ಕನ್ನಡ ಕಿರುತೆರೆಯ ಅಶ್ವಿನಿ ಎಂದರೆ ನೆನಪಾಗುವ ಅಶ್ವಿನಿ ನಕ್ಷತ್ರ ಸೀರಿಯಲ್ ನಲ್ಲಿ ನಟಿಸಿದ ಮಯೂರಿ ಅವರು ಮದುವೆಯಾಗಿ ಇದೀಗ ತಾಯಿಯಾಗುವ ಸಂತೋಷದಲ್ಲಿದ್ದಾರೆ ಅವರಿಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಂಕ್ರಾಂತಿ ವಿಶೇಷದಂದು ಸೀಮಂತ ಶಾಸ್ತ್ರ ಮಾಡಲಾಯಿತು. ಈ ಎಪಿಸೋಡ್ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಧಾರಾವಾಹಿ ಅಶ್ವಿನಿ ನಕ್ಷತ್ರ ಹಾಗೂ ಕೃಷ್ಣಲೀಲಾ, ಇಷ್ಟಕಾಮ್ಯ, ನಟರಾಜ ಸರ್ವಿಸ್, ಮೌನಂ ಸಿನಿಮಾಗಳಲ್ಲಿ ನಟಿಸಿದ ಮಯೂರಿ ಅವರು ಅಶ್ವಿನಿ ನಕ್ಷತ್ರ ಧಾರವಾಹಿಯ ಮೂಲಕ ಇಂಡಸ್ಟ್ರಿಗೆ ಬಂದರು. ನಂತರ ಕಿರುತೆರೆಯಿಂದ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು ಅಲ್ಲಿಯೂ ಬಹಳ ಫೇಮಸ್ ಆದರು. ಅಜಯ್ ರಾವ್ ಅವರೊಂದಿಗೆ ಕೃಷ್ಣಲೀಲಾ ಅವರ ಮೊದಲ ಸಿನಿಮಾ ಆಗಿದೆ ಅದು ಹಿಟ್ ಆಯಿತು.

ನಂತರ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಿದರು. ಧ್ರುವ ಸರ್ಜಾ ಅವರ ಪೊಗರು ಸಿನಿಮಾದಲ್ಲಿ ಮಯೂರಿ ಅವರು ನಟಿಸಿದ್ದಾರೆ. ಅವರು ಬಾಲ್ಯದ ಗೆಳೆಯ ಅರುಣ್ ರಾಜ್ ಅವರೊಂದಿಗೆ ಬೆಂಗಳೂರಿನಲ್ಲಿ ಜೂನ್ ತಿಂಗಳಿನಲ್ಲಿ ಮದುವೆಯಾದರು. ಇವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. 10 ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ನಂತರ ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆಯಾದರು. ಇದೀಗ ತಾಯಿಯಾಗಲಿದ್ದಾರೆ, ಮಗುವಿನ ಬರುವಿಕೆಗೆ ಕಾಯುತ್ತಿದ್ದಾರೆ. ಮಯೂರಿ ಅವರಿಗೆ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಲಾಗಿದೆ. ಅವರ ಸಿಮಂತದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಂಕ್ರಾಂತಿ ವಿಶೇಷವಾಗಿ ಸುವರ್ಣ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ತುಂಬು ಗರ್ಭಿಣಿಯಾಗಿರುವ ಮಯೂರಿ ಉತ್ಸಾಹ ಹಾಗೂ ಖುಷಿಯಿಂದ ಪಾಲ್ಗೊಂಡಿದ್ದಾರೆ, ಮಯೂರಿ ಅವರ ಪತಿ ಅರುಣ್ ರಾಜ್ ಅವರು ಭಾಗವಹಿಸಿದರು. ಮಯೂರಿ ಅವರಿಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಅನಿತಾ ವಾಸು, ರೇಖಾ, ಶಾಲಿನಿ ಮೊದಲಾದ ನಟಿಯರು ಮಯೂರಿ ಅವರ ಸೀಮಂತ ಮಾಡಿದ್ದಾರೆ.

ಸಂಕ್ರಾಂತಿ ವಿಶೇಷವಾಗಿ ಮಯೂರಿ ಅವರ ಸೀಮಂತ ಶಾಸ್ತ್ರದ ಎಪಿಸೋಡ್ ಪ್ರಸಾರವಾಗಲಿದೆ. ಸಿಂಗಾರವಾದ ಮಯೂರಿ ಅವರು ನೋಡಲು ಸುಂದರವಾಗಿ ಕಾಣುತ್ತಿದ್ದು, ತಾಯ್ತನದ ಕಳೆ ಕಾಣುತ್ತಿತ್ತು. ನಟಿಯರು ಅವರಿಗೆ ಆರತಿ ಎತ್ತಿ ಸಂತಸಪಟ್ಟರು. ಇಷ್ಟೇ ಅಲ್ಲದೆ ಸಂಪ್ರದಾಯದ ಪ್ರಕಾರ ಉಡಿ ತುಂಬಿದರು. ಅರುಣ್ ರಾಜ್ ಅವರು ಸಂತೋಷದಿಂದ ತಮ್ಮ ಪತ್ನಿಯ ಸೀಮಂತ ಶಾಸ್ತ್ರಕ್ಕೆ ಭಾಗಿಯಾದರು. ಇದೇ ತಿಂಗಳು ಮಯೂರಿ ಅವರ ಮಡಿಲಿಗೆ ಮಗು ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮಯೂರಿ ಅವರು ಮುದ್ದಾದ ಮಗುವನ್ನು ಪಡೆಯಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *