ಇಡೀ ಭಾರತ ದೇಶ ಕನ್ನಡದತ್ತ ತಿರುಗಿ ನೋಡುವ ಹಾಗೆ ಮಾಡಿದ ಸಿನಿಮಾ ‘ಕೆಜಿಎಫ್’ ಚಾಪ್ಟರ್ 1. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ನಟಿಸಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿ ಮೋಡಿ ಮಾಡಿತ್ತು. ಆದರೆ ಈಗ ‘ಕೆಜಿಎಫ್ 2’ ಸಿನಿಮಾ ಚಿತ್ರೀಕರಣ ಪೂರ್ತಿ ಮುಗಿದಿದ್ದು ರಿಲೀಸ್ ಯಾವಾಗ? ಎನ್ನುವ ಪ್ರಶ್ನೆ ಯಶ್ ಅವರ ಅಭಿಮಾನಿಗಳಲ್ಲಿ ಮೂಡಿದೆ.

ಈ ವರ್ಷ ಅಕ್ಟೋಬರ್ 23ರಂದು ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಬೇಕಾಗಿತ್ತು. ಆದರೆ ಕೊರೊನಾ ವೈರಸ್‌ ಸೋಂಕು ಹರಡುತ್ತಿರುವುದರಿಂದ ಜನಜೀವನ ಎಲ್ಲವೂ ಅಸ್ತವ್ಯಸ್ತ ಆಗಿದೆ. ಅದರ ಜೊತೆಗೆ ಸಿನಿಮಾ ಥಿಯೇಟರ್‌ಗಳು ಸದ್ಯಕ್ಕೆ ಆರಂಭವಾಗುವ ಸೂಚನೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿದೆ. ಅದರ ಜೊತೆ ಹೊಸ ಸಿನಿಮಾಗಳ ಶೂಟಿಂಗ್ ಮಾಡಲಾಗುವುದಿಲ್ಲ, ಹಳೆಯ ಸಿನಿಮಾ ಶೂಟಿಂಗ್ ಮಾಡಿದರೂ ಕೂಡ ಭಯದಲ್ಲೇ ಚಿತ್ರೀಕರಣ ಮಾಡಬೇಕು. ಇದರ ನಡುವೆ ಯಶ್ ಅಭಿನಯದ ಕೆಜಿಎಫ್ ಚಿತ್ರ ಈಗ ಮೊದಲ ಟ್ರೈಲರ್ ಬಿಡುಗಡೆ ಮಾಡಿದೆ. ಇದರ ಕುರಿತಾಗಿ ಯಶ್ ಅವರ ತಾಯಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತಿಯೊಬ್ಬ ತಾಯಿಗೂ ಅವರ ಮಕ್ಕಳು ಹಿರೋ ಆಗಿರುತ್ತಾರೆ. ನನ್ನ ಮಗ ಹುಟ್ಟಿದಾಗಲೇ ನನಗೆ ಹೀರೋ ಎಂದು ಗೊತ್ತಿತ್ತು. ಇದೀಗ ಕೆಜಿಎಫ್-2 ಟೀಸರ್ ಇಷ್ಟೊಂದು ದೊಡ್ಡಮಟ್ಟದ ಯಶಸ್ಸನ್ನು ಕಂಡುಕೊಂಡಿದೆ, 2021 ಎಲ್ಲರಿಗೂ ಒಳ್ಳೆದು ಮಾಡಲಿ ನನಗೆ ತುಂಬಾ ಸಂತೋಷವಾಗಿದೆ ಎಂದು ರಾಕಿಬಾಯ್ ತಾಯಿ ಪುಷ್ಪಾ ಹೇಳಿದ್ದಾರೆ. ನಟ ಯಶ್‌ ಅವರ ತಾಯಿ ಪುಷ್ಪಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತುಂಬ ಕಡಿಮೆ. ಕುಟುಂಬದ ಬಗ್ಗೆ ಅವರು ಬಹಿರಂಗವಾಗಿ ಮಾತನಾಡುವುದು ಕೂಡ ತೀರಾ ಅಪರೂಪ. ಆದರೆ ಅವರು ಇತ್ತೀಚೆಗೆ ‘ಸ್ಟಾರ್‌ ಸುವರ್ಣ’ ವಾಹಿನಿಯ ‘ಬೊಂಬಾಟ್‌ ಭೋಜನ’ ಕಾರ್ಯಕ್ರಮದಲ್ಲಿ ಯಶ್‌ ಬಗ್ಗೆ ಮನಸಾರೆ ಮಾತನಾಡಿದ್ದಾರೆ.

