ಸಾಮಾನ್ಯ ಶೀತ ಮತ್ತು ಕೆಮ್ಮುಗಳನ್ನು ಗುಣಪಡಿಸಲು ಸಾಮಾನ್ಯ ಅಡುಗೆಮನೆಯ ಸಾಮಾಗ್ರಿಗಳೇ ಸಾಕು. ಮೆಂತೆ ಬೀಜಗಳು, ದೊಡ್ಡ ಜೀರಿಗೆ ಮೊದಲಾದವು ಗಂಟಲು ಮತ್ತು ಮೂಗಿನ ಒಳಭಾಗದಲ್ಲಿ ಅಂಟಿಕೊಂಡು ಗಟ್ಟಿಯಾಗಿದ್ದ ಕಫವನ್ನು ಸಡಿಲಿಸಿ ಸುಲಭವಾಗಿ ನಿವಾರಿಸಲು ಸಹಕರಿಸುತ್ತವೆ ಹಾಗೂ ನೈಸರ್ಗಿಕವಾಗಿ ಶೀತ ಮತ್ತು ಕೆಮ್ಮು ಗುಣಗೊಳ್ಳಲು ಸಹಕರಿಸುತ್ತವೆ. ಹಾಗೆಯೇ ಸುಲಭ ಮಾರ್ಗದಲ್ಲಿ ಕಾಫಿ ನಿವಾರಣೆ ಮಾಡುವ ವಿಧಾನವನ್ನು ತಿಳಿಯೋಣ.

ಶೀತ ಮತ್ತು ಕೆಮ್ಮುಗಳು ವಾಸ್ತವದಲ್ಲಿ ನಮ್ಮ ದೇಹದ ರೋಗ ನಿರೋಧಕ ವ್ಯಸ್ಥೆ ಕೈಗೊಳ್ಳುವ ಕ್ರಮಗಳೇ ಹೊರತು ಇದೇ ಒಂದು ಕಾಯಿಲೆಯಲ್ಲ. ಗಾಳಿಯಲ್ಲಿ ತೇಲುವ ಹಲವು ಬಗೆಯ ವೈರಸ್ಸುಗಳು ಮೂಗು ಗಂಟಲ ಒಳಭಾಗದಲ್ಲಿ ಆಗಮಿಸಿದಾಗ ಇಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ. ಕಫವನ್ನು ನಿವಾರಿಸಲು ತುಳಸಿಯೂ ಅದ್ಭುತ ಶಮನ ನೀಡುತ್ತದೆ. ಇದಕ್ಕಾಗಿ ತಾಜಾ ತುಳಸಿ ಎಲೆಗಳನ್ನು ಜಗದು ನುಂಗಬಹುದು ಅಥವಾ ಒಣಗಿದ ತುಳಸಿ ಎಲೆಗಳನ್ನು ಪುಡಿಮಾಡಿಯೂ ಸೇವಿಸಬಹುದು.

ತಾಜಾ ಎಲೆಗಳಾದರೆ ಸುಮಾರು ಹತ್ತು ಗ್ರಾಂ ಸಾಕು. ಒಣ ಎಲೆಗಳಾದರೆ ಒಂದು ದೊಡ್ಡ ಚಮಚದಷ್ಟು ಪ್ರಮಾಣದಷ್ಟು ಬೇಕಾಗುತ್ತದೆ. ಇದನ್ನು ಒಂದು ಲೋಟ ನೀರಿನಲ್ಲಿ ಒಂದೆರಡು ಏಲಕ್ಕಿಗಳ ಜೊತೆಗೆ ಕುದಿಸಬೇಕು. ರುಚಿಗೆ ತಕ್ಕಷ್ಟು ಜೇನನ್ನೂ ಬೆರೆಸಬಹುದು. ಈ ಟೀ ಯನ್ನು ಕುಡಿಯುವ ಮೂಲಕ ಕಫ ಸಡಿಲಗೊಳ್ಳುತ್ತದೆ ಹಾಗೂ ಶ್ವಾಸಕೋಶದ ಇತರ ತೊಂದರೆಗಳನ್ನೂ ನಿವಾರಿಸಬಹುದು.

ಜೊತೆಗೆ ಎರಡು ವಿಳ್ಯೆದೆಲೆ ಒಟ್ಟಿಗೆ ಒಂಭತ್ತು ತುಳುಸಿ ಎಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಅದಕ್ಕೆ ಮೆಣಸು ಹಾಗೂ ಒಣ ಶುಂಠಿಯನ್ನು ಸೇರಿಸಿ ಚೆನ್ನಾಗಿ ಕುಟ್ಟಿ ಅದರಿಂದ ರಸ ತೆಗೆದು ಸಣ್ಣ ಮಕ್ಕಳಿಗೆ ಕುಡಿಸಿದರೆ ಕಫ ನಿವಾರಣೆ ಆಗುತ್ತದೆ. ದೊಡ್ಡವರಿಗೆ ಕೊಡಬೇಕಾದರೆ ಕುಟ್ಟುವ ಅವಶ್ಯಕತೆ ಇರುವುದಿಲ್ಲ ಎಲೆಯಲ್ಲಿ ತುಳಸಿ, ಮೆಣಸು, ಶುಂಠಿ ಮತ್ತು ಜೇನನ್ನು ಸೇರಿಸಿ ಜಗಿದು ರಸ ಸೇವಿಸಿದರೆ ಕಫ ಹಾಗೂ ಕೆಮ್ಮು ದೂರವಾಗುತ್ತದೆ.ಬಿಸಿ ನೀರಲ್ಲಿ ಉಪ್ಪು ಹಾಕಿ ದಿನಕ್ಕೆ 2 ರಿಂದ 3 ಬಾರಿ ಬಾಯಿಗೆ ಹಾಕಿ ಗಾರ್ಗಲ್‌ ಮಾಡಿದರೆ ಗಂಟಲಿನಲ್ಲಿರುವ ಕಫ ನಿವಾರಣೆಯಾಗುತ್ತದೆ.

ಹಸಿಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಕಲಸಿ ದಿನಕ್ಕೆ 2-3 ಬಾರಿ ಕುಡಿದರೆ ಕಫ ಬೇಗ ಕರಗುತ್ತದೆ.ಲಿಂಬೆರಸ ದೇಹದಲ್ಲಿ ಆಯಾಸವನ್ನು ಕಡಿಮೆ ಮಾಡಲು ಮತ್ತು ಪಿತ್ತ ಸಮಸ್ಯೆಗೆ ಜ್ಯೂಸ್‌ ಮಾಡಿ ಸೇವಿಸುತ್ತಾರೆ. ಇದರೊಂದಿಗೆ ಗಂಟಲ ಕಿರಿಕಿರಿ ಉಪಶಮನ ಮಾಡಲೂ ಇದೊಂದು ಮನೆಮದ್ದಾಗಿದೆ. ಬೆಚ್ಚನೆಯ ನೀರಿಗೆ ಚಿಟಿಕೆ ಉಪ್ಪು ಬೆರೆಸಿ ಸೇವಿಸುವುದರಿಂದ ಕೆಮ್ಮು ಕಡಿಮೆ ಆಗುತ್ತದೆ. ಅದ ರೊಂದಿಗೆ ಲಿಂಬೆರಸಕ್ಕೆ ಸಕ್ಕರೆ ಬೆರೆಸಿ ಸೇವಿಸುವುದರಿಂದ ಕಫ‌ ನಿವಾರಿಸಲು ಸಾಧ್ಯವಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *