ಬೆಳ್ಳಿ ತೆರೆಯ ನಟರನ್ನು ಕಿರುತೆರೆಯಲ್ಲಿ ತೋರಿಸುವಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಯಶಸ್ಸು ಕಂಡಿದೆ ಇದೀಗ ಕಿರುತೆರೆಗೆ ಮತ್ತೊಬ್ಬ ಬೆಳ್ಳಿ ತೆರೆಯ ನಾಯಕ ಬರುತ್ತಿದ್ದಾರೆ ಅವರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ನಟ ಅನಿರುದ್ಧ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ ಹೆಚ್ಚಿನ ಜನಪ್ರಿಯತೆ ಸಿಕ್ಕಿದ್ದು ಮಾತ್ರ ಜೊತೆ ಜೊತೆಯಲಿ ಧಾರವಾಹಿಯಿಂದ. ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಅನಿರುದ್ಧ ಅವರು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಧಾರವಾಹಿಯಿಂದ ಕಿರುತೆರೆಯ ಸೆನ್ಸೇಷನಲ್ ಹೀರೊ ಎಂಬ ಪಟ್ಟ ಲಭಿಸಿದೆ. ಬೆಳ್ಳಿ ಪರದೆಯ ಮೇಲೆ ಹೀರೊ ಆಗಿ ಕಿರುತೆರೆಯಲ್ಲಿ ಕಾಣಿಸಿಕೊಂಡವರಲ್ಲಿ ಅನಿರುದ್ಧ ಅವರು ಒಬ್ಬರು. ಜೊತೆ ಜೊತೆಯಲಿ ಧಾರಾವಾಹಿ ಟಿ.ಆರ್. ಪಿ ಯಲ್ಲಿ ಮುಂದಿದೆ.

ಮತ್ತೊಬ್ಬ ನಟ ಕಿರುತೆರೆ ಧಾರಾವಾಹಿಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ ಅವರೇ ನಟ ಅಭಿಜಿತ್. 1990 ರಿಂದ ಬಣ್ಣ ಹಚ್ಚಲು ಪ್ರಾರಂಭಿಸಿದ ಅಭಿಜಿತ್ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಬರುತ್ತಿರುವ ಸರಸು ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಯಲ್ಲಿ ಸ್ಕಂದ ಅಶೋಕ ಹೀರೊ ಆಗಿದ್ದಾರೆ ಹಾಗೂ ಅಭಿಜಿತ್ ಅವರು ನಾಯಕನ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಜಿತ್ ಅವರು ಈ ಮೊದಲು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ ಮಂಗಳ ಗೌರಿ ಧಾರಾವಾಹಿಯಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಶುರುವಾಗಲಿರುವ ಹೊಸ ಧಾರಾವಾಹಿ ಯಶಸ್ಸು ಕಾಣಲಿ ಎಂದು ಹಾರೈಸೋಣ.

By

Leave a Reply

Your email address will not be published. Required fields are marked *