ಶಾಸಕ ಜಮೀರ್ ಅಹ್ಮದ್ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ ದರ್ಶನ್, ಅಲ್ಲಿ ಆಗಿದ್ದೆ ಬೇರೆ

0 1

ಕನ್ನಡ ಚಿತ್ರರಂಗದ ಟಾಪ್ ನಟರಲ್ಲಿ ನಟ ದರ್ಶನ್ ಅವರು ಕೂಡ ಒಬ್ಬರು. ದರ್ಶನ್ ಅವರು ಈಗಾಗಲೆ ಜನರ ಮೆಚ್ಚುಗೆ ಗಳಿಸಿದ್ದಾರೆ. ಪ್ರಾಣಿ ಮೇಲಿನ ಅವರ ಪ್ರೀತಿಯನ್ನು ನೋಡಿದರೆ ಖುಷಿಯಾಗುತ್ತದೆ. ಅವರ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳು, ತೋಟ ನೋಡಬಹುದು. ದರ್ಶನ್ ಅವರು ಕಿರಿಯರೊಂದಿಗೆ ಪ್ರೀತಿಯಿಂದ ಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳುತ್ತಾರೆ ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ಘಟನೆಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ಬ್ರ್ಯಾಂಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿ ಬಳಗ ಸಾಕಷ್ಟಿದೆ. ಅವರಿಗೆ ಸ್ನೇಹಿತರು ಬಹಳ ಜಾಸ್ತಿ ಇದ್ದು ಸಿನಿರಂಗದಲ್ಲಿ ಮಾತ್ರವಲ್ಲದೆ ಅವರಿಗೆ ಹೊರಗಡೆ ಸಹ ಸಾಕಷ್ಟು ಗೆಳೆಯರು ಇದ್ದಾರೆ. ರಾಜಕೀಯದಲ್ಲಿ ಮತ್ತು ಬೇರೆ ಕ್ಷೇತ್ರಗಳಲ್ಲಿ ಕೂಡ ದರ್ಶನ್ ಅವರಿಗೆ ಸ್ನೇಹಿತರು ಹೆಚ್ಚಾಗಿದ್ದು ಆಗಾಗ ದರ್ಶನ್ ಅವರು ತಮ್ಮ ಸ್ನೇಹಿತರ ಬಳಗದ ಜೊತೆ ಹೊರಹೋಗುವುದನ್ನು ನಾವು ನೋಡುತ್ತೇವೆ. ಎಲ್ಲರಿಗೂ ಗೊತ್ತಿರುವ ಹಾಗೆ ನಟ ದರ್ಶನ್ ಅವರು ಹಾಗೂ ರಾಜಕಾರಣಿ ಜಮೀರ್ ಅಹ್ಮದ್ ಅವರು ಒಳ್ಳೆಯ ಸ್ನೇಹಿತರಾಗಿದ್ದು ಜಮೀರ್ ಅಹ್ಮದ್ ಅವರ ಹುಟ್ಟುಹಬ್ಬದ ಸೆಲೆಬ್ರೇಷನ್ ನಲ್ಲಿ ಸಹ ದರ್ಶನ್ ಪಾಲ್ಗೊಂಡಿದ್ದರು. ಅನೇಕ ಸಂದರ್ಭಗಳಲ್ಲಿ ದರ್ಶನ್ ಮತ್ತು ಜಮೀರ್ ಅಹ್ಮದ್ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಇತ್ತೀಚೆಗೆ ದರ್ಶನ್ ಅವರು ಜಮೀರ್ ಅಹ್ಮದ್ ಅವರು ಹಾಗೂ ಇನ್ನಿತರ ಸ್ನೇಹಿತರು ಎಲ್ಲರೂ ಜೊತೆಯಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಆ ಸಮಯದಲ್ಲಿ ನಡೆದ ಒಂದು ಘಟನೆಯ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ದರ್ಶನ್ ಅವರು ಮಾಡಿರುವ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಜಮೀರ್ ಅಹ್ಮದ್ ಅವರು ದರ್ಶನ್ ಹಾಗೂ ಇನ್ನಿತರರು ದೇವಸ್ಥಾನದಲ್ಲಿ ಇದ್ದು ಅರ್ಚಕರು ಸೇರಿದಂತೆ ಸಾಕಷ್ಟು ಜನರು ಸಹ ಅಲ್ಲಿದ್ದರು. ಅರ್ಚಕರು ದರ್ಶನ್ ಅವರಿಗೆ ಪೇಟ ಹಾಕಲು ಬರುತ್ತಾರೆ ತಕ್ಷಣವೆ ದರ್ಶನ್ ಅವರು ಅದನ್ನು ತಿರಸ್ಕರಿಸಿ ದೊಡ್ಡವರಿಗೆ ಹಾಕಿ ಎಂದು ಹೇಳಿ ಜಮೀರ್ ಅಹ್ಮದ್ ಅವರಿಗೆ ಪೇಟ ಹಾಕಿಸಿ ನಂತರ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ವಿಡಿಯೊ ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದೆ. ದರ್ಶನ್ ಅವರು ದೊಡ್ಡವರಿಗೆ ಹಾಗೂ ಸ್ನೇಹಿತರಿಗೆ ಎಷ್ಟು ಗೌರವ ಕೊಡುತ್ತಾರೆ ಎನ್ನುವುದಕ್ಕೆ ಈ ಘಟನೆ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ದರ್ಶನ್ ಅವರು ಜಾತಿ ಮತ ಬೇಧವಿಲ್ಲದೆ ಎಲ್ಲರಿಗೂ ಪ್ರಾಮುಖ್ಯತೆ ಕೊಡುತ್ತಾರೆ. ಅವರು ಮನುಷ್ಯನ ಗುಣ ಹಾಗೂ ಮಾನವೀಯತೆಗೆ ಪ್ರಾಮುಖ್ಯತೆ ಕೊಡುತ್ತಾರೆ ಎಂದು ಈ ಮೂಲಕ ತಿಳಿಯುತ್ತದೆ. ದರ್ಶನ್ ಅವರ ಅಭಿಮಾನಿಗಳು ಈ ವಿಡಿಯೊ ನೋಡಿ ಸಂತೋಷಪಟ್ಟಿದ್ದು ದರ್ಶನ್ ಅವರ ನಡತೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರು ದರ್ಶನ್ ಅವರ ಜೊತೆ ಆಂಜನೇಯನ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ ದೇವರ ಮುಂದೆ ಕೈಮುಗಿದು ಎಲ್ಲರಿಗೂ ಒಳ್ಳೇಯದು ಆಗಲಿ ಎಂದು ಬೇಡಿಕೊಂಡಿದ್ದಾರೆ, ಈ ವಿಷಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಡಿಬಾಸ್ ದರ್ಶನ್ ಅವರ ಹುಟ್ಟುಹಬ್ಬವನ್ನು ಒಂದು ದೊಡ್ಡ ಐಷಾರಾಮಿ ಹೋಟೆಲ್ ನಲ್ಲಿ ಅದ್ಭುತವಾಗಿ ಆಚರಣೆ ಮಾಡಿದ್ದಾರೆ. ಅಲ್ಲದೆ ಜಮೀರ್ ಅಹ್ಮದ್ ಖಾನ್ ಅವರು ದರ್ಶನ್ ಅವರಿಗೆ ದುಬಾರಿ ಉಡುಗೊರೆಗಳನ್ನು ಕೂಡ ಕೊಟ್ಟಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರು ದರ್ಶನ್ ಅವರ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ.

ಇದೀಗ ನಮ್ಮ ಡಿಬಾಸ್ ದರ್ಶನ್ ಅವರು ಬಹು ನಿರೀಕ್ಷೆಯ ಸಿನಿಮಾ ಕ್ರಾಂತಿ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದಲ್ಲಿ ಬಹಳ ಬ್ಯೂಸಿ ಆಗಿದ್ದಾರೆ. ಇದೆ ವರ್ಷ ಅಕ್ಟೋಬರ್ ಅಥವಾ ನವೆಂಬರ್ ನಲ್ಲಿ ಈ ಚಿತ್ರ ದೇಶದಾದ್ಯಂತ ಬಿಡುಗಡೆಯಾಗಲಿದೆ. ಕ್ರಾಂತಿ ಸಿನಿಮಾವನ್ನು ವಿ. ಹರಿಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದು ಇನ್ನು ದರ್ಶನ್ ಅವರ ಕ್ರಾಂತಿ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಅವರು ನಾಯಕಿಯಾಗಿ ಕೆಲಸ ಮಾಡುತ್ತಿದ್ದು ಅಭಿಮಾನಿಗಳಲ್ಲಿ ಈ ಚಿತ್ರದ ಮೇಲಿರುವ ನಿರೀಕ್ಷೆಗಳು ಹೆಚ್ಚಾಗುತ್ತಲೆ ಇದೆ. ಇತ್ತೀಚೆಗಷ್ಟೆ ಕ್ರಾಂತಿ ಸಿನಿಮಾದ ಮೊದಲ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ದರ್ಶನ್ ಅವರೆಂದರೆ ಅವರ ಅಭಿಮಾನಿಗಳಿಗೆ ಬಹಳ ಪ್ರೀತಿ ಬಹುಶಃ ದರ್ಶನ್ ಅವರ ಇಂಥಹ ಗುಣಗಳಿಗೆ ಅಭಿಮಾನಿಗಳಾದವರೆ ಹೆಚ್ಚು. ಈ ಮಾಹಿತಿಯನ್ನು ತಪ್ಪದೆ ದರ್ಶನ್ ಅವರ ಅಭಿಮಾನಿಗಳಿಗೆ ತಿಳಿಸಿ.

Leave A Reply

Your email address will not be published.