ಶುಕ್ರವಾರ ರಾತ್ರಿಯಷ್ಟೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಇದೀಗ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ ನಾಗಲೋಟದಲ್ಲಿ ಓಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಿರ್ಮಾಪಕ ವಿಜಯ್ ಕಿಗಂದೂರ್ ಅವರು ಹಾಗೂ ವಿಶ್ವದ ಜನ ಈ ಯಶಸ್ಸಿಗೆ ಕಾರಣರಾಗಿದ್ದಾರೆ. ನಿರ್ದೆಶಕ ಪ್ರಶಾಂತ್ ನೀಲ್ ಅವರು ಇಂತಹ ಒಳ್ಳೆಯ ಒಂದು ಕಥೆಯನ್ನು ಕೊಟ್ಟು ಇಷ್ಟೊಂದು ಒಳ್ಳೆಯ ಟೀಸರ್ ಅನ್ನು ಹೊರ ತಂದಿದ್ದಾರೆ ಎಂದರೆ ಅವರ ಶ್ರಮವಿದೆ ಎಂದರು. ಕೆಜಿಎಫ್-2 ಸಿನಿಮಾ ತಂಡ ಹಾಗೂ ಯಶ್ ಕನ್ನಡಿಗರ ಆಸ್ತಿ ಮಾತ್ರವಲ್ಲ ಇಡೀ ದೇಶದ ಆಸ್ತಿಯಾಗಿದ್ದಾರೆ. ಪ್ರತಿಯೊಂದು ಸಿನಿಮಾರಂಗದಲ್ಲಿಯೂ ಇಂಹತ ಒಳ್ಳೆ ನಿರ್ಮಾಪಕರು ಸಿನಿಮಾಕ್ಕೆ ಸಿಗಲಿ. ಇದೇ ರೀತಿಯ ಇನ್ನೂ ಹೆಚ್ಚು ಚಿತ್ರ ನಿರ್ಮಾಣವಾಗುವಂತಾಗಲಿ. ಯಾವ ನಿರ್ಮಾಪಕರು ಧೈರ್ಯವಾಗಿ ಇಷ್ಟೊಂದು ಹಣವನ್ನು ನಿಸಿಮಾಕ್ಕೆ ಹೂಡಲು ಧೈರ್ಯ ಮಾಡುವುದಿಲ್ಲ, ಆದರೆ ವಿಜಯ್ ಕಿಗಂದೂರ್ ಇಂತಹ ಧೈರ್ಯವನ್ನು ಮಾಡಿದ್ದಾರೆ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಪ್ರಶಾಂತ್ ನೀಲ್ ಅವರ ತಂದೆ ತಾಯಿಗೆ ಧನ್ಯವಾದ ಹೇಳುತ್ತೇನೆ ಅವರ ತಾಳ್ಮೆ ಯಾರಿಗೂ ಬರಲು ಸಾಧ್ಯವಾಗುವುದಿಲ್ಲ, ಒಳ್ಳೆಯ ಕಥೆಯನ್ನು ಪ್ರಶಾಂತ್ ನೀಲ್ ನೀಡಿದ್ದಾರೆ. ಕೆಜಿಎ ಫ್-2 ಸಿನಿಮಾದಲ್ಲಿ ಕೆಲಸ ಮಾಡಿದ ಕ್ಯಾಮೆರಾ ಮೆನ್ ಹಾಗೂ ಇತರ ಸದಸ್ಯರಿಗೆ ಹಾಗೂ ಸಂಪೂರ್ಣ ಚಿತ್ರತಂಡಕ್ಕೆ ನನ್ನ ಅಭಿನಂದನೆ ಹೇಳುತ್ತೇನೆ ಎಂದಿದ್ದಾರೆ. ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ ಒಳ್ಳೆಯ ಹೆಸರು ಬಂದೇ ಬರುತ್ತದೆ ಎಂದು ಈ ಮೊದಲೇ ನನಗೆ ಗೊತ್ತಿತ್ತು. ಯಾರೇ ಶ್ರದ್ಧೆಯಿಂದ ಕೆಲಸ ಮಾಡಿದರೂ ದೇವರ ಆಶೀರ್ವಾದ ಸಿಗುತ್ತದೆ. ಅಂತೆಯೇ ಈ ಸಿನಿಮಾಕ್ಕೂ ಸಿಕ್ಕಿದೆ. ಯಶ್ ಟ್ಯಾಂಲೆಂಟ್‍ಗೆ ಇದು ಸಾಲದು. ಇದೆನೋ ಮಾಡಿದ್ದಾನೆ ಎಂದು ಸುಮ್ಮನಾಗುವುದಲ್ಲ, ಸಾಧಿಸುವುದು ಇನ್ನೂ ಇದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ. ನನ್ನ ಮಕ್ಕಳು ಸೊಸೆ, ಮೊಮ್ಮಕ್ಕಳ ಮೇಲೆ ಆಶೀರ್ವಾದ ಇರಲಿ ಎಂದು ಕೇಳಿಕೊಳ್ಳುತ್ತೇನೆ. ಎಂದು ಕೆಜಿಎಫ್ 2 ಟೀಸರ್ ದಾಖಲೆ ಬರೆದಿರುವ ಸಂತೋಷವನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *