ಇಂದು ನಾವು ನಿಮಗೆ ಧನುರಾಶಿಯ ರಾಶಿಫಲದ ಕುರಿತಾದ ಕೆಲವೊಂದು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಧನುರಾಶಿಯ ಸ್ವಾಮಿ ಗ್ರಹ ಗುರುದೇವನಾಗಿದ್ದಾನೆ ಜೊತೆಗೆ ಗುರುದೇವನು ಪ್ರಸ್ತುತದಲ್ಲಿ ಶನಿದೇವನೊಂದಿಗೆ ವಕ್ರಸ್ಥಿತಿಯಲ್ಲಿ ವಿರಾಜಮಾನನಾಗಿದ್ದಾನೆ. ಆದರೆ ಇದೇ ಅಕ್ಟೋಬರ್ ಹದಿನೇಳನೇ ತಾರೀಖಿನಂದು ಗುರುದೇವನು ಮರಳಿ ಮಾರ್ಗಿ ಅವಸ್ಥೆಗೆ ಪರಿವರ್ತನೆ ಹೊಂದಲಿದ್ದಾನೆ. ಗುರುದೇವನು ಮಾರ್ಗಿ ಆಗಿ ಪರಿವರ್ತನೆ ಹೊಂದುತ್ತಲಿರುವುದು ಅತ್ಯಂತ ಮಹತ್ವಪೂರ್ಣ ಪ್ರಕ್ರಿಯೆಗಳಲ್ಲಿ ಒಂದಾಗಿದ್ದು ಬಾರಿ ಪರಿವರ್ತನೆಯನ್ನು ಹೊತ್ತು ತರಲಿದೆ.

ಇಲ್ಲಿ ಗುರುದೇವನು ರಾಶಿ ಪರಿವರ್ತನೆ ಮಾಡುತ್ತಿಲ್ಲ ಗುರುದೇವನು ಮಕರ ರಾಶಿಯಲ್ಲಿ ಇದ್ದುಕೊಂಡು ತನ್ನ ಸ್ಥಿತಿಯಲ್ಲಿ ಪರಿವರ್ತನೆಗೈಯಲಿದ್ದಾನೆ. ಅಂದರೆ ಪ್ರಸ್ತುತದಲ್ಲಿ ಮಕರ ರಾಶಿಯಲ್ಲಿ ಸ್ಥಿತ ಆಗಿರುವ ಗುರುದೇವನು ಹಿಮ್ಮುಖವಾಗಿ ಚಲಿಸುತ್ತಿದ್ದು ಈಗ ಅಕ್ಟೋಬರ್ ಹದಿನೆಂಟನೇ ತಾರೀಖಿನಿಂದ ಮಕರ ರಾಶಿಯಲ್ಲಿದ್ದುಕೊಂಡೆ ನೇರ ಚಲನೆಯನ್ನು ಹೊಂದಲಿದ್ದಾನೆ.

