ವೃಷಭ ರಾಶಿಯವರ ಪಾಲಿಗೆ ನವೆಂಬರ್ ತಿಂಗಳು ಹೇಗಿರಲಿದೆ ನೋಡಿ

0 5

ನವೆಂಬರ್ ತಿಂಗಳಲ್ಲಿ ಬೆಳಕಿನ ಹಬ್ಬವಾದ ದೀಪಾವಳಿ ಇದೆ ಈ ದೀಪಾವಳಿ ಹಬ್ಬದಲ್ಲಿ ದ್ವಾದಶ ರಾಶಿಗಳ ಮೇಲೆ ಗ್ರಹಗಳ ಸ್ಥಾನ ಬದಲಾವಣೆಯಿಂದ ರಾಶಿಫಲ ಗಳಲ್ಲಿ ಶುಭ ಮತ್ತು ಅಶುಭ ಫಲಗಳು ಉಂಟಾಗುತ್ತವೆ ಹಾಗಾಗಿ ನಾವಿಂದು ನಿಮಗೆ ವೃಷಭ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಗ್ರಹ ಸ್ಥಿತಿಗಳು ಹೇಗೆ ಸ್ಥಾನಪಲ್ಲಟ ಹೊಂದುತ್ತವೆ ಯಾವರಿತಿಯಾಗಿ ಶುಭ ಮತ್ತು ಅಶುಭಫಲ ಇದೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.

ವೃಷಭ ರಾಶಿಯವರಿಗೆ ನವೆಂಬರ್ ಎರಡನೇ ತಾರೀಕು ಮಂಗಳವಾರದಂದು ಬುಧ ಗ್ರಹವು ಕನ್ಯಾರಾಶಿ ಇಂದ ತನ್ನ ಮಿತ್ರನಾದ ತುಲಾರಾಶಿಗೆ ಪ್ರವೇಶವಾಗುತ್ತಿದೆ. ಅದೇ ಮಂಗಳವಾರ ಹದಿನಾರನೇ ತಾರೀಕು ರವಿ ವೃಶ್ಚಿಕ ರಾಶಿಗೆ ಪ್ರವೇಶವಾಗುತ್ತಿದ್ದಾನೆ ಅಂದರೆ ನೀಚ ಸ್ಥಾನದಿಂದ ತನ್ನ ಮಿತ್ರನ ಮನೆಗೆ ಬರುತ್ತಿದ್ದಾನೆ. ನವೆಂಬರ್ ಇಪ್ಪತ್ತನೇ ತಾರೀಕು ಶನಿವಾರ ಬುಧ ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಬರುತ್ತಾನೆ ಕಡಿಮೆ ಸಮಯದಲ್ಲಿ ಶತ್ರು ಮನೆಗೆ ಬರುತ್ತಾನೆ. ಅದೇ ಇಪ್ಪತ್ತನೇ ತಾರೀಕು ಶನಿವಾರ ಗುರುವು ನೀಚ ಸ್ಥಾನದಿಂದ ಕುಂಭರಾಶಿಗೆ ಪ್ರವೇಶವಾಗುತ್ತಾನೆ ಅದು ತುಂಬಾ ಒಳ್ಳೆಯ ಫಲ.

ವೃಷಭ ರಾಶಿಯ ರಾಶ್ಯಾಧಿಪತಿಯಾದ ಶುಕ್ರ ಅಷ್ಟಮ ಸ್ಥಾನದಲ್ಲಿದ್ದಾನೆ. ಶುಕ್ರ ಇರುವ ಜಾಗ ಒಳ್ಳೆಯ ಫಲ ಹಾಗಾಗಿ ನಿಮ್ಮ ಶರೀರ ಬಲ, ನಿಮ್ಮ ಸಾಲ ಕಡಿಮೆಯಾಗುತ್ತದೆ ರೋಗಬಾಧೆ ನಿವೃತ್ತಿಯಾಗುತ್ತದೆ. ಶತ್ರುಗಳು ನಿಮಗೆ ಮಿತ್ರರಾಗುತ್ತಾರೆ. ದ್ವಿತೀಯ ಮತ್ತು ಪಂಚಮ ಭಾವಾಧಿಪತಿಗಳಾದ ಬುಧನು ಸಹ ಇಪ್ಪತ್ತನೇ ತಾರಿಕಿನವರೆಗೆ ಬಲಿಷ್ಠನಾಗಿರುತ್ತಾನೆ. ಅದಾದನಂತರ ದ್ವಿತೀಯ ಮತ್ತು ಪಂಚಮ ಸ್ಥಾನ ಅಧಿಪತಿಗಳ ಬಲ ಕಡಿಮೆಯಾಗುತ್ತದೆ. ಚತುರ್ಥಾಧಿಪತಿ ಸುಖವನ್ನು ಕೊಡುವ ಸೂರ್ಯ ಹದಿನಾರನೇ ತಾರೀಖಿನ ನಂತರ ಬಲಿಷ್ಠನಾಗುತ್ತಾನೆ.

