ಚಿಕ್ಕ ವಯಸ್ಸಲ್ಲೇ ಮದುವೆ, ಡಿವೋರ್ಸ್ ನಿಜಕ್ಕೂ ಈ ಖ್ಯಾತ ನಟಿಯ ಬಾಳಲ್ಲಿ ಆಗಿದ್ದೇನು ಗೊತ್ತಾ

0 1,419

ಹೆಣ್ಣು ಅಬಲೆಯಲ್ಲ ಸಬಲೆ ಎನ್ನುವುದು ಬಾಯಿ ಮಾತಿಗೆ ಮಾತ್ರ ಆದರೆ ನಿಜ ಜೀವನದಲ್ಲಿ ಯಾವತ್ತೂ ಹೆಣ್ಣಿಗೆ ಯಾವುದೇ ರೀತಿಯ ತನಗೆ ಇಷ್ಟವಾದ ರೀತಿಯ ಜೀವನ ಸಾಗಿಸಲು ಅವಕಾಶ ಇಲ್ಲ ಹೆಣ್ಣಿಗೆ ತನ್ನದೇ ಆದ ಕಟ್ಟುನಿಟ್ಟಿನ ಜೀವನ ಇದೆ ಇನ್ನೂ ಕೆಲವೊಂದು ಕಡೆ ಹೆಣ್ಣು ಮಕ್ಕಳನ್ನು ಹೇರಲು ಮಾತ್ರ ಸೀಮಿತ ಎಂಬಂತೆ ಕಾಣುವ ಜನರು ಕೂಡ ಇದ್ದಾರೆ ಇನ್ನೂ ಪ್ರಾಯಕ್ಕೆ ಬಂದ ಕೂಡಲೇ ಮದುವೆ ನಿಶ್ಚಯ ಮಾಡಿ ಮನೆಯಿಂದ ಆಚೆ ಕಳಿಸ್ತಾರೆ ತನ್ನ ತವರನ್ನು ತೊರೆದು ಹೆಣ್ಣು ಗಂಡನ ಮನೆಯಲ್ಲಿ ಏನೆಲ್ಲ ಕಷ್ಟ ಪಟ್ಟರೂ ನಿನ್ ಹಣೆಬರಹ ಹೀಗೆ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸು ಅನ್ನುತ್ತಾರೆ ವಿನಃ ಅವಳ ಕಷ್ಟಕ್ಕೆ ಹೆಗಲು ಕೊಡೋದಕ್ಕೆ ಯಾರೂ ಮುಂದೆ ಬರುವುದಿಲ್ಲ. ಇಂದಿಗೂ ಕೆಲವು ಕಡೆ ಹೆಣ್ಣಿಗೆ ಶಿಕ್ಷಣ ಸಹ ನೀಡದೆ ಅನಕ್ಷರಸ್ಥರನ್ನಾಗಿ ಮಾಡುತ್ತಾರೆ ಆದರೂ ಈ ಜಗತ್ತಿನಲ್ಲಿ ಗಂಡಿಗೆ ಇರುವ ಸ್ಥಾನಮಾನ ಹೆಣ್ಣಿಗೆ ಇಲ್ಲ ಕೆಲವೊಂದು ಸ್ತ್ರೀಯರು ತಮ್ಮ ಸ್ವಂತ ನಿರ್ಧಾರ ಮೇಲೆ ಜೀವನ ಸಾಗಿಸಿ ಒಳ್ಳೆಯ ಸ್ಥಾನ ಪಡೆದಿದ್ದಾರೆ

