ಮರಿ ಟೈಗರ್ ಡೈಲಾಗ್ ಗೆ ದರ್ಶನ್ ಫುಲ್ ಫಿದಾ.!

0 1

ದರ್ಶನ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಖುಷಿಯ ಜೊತೆಗೆ ಅವರ ಕುತೂಹಲ ಕೂಡಾ ಹೆಚ್ಚಾಗಿದೆ. ಅದಕ್ಕೆ ಕಾರಣ ರಾಬರ್ಟ್‌ ಹೌದು, ದರ್ಶನ್‌ ನಾಯಕರಾಗಿರುವ ರಾಬರ್ಟ್‌ ಚಿತ್ರದ ಟ್ರೇಲರ್‌.
ಮಂಗಳವಾರ ಬಿಡುಗಡೆಯಾಗಿರುವ ರಾಬರ್ಟ್‌ ಚಿತ್ರದ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಪಕ್ಕಾ ಮಾಸ್‌ ಎನಿಸಿಕೊಂಡಿರುವ ಈ ಟ್ರೇಲರ್‌ನಲ್ಲಿರುವ ಡೈಲಾಗ್‌ಗಳು ಸಿನಿಮಾ ಬಗೆಗಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಸಖತ್‌ ಅದ್ಧೂರಿಯಾಗಿರುವ ಚಿತ್ರದ ಟ್ರೇಲರ್‌ನಲ್ಲಿ ಸಾಕಷ್ಟು ಪಾತ್ರಗಳ ಸಣ್ಣ ಪರಿಚಯ ಮಾಡಲಾಗಿದೆ. ದರ್ಶನ್‌ ಜೊತೆಗೆ ಜಗಪತಿ ಬಾಬು, ರವಿ ಕಿಶನ್‌, ಅವಿನಾಶ್‌, ನಾಯಕಿ ಆಶಾ ಭಟ್‌, ವಿನೋದ್‌ ಪ್ರಭಾಕರ್‌  ಹೀಗೆ ಚಿತ್ರದ ಒಂದಷ್ಟು ಪಾತ್ರಗಳನ್ನು ಪರಿಚಯಿಸಿದ್ದಾರೆ.

ಈ ಸಮಯದಲ್ಲಿ ಅಂದರೆ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿನೋದ್ ಪ್ರಭಾಕರ್ ರವರು ಹೇಳಿದ ಮಾತಿಗೆ ಡಿ ಬಾಸ್ ಅಂದರೆ ದರ್ಶನ್ ರವರು ಫಿದ ಆಗ್ಬಿಟ್ಟಿದ್ದಾರೆ. ರಾಜ್ಯ ಆಳಬೇಕೆಂದರೆ ರಾಜ್ಯ ಗೆಲ್ಲೊ ತಕತ್ತಿರಬೇಕು, ಹಾಗೆಯೇ ಯುದ್ಧ ಮಾಡೋಕೆ ಅಂತ ನಿಂತ ಮೇಲೆ ಸೈನಿಕರ ಲೆಕ್ಕ ಆಕ್ಬಾರ್ದು ಎಂದು ಹೇಳಿ ಜೊತೆಗೆ ವೇದಿಕೆ ಮೇಲೆ ತಮ್ಮ ತಂದೆಯವರನ್ನು ನೆನೆದು ಅವರ ಶೈಲಿಯಲ್ಲೇ ತಮ್ಮ ಪಾತ್ರದ ತುಣುಕನ್ನು ಹೇಳಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಇಲ್ಲಿ ನಾಯಕ ನಟರಾದವರು ಕೂಡ ಇನ್ನೊಬ್ಬ ನಟನ ನಟನೆಯನ್ನು ನೋಡಿ ಮನರಂಜನೆಯನ್ನು ಪಡೆದು ಆ ನಟನಿಗೆ ಶಹಭಾಸ್ ಗಿರಿಯನ್ನು ಕೊಟ್ಟು ನಟನೆಗೆ ಪ್ರೇರೆಪಿಸುವುದನ್ನು ಹಾಗೂ ಯಾವುದೇ ಅಸುಯೇ ಪಡದೆ ಉತ್ತೇಜಿಸುವುದನ್ನು ಕಾಣಬಹುದು.

Leave A Reply

Your email address will not be published.