ಕನ್ನಡದ ಒಬ್ಬ ಮೇರು ನಟನನ್ನು ಕಳೆದುಕೊಂಡ ದುಃಖ ಎಲ್ಲರನ್ನೂ ಬಾಧಿಸುತ್ತಿದೆ ಇಂತಹ ಒಂದು ಸನ್ನಿವೇಶ ಬರುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ ಚಿಕ್ಕವಯಸ್ಸಿನಲ್ಲಿಯೇ ಅನೇಕ ಹೆಸರನ್ನು ಗಳಿಸಿರುವ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿರುವುದು ತುಂಬಾ ದುಃಖಕರವಾದ ವಿಷಯವಾಗಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಈ ಚಿತ್ರದ ನಿರ್ದೇಶಕರಾದ ಚೇತನ್ ಅವರು ಮೊದಲ ಬಾರಿಗೆ ಅಪ್ಪು ಅವರ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದರು. ಅಪ್ಪು ಅವರು ಚಿತ್ರೀಕರಣದ ಸಮಯದಲ್ಲಿ ಯಾವ ರೀತಿಯಾಗಿ ಎಲ್ಲರೊಟ್ಟಿಗೆ ಬೆರೆಯುತ್ತಿದ್ದರು ಎಂಬುದನ್ನು ಚೇತನ್ ಅವರು ಹಂಚಿಕೊಂಡಿದ್ದಾರೆ.

ಅಪ್ಪು ಅವರು ತೀರಿಕೊಂಡಿರುವ ವಿಷಯವನ್ನು ಈಗಲೂ ಸಹ ಯಾರಿಗೂ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಚೇತನ್ ಅವರು ಕೂಡ ಅಪ್ಪು ಅವರು ಸಾವನ್ನಪ್ಪುವ ಹಿಂದಿನ ದಿನ ಭೇಟಿಯಾಗಿದ್ದರು. ಅಪ್ಪು ಅವರ ನಿಧನದ ಈ ವಿಷಯ ಅವರಿಗೂ ಕೂಡ ಘಾಸಿಗೊಳಿಸಿದೆ. ಈಗ ಅಪ್ಪು ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಜೇಮ್ಸ್ ಚಿತ್ರದ ಮೂಲಕ ಅಪ್ಪು ಅವರನ್ನು ತೆರೆಯ ಮೇಲೆ ನೋಡಲು ಸಾಧ್ಯವೇ ಇಲ್ಲವೆ ಎಂದು.

ಆ ಕುರಿತು ಚೇತನ್ ಅವರು ಏನು ಹೇಳುತ್ತಾರೆ ಎಂದರೆ ಅಪ್ಪುಅವರು ಜೇಮ್ಸ್ ಚಿತ್ರದಲ್ಲಿ ಅವರ ಪಾತ್ರವನ್ನು ಪೂರ್ತಿಯಾಗಿ ಮುಗಿಸಿ ಕೊಟ್ಟಿದ್ದಾರೆ. ಎರಡು ಹಾಡಿನ ಚಿತ್ರೀಕರಣ ಮಾತ್ರ ಉಳಿದುಕೊಂಡಿತ್ತು ಅಪ್ಪು ಅವರು ಇಲ್ಲ ಎನ್ನುವುದನ್ನು ಊಹಿಸಿಕೊಳ್ಳುವುದಕ್ಕೂ ಎಲ್ಲರಿಗೂ ತುಂಬಾ ಕಷ್ಟವಾಗುತ್ತದೆ. ಸಿನಿಮಾಗಳಲ್ಲಿ ತಿರುವುಗಳಿರುವುದು ಸಹಜ ಆದರೆ ಜೀವನದಲ್ಲಿ ಈ ರೀತಿಯಾದ ತಿರುವುಗಳು ಕಾಣಿಸಿಕೊಂಡಾಗ ಅವುಗಳನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ ಎಂದು ಚೇತನ್ ಅವರು ಹೇಳುತ್ತಾರೆ.

ಚೇತನ್ ಅವರು ಜೇಮ್ಸ್ ಚಿತ್ರದ ಚಿತ್ರೀಕರಣಕ್ಕಾಗಿ ಎರಡು ವರ್ಷದಿಂದ ಅಪ್ಪು ಅವರೊಂದಿಗೆ ಒಡನಾಟದಲ್ಲಿದ್ದರು. ಪ್ರತಿದಿನ ಅವರನ್ನು ಭೇಟಿಯಾಗುತ್ತಿದ್ದರು ಮಾತನಾಡುತ್ತಿದ್ದರು. ಅಪ್ಪು ಅವರು ತಾವು ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ಅವರು ಒಬ್ಬ ಅದ್ಭುತ ಡ್ಯಾನ್ಸರ್ ಆದರೂ ಕೂಡ ಒಂದು ಹಾಡಿನ ಚಿತ್ರೀಕರಣಕ್ಕೆ ತುಂಬಾ ರಿಹರ್ಸಲ್ ನಡೆಸುತ್ತಿದ್ದರು. ಅಕ್ಟೋಬರ್ ತಿಂಗಳ ಕೊನೆಯಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ಚಿತ್ರೀಕರಣ ಮುಗಿಯುತ್ತಿತ್ತು

ಹಾಗಾಗಿ ಜೇಮ್ಸ್ ಚಿತ್ರವನ್ನು ಮಾರ್ಚ್ ತಿಂಗಳಿನಲ್ಲಿ ಅಪ್ಪು ಅವರ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವ ಯೋಜನೆಯನ್ನ ಮಾಡಿಕೊಂಡಿದ್ದರು. ಜೇಮ್ಸ್ ಒಂದು ವಿಭಿನ್ನ ಕಥೆಯುಳ್ಳ ಚಿತ್ರವಾಗಿದ್ದು ಕಾಶ್ಮೀರದಲ್ಲಿ ಕೂಡ ಚಿತ್ರೀಕರಣ ಮಾಡಲಾಗಿತ್ತು. ಅಪ್ಪು ಅವರಿಗೂ ಕೂಡ ಈ ಚಿತ್ರದ ಬಗ್ಗೆ ತುಂಬಾ ಒಲವಿತ್ತು. ಅವರಿಗೆ ಫೈಟಿಂಗ್ ಇರುವ ಆಕ್ಷನ್ ಇರುವ ಸಿನಿಮಾಗಳನ್ನು ಮಾಡುವುದು ತುಂಬಾ ಇಷ್ಟವಂತೆ. ಮೈನವಿರೇಳಿಸುವಂತಹ ಸಾಹಸ ದೃಶ್ಯಗಳನ್ನು ಅಪ್ಪು ಅವರು ಬಹಳ ಸುಲಭವಾಗಿ ಮಾಡುತ್ತಿದ್ದರಂತೆ.

ಚೇತನ್ ಅವರು ಅಪ್ಪು ಅವರ ಜೊತೆ ಕೆಲಸ ಮಾಡುವಾಗ ಅಪ್ಪು ಯಾವತ್ತೂ ನಿರ್ದೇಶಕರ ಮೇಲೆ ಕೋಪ ಮಾಡಿಕೊಂಡಿದ್ದನ್ನು ಇವರು ನೋಡಿಲ್ಲವಂತೆ. ಯಾವಾಗಲೂ ನಗು ನಗುತ್ತಲೇ ಇದ್ದರಂತೆ ಅವರು ಚಿತ್ರೀಕರಣದ ಸ್ಥಳಕ್ಕೆ ಬರುತ್ತಾರೆ ಎಂದರೆ ಎಲ್ಲರಿಗೂ ಖುಷಿಯಾಗುತ್ತಿತ್ತು. ಲೈಟ್ ಮ್ಯಾನ್ ಇಂದ ಹಿಡಿದು ಪ್ರತಿಯೊಬ್ಬ ಟೆಕ್ನಿಷಿಯನ್ ಗಳನ್ನು ಕೂಡ ಪ್ರೀತಿಯಿಂದ ಮಾತನಾಡಿಸುತ್ತಿದ್ದರಂತೆ ಅಪ್ಪು ಅವರು. ಅಪ್ಪು ಅವರು ಯಾವಾಗಲೂ ಆರೋಗ್ಯದಿಂದ ಗಟ್ಟಿ ಮುಟ್ಟಾಗಿ ಇರುತ್ತಿದ್ದರಂತೆ.

ಈಗ ಅಪ್ಪು ಅವರು ಇಲ್ಲದಿರುವುದು ಎಲ್ಲರಿಗೂ ಬೇಸರವನ್ನುಂಟು ಮಾಡಿದೆ. ಜೇಮ್ಸ್ ಚಿತ್ರದ ಚಿತ್ರೀಕರಣ ಮುಗಿದಿದ್ದು ವೈಸ್ ಡಬ್ಬಿಂಗ್ ಮತ್ತು ಎರಡು ಹಾಡುಗಳ ಚಿತ್ರೀಕರಣ ಉಳಿದಿತ್ತು ಆದರೆ ಜೇಮ್ಸ್ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಭರವಸೆಯನ್ನು ಚೇತನ್ ಅವರು ನೀಡಿದ್ದಾರೆ. ಚೇತನ್ ಅವರು ಹೇಳುವ ಪ್ರಕಾರ ಅವರಿಗೆ ಬರಹಗಾರರು ಎಂದರೆ ತುಂಬಾ ಇಷ್ಟವಂತೆ ರಾಜಕುಮಾರ್ ಅವರು ಬರಹಗಾರರನ್ನು ಶಾರದೆಯ ಮಕ್ಕಳು ಎಂದು ಕರೆಯುತ್ತಿದ್ದರಂತೆ ಹಾಗಾಗಿ ಅವರಿಗೂ ಕೂಡ ಬರಹಗಾರರ ಮೇಲೆ ತುಂಬಾ ಅಭಿಮಾನವಿತ್ತು.

ಅಪ್ಪು ಅವರಿಗೆ ಎಲ್ಲರ ಮೇಲೂ ತುಂಬಾ ಕಾಳಜಿ ಇತ್ತು ತಮ್ಮ ಜೊತೆ ಕೆಲಸ ಮಾಡುವ ಪ್ರತಿಯೊಬ್ಬರ ಮೇಲು ಕಾಳಜಿಯನ್ನು ತೋರಿಸಿದ್ದರಂತೆ. ಜೊತೆಗೆ ಪ್ರತಿಯೊಬ್ಬರನ್ನು ಪ್ರೀತಿಸುತ್ತಿದ್ದರು ಗೌರವಿಸುತ್ತಿದ್ದರು. ಒಟ್ಟಾರೆಯಾಗಿ ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರೊಡನೆ ಕೆಲಸ ಮಾಡುವುದಕ್ಕೆ ಅವಕಾಶ ದೊರೆತಿದ್ದು ತಮ್ಮ ಪುಣ್ಯ ಎಂದು ಚೇತನ್ ಅವರು ತಿಳಿಸಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *