ಮನೆಯಲ್ಲಿನ ಕೆಟ್ಟ ದೃಷ್ಟಿಯನ್ನು ನಿವಾರಿಸಿ ನೆಮ್ಮದಿ ನೀಡುವ ಕರ್ಪುರ

0 2

ದೃಷ್ಟಿ ದೋಷ ಶತ್ರು ಕಾಟ ವಾಮಾಚಾರ ಆರ್ಥಿಕ ಸಾಮಸ್ಯೆ ಇನ್ನೂ ಮುಂತಾದವುಗಳು ಇತ್ತೀಚಿನ ದಿನಗಳಲ್ಲಿ ನಮ್ಮ ಜನರನ್ನು ಅತಿ ಹೆಚ್ಚಾಗಿ ಕಾಡತೊಡಗಿವೆ ಆದರೆ ಜನರು ಅದರಿಂದ ಹೊರಬರಲಾಗದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ, ಮಂತ್ರವಾದಿಗಳ ಮೊರೆ ಹೋಗಿ ಹಣ ಕಳೆದುಕೊಂಡವರದೆಷ್ಟೋ ಜನರು ಇನ್ನೂ ಹೆಚ್ಚಿನ ಸಮಸ್ಯೆಯ ಜೊತೆಗೆ ಬಳಲಿ ಬೆಂಡಾಗಿದ್ದಾರೆ ಅಂತಹವರಿಗಾಗಿಯೇ ನಾವು ಈ ಮಾಹಿತಿಯನ್ನು ಹೇಳಬಸುತ್ತೇವೆ.

ಒಂದು ಚಿಕ್ಕ ಕರ್ಪೂರದಿಂದ ನಾವು ಹೇಳುವ ಕೆಲಸವನ್ನು ಮಾಡಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಜೊತೆಗೆ ನಿಮ್ಮ ಮನೆಯಲ್ಲಿ ಆನಂದವು ನೆಲೆಸುತ್ತದೆ ಮತ್ತು ಈ ಪರಿಹಾರ ಕ್ರಮವನ್ನು ಮಾಡುವವರು ಯಾವುದೇ ಕಾರಣಕ್ಕೂ ಈ ವಿಷಯವನ್ನು ತಮ್ಮ ಮನೆಯಲ್ಲಾಗಲಿ ಅಥವಾ ಹೊರಗಿನವ ಜೊತೆಯಲ್ಲಾಗಲಿ ಹೇಳಿಕೊಳ್ಳಬಾರದು ಹೀಗೆ ಮಾಡುವುದರಿಂದ ಆ ಪೊಜೆಯ ಫಲ ನಿಮಗೆ ಲಭಿಸುವುದಿಲ್ಲ, ಹಾಗಾದ್ರೆ ಕರ್ಪೂರದಿಂದ ಮಾಡಬಹುದಾದ ಆ ಚಿಕ್ಕ ಪರಿಹಾರ ಯಾವುದು ಅದನ್ನು ಮಾಡಲು ಅನುಸರಿಸಬೇಕಾದ ಕ್ರಮಗಳು ಯಾವುವು ಎಂಬುದರ ಬಗ್ಗೆ ಮಾಹಿತಿಯನ್ನು ನೋಡೋಣ ಬನ್ನಿ.

ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಬೇಗನೆ ಎದ್ದು ಮನೆಯನ್ನು ಸ್ವಚ್ಛವಾಗಿಸಬೇಕು ನಂತರ ಸ್ವಚ್ಛಗೊಳಿಸಿದ ಮನೆಯನ್ನು ಪೂಜೆಗೆ ಅಣಿಮಾಡಿಕೊಳ್ಳಬೇಕು ಸ್ವಚ್ಛತೆ ಕಾರ್ಯ ಮುಗಿದ ನಂತರ ಒಂದು ಹೊಸ ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಬೇಕು ಹೀಗೆ ತೆಗೆದುಕೊಂಡ ಕೆಂಪು ಬಟ್ಟೆಯಲ್ಲಿ ಎರಡು ಚಿಕ್ಕ ಕರ್ಪೂರದ ಬಿಲ್ಲೆಗಳನ್ನು ಹಾಕಿ ಕಟ್ಟಬೇಕು, ಹೀಗೆ ಕಟ್ಟಿಕೊಂಡ ನಂತರ ಕೆಂಪುಬಟ್ಟೆಯಲ್ಲಿ ಸುತ್ತಿದ ಆ ಕರ್ಪೂರಗಳ ಬಿಲ್ಲೆಗಳ ಕಟ್ಟನ್ನು ನಿಮ್ಮ ದೇವರ ಮನೆಯಲ್ಲಿ ಲಕ್ಷ್ಮಿ ದೇವಿಯ ಭಾವ ಚಿತ್ರದ ಮುಂದೆ ಇರಿಸಬೇಕು ಹೀಗೆ ಮಾಡಿದ ನಂತರ ನಿಮ್ಮ ಮನೆಯಲ್ಲಿ ದೀಪಾರಾದನೆ ಮಾಡಿ ನಿಮ್ಮ ಸಂಕಲ್ಪಗಳನ್ನು ಶ್ರೀ ಲಕ್ಷ್ಮೀದೇವಿಯ ಮುಂದೆ ಇಡಬೇಕು.

ದೀಪಾರಾದನೆ ಮುಗಿದ ನಂತರದಲ್ಲಿ ಕರ್ಪೂರದ ಬಿಲ್ಲೆಗಳಿರುವ ಆ ಕೆಂಪು ಬಟ್ಟೆಯ ಕಟ್ಟನ್ನು ತೆಗೆದುಕೊಂಡು ಹೋಗಿ ನೀವು ಹಣವನ್ನು ಇಡುವ ಜಾಗದಲ್ಲಾಗಲಿ ಅಥವಾ ಚಿನ್ನವನ್ನು ಇಡುವ ಜಾಗದಲ್ಲಾಗಲೀ ಇಟ್ಟು ನಮಸ್ಕರಿಸಬೇಕು ನೀವು ಹೀಗೆ ಮಾಡುವುದು ಮನೆಯಲ್ಲಿಯೂ ಸಹ ಯಾರಿಗೂ ತಿಳಿಯದಂತೆ ಮಾಡಬೇಕು ಮತ್ತು ಈ ಒಂದು ಪರಿಹಾರ ಕ್ರಮವನ್ನು ಶುಕ್ರವಾರದ ದಿನಗಳಲ್ಲಿ ಹೊರತುಪಡಿಸಿ ಮತ್ತ್ಯಾವ ದಿನಗಳಲ್ಲಿಯೂ ಸಹ ಮಾಡುವುದು ಸೂಕ್ತವಲ್ಲ, ಸುಮಂಗಲಿಯರು ಮಾತ್ರವೇ ಈ ಪರಿಹಾರವನ್ನು ಮಾಡಬೇಕು ಹೀಗೆ ಮಾಡುವುದರಿಂದ ನಿಮಗೇ ನಂಬಲಾರದಷ್ಟು ಬದಲಾವಣೆಗಳನ್ನು ನೀವು ನಿರೀಕ್ಷಿಸಬಹುದು ನಿಮ್ಮ ಮನೆಯು ನಂದಗೋಕುಲದಂತೆ ಬೆಳಗುವುದು.

ನಿಮ್ಮ ಜೀವನದಲ್ಲಿ ಎಂತಹ ಕಷ್ಟಗಳು ಇದ್ರೂ ಯಾವುದೇ ಕೆಲಸದಲ್ಲಿ ಅಡೆ ತಡೆಗಳು ಆಗುತ್ತಿದ್ದರು ನಿಮ್ಮ ಸಮಸ್ಯೆಗೆ ಒಂದೇ ಕರೆಯ ಮೂಲಕ ಖಚಿತ ಪರಿಹಾರವನ್ನು ನೀಡುತ್ತಾರೆ, ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಸುಮಾರು 20 ವರ್ಷಗಳ ಅನುಭವ ಹೊಂದಿರುವಂತ ಶ್ರೀ ಎಂಪಿ ಶರ್ಮ ಗುರೂಜಿಯವರೊಂದಿಗೆ ಕರೆ ಮಾಡಿ ಖಚಿತ ಪರಿಹಾರವನ್ನು ಕಂಡುಕೊಳ್ಳಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ

Leave A Reply

Your email address will not be published.