ಬಂದರು ನಗರವೆಂದೇ ಹೆಸರಾದ ಮಂಗಳೂರು ಅನೇಕ ವಿಶೇಷಗಳಿಗೆ ಪ್ರಸಿದ್ಧಿ ಪಡೆದಿದೆ. ಮಂಗಳೂರನ್ನು ಬ್ರಿಟಿಷರ ಕಾಲದಲ್ಲಿ ಪೂರ್ವದ ರೋಮ್ ಅಂತಲೇ ಕರೆಯುತ್ತಿದ್ದರು. ರಾಜ್ಯದ ಕಡಲತೀರದ ಸ್ವರ್ಗ ಎಂದೇ ಖ್ಯಾತಿ ಪಡೆದ ಮಂಗಳೂರು ಅನೇಕ ಹೊಸತುಗಳಿಗೆ ಸಾಕ್ಷಿಯಾಗಿದೆ. ಮಂಗಳೂರನ್ನು ಅದರ ಹೆಸರಿನಿಂದ ಬೆಂಗಳೂರಿನ ಸೋದರ ನಗರಿ ಎಂದೇ ಕರೆಯುತ್ತಾರೆ. ಮಂಗಳೂರು ಕೂಡ ಬೆಂಗಳೂರಿನಸ್ಟೇ ವ್ಯಾಪಕವಾಗಿ ಬೆಳೆದು ಅಂತರಾಷ್ಟ್ರೀಯ ಮಾನ್ಯತೆಯನ್ನು ಪಡೆದಿದೆ. ಎರಡು ಸಾವಿರ ವರ್ಷಗಳಿಗೂ ಮಿಗಿಲಾಗಿ ಇತಿಹಾಸವಿರುವ ಮಂಗಳೂರು ನಗರದ ಕೆಲವು ಸ್ವಾರಸ್ಯಕರ ವಿಷಯಗಳ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಮಂಗಳೂರಿಗೆ ಅನೇಕ ವಿಧವಾದ ಹೆಸರುಗಳಿವೆ. ಕುಡ್ಲ, ಕೋಡಿಯಾಲ, ಮೈಕಲ್, ಮಂಗಳಾಪುರ ಮುಂತಾದ ಅನೇಕ ಹೆಸರುಗಳು ಮಂಗಳೂರಿಗೆ ಇದೆ. ಮಂಗಳಾದೇವಿ ಎಂಬ ದೇವತೆಯಿಂದ ಮಂಗಳೂರು ಎಂಬ ಹೆಸರು ಈ ನಗರಕ್ಕೆ ಬಂತು ಎಂದು ಹೇಳುತ್ತಾರೆ. ಮೌರ್ಯರ ಕಾಲದಲ್ಲಿ ಉತ್ತುಂಗದಲ್ಲಿದ್ದ ಈ ನಗರದ ಜನಜೀವನ ಅಶೋಕನ ಪರಿಮಿತಿಗೆ ಒಳಪಟ್ಟಿತ್ತು. ಮಂಗಳೂರಿನ ಕಡಲು ಅನೇಕ ವ್ಯಾಪಾರ ವಹಿವಾಟಿಗೆ ಪ್ರಮುಖವಾಗಿದ್ದು ಇಲ್ಲಿಯ ಬಂದರುಗಳ ಮೂಲಕ ಅನೇಕ ಹಡಗುಗಳು ಸರಕನ್ನು ಹೊತ್ತು ದೂರದ ರೂಮ್, ಗ್ರೀಸ್ ವರಿಗೂ ಯಾನ ಮಾಡುತ್ತಿತ್ತು ಎಂದು ಕ್ರಿಸ್ತಶಕ ಒಂದನೇ ಶತಮಾನದ ಟಾಲೆಮಿ ತನ್ನ ಬರಹದಲ್ಲಿ ನಮೂದಿಸಿದ್ದಾನೆ.

