ಧ್ರುವಸರ್ಜಾ ಅವರ ಪ್ರೀತಿಯ ಸಹೋದರ ಚಿರಂಜೀವಿ ಸರ್ಜಾ ಅವರ ಆಗಿದ್ದರು. ಇವರಿಬ್ಬರು ಬಹಳ ಅನ್ಯೋನ್ಯವಾಗಿ ಬದುಕಿದ್ದರು. ಆದರೆ ಈಗ ಚಿರಂಜೀವಿ ಸರ್ಜಾ ಅವರು ನಿಧನ ಹೊಂದಿದ್ದಾರೆ. ತಮ್ಮ ಪ್ರೀತಿಯ ಸಹೋದರನನ್ನು ಕಳೆದುಕೊಂಡು ಧ್ರುವ ಸರ್ಜಾ ಅವರು ಬಹಳ ನೋವನ್ನು ಅನುಭವಿಸಿದ್ದಾರೆ. ಆದರೆ ಈಗ ಮನೆಯಲ್ಲಿ ಸ್ವಲ್ಪ ಸಂತೋಷದ ವಾತಾವರಣ ಮೂಡಿದೆ. ಅದು ಏಕೆಂದರೆ ಚಿರಂಜೀವಿ ಸರ್ಜಾ ಅವರ ಪತ್ನಿಯಾದ ಮೇಘನಾ ರಾಜ್ ಅವರಿಗೆ ಗಂಡು ಮಗು ಆಗಿದೆ. ಆದ್ದರಿಂದ ತನ್ನ ಪ್ರೀತಿಯ ಅಣ್ಣನ ಮಗನಿಗೆ ಧ್ರುವಸರ್ಜಾ ಅವರು ತಂದ ಉಡುಗೊರೆಯ ಬಗ್ಗೆ ನಾವಿಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚಿರಂಜೀವಿ ಸರ್ಜಾ ಅವರು ನಿಧನ ಹೊಂದಿದ ಮೇಲೆ ಹೆಚ್ಚಾಗಿ ಮೇಘರಾಜ್ ಅವರು ತಮ್ಮ ತಂದೆಯ ಮನೆಯಾದ ಸುಂದರ್ ರಾಜ್ ಅವರ ಮನೆಯಲ್ಲಿ ವಾಸವಾಗಿದ್ದಾರೆ. ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಅವರು ಮೇಘನಾ ರಾಜ್ ಅವರ ಮಗುವನ್ನು ತುಂಬಾ ಚೆನ್ನಾಗಿ ಆರೈಕೆ ಮಾಡುತ್ತಿದ್ದಾರೆ. ಈಗ ಮೇಘನಾ ರಾಜ್ ಅವರ ಮಗುವಿಗೆ ಸುಮಾರು ಎರಡು ತಿಂಗಳು ಆಗಿದೆ. ಧ್ರುವ ಸರ್ಜಾ ಅವರಿಗೆ ಮೇಘನಾ ರಾಜ್ ಅವರು ಎಂದರೆ ಬಹಳ ಪ್ರೀತಿ. ಆದ್ದರಿಂದ ಮಗುವನ್ನು ಸಹ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ಧ್ರುವ ಸರ್ಜಾ ಅವರು ಈಗ ಪೊಗರು ಚಲನಚಿತ್ರದ ಪ್ರಚಾರದಲ್ಲಿನಲ್ಲಿ ನಿರತರಾಗಿದ್ದಾರೆ. ಪೊಗರು ಚಿತ್ರದಲ್ಲಿ ಚಂದನ್ ಶೆಟ್ಟಿ ಅವರು ಹಾಡಿದ ಖರಾಬು ಎಂಬ ಹಾಡು ಅತಿ ಹೆಚ್ಚಿನ ಹೆಸರನ್ನು ಮಾಡುತ್ತಿದೆ. ಪೊಗರು ಚಿತ್ರದ ಪ್ರಚಾರ ಹೈದರಾಬಾದಿನಲ್ಲಿ ನಡೆಯುತ್ತಿದೆ. ಆದರೂ ಸಹ ಅಲ್ಲಿಂದ ಪ್ರೀತಿಯಿಂದ ಒಂದು ಬೆಲೆಬಾಳುವ ಉಡುಗೊರೆಯನ್ನು ತಂದಿದ್ದಾರೆ. ಸಣ್ಣ ಉಡುಗೊರೆಯನ್ನು ಇವರು ತಂದಿಲ್ಲ. ಅದು ಏನೆಂದರೆ ಇವರು ಹತ್ತು ಲಕ್ಷ ಬೆಲೆಬಾಳುವ ಬೆಳ್ಳಿಯ ತೊಟ್ಟಿಲನ್ನು ನೀಡಿದ್ದಾರೆ.

ಹೈದರಾಬಾದ್ ಅನ್ನು ಮುತ್ತಿನನಗರಿ ಎಂದು ಕರೆಯುತ್ತಾರೆ. ಆದ್ದರಿಂದ ಯಾರು ಎಲ್ಲಿ ಹೋದರೂ ಮುತ್ತಿನಿಂದ ಕೂಡಿದ ಯಾವುದಾದರೂ ವಸ್ತುವನ್ನು ತರುತ್ತಾರೆ. ಹಾಗೆಯೇ ಧ್ರುವಸರ್ಜಾ ಅವರು ತನ್ನ ಸಹೋದರನ ಮಗನಿಗೋಸ್ಕರ ಮುತ್ತಿನ ಉಂಗುರವನ್ನು ತೆಗೆದುಕೊಂಡು ಬಂದಿದ್ದಾರೆ. ಅದನ್ನು ಹೊಸ ವರ್ಷದ ಮೊದಲ ದಿನ ನೀಡಿದ್ದಾರೆ. ಇದರಿಂದ ಮೇಘರಾಜ್ ಅವರಿಗೆ ಬಹಳ ಸಂತೋಷವಾಗಿದೆ. ಧ್ರುವ ಸರ್ಜಾ ಅವರಿಗೆ ತನ್ನ ಸಹೋದರನ ಮಗನ ಮೇಲೆ ಪ್ರೀತಿ ಕೊನೆಯವರೆಗೂ ಹಾಗೆಯೇ ಇರಲಿ ಎಂದು ನಾವೆಲ್ಲ ಹಾರೈಸೋಣ.

Leave a Reply

Your email address will not be published. Required fields are marked *