ಹದಿನಾರನೇ ತಾರೀಖಿನ ತನಕ ತೊಂದರೆಗಳು ಸ್ವಲ್ಪಮಟ್ಟಿಗೆ ಕಡಿಮೆ ಇರುತ್ತದೆ ಹದಿನಾರನೇ ತಾರೀಖಿನ ನಂತರ ನೀವು ಸುಖವನ್ನು ಜಾಸ್ತಿ ಅನುಭವಿಸುತ್ತಿರಿ. ರಾಶಿಯಿಂದ ಸಪ್ತಮಾಧಿಪತಿ ಮತ್ತು ವ್ಯಯಾಧಿಪತಿ ಯಾದ ಕುಜನ ದೋಷ ನಿಮಗೆ ಬರುವುದಿಲ್ಲ. ವಿವಾಹದಲ್ಲಿ ತೊಂದರೆಯಾಗುವುದಿಲ್ಲ ಶುಭ ಕಾರ್ಯದಲ್ಲಿ ತೊಂದರೆಯಾಗುವುದಿಲ್ಲ ವ್ಯವಹಾರದಲ್ಲಿ ವಿದ್ಯಾಭ್ಯಾಸದಲ್ಲಿ ವಿದೇಶಿ ಪ್ರಯಾಣದಲ್ಲಿ ತೊಂದರೆಯಾಗುವುದಿಲ್ಲ ಭೂಮಿಯ ಯೋಗ ಸಿಗುವ ಸಾಧ್ಯತೆಯಿದೆ.

ಅಷ್ಟಮಾಧಿಪತಿ ಮತ್ತು ಲಾಭಾಧಿಪತಿಯಾದ ಬೃಹಸ್ಪತಿ ಗುರು ಇಪ್ಪತ್ತನೇ ತಾರೀಖಿನವರೆಗೆ ನೀಚ ಸ್ಥಾನದಲ್ಲಿರುತ್ತಾನೆ. ಇಪ್ಪತ್ತನೇ ತಾರೀಖಿನ ನಂತರ ಕುಂಭರಾಶಿಗೆ ಪ್ರವೇಶ ಮಾಡುತ್ತಾನೆ ನಂತರ ದಶಮ ಸ್ಥಾನಕ್ಕೆ ಬರುವ ಕಾರಣ ದಶಮ ಸ್ಥಾನ ಉದ್ಯೋಗ ಸ್ಥಾನ ಹಾಗಾಗಿ ಉದ್ಯೋಗನಿಮಿತ್ತ ತುಂಬಾ ಬಲಿಷ್ಠವಾಗಿ ಇರುತ್ತದೆ. ಇಪ್ಪತ್ತನೇ ತಾರೀಕಿನ ಒಳಗೆ ಕೆಲಸದಲ್ಲಿ ಏನಾದರೂ ತೊಂದರೆಯಾಗುವ ಕಾರಣ ಮಾತನ್ನು ಸ್ವಲ್ಪ ಹುಷಾರಾಗಿ ಆಡಬೇಕು.

