Ultimate magazine theme for WordPress.

ಇಷ್ಟು ದಿನ ಇಲ್ಲದೆ ಇರೋಳು ಈಗ ಯಾಕೆ? ಸೊಸೆ ಕುರಿತು DK ರವಿ ತಾಯಿಯ ಮಾತು

0 1

ನಿಷ್ಠಾವಂತ ಪೊಲೀಸ್ ಅಧಿಕಾರಿ ಡಿ ಕೆ ರವಿ ಅವರ ಸಾವಿನ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಅವರ ಸಾವಿನ ನಂತರ ಡಿ ಕೆ ರವಿ ಅವರ ಕುಟುಂಬ ಏನಾಯಿತು ಅನ್ನೋದು ಮಾತ್ರ ಯಾವ ಮೀಡಿಯಾಗಳು ಯಾರಿಗೂ ತಿಳಿಸಿಲ್ಲ. ಇತ್ತೀಚೆಗೆ ಮತ್ತೆ ಸಾಕಷ್ಟು ಬಾರಿ ನಾವು ಟಿವಿ ಮಾಧ್ಯಮಗಳ ಮೂಲಕ ಡಿ ಕೆ ರವಿ ಅವರ ಹೆಸರನ್ನು ಕೇಳುತ್ತಿದ್ದೇವೆ. ಅವರ ಪತ್ನಿ ಕುಸುಮಾ ಚುನಾವಣೆಗೆ ನಿಲ್ಲುವ ಸಲುವಾಗಿ ಮಾಧ್ಯಮಗಳಲ್ಲಿ ನಾವು ಮತ್ತೆ ಡಿ ಕೆ ರವಿ ಅವರ ಹೆಸರನ್ನು ಕೇಳುವ ಹಾಗೇ ಆಗಿದೆ. ಇನ್ನು ಡಿ ಕೆ ರವಿ ಅವರ ತಾಯಿ ಕುಸುಮಾ ಅವರಿಗೆ ಡಿ ಕೆ ರವಿ ಅವರ ಹೆಸರನ್ನು ಚುನಾವಣೆಗೆ ನಿಲ್ಲಲು ಬಳಸಿಕೊಳ್ಳದಂತೆ ಹೇಳುತ್ತಿದ್ದಾರೆ. ತನ್ನ ಮಗನ ಹೆಸರನ್ನು ಬಳಸಿಕೊಂಡರೆ ಬೆಂಕಿ ಹಚ್ಚುತ್ತೇನೆ ಎಂದು ಹೇಳುತ್ತಾ ಇದ್ದಾರೆ. ಆ ತಾಯಿ ಹಾಗೇ ಹೇಳಲು ಕಾರಣ ಏನು? ಯಾತಕ್ಕಾಗಿ ಅವರು ತಮ್ಮ ಮಗನ ಹೆಂಡತಿಯ ಮೇಲೆಯೇ ಈ ರೀತಿ ಹೇಳುತ್ತಿದ್ದಾರೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಡಿ ಕೆ ರವಿ ಅವರ ಪತ್ನಿ ಕುಸುಮಾ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಈ ಸಮಯದಲ್ಲಿ ಅವರು ರವಿ ಅವರ ಹೆಸರನ್ನು ಬಳಸಿಕೊಂಡ ಕಾರಣಕ್ಕೆ ರವಿ ಅವರ ತಾಯಿ ಸಿಟ್ಟಿಗೆದ್ದಿದ್ದಾರೆ. ಇದಕ್ಕೆ ಕಾರಣ ಏನಪ್ಪಾ ಅಂತ ನೋಡುವುದಾದರೆ, ರವಿ ಅವರ ಸಾವಿನ ಬಳಿಕ ಬಂದ ಹಣವನ್ನು ಕುಸುಮಾ ರವಿ ಅವರ ತಾಯಿಗೆ ಆಗಲೀ ಅವರ ಕುಟುಂಬಕ್ಕೆ ಆಗಲೀ ಒಂದು ಪೈಸೆಯನ್ನೂ ಸಹ ನೀಡದೆ ಅಷ್ಟೂ ಹಣವನ್ನು ತಾವೊಬ್ಬರೇ ತೆಗೆದುಕೊಂಡಿದ್ದಾರೆ. ರವಿ ಅವರ ಯಾವ ಕಾರ್ಯಕ್ಕೂ ಸಹ ಕುಸುಮಾ ಬರಲಿಲ್ಲ. ಹಣವನ್ನು ತೆಗೆದುಕೊಂಡು ಹೋಗಿ ವಿದೇಶಕ್ಕೆ ಹೋಗಿ ಬಂದಿದ್ದಾರೆ ತಮಗೆ ಒಂದು ರೂಪಾಯಿಯನ್ನು ಸಹ ತನ್ನ ಮಗನ ದುಡ್ಡಿನಲ್ಲಿ ಭಾಗ ಕೊಡಲಿಲ್ಲ ಎಂದು ರವಿ ಅವರ ತಾಯಿ ಹೇಳುತ್ತಾರೆ.