ಇಲ್ಲಿ ಒಂದು ತಿಂಗಳುಗಳ ಕಾಲ ಗುರುದೇವನು ನಿಧಾನಗತಿಯಲ್ಲಿ ಸಂಚರಿಸಲಿದ್ದು ಇಲ್ಲಿಂದ ಮತ್ತೆ ಕುಂಭರಾಶಿಗೆ ಪರಿವರ್ತನೆ ಹೊಂದಲಿದ್ದಾನೆ. ಪ್ರಸ್ತುತದಲ್ಲಿ ಶನಿದೇವನು ಕೂಡ ಮಕರ ರಾಶಿಯಲ್ಲಿದ್ದು ಈಗ ವಕ್ರಿ ಇಂದ ಮಾರ್ಗಿಯಾಗಿ ಪರಿವರ್ತನೆಯಾಗಿದ್ದಾನೆ. ಗುರು ಬೃಹಸ್ಪತಿ ನಿಮ್ಮ ದ್ವಿತೀಯ ಭಾವದಲ್ಲಿ ಮಾರ್ಗಿ ಯಾಗಿ ಬದಲಾಗುತ್ತಿದ್ದನೆ. ಅಂದರೆ ನಿಮ್ಮ ಧನ ಭಾಗದಲ್ಲಿ ಈ ಪ್ರಕ್ರಿಯೆ ಜರುಗಲಿದೆ. ಹಾಗಾದರೆ ಗುರುದೇವನ ಈ ಬದಲಾವಣೆಯು ಧನು ರಾಶಿಯವರ ರಾಶಿ ಫಲ ದಲ್ಲಿ ಯಾವ ರೀತಿಯ ಬದಲಾವಣೆಯನ್ನು ತರಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಗುರು ಬ್ರಹಸ್ಪತಿಯು ಜ್ಞಾನದ ಮತ್ತು ಕೃಪೆಯ ಕಾರಕಗ್ರಹನಾಗಿ ಕರೆಸಿಕೊಳ್ಳುತ್ತಾನೆ. ಜೊತೆಗೆ ಗುರು ಗ್ರಹವನ್ನು ಎಲ್ಲಾ ನವಗ್ರಹಗಳ ಗುರು ಎಂದು ಕರೆಯಲಾಗಿದೆ. ಜೊತೆಗೆ ಗುರುದೇವನು ನಮಗೆ ಎಲ್ಲಾ ರೀತಿಯ ಸುಖ ಸಮೃದ್ಧಿಯನ್ನು ಕರುಣಿಸುವ ಗ್ರಹ ಆಗಿದ್ದಾನೆ. ಜೊತೆಗೆ ಗುರುದೇವನು ನಮ್ಮ ಆರ್ಥಿಕ ಸ್ಥಿತಿಯ ಕಾರಕ ಗ್ರಹನು ಆಗಿದ್ದಾನೆ ಹಾಗಾಗಿ ಯಾರ ಕುಂಡಲಿಯಲ್ಲಿ ಗುರುದೇವನು ಸದೃಢ ಸ್ಥಿತಿಯಲ್ಲಿ ಇರುತ್ತಾನೋ ಅಂತಹ ವ್ಯಕ್ತಿಗೆ ಗುರುದೇವನು ಆತ್ಮ ಸಂತುಷ್ಟಿ ಆಶಾವಾದಿತನ ಬುದ್ಧಿಮತ್ತೆ ಮತ್ತು ನೈತಿಕತೆಯನ್ನು ಕರುಣಿಸುತ್ತಾನೆ. ಇಂತಹ ಪ್ರಮುಖ ಗ್ರಹನಾಗಿರುವ ಗುರುದೇವನು ಅಕ್ಟೋಬರ್ ಹದಿನೆಂಟನೇ ತಾರೀಖಿನಂದು ಮಾರ್ಗಿ ಆಗಿ ಪರಿವರ್ತನೆ ಹೊಂದುತ್ತಲಿದ್ದು ನಂತರ ಮಾರ್ಗಿ ಆಗಿದ್ದು ನವೆಂಬರ್ ಇಪ್ಪತ್ತನೇ ತಾರೀಖಿನಂದು ಕುಂಭರಾಶಿಗೆ ಪರಿವರ್ತನೆಯಾಗಲಿದ್ದಾನೆ.

ಇದರಿಂದಾಗಿ ಧನುರಾಶಿಯವರಿಗೆ ಮುಂಬರುವ ಇಪ್ಪತ್ನಾಲ್ಕು ತಿಂಗಳು ಅತ್ಯಂತ ಹಿತಕರವಾಗಿ ಸಾಬೀತಾಗಲಿದೆ. ಜೊತೆಗೆ ಈ ಸಮಯ ನಿಮ್ಮ ಪಾಲಿಗೆ ಅತ್ಯಂತ ಲಾಭದಾಯಕವಾಗಿಯೂ ಸಾಬೀತಾಗಲಿದೆ ಅಲ್ಲದೆ ನಿಮಗೆ ಇದು ಅತ್ಯಂತ ಪ್ರಭಾವಶಾಲಿ ಸಮಯವಾಗಿದ್ದು ಬಹುತೇಕ ಎಲ್ಲ ರೀತಿಯ ಸುಖ ಸೌಲಭ್ಯಗಳು ನಿಮ್ಮದಾಗ ಬಹುದಾಗಿದೆ. ಗುರುದೇವನು ನಿಮ್ಮ ಪರಿವಾರದ ಧನದ ಸಂವಾದದ ಭಾವದಲ್ಲಿ ಮಾರ್ಗಿಯಾಗಿ ಗೋಚರಿಸಲಿದ್ದಾನೆ. ಹಾಗಾಗಿ ನಿಮ್ಮ ವ್ಯಕ್ತಿಗತ ಮತ್ತು ನಿಮ್ಮ ಇತರೆ ಸುತ್ತಮುತ್ತಲಿನ ಪರಿಸ್ಥಿತಿಯು ನಿಧಾನವಾಗಿ ಸುಧಾರಣೆಯಾಗುತ್ತದೆ.