ಧನ ಮೂಲ ಕೆಡುವ ಸಾಧ್ಯತೆ ಅಥವಾ ಧನ ನಷ್ಟ ಅಥವಾ ಮೋಸ ಹೋಗುವ ಸಾಧ್ಯತೆ ಇರುತ್ತದೆ ಎಚ್ಚರಿಕೆಯಿಂದ ಇರಬೇಕು. ಆದರೆ ಭಾಗ್ಯಾಧಿಪತಿ ದಶಮಾಧಿಪತಿ ಶನಿ ಪರಮಾತ್ಮ ತುಂಬಾ ಚೆನ್ನಾಗಿದ್ದಾನೆ ಭಾಗ್ಯದಲ್ಲಿದ್ದು ಭಾಗ್ಯ ಫಲವನ್ನು ಕೊಡುತ್ತಾನೆ. ಹಾಗಾಗಿ ಎಷ್ಟೇ ದೊಡ್ಡ ಸಮಸ್ಯೆ ಬಂದರೂ ವೃಷಭ ರಾಶಿಯವರಿಗೆ ಶನಿಯಿಂದ ಒಳ್ಳೆಯದಾಗುತ್ತದೆ. ಶನಿಯ ಯಾವುದೇ ರೀತಿಯ ತೊಂದರೆಗಳು ಇಲ್ಲದಿರುವ ಕಾರಣ ವೃಷಭ ರಾಶಿಯವರು ಶನಿಯಿಂದ ಉತ್ತಮ ಫಲವನ್ನು ಪಡೆಯುತ್ತಿರಿ.

ವೃಷಭ ರಾಶಿ ಅಧಿಪತಿ ಶುಕ್ರನಿಗೆ ಶನಿ ಮಿತ್ರನಾಗಿರುವುದರಿಂದ ಮತ್ತಷ್ಟು ಅಭಿವೃದ್ಧಿ ಆಯುಷ್ಯ ಆರೋಗ್ಯ ನಿಮಗೆ ಸಿಗುತ್ತದೆ. ಒಂಬತ್ತನೇ ಮನೆಯಲ್ಲಿ ಶನಿ ಇರುವುದರಿಂದ ವೃಷಭ ರಾಶಿಯವರಿಗೆ ಯಾವ ರೀತಿಯ ಫಲವಿರುತ್ತದೆ ಎಂಬುದನ್ನು ನೋಡುವುದಾದರೆ ಮಂತ್ರವನ್ನು ಶ್ಲೋಕಗಳನ್ನು ಕೇಳುವಂಥವರಾಗುತ್ತಿರಿ. ದೇವರ ಮೇಲೆ ಹೆಚ್ಚು ಭಕ್ತಿ ಮತ್ತು ಜ್ಞಾನ ಹಿರಿಯರ ಮೇಲೆ ಗೌರವ ದೀಕ್ಷಾ ಕರ್ಮ ಬರುತ್ತದೆ ಯಾತ್ರೆ ಅಥವಾ ದೇವಾಲಯಕ್ಕೆ ಹೋಗುತ್ತಿರಿ. ಮನೆಯಲ್ಲಿ ಯಜಮಾನನ ಸ್ಥಾನ ಅಥವಾ ಕೆಲಸದಲ್ಲಿ ಬಲಿಷ್ಠವಾದ ಸ್ಥಾನ ಸಿಗುವ ಸಾದ್ಯತೆ ಇದೆ.

ತಂದೆಯಿಂದ ಅನುಕೂಲ ಧರ್ಮ ಕರ್ಮಗಳಿಂದ ಅನುಕೂಲ ಸಹೋದರ-ಸಹೋದರಿಯರಿಂದ ಒಳ್ಳೆಯ ಫಲ. ಮದುವೆಯಾದ ಹೆಣ್ಣಿಗೆ ಗಂಡಿನ ಕುಟುಂಬದವರ ಕಡೆಯಿಂದ ಒಳ್ಳೆ ಫಲ ಸಿಗುತ್ತದೆ. ಮುಖ್ಯವಾಗಿ ತಂದೆ ತಾಯಿ ಆಶೀರ್ವಾದ ಆಸ್ತಿ ವಿಚಾರದಲ್ಲಿ ಅನುಕೂಲವಾಗುತ್ತದೆ. ವೃಷಭ ರಾಶಿಯವರಿಗೆ ಈ ತಿಂಗಳು ಕ್ಷೇಮದಾಯಕವಾಗಿದೆ ಜನರ ಪ್ರೀತಿ ಸಿಗುತ್ತದೆ ಕೆಲಸದಲ್ಲಿ ತಲ್ಲೀನತೆ ಶ್ರಮ ಕುಟುಂಬದಲ್ಲಿ ಶಾಂತಿ ವಾತಾವರಣ ಇರುತ್ತದೆ. ಆರೋಗ್ಯದಲ್ಲಿ ವೃದ್ಧಿ ಇರುತ್ತದೆ ಯಾವುದೇ ಸಮಸ್ಯೆಗಳು ಇರುವುದಿಲ್ಲ.

