ಬಡತನದಲ್ಲಿ ಸಾಕಷ್ಟು ಕಷ್ಟಗಳನ್ನು ನೋಡಿ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಬೆಂಗಳೂರಿಗೆ ಬಂದು ಹೊಸಬದುಕನ್ನು ಕಷ್ಟದಿಂದಲೆ ಕಟ್ಟಿಕೊಂಡ ನಮ್ಮೆಲ್ಲರ ಪ್ರೀತಿಯ ನಿರೂಪಕಿ ಅನುಶ್ರೀ ಅವರು ಸಿನಿಮಾರಂಗದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿ ಅವಕಾಶಗಳಿಲ್ಲದೆ ನಿರೂಪಣೆಯಲ್ಲಿ ಮುಂದುವರೆದಿದ್ದರು. ಇದೀಗ ಸೈತಾನ್ ಸಿನಿಮಾದಲ್ಲಿ ಮತ್ತೆ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಸೈತಾನ್ ಸಿನಿಮಾ ಬಗ್ಗೆ ಹಾಗೂ ಅನುಶ್ರೀ ಅವರ ಮಾತುಗಳನ್ನು ಈ ಲೇಖನದಲ್ಲಿ ನೋಡೋಣ.

ನಿರೂಪಣೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿದ ಅನುಶ್ರೀ ಅವರು ಈಗಾಗಲೆ ಒಂದೆರಡು ಸಿನಿಮಾದಲ್ಲಿ ನಟಿಸಿ ನಂತರ ಯಾವುದೆ ಸಿನಿಮಾಗಳಲ್ಲಿ ನಟಿಸಲಿಲ್ಲ ಇದೀಗ ಮತ್ತೆ ಸೈತಾನ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸೈತಾನ್ ಸಿನಿಮಾದ ಕೆಲವು ಭಾಗ ಶೂಟಿಂಗ್ ನಡೆದಿದ್ದು ಇನ್ನಷ್ಟು ಭಾಗ ಶೂಟಿಂಗ್ ನಡೆಯಬೇಕಿದೆ. 2-4 ಸೀನ್ ಆದ ನಂತರ ಒಂದು ಹಾಡು ಅಥವಾ ಇಂಟರ್ವಲ್ ಮೊದಲು ಒಂದು ಹಾಡು ಈ ರೀತಿ ಸೈತಾನ್ ಸಿನಿಮಾದಲ್ಲಿ ಇಲ್ಲ, ಸಿನಿಮಾದ ಕಥೆಗೆ ಎಲ್ಲಿ ಹಾಡಿನ ಅವಶ್ಯಕತೆ ಇದೆಯೊ ಅಲ್ಲಿ ಹಾಡನ್ನು ಹಾಕಲಾಗಿದೆ. ಸೈತಾನ್ ಸಿನಿಮಾವನ್ನು ಪ್ರಭಾಕರ್ ನಿರ್ದೇಶನ ಮಾಡುತ್ತಿದ್ದಾರೆ. ಅನುಶ್ರೀ ಅವರು ಬೆಂಕಿಪಟ್ಟಣ, ಉಪ್ಪು ಹುಳಿ ಖಾರ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ.

ಸೈತಾನ್ ಸಿನಿಮಾದ ಪ್ರೆಸ್ ಮೀಟಿಂಗ್ ನಲ್ಲಿ ಅನುಶ್ರೀ ಅವರು ಮಾತನಾಡುತ್ತಾ ಲೋಹಿತ್ ಸರ್ ಅವರ ಪ್ರಿಯಾಂಕಾ ಉಪೇಂದ್ರ ಅವರು ನಟಿಸಿದ ಮಮ್ಮಿ ಸಿನೆಮಾವನ್ನು ನೋಡಿದ್ದೆ ನನಗೆ ಆ ಸಿನಿಮಾ ಬಹಳ ಇಷ್ಟವಾಯಿತು. ಲೋಹಿತ್ ಸರ್ ಅವರು ಸೈತಾನ್ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟರು. ನಾನು ಲೋಹಿತ್ ಸರ್ ಅವರ ಹತ್ತಿರ ನಾನು ಚೆನ್ನಾಗಿ ಮಾಡುತ್ತೇನೆಯೊ ಇಲ್ಲವೊ ನಾನು ಟೆಲಿವಿಷನ್ ನಲ್ಲಿ ಸಂತೋಷವಾಗಿದ್ದೇನೆ ಎಂದು ಹೇಳುತ್ತಾರೆ. ಆಗ ಲೋಹಿತ್ ಸರ್ ಅನುಶ್ರೀ ಅವರ ಹತ್ತಿರ ನೀವು ಸಿನಿಮಾದಲ್ಲಿ ಆಕ್ಟ್ ಮಾಡಿ ಎಂದು ಸಿನಿಮಾದಲ್ಲಿ ಅವಕಾಶ ಕೊಡುತ್ತಾರೆ.

ಅನುಶ್ರೀ ಅವರು ಎರಡು ಸಿನಿಮಾದಲ್ಲಿ ನಟಿಸಿ ನಂತರ ಅವರಿಗೆ ಅವಕಾಶ ಸಿಕ್ಕಿರಲಿಲ್ಲ ಮತ್ತೆ ಸೈತಾನ ಸಿನಿಮಾದಲ್ಲಿ ನಟಿಸಲು ಕಾರಣ ಲೊಹಿತ್ ಸರ್ ಹಾಗೂ ಅವರ ಹಿಂದಿನ ಸಿನಿಮಾ ಮಮ್ಮಿ ಎಂದು ಅನುಶ್ರೀ ಅವರು ಹೇಳಿಕೊಂಡಿದ್ದಾರೆ. ಪ್ರೆಸ್ ಮೀಟಿಂಗ್ ಅಲ್ಲಿ ಅದಿತಿ ಪ್ರಭುದೇವ್ ಇನ್ನಿತರ ಸಹಕಲಾವಿದರು ಭಾಗವಹಿಸಿದ್ದರು. ಅದಿತಿ ಅವರು ಅನುಶ್ರೀ ಅವರ ಕಾರ್ಯಕ್ರಮಗಳನ್ನು ನೋಡಿಕೊಂಡು ಇವರಂತೆ ನಿರೂಪಕಿಯಾಗಬೇಕು ಎಂದು ಆಸೆ ಪಟ್ಟಿದ್ದೆ ಎಂದು ಅನುಶ್ರೀ ಅವರ ಬಗ್ಗೆ ಒಳ್ಳೆಯ ಮಾತನಾಡಿದರು. ಅನುಶ್ರೀ ಅವರಿಗೆ ಎಲ್ಲರೂ ಶುಭಾಶಯ ಕೋರಿದ್ದಾರೆ ಮುಂದಿನ ದಿನಗಳಲ್ಲಿ ಸೈತಾನ್ ಸಿನಿಮಾ ಯಶಸ್ಸನ್ನು ಪಡೆಯಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *