ಕುದುರೆ ಲಾಳ ಅನ್ನೋದು ವಸ್ತು ದೋಷವನ್ನು ನಿವಾರಿಸುವ ಒಂದು ಸಾಧನವೆಂಬುದಾಗಿ ಹೇಳಬಹುದಾಗಿದೆ, ಕುದುರೆ ಲಲವನ್ನು ಮನೆಯಲ್ಲಿನ ಕೆಟ್ಟ ದೃಷ್ಟಿ ನಿವಾರಿಸಲು ಹಾಗೂ ಮನೆಯಲ್ಲಿ ಪಾಸಿಟಿವ್ ಎನರ್ಜಿಯ ವಾತಾವರಣ ನಿರ್ಮಿಸಿಕೊಳ್ಳಲು ಈ ಕುದುರೆ ಲಾಳವನ್ನು ಬಳಸಿಕೊಳ್ಳುತ್ತಾರೆ. ಇದರಲ್ಲಿರುವ ಇನ್ನು ಹಲವು ವಿಶೇಷತೆ ಏನು ಇದನ್ನು ಹೇಗೆ ಬಳಸಿ ಇದರ ಲಾಭಗಳನ್ನು ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿಯುವುದಾದರೆ ಮುಂದೆ ನೋಡಿ.

ಮನೆಯಲ್ಲಿನ ಕೆಲವೊಂದು ವಸ್ತುಗಳು ಮನೆಯ ವಾತಾವರಣವನ್ನು ಬದಲಾವಣೆ ಮಾಡಬಲ್ಲದು ಅವುಗಳಲ್ಲಿ ಈ ಕುದುರೆ ಲಾಳ ಕೂಡ ಒಂದು ಅನ್ನೋದನ್ನ ವಾಸ್ತು ತಜ್ಞರು ಹೇಳುತ್ತಾರೆ, ಅಷ್ಟೇ ಅಲ್ದೆ ಕೆಲವರು ಈ ಕುದುರೆ ಲಾಳವನ್ನು ಮನೆಯಲ್ಲಿ ಕೆಲಸ ಮಾಡುವಂತ ಆಫೀಸ್ ಕಚೇರಿಗಳಲ್ಲಿ ಬಳಸುತ್ತಾರೆ. ಆರ್ಧಿಕ ಸಮಸ್ಯೆ ನಿವಾರಿಸಲು ಹಾಗೂ ವಾಸ್ತು ದೋಷ ನಿವಾರಿಸಿ ಮನೆಯಲ್ಲಿ ಪಾಸಿಟಿವ್ ಎನರ್ಜಿ ಪಡೆಯಲು ಸಹಕಾರಿ ಈ ಕುದುರೆ ಲಾಳ.

ಮನೆಯಲ್ಲಿ ಏನಾದರು ಸಮಸ್ಯೆಗಳು ಮೇಲಿಂದ ಮೇಲೆ ಉದ್ಬವಿಸುತ್ತಿದ್ದರೆ ಈ ಕುದುರೆ ಲಾಳವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ದವಸಧಾನ್ಯಗಳನ್ನು ಸಂಗ್ರಹಿಸಿಡುವ ಜಾಗದಲ್ಲಿ ಒಂದು ಡಬ್ಬದಲ್ಲಿ ಹಾಕಿಡಿ. ಇದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇನ್ನು ಮನೆಯಲ್ಲಿ ಆರ್ಧಿಕ ಸಮಸ್ಯೆ ಏನಾದರು ಕಂಡು ಬಂದಲ್ಲಿ ಒಂದು ಶುದ್ಧವಾದ ಬಟ್ಟೆಯಲ್ಲಿ ಲಾಳವನ್ನು ಕಟ್ಟಿ ಅದನ್ನು ಲಾಕರ್‌ ಅಥವಾ ಹಣಕಾಸು ಇಡುವಂತ ಸ್ಥಳದಲ್ಲಿ ಇದ್ನನು ಇಡುವುದರಿಂದ ಮನೆಯಲ್ಲಿ ಆರ್ಥಿಕ ಸಂಕಷ್ಟ ನಿವಾರಣೆಯಾಗುವುದು.

ಇನ್ನು ಗ್ರಹ ದೋಷ ನಿವಾರಣೆಯನ್ನು ಸಹ ಈ ಕುದುರೆ ಲಾಳ ಮಾಡಬಲ್ಲದು, ಹೌದು ಯಾರಿಗೆ ಸಾಡೆ ಸಾತಿ ಶನಿ ದೇವನ ಕಾಟ ಇರುತ್ತದೋ ಅಥವಾ ಸಮಸ್ಯೆಗಳು ಇರುತ್ತದೋ ಅಂತವರು ಲಾಳವನ್ನು ಬಳಸಿ ಮಾಡಿರುವಂತ ಉಂಗುರುವನ್ನು ಮಧ್ಯದ ಬೆರಳಿಗೆ ಧರಿಸುವುದರಿಂದ ಗ್ರಹ ದೋಷ ನಿವಾರಣೆಯಾಗುವುದು. ಕುದುರೆ ಲಾಳವನ್ನು ಮನೆಯ ಮುಖ್ಯ ದ್ವಾರಕ್ಕೆ ನೇತು ಹಾಕುವುದರಿಂದ ಮೆನಯ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ ಹಾಗೂ ಯಾವುದೇ ಮಾಟ ಮಂತ್ರ ವಾಮಾಚಾರ ತಗಲುವದಿಲ್ಲ. ಹೀಗೆ ಹಲವು ಉಪಯೋಗಗಳನ್ನು ಕುದುರೆ ಲಾಳದಿಂದ ಪಡೆದುಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *