ಧನು ರಾಶಿಯವರಿಗೆ ಯುಗಾದಿ ತಿಂಗಳಲ್ಲಿ ಯಾಕೆ ಈ ಗೊಂದಲ

0 1,356

ದ್ವಾದಶ ರಾಶಿಗಳಲ್ಲಿ ಜನಿಸಿದವರು ಅವರವರ ರಾಶಿಗೆ ಅನುಗುಣವಾಗಿ ಗುಣ, ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೆ ಒಂದೊಂದು ರಾಶಿಯಲ್ಲಿ ಜನಿಸಿದವರು ಗ್ರಹಗಳ ಚಲನೆಯಿಂದ ಕಷ್ಟ ಸುಖವನ್ನು ಅನುಭವಿಸುತ್ತಾರೆ. ಹಾಗಾದರೆ ಧನು ರಾಶಿಯ ಏಪ್ರಿಲ್ ತಿಂಗಳಿನ ರಾಶಿ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ

ನಮ್ಮ ಜೀವನದಲ್ಲಿ ಕೆಲವು ಘಟನೆಗಳು ನಡೆಯುತ್ತವೆ ಕೆಲವು ಘಟನೆಗಳು ನಕಾರಾತ್ಮಕವಾಗಿ ಇನ್ನು ಕೆಲವು ಘಟನೆಗಳು ಸಕಾರಾತ್ಮಕವಾಗಿ ನಡೆಯುತ್ತದೆ. ಕೆಲವರು ಬೇರೆಯವರು ಊಟ ಹೇಗೆ ಮಾಡುತ್ತಾರೆ ಅನ್ನುವುದರ ಬಗ್ಗೆ ಮಾತ್ರ ಯೋಚನೆ ಮಾಡುತ್ತಾರೆ ತಮ್ಮ ಬಗ್ಗೆ ಯೋಚನೆ ಮಾಡುವುದಿಲ್ಲ, ಬೇರೆಯವರ ಬಗ್ಗೆ ಡಿಟೇಲ್ ಕಲೆಕ್ಟ್ ಮಾಡುತ್ತಾರೆ ಆದರೆ ತಮ್ಮ ಬಗ್ಗೆ ಯೋಚನೆ ಮಾಡುವುದಿಲ್ಲ. ಧನು ರಾಶಿಯವರು ಸಾಡೆ ಸಾಥ್ ಇಂದ ಹೊರಗೆ ಬಂದು ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ ಆದರೆ ಇನ್ನೊಬ್ಬರ ಬಾಳೆಯಲ್ಲಿ ಏನು ಬಡಿಸಿದ್ದಾರೆ ಅವರು ಏನು ತಿಂದರು ಏನು ಬಿಟ್ಟರು ಹೀಗೆ ಯೋಚನೆ ಮಾಡುವುದನ್ನು ಬಿಡಬೇಕು, ಊಟ ಅವರವರ ಇಷ್ಟ ಅವರು ಪಡೆದ ಅದೃಷ್ಟದ ಫಲವಾಗಿರುತ್ತದೆ, ಧನು ರಾಶಿಯವರು ತಮ್ಮ ದೇಹಕ್ಕೆ ಆರೋಗ್ಯದ ದೃಷ್ಟಿಯಿಂದ ಎಷ್ಟು ಊಟ ಮಾಡಬೇಕೋ ಅಷ್ಟು ಊಟಮಾಡಬೇಕು. ಇನ್ನೊಬ್ಬರನ್ನು ಹೋಲಿಕೆ ಮಾಡಬಾರದು ಅವರು ಅಷ್ಟು ಸಾಧನೆ ಮಾಡಿದರು, ಅವರ ಜೀವನ ಹಾಗಿದೆ ಹೀಗಿದೆ ಎಂದು ಯೋಚನೆ ಮಾಡುವುದು ತಪ್ಪಾಗುತ್ತದೆ.

