ಕಾಂತಾರ ಸಿನಿಮಾದಿಂದ ಬಂದ ದುಡ್ಡಲ್ಲಿ ಪ್ರೈವೇಟ್ ಜೆಟ್ ತಗೆದುಕೊಡ್ರ ರಿಷಬ್ ಶೆಟ್ಟಿ? ವೈರಲ್ ಆಗಿರುವ ಈ ಫೋಟೋ ಹಿಂದಿನ ಅಸಲಿಯತ್ತೇನು

0 1

ಇತ್ತೀಚಿನ ದಿನಗಳಲ್ಲಿ ಡಾಲಿ ಧನಂಜಯ್ ಅವರ ವಿವಾದ ಮುನ್ನಡೆಗೆ ಬಂದ ನಂತರ ಬಡವರ ಮನೆ ಮಕ್ಕಳು ಬೆಳಿಬೇಕು ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್ ಅವರ ಪರವಾಗಿ ಬೆಂಬಲವನ್ನು ಸೂಚಿಸುತ್ತಿರುವವರು ಪೋಸ್ಟ್ ಮಾಡಿಕೊಂಡು ಅದೇ ವಾಕ್ಯವನ್ನು ಟ್ರೆಂಡ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಗಿತ್ತು. ಅವರು ಕೂಡ ಬಡ ಕುಟುಂಬದಿಂದ ಬಂದವರಾಗಿರುವ ಹಿನ್ನೆಲೆಯಲ್ಲಿ ಈ ವಾಕ್ಯವನ್ನು ಅವರಿಗೂ ಕೂಡ ಸೇರಿಸಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಲಾಗಿತ್ತು.

ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಕೂಡ ಹಿಂದಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕೂಡ ಕಾಂತಾರ ಸಿನಿಮಾ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪ್ರತಿಯೊಬ್ಬ ಕನ್ನಡಿಗರು ಕೂಡ ಹೆಮ್ಮೆಪಡುವಂತಹ ವಿಚಾರ. ಕಾಂತಾರ ನಮ್ಮ ಕನ್ನಡದ ಮಣ್ಣಿನ ಸಂಸ್ಕೃತಿಯನ್ನು ಸಾರುವಂತ ಸಿನಿಮಾ ಆಗಿದ್ದು ಬಾಲಿವುಡ್ ಮಂದಿ ಕೂಡ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

ಇನ್ನು ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಕೂಡ ದೇಶ ವಿದೇಶಗಳಲ್ಲಿ ಕಾಂತಾರ ಸಿನಿಮಾ ದಾಖಲೆಯ ಮೇಲೆ ದಾಖಲೆ ಮಾಡುತ್ತಿದೆ. ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಪ್ರೈವೇಟ್ ಜೆಟ್ ನಲ್ಲಿ ಕುಳಿತುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನೇ ಇಟ್ಟುಕೊಂಡು ಈಗ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಬಡವರ ಮನೆ ಮಕ್ಕಳು ಬೆಳೀಬೇಕು ಎಂದು ಹೇಳಿ ಈಗ ಖಾಸಗಿ ಪ್ರೈವೇಟ್ ಜೆಟ್ ನಲ್ಲಿ ಕುಳಿತುಕೊಂಡು ಓಡಾಡುತ್ತಿದ್ದೀರಲ್ಲ ಎಂಬುದಾಗಿ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

ಆದರೆ ನಿಜಕ್ಕೂ ಇದರ ಹಿನ್ನೆಲೆ ಅಥವಾ ನಿಜವಾದ ಅರ್ಥ ಬೇರೇನೇ ಇದೆ. ಅದೇನೆಂದರೆ ಕಾಂತಾರ ಸಿನಿಮಾ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸಿನಿಮಾದ ಸಕ್ಸಸ್ ಮೀಟ್ ಗಾಗಿ ದೇಶದ ಹಲವಾರು ಪ್ರಮುಖ ನಗರಗಳಿಗೆ ರಿಷಬ್ ಶೆಟ್ಟಿ ಅವರು ಹೋಗಬೇಕಾಗಿ ಬಂದಿದೆ. ಇದೇ ಕಾರಣಕ್ಕಾಗಿ ಹೊಂಬಾಳೆ ಫಿಲಂಸ್ ಸಂಸ್ಥೆ ರಿಷಬ್ ಶೆಟ್ಟಿ ಅವರಿಗಾಗಿ ಈ ಖಾಸಗಿ ವಿಮಾನದ ಏರ್ಪಾಡನ್ನು ಮಾಡಿದ್ದು ನೆಟ್ಟಿಗರು ಇದನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ.

Leave A Reply

Your email address will not be published.