ದಿನಕ್ಕೆ 3 ನೆನಸಿದ ಅಂಜೂರ ತಿಂದ್ರೆ ನೀವು ಯಾವ ಡಾಕ್ಟರ್ ಬಳಿ ಹೋಗದೆ ಇಲ್ಲ

0 70

ಡ್ರೈ ಫ್ರೂಟ್ಸ್​ಗಳು ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ನೈಸರ್ಗಿಕ ಸಿಹಿ ಅಂಶವನ್ನು ಹೊಂದಿರುವ ಇವುಗಳು ನಿಮಗೆ ಪೌಷ್ಟಿಕಾಂಶವನ್ನೂ ನೀಡುತ್ತದೆ. ಒಣದ್ರಾಕ್ಷಿ, ಖರ್ಜೂರಗಳು, ಬೆರ್ರಿಗಳನ್ನು ಚಿಕಿತ್ಸೆಗಾಗಿ ಬಳಕೆ ಮಾಡಲಾಗುತ್ತದೆ. ಹಾಗೆಯೆ ಇವುಗಳಲ್ಲಿ ಆರೋಗ್ಯ ಪ್ರಯೋಜನಕಾರಿ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣು ಎಂದರೆ ಮಲ್ಬರಿ ಕುಟುಂಬದ ಸದಸ್ಯ ಅಂಜೀರ್ ಅಥವಾ ಅಂಜೂರ. ಸಣ್ಣ ಗಂಟೆ ಅಥವಾ ಪಿಯರ್ ಆಕಾರದ ಹಣ್ಣುಗಳು ಸಾಮಾನ್ಯವಾಗಿ ವರ್ಷಪೂರ್ತಿ ಅದರ ಒಣಗಿದ ರೂಪದಲ್ಲಿ ಲಭ್ಯವಿರುತ್ತವೆ.

ತಾಜಾ ಹಣ್ಣುಗಳು ನೈಸರ್ಗಿಕವಾಗಿ ಹೆಚ್ಚು ಉಪಯೋಗವನ್ನು ಹೊಂದಿದ್ದರೂ ಸಹ ಒಣಗಿದ
ಅಂಜೂರ ನಮಗೆ ಸುಲಭವಾದ ಆರೋಗ್ಯಕರ ತಿಂಡಿ ಎಂದೆನಿಸುತ್ತದೆ. ಇದು ವಿಟಮಿನ್‌ಗಳು, ಖನಿಜಗಳು ಮತ್ತು ಆ್ಯಂಟಿ ಆಕ್ಸಿಡೆಂಟ್​ಗಳನ್ನು ಹೊಂದಿದೆ.ಇದು ಸುಲಭವಾಗಿ ಲಭ್ಯವಿರುತ್ತದೆ ಮತ್ತು ಮಿಥೈಸ್, ಹಲ್ವಾಗಳು, ಜಾಮ್ಗಳು ಮತ್ತು ಇತರ ಪದಾರ್ಥಗಳನ್ನು ತಯಾರಿಸಲು ಸಹ ಬಳಸಬಹುದು.

ಅಂಜೂರ ಮೃದುವಾದ ಹಾಗೂ ರಸಭರಿತ ಹಣ್ಣಾಗಿದೆ. ಆದರೆ ಇದು ಸುಲಭವಾಗಿ ಹಾಳಾಗುವ ಕಾರಣದಿಂದ ಇದನ್ನು ಒಣಫಲದ ರೂಪದಲ್ಲಿಯೇ ಹೆಚ್ಚಾಗಿ ಸೇವಿಸಲಾಗುತ್ತದೆ. ಹೀಗೆ ಒಣಗಿಸಿದ ಅಂಜೂರವನ್ನು ರಾತ್ರಿ ನೆನೆಸಿ ಬೆಳಿಗ್ಗೆ ಸೇವಿಸಿದರೆ ಹಲವಾರು ಪ್ರಯೋಜನಗಳು ಲಭಿಸುತ್ತವೆ. ಒಣ ಅಂಜೂರ ವ್ಯಾಪಾರಿ ಭಾಷೆಯಲ್ಲಿ ಅಂಜೀರ್ ಎಂಬುದು ಒಣಗಿಸಿದ ಅಂಜೂರವಾಗಿದೆ. ಇದು ಮಲ್ಬೆರಿ ಸಸ್ಯವರ್ಗಕ್ಕೆ ಸೇರಿದ ಸಸ್ಯವಾಗಿದ್ದು ಈ ಹಣ್ಣು ಸುಮಾರಾಗಿ ಮೋದಕದ ಆಕಾರವನ್ನು ಹೋಲುತ್ತದೆ. ಹಸಿಯಾಗಿದ್ದಾಗ ಅತಿ ಮೃದುವಾಗಿದ್ದ ಈ ಹಣ್ಣು ಒಣಗಿದ ಬಳಿಕ ಕೊಂಚ ಗಟ್ಟಿಯೇ ಇರುತ್ತದೆ ಹಾಗೂ ಒಣಗಿನ ಬೀಜಗಳು ಸಹಾ ಗರಿಮುರಿಯಾಗಿರುತ್ತದೆ. ಹೆಚ್ಚಿನವರಿಗೆ ಇಷ್ಟು ಗಟ್ಟಿಯಾಗಿರುವ ಒಣಫಲವನ್ನು ಸೇವಿಸುವುದು ಇಷ್ಟವಾಗುವುದಿಲ್ಲ.

