ರಾಘವೇಂದ್ರ ರಾಯರ ಮೃತ್ತಿಕೆ ಮಾಡುವ ಪವಾಡ ಏನು ಗೊತ್ತಾ? ರಾಯರ ಭಕ್ತರು ತಿಳಿದುಕೊಳ್ಳಿ

0 35

ರಾಘವೇಂದ್ರ ರಾಯರು ಕಲಿಯುಗದಲ್ಲಿ ಜನಿಸಿದ್ದರೂ ಕೂಡ ತಾವು ಬದುಕಿದ್ದಷ್ಟು ಕಾಲ ಅವರು ಮಾಡಿರುವಂತಹ ಪವಾಡಗಳ ಮೂಲಕ ಜನರ ಮನಸ್ಸಿನಲ್ಲಿ ದೇವರಾಗಿ ಇಂದು ಅದೆಷ್ಟೋ ಕೋಟ್ಯಂತರ ಜನರು ಆರಾಧಿಸುವ ಆರಾಧ್ಯ ದೈವನಾಗಿ ಮಂತ್ರಾಲಯದಲ್ಲಿ ನೆಲೆಸಿದ್ದಾರೆ ಹಾಗೂ ಅವರನ್ನು ಪೂಜಿಸುವ ಭಕ್ತರ ಮನಸ್ಸಿನಲ್ಲಿ ಕೂಡ ನೆಲೆಸಿದ್ದಾರೆ ಎಂದು ಹೇಳಬಹುದಾಗಿದೆ.

ರಾಘವೇಂದ್ರ ಸ್ವಾಮಿಗಳು ಕೆಲವೊಂದು ಭಕ್ತರ ಜೀವನದಲ್ಲಿ ಪರೀಕ್ಷೆಗಳನ್ನು ಒಡ್ಡಿ ನಂತರ ಅದರಲ್ಲಿ ಅವರು ಗೆದ್ದು ಜೀವನದಲ್ಲಿ ಗೆಲ್ಲುವಂತೆ ಆಶೀರ್ವಾದ ಮಾಡುತ್ತಾರೆ. ಇನ್ನು ರಾಘವೇಂದ್ರ ರಾಯರ ಮೂಲ ಬೃಂದಾವನದ ಮೃತ್ತಿಕೆಯನ್ನು ನೀವು ಮನೆಯಲ್ಲಿ ತಂದು ಇಟ್ಟು ಪೂಜೆ ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಫಲಿತಾಂಶಗಳು ಸಾಲು ಸಾಲಾಗಿ ಕಂಡುಬರುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೃತ್ತಿಕೆಯನ್ನು ಮನೆಯಲ್ಲಿ ತಂದು ಇಟ್ಟು ಪೂಜೆ ಮಾಡಿದರೆ ಸ್ವತಃ ರಾಘವೇಂದ್ರ ಸ್ವಾಮಿಗಳೇ ನಿಮ್ಮ ಮನೆಯಲ್ಲಿ ಬಂದು ನೆಲೆಸಿದಂತೆ ಎಂಬುದಾಗಿ ಕೂಡ ಉಲ್ಲೇಖವಿದೆ.

ಇನ್ನು ಇದರಿಂದಾಗಿ ನಿಮ್ಮ ಮನೆಯಲ್ಲಿ ಆರ್ಥಿಕ ಕೊರತೆ ಕೂಡ ಕಂಡುಬರುವುದಿಲ್ಲ ಮತ್ತು ಒಂದುವೇಳೆ ನಿಮ್ಮ ಮೇಲೆ ಯಾರಾದರೂ ಮಾಟ ಅಥವಾ ಇನ್ನಿತರ ನಕಾರಾತ್ಮಕ ಶಕ್ತಿಗಳ ವಕ್ರದೃಷ್ಟಿಯನ್ನು ಬೀರುವಂತಹ ಕ್ರಿಯೆಯನ್ನು ಮಾಡಿದ್ದಾರೆ ಅದು ಕೂಡ ನಿಮಗೆ ತಾಗುವುದಿಲ್ಲ ಎಂಬುದಾಗಿ ಹೇಳಲಾಗುತ್ತದೆ.

ಇದನ್ನು ಎಲ್ಲರೂ ಕೂಡ ಪಡೆಯಲು ಸಾಧ್ಯವಿಲ್ಲ ಮಂತ್ರಾಲಯದಲ್ಲಿ ಅಲ್ಲಿನ ಮಠದವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರೆ ಮಾತ್ರ ರಾಯರ ಮೃತ್ತಿಕೆಯನ್ನು ಪಡೆಯಲು ಸಾಧ್ಯ. ಕೇವಲ ಇಷ್ಟು ಮಾತ್ರವಲ್ಲದೆ ಇದನ್ನು ಮನೆಗೆ ತಂದ ಮೇಲೆ ಕೂಡ ನೀವು ಸಾಕಷ್ಟು ಮಡಿವಂತಿಕೆಯನ್ನು ಆಚರಿಸಬೇಕಾಗುತ್ತದೆ.

ಇದರ ಪ್ರಭಾವದಿಂದಾಗಿ ನೀವು ಒಂದು ವೇಳೆ ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಯಾವುದೇ ಆತಂಕಗಳಿಲ್ಲದೆ ಅದರಿಂದ ಹೊರಬರುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಮನೆ ಹಾಗೂ ಕುಟುಂಬ ಮತ್ತು ಜೀವನದಲ್ಲಿ ಇರುವಂತಹ ಬಹುತೇಕ ಎಲ್ಲಾ ಸಮಸ್ಯೆಗಳನ್ನು ಕೂಡ ಮನೆಯಲ್ಲಿ ರಾಘವೇಂದ್ರರ ಮೂಲ ಬೃಂದಾವನದಿಂದ ತಂದಿರುವಂತಹ ಮೃತ್ತಿಕೆಯನ್ನು ಮನೆಗೆ ತಂದು ಮಡಿವಂತಿಕೆನು ಆಚರಿಸಿ ಇಟ್ಟುಕೊಳ್ಳುವುದರಿಂದ ಪರಿಹರಿಸಿಕೊಳ್ಳಬಹುದಾಗಿದೆ ಹಾಗೂ ನಿಮ್ಮ ಜೀವನದಲ್ಲಿ ನೀವು ಸುಖ-ಶಾಂತಿ ನೆಮ್ಮದಿಯಿಂದ ಜೀವಿಸಬಹುದು.

Leave A Reply

Your email address will not be published.