ಸಾಧಾರಣ ಫಲವೆಂದರೆ ಒತ್ತಡ ಜಾಸ್ತಿ ಸಹೋದ್ಯೋಗಿಗಳಿಂದ ತೊಂದರೆ ಆಗುವ ಸಾಧ್ಯತೆ ಇದೆ ಆದಕಾರಣ ನಿರ್ಲಕ್ಷ ಬೇಡ ಯಾರನ್ನು ನಂಬುವುದು ಸೂಕ್ತವಲ್ಲ. ಬೆಲೆಬಾಳುವ ವಸ್ತುಗಳ ಕಡೆ ಗಮನ ವಹಿಸಬೇಕು ಅಂತಹ ವಿಷಯದಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. ತಾಳ್ಮೆ ಜಾಸ್ತಿ ಇರಬೇಕು ಆಹಾರವನ್ನು ಸಮಪಾಲಾಗಿ ಸೇವಿಸುವುದು ಒಳ್ಳೆಯದು ಹಣಕಾಸಿನ ವಿಷಯದಲ್ಲಿ ಹಿನ್ನಡೆಯಾಗುತ್ತದೆ. ಉತ್ತಮವಾದ ಫಲವೆಂದರೆ ಹೊಸ ವ್ಯವಹಾರಗಳು ಕೈಗೊಳ್ಳುತ್ತದೆ ಸಂಗಾತಿಯಿಂದ ಅನುಕೂಲವಾಗುತ್ತದೆ. ಸಣ್ಣ ವಾದವಿವಾದಗಳು ಬಂದರೂ ಅದನ್ನು ಪರಿಹಾರ ಮಾಡಿಕೊಳ್ಳುತ್ತೀರಿ ನವೆಂಬರ್ ತಿಂಗಳಿನಲ್ಲಿ ವೃಷಭ ರಾಶಿಯವರಿಗೆ ಶುಭವಿದೆ.

ಇನ್ನೂ ಸಾಧಾರಣ ಫಲದ ಪರಿಹಾರೋಪಾಯಗಳು ತುಂಬಾ ಸರಳವಾಗಿವೆ ಅವುಗಳನ್ನು ನೋಡೋಣ. ಋಣ ವಿಮೋಚಕ ಮಂಗಳ ಸ್ತೋತ್ರ ಕೇಳಬೇಕು. ಭಿಕ್ಷುಕ ಅಥವಾ ವಯಸ್ಸಾದವರಿಗೆ ಪಾದರಕ್ಷೆಯನ್ನು ದಾನಮಾಡಬೇಕು. ಇವರಿಂದ ನಿಮ್ಮ ಪಾದಕ್ಕೆ ಶರೀರಕ್ಕೆ ನಿಮ್ಮ ಉದ್ಯೋಗಕ್ಕೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ. ನವೆಂಬರ್ ನಾಲ್ಕನೇ ತಾರೀಕು ದೀಪಾವಳಿಯ ಮುಂಚಿತವಾಗಿ ದಾನವನ್ನು ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಬರುವುದನ್ನು ತಡೆಯಬಹುದು.

ಈ ರೀತಿಯಾಗಿ ವೃಷಭ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಶುಭ ಮತ್ತು ಅಶುಭ ಫಲಗಳಿವೆ. ಇಂದು ನಾವು ತಿಳಿಸಿರುವ ಪರಿಹಾರ ಕಾರ್ಯಗಳನ್ನು ಮಾಡಿಕೊಂಡು ಉತ್ತಮ ರೀತಿಯ ಫಲವನ್ನು ಪಡೆದುಕೊಳ್ಳಬಹುದಾಗಿದೆ. ನೀವು ಕೂಡ ವೃಷಭರಾಶಿಯವರಾಗಿದ್ದರೆ ನವೆಂಬರ್ ತಿಂಗಳ ರಾಶಿ ಫಲವನ್ನು ತಿಳಿದುಕೊಳ್ಳುವುದರ ಜೊತೆಗೆ ನಾವು ತಿಳಿಸಿರುವ ಪರಿಹಾರಗಳನ್ನು ಮಾಡಿಕೊಂಡು ಸುಖದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.