ಈ ಒಣಫಲವನ್ನು ನೆನೆಸಿಟ್ಟಾಗ ಇದು ಮೃದುವಾಗುತ್ತದೆ ಹಾಗೂ ಹೆಚ್ಚು ರುಚಿಕರವೂ ಆಗುತ್ತದೆ. ರಾತ್ರಿ ಮಲಗುವ ಮುನ್ನ ಅರ್ಧ ಲೋಟ ನೀರಿನಲ್ಲಿ ಎರಡು ಒಣ ಅಂಜೂರಗಳನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಈ ಅಂಜೂರಗಳನ್ನು ಆ ನೀರಿನೊಂದಿಗೆ ಸೇವಿಸಿದರೆ ಹಲವಾರು ಆರೋಗ್ಯಕರ ಪ್ರಯೋಜನಗಳು ಲಭಿಸುತ್ತವೆ. ಅಂಜೂರದೊಂದಿಗೆ ಒಂದೆರಡು ಬಾದಾಮಿ ಹಾಗೂ ಅಕ್ರೋಟುಗಳನ್ನೂ ನೆನೆಸಿಟ್ಟು ತಿಂದರೆ ಇನ್ನೂ ಉತ್ತಮ. ಇಂದಿನ ಲೇಖನದಲ್ಲಿ ಈ ವಿಧಾನದಿಂದ ದೊರಕುವ ಆರೋಗ್ಯಕರ ಪ್ರಯೋಜನಗಳನ್ನು ವಿವರಿಸಲಾಗಿದೆ.

ಅಂಜೂರದಲ್ಲಿ ಸತು, ಮ್ಯಾಂಗನೀಸ್, ಮೆಗ್ನೀಶಿಯಂ, ಕಬ್ಬಿಣ ಮೊದಲಾದ ಖನಿಜಗಳು ಉತ್ತಮ ಪ್ರಮಾಣದಲ್ಲಿವೆ ಹಾಗೂ ಇವು ವ್ಯಕ್ತಿಯ ಫಲವತ್ತತೆ ಹೆಚ್ಚಿಸಲು ನೆರವಾಗುತ್ತವೆ. ವಿಶೇಷವಾಗಿ ಅಧಿಕ ಸಾಂದ್ರತೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಕರಗುವ ನಾರುಗಳು ರಸದೂತಗಳ ಅಸಮತೋಲನವನ್ನು ಸರಿಪಡಿಸುತ್ತವೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ರಜೋನಿವೃತ್ತಿಯ ಬಳಿಕ ಎದುರಾಗುವ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ. ಅಲ್ಲದೇ ಮಾಸಿಕ ದಿನಗಳ ಬಳಿಕ ಮಹಿಳೆಯರಿಗೆ ಎದುರಾಗುವ ತೊಂದರೆಗಳಿಗೂ ಅಂಜೂರ ಉತ್ತಮ ಪರಿಹಾರವಾಗಿದೆ.

ಅಂಜೂರದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಶಿಯಂ ಇದೆ. ಇದು ದೇಹದಲ್ಲಿ ಸಕ್ಕರೆಯ ಮಟ್ಟಗಳನ್ನು ನಿಯಂತ್ರಿಸಲು ನೆರವಾಗುತ್ತದೆ. ಹಲವಾರು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾದ ಅಂಶವೆಂದರೆ ಅಂಜೂರದಲ್ಲಿರುವ ಕ್ಲೋರೋಜೀನಿಕ್ ಆಮ್ಲ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ.

ವಿಶೇಷವಾಗಿ ಟೈಪ್ 2 ಮಧುಮೇಹಿಗಳು ನೆನೆಸಿಟ್ಟ ಅಂಜೂರವನ್ನು ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಅಂಜೂರವನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸುವ ಹೊರತಾಗಿ ನಿತ್ಯದ ಸಾಲಾಡ್, ಸ್ಮೂಥಿಗಳು, ಉಪಹಾರ ಅಥವಾ ಓಟ್ಸ್ ರವೆಯ ಖಾದ್ಯಗಳೊಡನೆ ಬೆರೆಸಿಯೂ ಸೇವಿಸಬಹುದು.

ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಜೀರ್ಣಗೊಂಡ ಆಹಾರ ಕರುಳುಗಳಲ್ಲಿ ಸುಲಭವಾಗಿ ಚಲಿಸುವಂತೆ ಮಾಡುತ್ತದೆ ಹಾಗೂ ಒಟ್ಟಾರೆ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಈ ಗುಣದಿಂದಾಗಿ, ಮಲಬದ್ದತೆಯ ತೊಂದರೆ ಆಗಾಗ ಕಾಣಿಸಿಕೊಳ್ಳುವ ವ್ಯಕ್ತಿಗಳಿಗೆ ಅಂಜೂರ ಅತಿ ಸೂಕ್ತವಾದ ಆಹಾರವಾಗಿದೆ.

ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ, ನಿಮ್ಮ ಆಹಾರದಲ್ಲಿ ಕೆಲವು ಅಂಜೂರಗಳನ್ನು ಸೇರಿಸಿಕೊಳ್ಳುವುದು ಉತ್ತಮ. ಇದರ ಅಧಿಕ ನಾರಿನಂಶ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೇ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವಂತೆಯೂ ಮಾಡುವ ಕಾರಣ ತೂಕ ಇಳಿಕೆಯ ಪ್ರಯತ್ನಗಳು ಶೀಘ್ರ ಫಲ ನೀಡುತ್ತವೆ. ಆದರೆ, ಇದರ ಜೊತೆಗೇ, ಇದರಲ್ಲಿ ಕ್ಯಾಲೋರಿಗಳೂ ಹೆಚ್ಚೇ ಇರುವ ಕಾರಣ ಇದರ ಸೇವನೆಯ ಪ್ರಮಾಣ ಮಿತವಾಗಿರಬೇಕು. ಇದು ಹೆಚ್ಚಾದರೆ, ತೂಕ ಇಳಿಸುವ ಬದಲು ಹೆಚ್ಚಿಸಬಹುದಾದ ಅಪಾಯವಿದೆ.

ಅಂಜೂರಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿರುವ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಲು ನೆರವಾಗುತ್ತವೆ ಹಾಗೂ ರಕ್ತದ ಒತ್ತಡವನ್ನು ಸರಿಯಾದ ಮಟ್ಟಗಳಲ್ಲಿ ಇರಿಸಲು ನೆರವಾಗುತ್ತವೆ. ತನ್ಮೂಲಕ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ನರಗಳಲ್ಲಿ ಯಾವುದೇ ತಡೆ ಎದುರಾಗದಂತೆ ಮಾಡುವ ಮೂಲಕ ಹೃದಯ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಿಸುತ್ತದೆ. ಕೆಲವು ಅಧ್ಯಯನಗಳ ಮೂಲಕ ಅಂಜೂರದ ನಿಯಮಿತ ಸೇವನೆಯಿಂದ ರಕ್ತದಲ್ಲಿ ಟ್ರೈಗ್ಲಿಸರೈಡುಗಳ ಮಟ್ಟವೂ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಈ ಮಟ್ಟ ಹೆಚ್ಚಾದಷ್ಟೂ ಹೃದಯ ಸಂಬಂಧಿ ತೊಂದರೆಗಳೂ ಹೆಚ್ಚುತ್ತವೆ.

Leave A Reply

Your email address will not be published.