ಯಾವಾಗಲೂ ನಮಗಿಂತ ಶ್ರೀಮಂತರನ್ನು ನೋಡಬಾರದು ನಮಗಿಂತ ಕಷ್ಟದಲ್ಲಿ ಇರುವವರನ್ನು ನೋಡಬೇಕು. ಬಾಡಿಗೆ ಮನೆಯಲ್ಲಿರುವವರನ್ನು ನೋಡಿ ನನಗೆ ಒಂದು ಸ್ವಂತ ಮನೆ ಇದೆ, ಅವರಿಗೆ ಕೆಲಸ ಇಲ್ಲ ನನಗೆ ಒಂದು ಕೆಲಸ ಇದೆ ಎಂದು ಸಮಾಧಾನ ಮಾಡಿಕೊಳ್ಳಬೇಕು. ಕೆಲವು ಸಲ ಅಕ್ಕ ಪಕ್ಕದ ಜನರು ಹೋಲಿಕೆ ಮಾಡುತ್ತಾರೆ ಅದಕ್ಕೆ ಧನು ರಾಶಿಯವರು ತಲೆಕೆಡಿಸಿಕೊಳ್ಳಬೇಡಿ ಆತ್ಮವಿಶ್ವಾಸದಿಂದ ಜೀವನ ಮಾಡಬೇಕು. ದುಃಖದಲ್ಲಿ ಇರುವವರಿಗೆ ಸಮಾಧಾನ ಮಾಡಬೇಕು, ಸಂತೋಷದಲ್ಲಿ ಇರುವವರೊಂದಿಗೆ ಸಂತೋಷವಾಗಿ ಇರಬೇಕು. ಬೇರೆಯವರ ಬಗ್ಗೆ ಧನು ರಾಶಿಯವರು ಮಾತನಾಡಲು ಹೋಗಬಾರದು, ಹಾಗೆಯೆ ಧನು ರಾಶಿಯವರ ಬಗ್ಗೆ ಬೇರೆಯವರು ಮಾತನಾಡಿದರೆ ತಲೆಕೆಡಿಸಿಕೊಳ್ಳದೆ ಸಕಾರಾತ್ಮಕವಾಗಿ ಯೋಚಿಸಿ ಜೀವಿಸಬೇಕು. ಕುಜ ಗ್ರಹ, ರವಿ ಗ್ರಹ, ಶುಕ್ರ ಗ್ರಹದ ಸಂಚಾರದಿಂದ ಧನು ರಾಶಿಯವರಿಗೆ ಯಶಸ್ಸು ಲಭಿಸುತ್ತದೆ ಆದರೆ ಅವರಿಗೆ ತ್ರಪ್ತಿ ಸಿಗುವುದಿಲ್ಲ, ಧೈರ್ಯ ಸಿಗುತ್ತದೆ ಕೆಲವು ಸಕಾರಾತ್ಮಕ ಬೆಳವಣಿಗೆಯಾಗುತ್ತದೆ. ಇವರಿಗೆ ಸಮಾಧಾನ ಇರುವುದಿಲ್ಲ ಆಗಾಗ ಬೇಜಾರ ಮಾಡಿಕೊಳ್ಳಲು ಕಾರಣವಿರುತ್ತದೆ ಅಥವಾ ಯಾರಿಂದಲಾದರೂ ಬೇಜಾರಾಗುತ್ತದೆ, ಧನು ರಾಶಿಯವರಿಗೆ ಸುಖ ಸ್ಥಾನದಲ್ಲಿ ರಾಹು ಇರುವುದರಿಂದ ಯಾವುದಾದರೂ ವಿಷಯದಲ್ಲಿ ಬೇಜಾರಾಗುತ್ತದೆ, ನಕಾರಾತ್ಮಕ ಯೋಚನೆ ಬರುತ್ತದೆ.

ಬೇರೆಯವರ ಬಟ್ಟೆ, ಊಟ ಹೀಗೆ ಬೇರೆಯವರ ಬಗ್ಗೆ ಯೋಚನೆ ಮಾಡಬಾರದು. ರಾಹು ಸಕಾರಾತ್ಮಕ ಯೋಚನೆಗಳನ್ನು ನಕಾರಾತ್ಮಕವಾಗಿ ಮಾಡಬಹುದು ಹೀಗಾಗಿ ಎಚ್ಚರಿಕೆ ವಹಿಸಬೇಕು. ಗುರು ಬಲದಿಂದ ಧನು ರಾಶಿಯವರ ಸಂಪತ್ತು ಹೆಚ್ಚಾಗುತ್ತದೆ, ಧನು ರಾಶಿಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಇದೆ, ಸರಿಯಾದ ಸಮಯಕ್ಕೆ ಊಟ, ನಿದ್ದೆ ಮಾಡಬೇಕು. ಸರ್ಕಾರಿ ಕೆಲಸ, ರಿಯಲ್ ಎಸ್ಟೇಟ್, ಬಿಸಿನೆಸ್, ಕೃಷಿಯಿಂದ ಬೆಳವಣಿಗೆ ಸಾಧ್ಯವಾಗುತ್ತದೆ ಅಲ್ಲದೆ ಸಾಫ್ಟ್ವೇರ್, ಬ್ಯಾಂಕಿಂಗ್, ಟೀಚಿಂಗ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ಯಾವುದೆ ಕೆಲಸದಲ್ಲಿ ಧನು ರಾಶಿಯವರಿಗೆ ಎಪ್ರಿಲ್ ತಿಂಗಳಿನಲ್ಲಿ ಯಶಸ್ಸು ಸಿಗುತ್ತದೆ. ಧನು ರಾಶಿಯವರಿಗೆ ಒಟ್ಟಾರೆಯಾಗಿ ಏಪ್ರಿಲ್ ತಿಂಗಳಿನಲ್ಲಿ ಒಳ್ಳೆಯದಾಗುತ್ತದೆ ಆದರೆ ಒಂದು ತಪ್ಪನ್ನು ಮಾಡಬಾರದು ಇದರಿಂದ ಜೀವನದಲ್ಲಿ ಒಳ್ಳೆಯದಾಗುತ್ತದೆ. ಹಾಗಾದರೆ ಈ ಮಾಹಿತಿಯನ್ನು ಧನು ರಾಶಿಯವರಿಗೆ ತಿಳಿಸಿ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.