ಇತ್ತೀಚಿಗೆ ಸಾಮಾಜಿಕ ಕ್ಷೇತ್ರದಲ್ಲಿ ರಾಜಕೀಯ ಕಾನೂನು ಹಾಗೂ ಸುವ್ಯವಸ್ತೆ ಕ್ಷೇತ್ರದಲ್ಲಿ ಗಣನೀಯ ಹೆಚ್ಚು ಕಾಣಿಸಿಕೊಳ್ಳುತ್ತಾರೆ ಕಿರಣ್ ಬೇಡಿ ಕಲ್ಪನಾ ಚಾವ್ಲಾ ಮುಂತಾದ ಸಾಧಕಿಯರು ಸಾಧನೆಯನ್ನು ಮಾಡಿದ್ದಾರೆ ಇನ್ನೂ ಚಿತ್ರರಂಗದ ಹಲವಾರು ನಟಿಯರು ತಮ್ಮ ಕಾಲಮೇಲೆ ನಿಂತು ಸಾಧನೆ ಅನ್ನು ಮಾಡಿದ್ದಾರೆ ಅವರಲ್ಲಿ ಒಬ್ಬ ನಟಿಯ ಬಗ್ಗೆ ತಿಳಿಯೋಣ ಬನ್ನಿ ವೈಶಾಲಿ ಕಾಸರವಳ್ಳಿ ಅವರ ನಿರ್ದೇಶನದ ಮೂಡಲ ಮನೆ ಧಾರಾವಾಹಿಯ ಮೂಲಕ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಮೊದಲು ಹಲವಾರು ಚಿಕ್ಕ ಪುಟ್ಟ ಪಾತ್ರದಲ್ಲಿ ಅಭಿನಯ ಮಾಡಿದಾರೆ ರವಿಚಂದ್ರನ್ ನಟನೆಯ ಹಠವಾದಿ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದರು ಹಾಗೂ ಮುಂಗಾರುಮಳೆ ನಟನ ತಾಯಿಯ ಪಾತ್ರದ ಅಭಿನಯ ಪ್ರೇಕ್ಷಕರ ಮನಸೂರೆಗೊಂಡಿದೆ ಇನ್ನೂ ಹಲವರು ಧಾರಾವಾಹಿಗಳ ನಿರ್ದೇಶನ ಕೂಡಾ ಮಾಡಿದ್ದಾರೆ ಹಠವಾದಿ ಉಗ್ರಂ ಹೀಗೆ ಹಲವರು ಸಿನಿಮಾದಲ್ಲಿ ನಟನೆ ಮಾಡಿದರೆ ಇವರ ಇಷ್ಟೆಲ್ಲಾ ಯಶಸ್ಸು ಹೊಂದಿದ್ದಾರೆ ಆದರೆ ಇವರ ಜೀವನದಲ್ಲಿ ಮರೆಯಲಾಗದ ಘಟನೆ ನಡೆದಿದೆ ಎಂದರೆ ಯಾರೂ ನಂಬುವುದು

ನಿಜ ಪದ್ಮಜಾ ಅವರು ತನ್ನ ಬಾಲ್ಯದ ಮೂರು ಜನ ಸಹೋದರಿಯರ ಜೊತೆ ಒಂದು ಮಧ್ಯಮ ಕುಟುಂಬದಲ್ಲಿ ಬೆಳೆದಿದ್ದು ಮಕ್ಕಳಿಗೆ ಬೇಗ ಮದುವೆ ಮಾಡಿದರೆ ಸಾಕಪ್ಪ ಎನ್ನುವುದು ಸಹಜವಾಗಿ ಹೆಣ್ಣು ಹೆತ್ತವರ ಆತಂಕ ಇವರ ತಂದೆ ತಾಯಿ ಇದಕ್ಕೆ ಹೊರತಾಗಿಲ್ಲ ತನ್ನ ವಿದ್ಯಾಭ್ಯಾಸ ಒಂದು ಮಟ್ಟಕ್ಕೆ ತಲುಪಿದೆ ಎನ್ನುವ ಹಾಗೆ ಸಾಧಾರಣವಾಗಿ ಹತ್ತೊಂಬತ್ತನೇ ವಯಸ್ಸಿನಲ್ಲೇ ಮದುವೆ ನಿಶ್ಚಯ ಮಾಡುತ್ತಾರೆ ಆದರೆ ಪದ್ಮಜಾ ಅವರಿಗೆ ಅವರದ್ದೇ ಆದ ಕನಸ್ಸು ಇರುತ್ತದೆ ತಾನು ಒಂದು ಒಳ್ಳೆ ಕಲಾವಿದೆ ಆಗಬೇಕು ಎಂದು ಆದರೆ ಅವರ ಕನಸ್ಸಿಗೆ ಬೆಲೆ ಕೊಡದೆ ವಿವಾಹ ಮಾಡುತ್ತಾರೆ ಮದುವೆ ನಂತರವು ಎಲ್ಲೂ ಕುಗ್ಗದೆ ತನ್ನ ಕನಸನ್ನ ಬೆನ್ನತ್ತಿ ಹೋಗುವ ಸಾಹಸ ಮಾಡುತ್ತಾರೆ ಆದರೆ ಅವರ ಪತಿ ಕಡೆಯಿಂದ ವಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಧೈರ್ಯ ಗೆಡದೆ ತನ್ನ ಎರಡೂವರೆ ವರ್ಷದ ಮಗುವನ್ನು ಕರೆದುಕೊಂಡು ಮನೆಯಿಂದ ಆಚೆ ಬರುತ್ತಾರೆ

