ಈ 4 ರಾಶಿಯವರು ಈ ದೇವರನ್ನು ಪೂಜಿಸಿದರೆ ಜೀವನದಲ್ಲಿ ಎಂತಹ ಕಷ್ಟ ಇರಲಿ, ಕಳೆದು ಅದೃಷ್ಟದ ದಿನಗಳು ಪ್ರಾರಂಭವಾಗುತ್ತೆ

0 1,939

ಜ್ಯೋತಿಷ್ಯ ಶಾಸ್ತ್ರ ಎನ್ನುವುದು ಒಂದಕ್ಕೊಂದು ಸಂಬಂಧ ಆಗುವಂತಹ ವಿಚಾರವಾಗಿದೆ. ಹುಟ್ಟಿದ ಸಮಯ ಹಾಗೂ ನಕ್ಷತ್ರದಿಂದ ರಾಶಿಯನ್ನು ಅಳೆದು ಆ ರಾಶಿಗೆ ಯಾವ ರೀತಿಯಲ್ಲಿ ಆತ ನಡೆದುಕೊಳ್ಳುತ್ತಾನೆ ಹಾಗೂ ಆತನ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಇನ್ನು ಇದೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಿದರೆ ಅವರಿಗೆ ಅದೃಷ್ಟದ ದಿನಗಳು ಪ್ರಾರಂಭವಾಗುತ್ತವೆ ಎಂಬುದನ್ನು ಹೇಳಿದೆ. ಹಾಗಿದ್ದರೆ ಬನ್ನಿ ಈ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಮೊದಲಿಗೆ ಮೇಷ ರಾಶಿಯವರು ಯಾವ ದೇವರನ್ನು ಪೂಜಿಸಿದರೆ ಅವರಿಗೆ ಶುಭ ಎಂಬುದನ್ನು ತಿಳಿದುಕೊಳ್ಳೋಣ. ಮೇಷ ರಾಶಿಯವರು ಕುಕ್ಕೆ ಸುಬ್ರಹ್ಮಣ್ಯನ ಪೂಜೆ ಮಾಡಿದರೆ ಅವರ ಎಲ್ಲಾ ಕಷ್ಟಗಳು ಕಳೆದು ಹೋಗುತ್ತವೆ. ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುವುದು ಅಥವಾ ಮನೆಯಲ್ಲಿ ಫೋಟೋ ಇಟ್ಟು ಚಾಚು ತಪ್ಪದೇ ದೈನಂದಿನ ಪೂಜೆ ಮಾಡುವುದು ಅವರಿಗೆ ಮಾಡುವ ಎಲ್ಲಾ ಕೆಲಸದಲ್ಲಿ ಗೆಲುವನ್ನು ತಂದು ಕೊಡುತ್ತದೆ. ಅದರಲ್ಲೂ ವಿಶೇಷವಾಗಿ ಮಂಗಳವಾರದ ದಿನ ಚಾಚು ತಪ್ಪದೇ ಸುಬ್ರಹ್ಮಣ್ಯನ ಪೂಜೆ ಮಾಡುವುದು ಮೇಷ ರಾಶಿಯವರಿಗೆ ಶುಭ ದಿನಗಳನ್ನು ತಂದು ಕೊಡುತ್ತದೆ.

ಎರಡನೇದಾಗಿ ವೃಷಭ ರಾಶಿಯವರ ರಾಶಿ ಅಧಿಪತಿ ಶುಕ್ರ ಆಗಿರುವ ಹಿನ್ನೆಲೆಯಲ್ಲಿ ವೃಷಭ ರಾಶಿಯವರು ಲಕ್ಷ್ಮೀದೇವಿಯ ಪೂಜೆಯನ್ನು ಮಾಡುವುದು ಉತ್ತಮ. ಅದರಲ್ಲೂ ವಿಶೇಷವಾಗಿ ನೀವು ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಎರಡು ಬದಿಗಳಲ್ಲಿ ಚಿನ್ನದ ಬಿಂದಿಗೆಗಳನ್ನು ಹಿಡಿದುಕೊಂಡಿರುವ ಆನೆಯ ಲಕ್ಷ್ಮಿ ದೇವರ ಫೋಟೋಗಳನ್ನು ಇಟ್ಟು ಪೂಜೆ ಮಾಡಿದರೆ ನೀವು ಕೇವಲ ಸಂಪತ್ತಿನ ವಿಚಾರದಲ್ಲಿ ಮಾತ್ರವಲ್ಲದೆ ಎಲ್ಲಾ ಸಮಸ್ಯೆಗಳನ್ನು ಗೆಲ್ಲುವ ವಿಚಾರದಲ್ಲಿ ಕೂಡ ವಿಜಯವನ್ನು ಸಾಧಿಸುತ್ತೀರಿ. ಪ್ರತಿ ಶುಕ್ರವಾರ ಲಕ್ಷ್ಮಿ ದೇವಿಗೆ ನಿಮ್ಮ ಸಂಪಾದನೆಯ ವರಮಾನವನ್ನು ಇಟ್ಟು ನೈವಾದ್ಯವಾಗಿ ಪೂಜೆ ಮಾಡಿದರೆ ನಿಮಗೆ ಶುಭವಾಗುತ್ತದೆ.

