2 ಗುಂಟೆ ಜಮೀನಿನಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು 30 ದಿನದಲ್ಲಿ ಎಷ್ಟು ಲಾಭ ಗಳಿಸಿದ್ದಾರೆ ನೋಡಿ ಈ ಯುವ ರೈತ

0 1,236

ಅಲ್ಪಾವಧಿಯ ಕೃಷಿಯಲ್ಲಿ ಲಾಭ ಬರುವುದಿಲ್ಲ ಎನ್ನುವವರ ಸಂಖ್ಯೆ ಹೆಚ್ಚು. ಆದರೆ ಇಲ್ಲಿನ ಕೃಷಿಕರೊಬ್ಬರು 32 ದಿನದಲ್ಲಿ ಕೊತ್ತಂಬರಿ ಸೊಪ್ಪು ಬೆಳೆದು 13 ಸಾವಿರ ಲಾಭಗಳಿಸಿ ಯಶೋಗಾಥೆ ಮೆರೆದಿದ್ದಾರೆ. ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಗಾಪಂ ವ್ಯಾಪ್ತಿಯ ಬಿಲ್ಲಿನಕೋಟೆ ಗ್ರಾಮದ ರೈತ ರಂಗಸ್ವಾಮಿ ತನ್ನ 2 ಗುಂಟೆ ಜಮೀನಿನಲ್ಲಿ ಕಳೆದ ಇಪ್ಪತ್ತು ದಿನಗಳ ಹಿಂದೆ ಎರಡು ಸಾವಿರ ಕೊತ್ತಂಬರಿ ಬೀಜ ಚೆಲ್ಲಿ ಲಾಭ ಗಳಿಸಿದ್ದಾರೆ.

ಕೃಷಿಯಲ್ಲಿ ಸದಾ ಆಸಕ್ತಿ ಹೊಂದಿರುವ ರಂಗಸ್ವಾಮಿ ಅವರು, ತಾವು ಹೊಂದಿರುವ 2 ಎಕರೆ 30 ಗುಂಟೆ ಜಮೀನಿನಲ್ಲಿ ಎರಡು ಗುಂಟೆ ಜಮೀನಿನಲ್ಲಿ ಮಾತ್ರ ಕೊತ್ತಂಬರಿ ಬೀಜ ಚೆಲ್ಲಿದ್ದು, ಮೂರು ಸಾವಿರ ಬಂಡವಾಳ ಹೂಡಿ 16 ಸಾವಿರ ಕೊತ್ತಂಬರಿ ಸೊಪ್ಪನ್ನು ಮಾರಾಟ ಮಾಡಿದ್ದಾರೆ. ಖರ್ಚು 3 ಸಾವಿರ ತೆಗೆದು 13 ಸಾವಿರ ಲಾಭ ಗಳಿಸಿಕೊಂಡಿದ್ದಾರೆ. ಕುಟುಂಬದ ಸದಸ್ಯರಾದ ಅಣ್ಣ ಗೋವಿಂದರಾಜು, ಅತ್ತಿಗೆ ತಾಯಮ್ಮ ಹೆಂಡತಿ ಶಾರಾದಮ್ಮರ ಸಹಕಾರ ಪಡೆದು ಸಮಗ್ರ ಕೃಷಿಯಲ್ಲಿ ತೊಡಗಿದ್ದು, ಉಳಿದ ಜಮೀನಿನಲ್ಲಿ ಕೋಸು, ಮೆಣಸಿನಕಾಯಿ, ಜೋಳ ಕೂಡ ಬೆಳೆದಿದ್ದಾರೆ.

ಕೊತ್ತಂಬರಿಯ ಹೊಸ ತಳಿಯ ಬೀಜವನ್ನು ತಂದು ಉಳುಮೆ ಮಾಡಿ, ಬಿತ್ತನೆ ಮಾಡಲಾಗಿದ್ದು, ಕಡಿಮೆ ಬೇಸಾಯ ಕ್ರಮಗಳಿಂದ ಅಧಿಕ ಇಳುವರಿ ಸಾಧಿಸಿದ್ದಾರೆ. ಜೊತೆಗೆ ರಾಸಾಯನಿಕ ಗೊಬ್ಬರ ಹಾಕದೆ ದನದ ಕೊಟ್ಟಿಗೆ ಗೊಬ್ಬರ ಹಾಕಿ ಸಂಪೂರ್ಣ ಸಾವಯವದಿಂದಲೇ ಕೊತ್ತಂಬರಿ ಬೆಳೆದಿರುವುದು ವಿಶೇಷ. ವಿಶೇಷ ಅಂದರೆ ರೈತ ರಂಗಸ್ವಾಮಿ ಅವರು 400 ಅಡಿ ನೀರಿನ ಕೊಳವೆ ಬಾವಿ ಕೊರೆದಿದ್ದು, ಕಡಿಮೆ ಅಂರ್ತಜಲ ಮಟ್ಟದಲ್ಲಿ ಮೂರು ಇಂಚು ನೀರು ದೊರೆತಿರುವುದು ಕೃಷಿಗೆ ಅನುಕೂಲವಾಗಿದೆ.

ಕೃಷಿಯಲ್ಲಿ ಸದಾ ಆಸಕ್ತಿ ಹೊಂದಿರುವ ರಂಗಸ್ವಾಮಿ, ತಮ್ಮ ಕುಟುಂಬದ ಸಹಕಾರದಿಂದ 2 ಎಕರೆ 30 ಗುಂಟೆ ಜಾಗದ ಅಂಚಿನಲ್ಲಿ ಮೂರು ಸಾವಿರ ಬಂಡವಾಳ ಹೂಡಿ 16 ಸಾವಿರ ಕೊತ್ತಂಬರಿ ಬೆಳೆ ಮಾರಾಟವಾಗಿದೆ, 13 ಸಾವಿರ ಲಾಭ ಬಂದಿದೆ, ಕುಟುಂಬದ ಸದಸ್ಯರಾದ ಅಣ್ಣ ಗೋವಿಂದರಾಜು, ಅತ್ತಿಗೆ ತಾಯಮ್ಮ ಹೆಂಡತಿ ಶಾರಾದಮ್ಮರ ಸಹಕಾರ ಪಡೆದು ಸಮಗ್ರ ಕೃಷಿ ಮಾಡಿದ್ದಾರೆ, ಉಳಿದ ಜಮೀನಿನಲ್ಲಿ ಕೋಸು, ಮೆಣಸಿನಕಾಯಿ, ಜೋಳ ಬೆಳೆದಿದ್ದೇವೆ, ಕುಟುಂಬದ ಸಹಕಾರ ಕೃಷಿ ಸಾಧನೆಗೆ ಅನುಕೂಲವಾಗಿದೆ.

ಕೊತ್ತಂಬರಿ ಸೊಪ್ಪು ಬೆಳೆದಿದ್ದೇನೆ ಇದೇನು ಸಾಧನೆಯಲ್ಲ. ಕಡಿಮೆ ಅವಧಿಯಲ್ಲಿ ಲಾಭ ಗಳಿಸಲು ಈ ಬೆಳೆ ಸಹಕಾರಿಯಾಗಿದೆ. ಕೊತ್ತಂಬರಿಯ ಹೊಸ ತಳಿಯ ಬೀಜವನ್ನು ತಂದು ಉಳುಮೆಯನ್ನು ಮಾಡಿ, ಬಿತ್ತನೆ ಮಾಡಿದ್ದೇವೆ. ಕಡಿಮೆ ಬೇಸಾಯ ಕ್ರಮಗಳಿಂದ ಅಧಿಕ ಇಳುವರಿ ಮಾಡಿದ್ದೇವೆ ಜೊತೆಗೆ ರಾಸಾಯನಿಕ ಗೊಬ್ಬರ ಹಾಕದೆ ದನದ ಕೊಟ್ಟಿಗೆ ಗೊಬ್ಬರ ಹಾಕಿ ಸಂಪೂರ್ಣ ಸಾವಯವ ಮಾಡಿದ್ದೇವೆ ಎಂದು ರಂಗಸ್ವಾಮಿ ತಿಳಿಸಿದರು. ತಿಂಗಳು ಬೆಳೆಗಳಿಂದ ಅದರಲ್ಲೂ ಕೊತ್ತಂಬರಿ ಈ ರೀತಿ ಸೊಪ್ಪಿನ ಬೆಳೆಗಳು ರೈತರಿಗೆ ಅನುಕೂಲಕರ. ಮತ್ತೊಂದು ಬೆಳೆಗೆ ಬಂಡವಾಳ ಹಾಕಲು ಈ ರೀತಿ ಬೆಳೆ ಸಹಕಾರಿ.

ಕೃಷಿ ಅಧಿಕಾರಿಗಳ ಸಲಹೆ ತೆಗೆದುಕೊಂಡು ಇನ್ನೂ ಕೃಷಿಯಲ್ಲಿ ಹೊಸ ಬೆಳೆ ಪ್ರಯತ್ನ ಮಾಡಲಿದ್ದೇನೆ ಎನ್ನುತ್ತಾರೆ ಕೊತ್ತಂಬರಿ ಬೆಳೆದ ರೈತ ರಂಗಸ್ವಾಮಿ ಅವರು. ರೈತ ರಂಗಸ್ವಾಮಿ ಸಮಗ್ರ ಕೃಷಿ ಜತೆ, ತಿಂಗಳು ಸೊಪ್ಪಿನ ಬೆಳೆಗಳನ್ನು ಬೆಳೆದು ಸಾಧನೆ ಮಾಡಿರುವುದು ಶ್ಲಾಘನಾರ್ಹ, ಸೋಂಪುರ ರೈತ ಸಂಪರ್ಕ ಕೇಂದ್ರದ ಅಡಿಯಲ್ಲಿ ಈ ರೈತ ಬರುವುದರಿಂದ, ಇಲಾಖೆಯಿಂದ ಸಲಹೆ ಮತ್ತು ಮಾರ್ಗದರ್ಶನ ನೀಡಿ, ಇನ್ನೂ ಹೆಚ್ಚು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರ ನೀಡುತ್ತೇವೆ ಎಂದು ಕೃಷಿ ಅಧಿಕಾರಿ ಕುಮಾರ್‌ ಹೇಳಿದ್ದಾರೆ.

Leave A Reply

Your email address will not be published.