ಇನ್ನು ಡಿ ಕೆ ರವಿ ಅವರೂ ಬದುಕಿದ್ದಷ್ಟು ದಿನ ತಮ್ಮನ್ನು ಯಾವುದೇ ಕೊರತೆ ಬಾರದ ಹಾಗೇ ಚೆನ್ನಾಗಿ ನೋಡಿಕೊಂಡಿದ್ದರು. ತಮ್ಮ ಮಗನ ಸಾವಿನ ನಂತರ ಬಂದ ಹಣವನ್ನೆಲ್ಲಾ ಕುಸುಮಾ ಒಬ್ಬಳೇ ತೆಗೆದುಕೊಂಡು ವಿದೇಶಕ್ಕೆ ಹೋಗಿದ್ದಾರೆ ಹೋದ ನಂತರ ರವಿ ಅವರ ಕುಟುಂಬ ಏನಾಗಿದೆ ಎಂದು ಒಂದು ದಿನವೂ ನೋಡಲಿಲ್ಲ ವಿಚಾರಿಸಲಿಲ್ಲ. ರವಿ ಅವರ ತಾಯಿ ಕೂಡಾ ಕುಸುಮಾ ಅವರನ್ನು ತನ್ನ ಸ್ವಂತ ಮಗಳ ಹಾಗೆಯೇ ನೋಡಿಕೊಂಡಿದ್ದರಂತೆ ಹಾಗಿದ್ದರೂ ಕೂಡ ಕುಸುಮಾ ರವಿ ಅವರ ಕುಟುಂಬಕ್ಕೆ ಒಂದು ರೂಪಾಯಿಯನ್ನು ನೀಡದೆ ಎಲ್ಲವನ್ನೂ ತಾವೇ ಬಳಸಿಕೊಂಡು ಈಗ ಚುನಾವಣೆಯ ಸಂದರ್ಭದಲ್ಲಿ ಕುಸುಮಾ ಅವರು ಡಿ ಕೆ ರವಿ ಅವರ ಹೆಸರನ್ನು ಬಳಸಿಕೊಳ್ಳುತ್ತಾ ಇರುವುದು ಡಿ ಕೆ ರವಿ ಅವರ ತಾಯಿಯ ಆಕ್ರೋಶಕ್ಕೆ ಕಾರಣವಾಗಿದೆ.

ಇಷ್ಟು ದಿನ ಇಲ್ಲದೆ ಇರುವವಳು ಈಗ ಹೇಗೆ ಬಂದಳು? ಈಗ ಬಂದು ತನ್ನ ಮಗನ ಹೆಸರನ್ನು ಯಾಕೆ ಬಳಸಿಕೊಳ್ಳುತ್ತಾ ಇದ್ದಾಳೆ ಅವಳು? ಚುನಾವಣೆಗೆ ತನ್ನ ಮಗನ ಹೆಸರನ್ನು ಬಳಸಿಕೊಂಡು ಪ್ರಚಾರ ಮಾಡಿದರೆ ಬೆಂಕಿ ಹಚ್ಚಿಸುತ್ತೇನೆ ಎಂದು ಡಿ ಕೆ ರವಿ ಅವರ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗನನ್ನು ಕಷ್ಟ ಪಟ್ಟು ಓದಿಸಿದ ಈ ತಾಯಿ ಮಗನ ಸಾವಿನ ನಂತರ ಬಂದ ಹಣವನ್ನು ತಮಗೆ ಸ್ವಲ್ಪವೂ ನೀಡದೆ ಎಲ್ಲವನ್ನೂ ತಾನೇ ಬಳಸಿಕೊಂಡ ಕಾರಣಕ್ಕೆ ಹಾಗೂ ಈಗ ಚುನಾವಣೆಯಲ್ಲಿ ಡಿ ಕೆ ರವಿ ಅವರ ಹೆಸರು ಹಾಗೂ ಅವರ ಫೋಟೋವನ್ನು ಬಳಸಿಕೊಳ್ಳಬಾರದು ಅವಳಿಗೆ ಏನೂ ಅಧಿಕಾರ ಇಲ್ಲಾ ತನ್ನ ಮಗನ ಸಾವು ಆದಾಗಲೇ ಕುಸುಮಾ ಕೂಡ ತಮ್ಮ ಪಾಲಿಗೆ ಇಲ್ಲವಾಗಿದ್ದಾರೆ ಎಂದು ತಮ್ಮ ನೋವನ್ನು ಹೇಳಿಕೊಳ್ಳುತ್ತಾ ಕೋಪದಲ್ಲಿ ತಮ್ಮ ಮಗನ ಹೆಸರು ಮತ್ತು ಫೋಟೋ ಬಳಸಿಕೊಳ್ಳದಂತೇ ಕುಸುಮಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.