ಕಷ್ಟಗಳಿಂದ ಎದ್ದು ಸುಖದ ಸುಪ್ಪತ್ತಿಗೆಯ ಕಡೆಗೆ ಹೋಗಬೇಕೆಂದರೆ ಮಿಥುನ ರಾಶಿಯವರು ಭಗವಾನ್ ವಿಷ್ಣುವಿನ ಅವತಾರದ ದೇವರ ಪೂಜೆಯನ್ನು ಮಾಡಬೇಕು. ಉದಾಹರಣೆಗೆ ತಿರುಪತಿ ತಿಮ್ಮಪ್ಪ ಶ್ರೀ ಕೃಷ್ಣ ಶ್ರೀರಾಮ ಹೀಗೆ ವಿಷ್ಣುವಿನ ದಶಾವತಾರಗಳಲ್ಲಿ ಯಾವುದೇ ಅವತಾರದ ಪೂಜೆಯನ್ನು ಚಾಚೂ ತಪ್ಪದೆ ಮಾಡಬೇಕು. ಅದರಲ್ಲಿ ವಿಶೇಷವಾಗಿ ನೀವು ನಿಮ್ಮ ಮನೆಯಲ್ಲಿ ಸತ್ಯನಾರಾಯಣನ ಪೂಜೆ ಮಾಡಿಸಿದರೆ ಪುಣ್ಯಫಲ ಎನ್ನುವುದು ನಿಮ್ಮನ್ನು ಇನ್ನಷ್ಟು ಪ್ರಗತಿಯ ಹಾದಿಯಲ್ಲಿ ತಂದಿಡುತ್ತದೆ. ಪ್ರತಿ ಬುಧವಾರ ಮಹಾವಿಷ್ಣುವಿನ ಪೂಜೆ ಮಾಡುವುದು ಮಿಥುನ ರಾಶಿಯವರಿಗೆ ರಾಜಯೋಗವನ್ನು ತಂದುಕೊಡುತ್ತದೆ.

ಇನ್ನು ಕಟಕ ರಾಶಿ ಅವರ ವಿಚಾರಕ್ಕೆ ಬರುವುದಾದರೆ ಇವರ ರಾಶಿಯ ಅಧಿಪತಿ ಚಂದ್ರ ಆಗಿದ್ದು ಚಂದ್ರನಿಗೆ ಪ್ರಿಯವಾಗಿರುವ ಪರಶಿವನ ಪೂಜೆಯನ್ನು ಮಾಡಬೇಕು. ಪ್ರತಿ ಸೋಮವಾರ ಪರಶಿವನ ಮಂದಿರಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ ಬರಬೇಕು. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಕೂಡ ಸಿಗುತ್ತದೆ. ಅನಗತ್ಯ ಖರ್ಚುಗಳಿಂದ ಮುಕ್ತಿ ಹೊಂದಬೇಕಾದರೆ ಕಟಕ ರಾಶಿಯವರು ಪರಶಿವನಿಗೆ ಸಂಬಂಧಪಟ್ಟಂತಹ ಲಾಕರ್ ಚೈನ್ ಅಥವಾ ಉಂಗುರವನ್ನು ಧರಿಸಿದರೆ ನಿಮಗೆ ಎಲ್ಲಾ ವಿಚಾರದಲ್ಲಿಯೂ ಕೂಡ ಶುಭವಾಗುತ್ತದೆ.

Leave A Reply

Your email address will not be published.