ಜೊತೆಗೆ ಈ ಸಮಯದಲ್ಲಿ ನಿಮ್ಮಲ್ಲಿ ವೈಶಿಷ್ಟ್ಯವಾದ ಗುಣದ ವೃದ್ಧಿ ಉಂಟಾಗಲಿದೆ ಇದರಿಂದಾಗಿ ನೀವು ನಿಮ್ಮ ಹಿಂದಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಇಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿಯು ಸಾಕಷ್ಟು ಪರಿವರ್ತನೆಗಳು ಕಂಡುಬರಲಿದೆ ನಿಮ್ಮ ಗುಣ ಸ್ವಭಾವದಲ್ಲಿಯು ಸೌಮ್ಯತೆ ವಿಕಸಿತ ಗೊಳ್ಳಲಿದೆ. ನಿಮ್ಮ ಮಾತುಗಳಲ್ಲಿ ಸ್ಪಷ್ಟತೆ ಇರಲಿದ್ದು ಸಂವಾದದಲ್ಲಿಯೂ ಆಕರ್ಷಣೆ ಉಂಟಾಗಲಿದೆ.

ಆದಾಗ್ಯೂ ಧನುರಾಶಿಯ ವಿವಾಹಿತ ಜಾತಕದವರಿಗೆ ಅಲ್ಲಲ್ಲಿ ಕೆಲವೊಂದು ಏರಿಳಿತಗಳು ಕಂಡುಬರುವ ಸಂಭವ ಇರುವುದರಿಂದ ಆದಷ್ಟು ಎಚ್ಚರಿಕೆಯಿಂದ ಇರಬೇಕು. ಇಲ್ಲಿ ನಿಮ್ಮ ಗಮನ ಕೆಲಸಕಾರ್ಯಗಳಲ್ಲಿ ಕೇಂದ್ರೀಕೃತವಾಗಿರುತ್ತದೆ. ಹಾಗಾಗಿ ನೀವು ಇಲ್ಲಿ ಪಾರಿವಾರಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸುವ ಸಂಭವವಿದೆ. ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಈ ಸಮಯ ಅತ್ಯಂತ ಫಲಪ್ರದವಾಗಿ ಸಾಬೀತಾಗಲಿದೆ ಯಾರು ನೌಕರಿಯ ಹುಡುಕಾಟದಲ್ಲಿ ಇರುತ್ತಾರೆ ಅವರಿಗೆ ನೌಕರಿ ಪ್ರಾಪ್ತಿಯಾಗುವ ಸಂಭವವಿದೆ.

ಯಾರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ ಅವರಿಗೆ ಕಾರ್ಯಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ ಯಾವ ಅವಕಾಶಕ್ಕಾಗಿ ನೀವು ಎದುರು ನೋಡುತ್ತಿದ್ದಿರಿ ಆ ಅವಕಾಶಗಳು ನಿಮಗೆ ದಕ್ಕಲಿದೆ. ಆರ್ಥಿಕತೆಯ ಕಾರಣನಾಗಿರುವ ಗುರು ಬೃಹಸ್ಪತಿಯು ಇಲ್ಲಿ ನಿಮ್ಮ ವ್ಯಾಪಾರ ವಹಿವಾಟಿನಲ್ಲಿ ಖಂಡಿತವಾಗಿ ಸಮೃದ್ಧಿಯನ್ನು ಹೊತ್ತು ತರಲಿದ್ದಾನೆ. ನಿಮ್ಮಲ್ಲಿರುವ ಜಾಣ್ಮೆ ಮತ್ತು ವಾಣಿ ಯಲ್ಲಿರುವ ಮಧುರತೆಯು ವ್ಯಾಪಾರ ವಹಿವಾಟಿನಲ್ಲಿ ಸಮೃದ್ಧಿಗೆ ಕಾರಣವಾಗಲಿದೆ.

ಈ ಅವಧಿಯಲ್ಲಿ ನೀವು ಸಮಾಜದಲ್ಲಿಯೂ ಸಾಕಷ್ಟು ಮನ್ನಣೆಯನ್ನು ಪಡೆದುಕೊಳ್ಳಲಿದ್ದಿರಿ. ನಿಮ್ಮ ಪ್ರತಿಷ್ಠೆ ಯಲ್ಲಿಯೂ ವೃದ್ಧಿ ಉಂಟಾಗಲಿದೆ ಸಾಮಾಜಿಕ ಕಾರ್ಯಗಳಲ್ಲಿಯೂ ನೀವು ಸಾಕಷ್ಟು ಉತ್ಸಾಹದಿಂದ ಭಾಗವಹಿಸಲಿದ್ದಿರಿ. ಈ ಸಮಯದಲ್ಲಿ ನೀವು ಹೊರಡುವ ಯಾತ್ರೆಯು ಸುಖದಿಂದ ಸಂಪನ್ನಗೊಳ್ಳಲಿದೆ. ಆರೋಗ್ಯದ ದೃಷ್ಟಿಯಿಂದಲೂ ಈ ಸಮಯ ಅತ್ಯದ್ಭುತವಾಗಿ ಸಾಬೀತಾಗಲಿದೆ.

ಹಿಂದಿನಿಂದ ಯಾರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಂತಹ ರಾಶಿಯ ಜಾತಕದವರಿಗೆ ಈ ಸಮಯದಲ್ಲಿ ಉತ್ತಮ ಉಪಚಾರ ಲಭಿಸಲಿದ್ದು ದೀರ್ಘಕಾಲದ ನೋವು ಇಲ್ಲಿ ಅಂತ್ಯವಾಗಬಹುದಾಗಿದೆ. ಈ ಸಮಯದಲ್ಲಿ ನಿಮ್ಮ ಸಹೋದರ ಸಹೋದರಿಯರಿಗೂ ಸುಖದ ರೀತಿಯ ಪರಿಣಾಮ ಉಂಟಾಗಬಹುದು. ಇಲ್ಲಿ ನೀವು ಧಾರ್ಮಿಕ ಪ್ರವೃತ್ತಿಯನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲ್ಲಿದ್ದಿರಿ.

ಗುರುದೇವನ ಮಾರ್ಗಿ ಸ್ಥಿತಿಯ ಬದಲಾವಣೆಯ ಪೂರ್ಣ ಪರಿಣಾಮವು ನಿಮಗೆ ದೊರೆಯಬೇಕು ಎಂದರೆ ಕೆಲವು ಪರಿಹಾರಗಳನ್ನು ಮಾಡಿಕೊಳ್ಳ ಬಹುದು. ಅದಕ್ಕಾಗಿ ನೀವು ಪ್ರತಿನಿತ್ಯ ನಿಮ್ಮ ಹಣೆಯ ಮೇಲೆ ಕೇಸರಿ ತಿಲಕವನ್ನಿಟ್ಟುಕೊಳ್ಳಬೇಕು. ಹಾಗೆ ಪ್ರತಿ ಗುರುವಾರದಂದು ಗುರು ಸಮಾನವಾಗಿರುವವರಿಗೆ ಏನಾದರೂ ಪುಟ್ಟ ಕಾಣಿಕೆಯನ್ನು ನೀಡುವುದರೊಂದಿಗೆ ಅವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಇದರಿಂದಾಗಿ ಸಾಕಷ್ಟು ಉತ್ತಮ ಫಲಗಳು ನಿಮ್ಮ ಜೀವನದಲ್ಲಿ ಕಂಡುಬರಲು ಪ್ರಾರಂಭವಾಗಲಿದೆ.

ಒಟ್ಟಾರೆಯಾಗಿ ಗುರುದೇವನು ಮಾರ್ಗಿಯಾಗಿ ಬದಲಾವಣೆ ಹೊಂದುತ್ತಿರುವುದು ನಿಮ್ಮ ಪಾಲಿಗೆ ಸಾಕಷ್ಟು ಸುಖದ ಪ್ರಭಾವವನ್ನು ಕರುಣಿಸಲಿದೆ. ಸ್ನೇಹಿತರೆ ಇದು ಗುರುದೇವನ ವಿಶೇಷ ಪ್ರಭಾವದ ಸಂಪುರ್ಣ ಮಾಹಿತಿ. ನೀವು ಕೂಡ ಗುರುದೇವನ ವಿಶೇಷ ಫಲವನ್ನು ಪಡೆದುಕೊಳ್ಳುವುದಕ್ಕಾಗಿ ನಾವು ಮೇಲೆ ತಿಳಿಸಿರುವ ಪರಿಹಾರಗಳನ್ನು ಮಾಡಿಕೊಳ್ಳಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *