್ಟ ರೋಗ ಕಾಡಬಹುದು. ಕುಟುಂಬದ ಜೊತೆ ಜಗಳಗಳು ಆಗುವ ಸಾಧ್ಯತೆಗಳು ಇರುತ್ತದೆ. ಯಾವುದೇ ಭಾಷೆಗೆ ಸಂಬಂಧಿಸಿದಂತೆ ಹೆಚ್ಚು ಪರಿಣಿತಿ ಪಡೆಯುವ ಸಾಧ್ಯತೆ ಇರುತ್ತದೆ. ವಕೀಲರು, ನ್ಯಾಯಾಧೀಶರು, ತಹಶೀಲ್ದಾರ್, ಆರಕ್ಷಕರು ಈ ರೀತಿ ನ್ಯಾಯ ಒದಗಿಸುವ ಕಾರ್ಯದಲ್ಲಿ ಉತ್ತಮ ಫಲ ಸಿಗುವ ಸಾಧ್ಯತೆ ಇರುತ್ತದೆ.

ವಿದೇಶಕ್ಕೆ ಪ್ರಯಾಣ ಮಾಡುವ ಯೋಗ ಇದೆ. ಹೆಚ್ಚು ಬೆಲೆ ಬಾಳುವ ವಸ್ತುಗಳ ಕಡೆ ಗಮನ ಕೊಡಿ ಅದು ಕಳ್ಳತನ ಆಗುವ ಸಾಧ್ಯತೆಗಳು ಇರುತ್ತದೆ. ಗೆಳೆಯರ ಜೊತೆ ಒಳ್ಳೆ ಬಾಂಧವ್ಯ ಹೊಂದುವುದು ಉತ್ತಮ. ಆರೋಗ್ಯ ದೃಷ್ಟಿಯಿಂದ ಕುಂಭ ರಾಶಿಯವರಿಗೆ ಚೆನ್ನಾಗಿದೆ. ಸ್ವ ಪ್ರಯತ್ನದಿಂದ ಜೀವನದಲ್ಲಿ ಮುಂದೆ ಬಂದವರು, ರೂಪವಂತರು, ಸಾಹಸಿಗಳು, ಅಪರಿಮಿತ ಶಕ್ತಿ ಹೊಂದಿರುವವರು. ಈ ರಾಶಿಯವರಿಗೆ ಅನಿಷ್ಟ ಫಲಗಳು ದೂರವಾಗಿ ಒಳ್ಳೆ ಫಲಗಳು ದೊರೆಯುತ್ತದೆ.

ಗುರು ಗ್ರಹದ ಬಲದಿಂದ ತಾಯಿ ಆರೋಗ್ಯ ಉತ್ತಮವಾಗಿ ಇರುತ್ತದೆ. ಮಿತ್ರರರ ವೃದ್ಧಿ ಆಗುತ್ತದೆ, ಮಕ್ಕಳು ಒಳ್ಳೆ ಹೆಸರು ತಂದುಕೊಡುವರು, ಸಂಪತ್ತು ದ್ವಿಗುಣ ಆಗುತ್ತದೆ, ಅತಿಥಿಗಳ ಸತ್ಕಾರ ಮಾಡುವಿರಿ. ಅಧಿಕವಾದ ವಾಹನ ಭೋಗ ಸಿದ್ಧಿಸುತ್ತದೆ. ಗೋವು ಮತ್ತು ಅಶ್ವಗಳು ಅಭಿವೃದ್ದಿ ಆಗುತ್ತದೆ. ಭೂಮಿಗೆ ಸಂಬಂಧಪಟ್ಟ ವ್ಯಾಜ್ಯಗಳು ದೂರ ಆಗುತ್ತದೆ ಮತ್ತು ಬದುಕಿನಲ್ಲಿ ಸುಖ ನೆಮ್ಮದಿ ಶಾಂತಿ ಬಂದು ನೆಲೆಸುತ್ತದೆ.

ಹೆಚ್ಚು ಬಂಗಾರ ಧರಿಸುವುದು ಒಳ್ಳೆಯದಲ್ಲ. ಅದರ ಬದಲು ರುದ್ರಾಕ್ಷಿಯನ್ನು ಧರಿಸುವುದು ಒಳ್ಳೆಯದು. ಸಾಧ್ಯವಿದ್ದರೆ ಶನಿ ಗ್ರಹದ ಶಾಂತಿ ಮಾಡಿಸಬಹುದು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *