ಹೌದು ನೂರೆಂಟು ಶರೀರದ ಬಂಡೆಗಳಿಗೆ ಅಂಗೈಯಲ್ಲೇ ಮನೆಮದ್ದುಗಳಿವೆ ಆದ್ರೆ ಅವುಗಳ ಮಾಹಿತಿ ತಿಳಿದಿರಬೇಕು ಅಷ್ಟೇ, ಜ್ವರ ಬಂದ್ರೆ ಏನ್ ಮಾಡಬೇಕು ಅಂದಾಗ ತುಳಸಿ ಮನೆಮದ್ದು ಉಪಯೋಗವಾಗುತ್ತದೆ. ಮನುಷ್ಯನಿಗೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಅನ್ನೋದು ಕಾಡುತ್ತಲೇ ಇರುತ್ತದೆ ಅಂತಹ ಸಮಸ್ಯೆಗಳಲ್ಲಿ ಈ ಜ್ವರ ಕೂಡ ಒಂದಾಗಿದೆ. ಈ ಜ್ವರ ಯಾಕೆ ಬರುತ್ತೆ ಹಾಗೂ ಇದಕ್ಕೆ ಕಾರಣಗಳೇನು ಇದನ್ನು ಪರಿಹರಿಸುವ ಮನೆಮದ್ದುಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ, ಜ್ವರ ಬರಲು ಕಾರಣ ಸೋಂಕು ಉಂಟು ಮಾಡುವ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು.

ಕೆಲವೊಮ್ಮೆ ದೈಹಿಕ ಶ್ರಮ ಅಥವಾ ಅತ್ಯಂತ ಹೆಚ್ಚಾದ ಮಾನಸಿಕ ಶ್ರಮ ಅಥವಾ ಒತ್ತಡವು ಕೂಡ ಜ್ವರ ಬರುವಂತೆ ಮಾಡಬಹುದು. ಇನ್ನು ಜ್ವರ ಅನ್ನೋದು ದೈಹಿಕ ಹಾಗೂ ಮಾನಸಿಕ ವಿಶ್ರಾಂತಿಯಿಂದ ಗುಣವಾಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಜ್ವರಕ್ಕೆ ಮಲೇರಿಯಾ ದಂತಹ ಸಾಂಕ್ರಾಮಿಕ ರೋಗಗಳು ಆಗಿರಬಹುದು ಅಂತಹ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅತ್ಯವಶ್ಯಕ. ಹಾಗಲ್ಲದೆ ಜ್ವರಕ್ಕೆ ಕಾರಣ ಕೇವಲ ವಾತಾವರಣದಲ್ಲಿನ ದಿಡೀರ್ ವ್ಯತ್ಯಾಸ, ಶೀತ ನೆಗಡಿ ಅಥವಾ ವೈರಸ್ ಹಾಗೂ ಬ್ಯಾಕ್ಟಿರಿಯಾ ಸೋಂಕು ಆಗಿದ್ದಲ್ಲಿ ಕೆಳಗೆ ತಿಳಿಸಿರುವ ಕೆಲವು ಸಲಹೆಗಳು ಅದ್ಭುತವಾಗಿ ಕೆಲಸ ಮಾಡುತ್ತದೆ.

ಒಂದು ಚಮಚ ಮೆಂತ್ಯದ ಕಾಳುಗಳನ್ನು ಕುದಿಸಿ ಟೀ ತಯಾರಿಸಿ ಬಿಸಿ ಬಿಸಿಯಾಗಿ ಕುಡಿಯುವುದರಿಂದ ಜ್ವರ ಗುಣವಾಗುತ್ತದೆ, ಇದಕ್ಕೆ ರುಚಿಯಾಗಿ ಸ್ವಲ್ಪ ಜೇನುತುಪ್ಪವನ್ನು ಕೂಡ ಬೆರೆಸಿಕೊಳ್ಳಬಹುದು. ಇನ್ನು ಜ್ವರದ ತಾಪ ಹೆಚ್ಚಾಗಿದ್ದರೆ ಗಂಧದ ಲೇಪವನ್ನು ಹಣೆಯ ಮೇಲೆ ಹಚ್ಚುವುದರಿಂದ ಜ್ವರದ ತಾಪ ಕಡಿಮೆಯಾಗುವುದು. ತುಳಸಿ ಎಲೆ ಮತ್ತು ಜೇನುತುಪ್ಪ ಜ್ವರ ಗುಣಮಾಡುತ್ತದೆ, ಹೌದು ೫೦ ಗ್ರಾಂ ತುಳಸಿ ಎಲೆಗಳನ್ನು ಜಜ್ಜಿ ರಸ ತಗೆಯಿರಿ ಅದಕ್ಕೆ ೪ ಚಮಚ ಜೇನುತುಪ್ಪವನ್ನು ಬೆರಸಿ ಈ ಮಿಶ್ರಣವನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಸಾಮಾನ್ಯ ಜ್ವರ ಗುಣವಾಗುತ್ತದೆ.

ಮೂರನೆಯ ಮನೆಮದ್ದು ದಾಲ್ಚಿನ್ನಿ ಚಕ್ಕೆ ಹಾಗೂ ಟೊಮೊಟೊ, ಟೊಮೊಟೊ ಸೂಪನ್ನು ತಯಾರಿಸಿ ಅದಕ್ಕೆ ಅರ್ಧ ಚಮಚ ದಾಲ್ಚಿನ್ನಿ ಚಕ್ಕೆಯನ್ನು ಬೆರಸಿ ಇದನ್ನು ಜ್ವರವಿರುವ ರೋಗಿಗೆ ದಿನಕ್ಕೆ ಎರಡು ಬಾರಿ ಕುಡಿಸುವುದರಿಂದ ಜ್ವರ ಗುಣಮುಖವಾಗುತ್ತದೆ. ಇವುಗಳಲ್ಲಿ ನಿಮಗೆ ಯಾವುದು ಅತಿ ಸುಲಭವೋ ಅದನ್ನು ಮಾಡಿ ಜ್ವರ ನಿಯಂತ್ರಿಸಿಕೊಳ್ಳಬಹುದಾಗಿದೆ.

ಜಾಹಿರಾತು: ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *