ನಮ್ಮ ಆಧುನಿಕ ಜಗತ್ತಿನ, ಜನರ ಅತ್ಯಾಧುನಿಕ ಜೀವನ ಶೈಲಿಯಲ್ಲಿ ಸಕ್ಕರೆ ಕಾಯಿಲೆ ಅಂದರೆ ಡಯಾಬಿಟಿಸ್ ಸರ್ವೇಸಾಮಾನ್ಯವಾಗಿ ಬಾಧಿಸುವ ಜನರ ಜೀವನದ ಆರೋಗ್ಯದ ದಿನಚರಿಯ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವ ಒಂದು ಕಾಯಿಲೆಯಾಗಿ ಬಿಟ್ಟಿದೆ. ದೇಹದಲ್ಲಿನ ಹಾಗೂ ರಕ್ತದಲ್ಲಿನ ಅಧಿಕ ಸಕ್ಕರೆ ಅಂಶದಿಂದ ಈ ಕಾಯಿಲೆ ಮಾನವನ ದೇಹದಲ್ಲಿ ಬೇರೂರಿದೆ. ಹಾಗಾಗಿ ನೈಸರ್ಗಿಕವಾಗಿ ಸಿಗುವಂತ ಹಣ್ಣು ಅತರಕಾರಿಗಳನ್ನು ಬಳಸಿ ದೇಹದಲ್ಲಿನ ಶುಗರ್ ಲೇವೇಲ್ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಎಷ್ಟೇ ಔಷದಿ ಮಾತ್ರೆಗಳನ್ನು ಸೇವಿಸಿದರು ಕೂಡ ನಿವಾರಣೆಯಾಗದ ಮಧುಮೇಹ ಕೆಲವೊಮ್ಮೆ ಇಂತಹ ನೈಸರ್ಗಿಕ ಆಹಾರಗಳಿಂದ ನಿಯಂತ್ರಣಕ್ಕೆ ಬಂದಿರುವಂತ ಉದಾಹರಣೆಗಳು ತುಂಬಾನೇ ಇವೆ.

ಈ ಹಣ್ಣುಗಳು ಮಧುಮೇಹ ಅಷ್ಟೇ ಅಲ್ದೆ ದೇಹಕ್ಕೆ ಎನರ್ಜಿ ನೀಡುವ ಜೊತೆಗೆ ಹತ್ತಾರು ಕಾಯಿಲೆಗಳನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ, ಅಷ್ಟಕ್ಕೂ ಆ ಹಣ್ಣುಗಳು ಯಾವುವು ಅನ್ನೋದನ್ನ ತಿಳಿಯೋಣ. ಕಿವಿ ಹಣ್ಣು ಕಿತ್ತಳೆ ಹಣ್ಣು ಸ್ಟ್ರಾಬೇರಿ ಹಣ್ಣು ಬೆಣ್ಣೆ ಹಣ್ಣು (ಬಟರ್ ಫ್ರೂಟ್) ಚಕ್ಕೋತ ಹಣ್ಣು ಸೀಬೆ ಹಣ್ಣು ನೇರಳೆ ಹಣ್ಣು ಹಾಗೂ ಚೆರಿ ಹಣ್ಣು. ಈ ಹಣ್ಣುಗಳು ಮಧುಮೇಹ ನಿಯಂತ್ರಣಕ್ಕೆ ಹೆಚ್ಚು ಸಹಕಾರಿಯಾ ಅಲ್ದೆ ದೇಹಕ್ಕೆ ಪ್ರೊಟೀನ್ ವಿಟಮಿನ್ ಅಂಶವನ್ನು ವೃದ್ಧಿಸುವಂತ ಹಣ್ಣುಗಳಾಗಿವೆ, ಹಾಗಾಗಿ ಆರೋಗ್ಯದ ದೃಷ್ಟಿಯಿಂದ ವಾರದಲ್ಲಿ ಎರಡು ಮೂರು ಬಾರಿಯಾದರೂ ಇಂತಹ ಹಣ್ಣುಗಳ ಸೇವನೆ ಮಾಡುವುದು ಉತ್ತಮ.

ಈ ಹಣ್ಣುಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿನ ರಕ್ತ ಶುದ್ಧಿಯಾಗುವುದು ಹಾಗೂ ದೇಹದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬಂದು ಶುಗರ್ ಲೆವೆಲ್ ಕೂಡ ಕಡಿಮೆಯಾಗಲು ಸಹಕಾರಿಯಾಗುವುದು. ಈ ಹಣ್ಣುಗಳು ದೇಹಕ್ಕೆ ಫೈಬರ್ ಹಾಗೂ ಪ್ರೊಟೀನ್ ವಿಟಮಿನ್ ಅಂಶವನ್ನು ನೀಡುವುದರಿಂದ ಅರೋಗ್ಯ ಸದಾಕಾಲ ಉತ್ತಮ ರೀತಿಯಲ್ಲಿರಲು ಸಹಕಾರಿ.

Leave a Reply

Your email address will not be published. Required fields are marked *