ನಂತರ ಅವರ ಸಾಂಸಾರಿಕ ಜೀವನ ಸಂಪೂರ್ಣ ಹದಗೆಟ್ಟಾಗ ವಿಚ್ಛೇದನ ನೀಡಿ ಸ್ವಂತ ಕಾಲಮೇಲೆ ನಿಲ್ಲುತ್ತಾರೆ ಆದರೆ ಇಲ್ಲಿ ಹೆಣ್ಣಿನ ಮನಸ್ಥಿತಿ ಬಗ್ಗೆ ಯೋಚಿಸಿದರೆ ಕಷ್ಟಪಟ್ಟು ಮದುವೆ ಆಗಿ ಮಗು ಆಗಿ ನಂತರ ಸಂಸಾರದಲ್ಲಿ ಭಿನ್ನಾಭಿಪ್ರಾಯ ಮೂಡಿದಾಗ ಆವಾಗ ತೆಗೆದುಕೊಳ್ಳುವ ನಿರ್ಧಾರ ಬಹಳ ಕಷ್ಟ ಆದರೆ ಅಂಥ ಸಮಯದಲ್ಲಿ ಪದ್ಮಜಾ ಸಾಕಷ್ಟು ಯೋಚಿಸಿ ಕೊನೆಗೆ ಶಾಶ್ವತವಾಗಿ ದೂರ ಸಾಗಿ ಸಮಾಜದಲ್ಲಿ ಹೇಗೆ ಜೀವನ ಮಾಡುವುದು ಎನ್ನುವ ಸಲುವಾಗಿ ಎರಡನೇ ಮದುವೆ ಆಗುತ್ತಾರೆ ಇದರಿಂದ ಅವರ ಜೀವನದಲ್ಲಿ ಕಂಡ ಒಂದೊಂದೆ ಕನಸ್ಸು ನನಸ್ಸು ಆಗಲು ದಾರಿ ಸಿಕ್ಕ ಹಾಗೆ ಯಾಕೆಂದರೆ ಎರಡನೇ ಪತಿ ತನ್ನ ಪತ್ನಿಯ ಆಸೆ ಕನಸ್ಸು ಬೆಲೆ ನೀಡುವ ವ್ಯಕ್ತಿ ಆಗಿದ್ದಾರೆ ಹೀಗಾಗಿ ಹಲವಾರು ಧಾರಾವಾಹಿ ಸಿನಿಮಾಗಳಲ್ಲಿ ನಟನೆ ಮಾಡಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ

ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ ನಟ ಯಶ್ ಹಾಗೂ ಅನಂತ್ ನಾಗ್ ಅವರ ಜೊತೆ ಅಭಿನಯ ಮಾಡಿದರೆ ಹಾಗೆ ಗಾಳಿಪಟ,ಬಾಡಿಗಾರ್ಡ್, ಪೃಥ್ವಿ ಪಂಚರಂಗಿ ಹಾಗೂ ಕೃಷ್ಣನ ಲವ್ ಸ್ಟೋರಿ ಮುಂತಾದ ಹಲವಾರು ಸಿನಿಮಾ ಅಲ್ಲಿ ನಟನೆ ಮಾಡಿದ್ದಾರೆ ಹೆಣ್ಣು ಧೃತಿಗೆಡದೆ ಮುನ್ನುಗಿದ್ದರೆ ಮಾತ್ರ ವರದಕ್ಷಿಣೆ ಕಿರುಕುಳ ಆತ್ಮಹತ್ಯೆ ಮುಂತಾದ ಕೇಸುಗಳು ಕಡಿಮೆ ಆಗುವುದು ಕಷ್ಟ ಬಂದಾಗ ಕುಗ್ಗದೆ ಧೈರ್ಯವಾಗಿ ಎದುರಿಸಿ ಗೆಲುವು ಸಾಧಿಸಿದ್ದಾಗ ಮಾತ್ರ ಸುಖಮಯ ಜೀವನ ಸಾಧ್ಯ ಹಾಗಂತ ವಿಚ್ಛೇದನ ಒಂದೇ ಎಲ್ಲದಕ್ಕೂ ಪರಿಹಾರವಲ್ಲ ಎನ್ನುವುದನ್ನು ಕೂಡ ಗಮನದಲ್ಲಿ ಇಟ್ಟುಕೊಳ್ಳಬೇಕು..

Leave A Reply

Your email address will not be published.