ರಾಜ್ಯದಲ್ಲಿ ಈಗಾಗಲೇ ಕೊರೋನಾ ಮಹಾಮಾರಿ ತನ್ನ ಆರ್ಭಟವನ್ನು ಮುಂದುವರೆಸುತ್ತಿರುವ ಸಲುವಾಗಿ ಈ ಸಾರಿ ಗಣಪತಿ ಹಬ್ಬವನ್ನು ವಿಜೃಂಭಣೆಯಿಂದ ಮಾಡಲು ಆಗುತ್ತಿಲ್ಲ ಅಷ್ಟೇ ಅಲ್ಲದೆ ಪರಿಸರ ಕಾಳಜಿ ತೋರುವ ಸಲುವಾಗಿ ಮಣ್ಣಿನ ಗಣಪವನ್ನು ಮಾಡುವುದು ಉತ್ತಮ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೇಶ್ ಮನೆಯಲ್ಲೇ ಮಣ್ಣಿನ ಗಣೇಶ ಮೂರ್ತಿಯನ್ನು ಮಾಡಿ ಸಮಸ್ತ ನಾಡಿನ ಜನತೆಗೆ ಗಣೇಶ ಚತುರ್ಥಿಯ ಶುಭಾಶಯ ತಿಳಿಸಿದ್ದಾರೆ. ತಾವು ಮಾಡಿದಂತ ಮಣ್ಣಿನ ಗಣೇಶ ಮೂರ್ತಿಯ ವಿಗ್ರಹವನ್ನು ಫೋಟೋ ತೆಗೆದು ತಮ್ಮ ಟ್ವಿಟ್ಟರ್ ಖಾತೆಯ ಮುಖಂತರ ಪೋಸ್ಟ್ ಮಾಡುವ ಮುಲಕ ಪರಿಸರ ಕಾಳಜಿವಹಿಸಿದ್ದಾರೆ.
![](https://infokhabars.com/wp-content/uploads/2020/08/vijaya-lakshmi-vinesh-1024x576.jpg)
ಇನ್ನು ನಟ ದರ್ಶನ್ ಕೂಡ ತಮ್ಮ ಮುಂದಿನ ಸಿನಿಮಾ ರಾಬರ್ಟ್ ಪೋಸ್ಟ್ ಹಾಕುವ ಮುಲಕ ಸಮಸ್ತ ನಾಡಿನ ಜನತೆಗೆ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಸಿನಿಮಾ ನಟ ನಟಿಯರು ಗಣೇಶ ವಿಗ್ರಹದ ಫೋಟೋ ಶೇರ್ ಮಾಡುವ ಮೂಲಕ ಸಮಸ್ತ ನಾಡಿನ ಶುಭಾಶಯಗಳನ್ನು ತಿಳಿಸಿದ್ದಾರೆ.
![](https://infokhabars.com/wp-content/uploads/2020/08/Vijaya-lakshmi-1024x576.jpg)