Ultimate magazine theme for WordPress.

ಕ್ಯಾನ್ಸರ್ ಕಾಯಿಲೆಗೆ ಇಲ್ಲಿದೆ ನಾಟಿ ಔಷಧಿ, 100 ರಷ್ಟು ಗುಣಮುಖರಾಗೋದು ಪಕ್ಕಾ ಅಂತಾರೆ ನಾಟಿ ವೈದ್ಯ

0 158

ವಿಶ್ವದಲ್ಲಿ ಸಾವು ಉಂಟುಮಾಡುವ ಎರಡನೇ ಕಾಯಿಲೆ ಕ್ಯಾನ್ಸರ್. ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಶೇ 70ರಷ್ಟು ಮಂದಿ ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ. ಈ ದೇಶಗಳಲ್ಲಿ ಕಾನ್ಸರ್ ರೋಗಕ್ಕೆ ಚಿಕಿತ್ಸಾ ಸೌಲಭ್ಯ ಶೇ 30ರಷ್ಟು ಮಾತ್ರ ಲಭ್ಯವಿದೆ. ಆದರೆ, ಅತಿಹೆಚ್ಚಿನ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಶೇ 90ರಷ್ಟು ಚಿಕಿತ್ಸಾ ಸೌಲಭ್ಯವಿದೆ. 3ನೇ 1ರಷ್ಟು ಸಾಮಾನ್ಯ ಕ್ಯಾನ್ಸರ್‌ಗಳನ್ನು ಗುಣ ಪಡಿಸಬಹುದು.

ಜಗತ್ತಿನಲ್ಲಿ ಪ್ರತಿ ವರ್ಷ 96 ಲಕ್ಷ ಕ್ಯಾನ್ಸರ್ ರೋಗಿಗಳು ಮೃತಪಡುತ್ತಿದ್ದಾರೆ. 2030ರ ವೇಳೆಗೆ ಇದು ದ್ವಿಗುಣಗೊಳ್ಳುತ್ತದೆ ಎಂದು ಅಧ್ಯಯನ ಹೇಳಿದೆ. ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದರ ಸಾಲಿಗೆ ಕ್ಯಾನ್ಸರ್ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ. ಜಗತ್ತಿನೆಲ್ಲೆಡೆ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಶ್ರಮಿಸುತ್ತಿದೆ.

ಜೀವನ ಶೈಲಿ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಕೆಲಸದ ಒತ್ತಡ, ಅನುವಂಶೀಯ ಕಾರಣಗಳಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆಯ ಹೆಚ್ಚುತ್ತಿದೆ. ಮಹಿಳೆಯರಲ್ಲಿ ಸ್ತನ, ಗರ್ಭಕೋಶ, ಗಂಟಲಿನ ಕ್ಯಾನ್ಸರ್, ಪುರುಷರಲ್ಲಿ ಶ್ವಾಸಕೋಶ, ಅನ್ನನಾಳ, ಗಂಟಲು, ಶಿರ ಮತ್ತು ಕುತ್ತಿಗೆ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳ ಅತಿಯಾದ ಬಳಕೆ, ಮದ್ಯ ಸೇವನೆಯಿಂದಾಗಿ ಪುರುಷರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ನಗರ ಪ್ರದೇಶದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದೆ.

ಮನುಷ್ಯನ ಜೀವಕೋಶಗಳ ಉತ್ಪತ್ತಿಯನ್ನು ಆಂಕೋ ಜೀನ್‌ಗಳು ನಿಯಂತ್ರಿಸುತ್ತವೆ. ಇಂತಹ ಕೋಟ್ಯಂತರ ಜೀನ್ಸ್‌ಗಳು ಇರುತ್ತವೆ. ಒಟ್ಟಿಗೆ ಐದು ಆಂಕೋ ಜೀನ್‌ಗಳಿಗೆ ಹಾನಿಯಾದರೆ ಕ್ಯಾನ್ಸರ್ ಬರುತ್ತದೆ. ಕ್ಯಾನ್ಸರ್ ಎಂಬುದು ಕಾರಣ ಇಲ್ಲದೇ ಬರುವಂತಹ ರೋಗ. ಜೀವಕೋಶಗಳು ಉತ್ಪತ್ತಿಯಾಗುವ ಸಂದರ್ಭದಲ್ಲಿ ಇಡೀ ಜೆನೆಟಿಕ್ ಅಂಶಗಳು ಕಾಪಿ ಆಗಬೇಕು. ಒಂದು ಕೋಶದಿಂದ ಮತ್ತೊಂದು ಕೋಶಕ್ಕೆ ಕಾಪಿ ಹಾಗುವ ಸಂದರ್ಭದಲ್ಲಿ ತೊಂದರೆ ಉಂಟಾದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ತಂಬಾಕು ಉತ್ಪನ್ನಗಳ ಸೇವನೆ, ಟಾಕ್ಸಿಕ್ ಕೆಮಿಕಲ್‌ಗಳು ಹೀಗೆ… ಅನೇಕ ಅಂಶಗಳು ಜೀನ್ಸ್‌ ಕಾಪಿ ಆಗುವಾಗ ತೊಂದರೆ ಕೊಡುತ್ತವೆ. ಹೀಗಾಗಿ, ತಂಬಾಕು ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬೇಕು.

ಇಂತಹ ಮಾರಕ ಕ್ಯಾನ್ಸರ್ ರೋಗಕ್ಕೆ ಉತ್ತಮ ಔಷಧವನ್ನು ಆಯುರ್ವೇದಿಕ್ ಚಿಕಿತ್ಸಾ ವಿಧಾನದ ಮೂಲಕ ಹನುಮಂತ ಮಳಲ್ಲಿ ಇವರು ನೀಡುತ್ತಿದ್ದಾರೆ. ಅಲೋಪತಿ ಚಿಕಿತ್ಸೆಯಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ತಿಂಗಳಾನು ಗಟ್ಟಲೆ ಚಿಕಿತ್ಸೆ ಮಾಡಿದರು ಖಚಿತವಾಗಿ ಗುಣಪಡಿಸಲಾಗದ ಕ್ಯಾನ್ಸರ್​​ ಎಂಬ ಮಹಾಮಾರಿಗೆ ಕೇವಲ 4-5 ಸಾವಿರ ರೂಪಾಯಿಗಳಷ್ಟು ಅತಿ ಕಡಿಮೆ ದರದಲ್ಲಿ ನಾಟಿ ಔಷಧಿ ನೀಡುತ್ತಿದ್ದಾರೆ

ಶ್ರೀ ಹನುಮಂತ ಮಳಲ್ಲಿ. ಇವರ ಬಳಿ ಚಿಕಿತ್ಸೆ ಪಡೆಯಲು ದೇಶವಿದೇಶಗಳಿಂದಲೂ ಸಾವಿರಾರು ರೋಗಿಗಳು ಅವರ ಮನೆಯ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಇವರು ತಮ್ಮ ಸ್ವಗ್ರಾಮ ಗದಗ ಜಿಲ್ಲೆ ನರಗುಂದ ತಾಲೂಕಿನ ಕಣ್ಣೂರು ಸಮೀಪದ ವಾಸನ್ ಗ್ರಾಮದಲ್ಲಿ ನಾಟಿ ಔಷಧಿ ನೀಡುತ್ತಿದ್ದಾರೆ. ಇವರ ಬಳಿ ಕ್ಯಾನ್ಸರ್ ಔಷಧಿಗೆ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದೂ ಕಿಡ್ನಿಯಲ್ಲಿ ಕಲ್ಲು, ಮಧುಮೇಹ, ಹೃದಯಸಂಬಂಧಿ ಸಮಸ್ಯೆ, ಗ್ಯಾಂಗ್ರಿನ್, ಗರ್ಭಕೋಶದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್ ಮುಂತಾದ ಮಾರಣಾಂತಿಕ ರೋಗಗಳಿಗೆ ಇವರು ನೀಡುತ್ತಿದ್ದ ಔಷಧಿ ಪರಿಣಾಮಕಾರಿಯಾಗಿದ್ದರಿಂದ ಇವರ ವೈದ್ಯಕೀಯ ಪದ್ದತಿ ಬಹಳ ಪ್ರಸಿದ್ಧಿ ಪಡೆದಿದೆ.

ಅವರು ತಿಂಗಳಿನ 3ನೇ ಬುಧವಾರದಂದು ಬೆಳಿಗ್ಗೆ 6-30 ರಿಂದ ಸಂಜೆ 7 ರವರೆಗೆ ಕ್ಯಾನ್ಸರ್ ರೋಗಿಗಳಿಗೆ ಔಷಧವನ್ನು ನೀಡುತ್ತಾರೆ. ಸುಲಭವಾಗಿ ನಮ್ಮ ಸುತ್ತಮುತ್ತಲಿನಲ್ಲಿ ದೊರೆಯುವ, ನೈಸರ್ಗಿಕವಾಗಿ ಬೆಳೆಯುವ ಸಸ್ಯಗಳ ಬೇರುಗಳು ಮತ್ತು ತೊಗಟೆಗಳಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಅವಶ್ಯವಿರುವ ಔಷಧವನ್ನು ತಯಾರಿಸುತ್ತಿದ್ದಾರೆ.

ಹನುಮಂತ ಮಳಲ್ಲಿ ಇವರ ಬಳಿ ಕ್ಯಾನ್ಸರ್ ಔಷಧಿ ಪಡೆದು ಅನೇಕ ಜನರು ಕೇವಲ 6 ತಿಂಗಳಿನಲ್ಲಿ ಗುಣಮುಖರಾಗಿದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಫಲಕಾರಿಯಾಗದೆ ಎಷ್ಟೋ ಜನ ಇವರ ಬಳಿ ಔಷಧಿ ಪಡೆದು 100% ಗುಣಮುಖರಾಗಿದ್ದಾರೆ. ಇವರು ನೀಡುವ ಒಂದು ಕಿಟ್ ಔಷಧಿಯು 2 ತಿಂಗಳ ಅವಧಿಗೆ ಬರುತ್ತದೆ. ಇದರ ಬೆಲೆ 4ಸಾವಿರ ರೂ. ಹಾಗೂ ಕ್ಯಾನ್ಸರ್ ಔಷಧಿ ಬೇಗ ಪರಿಣಾಮ ಬೀರುವ ಸಲುವಾಗಿ ಅಗ್ನಿಹೋತ್ರ ಎಂಬ ಕಿಟ್ ನೀಡುತ್ತಾರೆ ಇದರ ಬೆಲೆ 2ಸಾವಿರ ರೂಪಾಯಿಗಳು ಜೊತೆಗೆ ತುಪ್ಪ, ಜೇನುತುಪ್ಪ, ನೋವಿನ ಎಣ್ಣೆ, ಬೆಲ್ಲ ಇನ್ನೂ ಅನೇಕ ನೈಸರ್ಗಿಕ ವಸ್ತುಗಳು ಇವರ ಬಳಿ ದೊರೆಯುತ್ತದೆ.

ಹನುಮಂತ ಮಳಲ್ಲಿ ಅವರು ಕ್ಯಾನ್ಸರ್ ಔಷಧಿ ನೀಡುವ ಸಂದರ್ಭದಲ್ಲಿ ಔಷಧಿ ತೆಗೆದುಕೊಳ್ಳುವ ವಿಧಾನ ಎಲ್ಲವನ್ನೂ ವಿಸ್ತಾರವಾಗಿ ವಿವರಿಸುತ್ತಾರೆ ಹಾಗೂ ನಾಟಿ ಔಷಧಿಯ ಜೊತೆಗೆ ಔಷಧಿಯ ವಿವರ ಕುರಿತು ಒಂದು ಕೈಪಿಡಿಯನ್ನು ನೀಡುತ್ತಾರೆ. ಈ ಮೂಲಕ ಕ್ಯಾನ್ಸರ್ ಪೀಡಿತರಿಗೆ ಔಷಧಿಯ ಸೇವನೆಯ ಆರೋಗ್ಯಕರ ಕ್ರಮ ತಿಳಿಯುತ್ತದೆ. ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನೇ ಬಳಸಿ ತಯಾರಿಸಿದ ಈ ಔಷಧಿಯು ಯಾವುದೇ ಅಡ್ಡ ಪರಿಣಾಮಗಳನ್ನೂ ಹೊಂದಿಲ್ಲ. ಈ ಔಷಧಿಯ ಸೇವನೆಯಿಂದ ಕೇವಲ 6ತಿಂಗಳಲ್ಲಿ ಸಂಪೂರ್ಣ ಕ್ಯಾನ್ಸರ್ ಇಂದ ಮುಕ್ತಿ ಪಡೆಯಬಹುದಾಗಿದೆ.

Leave A Reply

Your email address will not be published.