ಮಂಗಳೂರನ್ನು ಕ್ರಿಸ್ತಪೂರ್ವ ದಿಂದ ಸರಿಸುಮಾರು ಸ್ವಾತಂತ್ರ ಬರುವವರೆಗೂ ಅನೇಕ ಜನರು ಆಳಿದ್ದಾರೆ. ಟಾಲೆಮಿ ಲೇಖನದಲ್ಲಿ ಮಿತ್ರ ಎಂಬ ಸ್ಥಳದ ಬಗ್ಗೆ ವಿವರಿಸಿದ್ದಾರೆ. ಅದರ ವಿವರಣೆ ಮಂಗಳೂರಿನ ಪರಿಸರವನ್ನೇ ಹೋಲುವುದರಿಂದ ಹಾಗೂ ಅಲ್ಲಿ ನೇತ್ರಾವತಿ ನದಿಯ ಪಾತ್ರ ಇರುವುದರಿಂದ ಇವರನ್ನು ಮಿತ್ರ ಅಥವಾ ನೇತ್ರ ಎಂದು ಕರೆದಿರಬಹುದಾದ ಸಾಧ್ಯತೆ ಇದೆ. 1947 ರವರೆಗೂ ಮಂಗಳೂರು ಪೋರ್ಚುಗೀಸರ ಕಪಿಮುಷ್ಟಿಯಲ್ಲಿ ಇತ್ತು. ಆಗ ಇದು ಮದ್ರಾಸ್ ಪ್ರೆಸಿಡೆನ್ಸಿ ಅಡಿಯಲ್ಲಿತ್ತು. ಮಂಗಳೂರು ಎಂದು ಕಡಲತೀರ ನೆನಪಾಗುತ್ತದೆ. ಇದಷ್ಟೇ ಅಲ್ಲದೆ ಮಂಗಳೂರು ಕಾಫಿ ಹಾಗೂ ಗೋಡಂಬಿ ಬೆಳೆಗು ಪ್ರಸಿದ್ಧಿಯಾಗಿದೆ. ಮಂಗಳೂರು ಕನ್ನಡ ಭಾಷೆಯನ್ನು ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಇಬ್ಬರೂ ಜರ್ಮನ್ ಮೂಲದ ಕ್ರೈಸ್ತ ಮಿಷನರಿ ಮುಖ್ಯಸ್ಥರು ಮಂಗಳೂರಿಗೆ ಬಂದು ಅಲ್ಲಿಯ ಕನ್ನಡ ಭಾಷೆಯ ಮೇಲೆ ಹೆಚ್ಚು ಸಂಶೋಧನೆಯನ್ನು ಮಾಡಿ ಮೊದಲ ಬಾರಿಗೆ ಮಂಗಳೂರು ಕನ್ನಡ ಭಾಷೆಯಲ್ಲಿಯೇ ಶಬ್ದಕೋಶವನ್ನು ತಯಾರಿಸುತ್ತಾರೆ.

ರಾಜ್ಯದ ಮೊಟ್ಟ ಮೊದಲ ಪತ್ರಿಕೆ ಮಂಗಳೂರು ಸಮಾಚಾರ. ಈ ಪತ್ರಿಕೆ 1843 ರಲ್ಲಿ ಹರ್ಮನ್ ಮೊಗ್ಲಿಂಗ್ ಎಂಬ ಜರ್ಮನ್ ಮೂಲದ ಮಿಷನರಿ ಅವರಿಂದಲೇ ಶುರುವಾಯಿತು. ಮಂಗಳೂರಿನ ಬಂದರಿನಿಂದ ಕಾಳುಮೆಣಸು, ಏಲಕ್ಕಿ, ಗೋಡಂಬಿ ಹಾಗು ವಿವಿಧ ಮಸಾಲೆ ಪದಾರ್ಥಗಳನ್ನು ಹಡಗುಗಳ ಮೂಲಕ ತುಂಬಿ ಹೊರದೇಶಗಳಿಗೆ ಸಾಗಿಸಲಾಗುತ್ತಿತ್ತು. ಈ ವ್ಯಾವಹಾರಿಕ ಪರಂಪರೆಯ ನೂರಾರು ವರ್ಷಗಳಿಂದಲೂ ನಡೆಯುತ್ತಾ ಬಂದಿದೆ. ಬ್ರಿಟಿಷರ ಕಾಲದಲ್ಲಿ ದೇಶದಲ್ಲಿ ಇದ್ದಂತಹ ಅತಿ ಉದ್ದದ ರೈಲು ಸಂಚಾರ ಮಾರ್ಗ ಮಂಗಳೂರಿನಿಂದ ಈಗಿನ ಪೇಶವರದವರಿಗೂ ಇತ್ತು. ಮಂಗಳೂರು ಏರ್ಪೋರ್ಟ್ ಅತ್ಯಂತ ಜನಸಂದಣಿಯ ಉಳ್ಳ ಮತ್ತು ದೊಡ್ಡದಾದ ದೇಶದ ಎರಡನೇ ನಗರವಾಗಿದೆ. ಬೆಂಗಳೂರಿನಸ್ಟೇ ಅತ್ಯಾಧುನಿಕವಾಗಿ ಮಂಗಳೂರು ಬೆಳೆದಿದೆ. ಮಂಗಳೂರಿನ ಊಟ ಬಲು ಅದ್ಭುತವಾಗಿ ಇರುತ್ತದೆ. ಇದೇ ರೀತಿ ಅನೇಕ ವೈವಿಧ್ಯತೆಗಳನ್ನು ಮಂಗಳೂರು ನಗರ ಹೊಂದಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *