ದರ್ಶನ್ ಮೊದಲ ಬಾರಿ ಕೇಕ್ ತಯಾರಿಸಿದ್ದು ಹೇಗಿದೆ ನೋಡಿ

0 0

ಕನ್ನಡ ಚಿತ್ರರಂಗದ ಡಿ. ಬಾಸ್, ಚಾಲೆಂಜಿಂಗ್ ಸ್ಟಾರ್ ಎಂದೇ ಹೆಸರಾದ ದರ್ಶನ್ ಅವರು ಕನ್ನಡಿಗರಿಗೆ ಚಿರಪರಿಚಿತ. ಅವರು ಸಿನಿಮಾದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಲ್ಲದೇ ಅಡುಗೆ ಮಾಡಿಯೂ ಪ್ರೇಕ್ಷಕರ ಮನಗೆದ್ದಿದ್ದಾರೆ. ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಸುಂಟರ ಗಾಳಿ, ಧರ್ಮ, ಅಂಬರೀಷ್, ದತ್ತ, ಯಜಮಾನ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸಿ ಚಿತ್ರರಂಗದ ಮುಖ್ಯ ಬೇಡಿಕೆಯ ನಟರಾಗಿದ್ದಾರೆ. ಕೊರೋನ ಸಮಯದಲ್ಲಿ ಬಡವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಅವರು ಏನೇ ಮಾಡಿದರೂ ವಿಶೇಷವಾಗಿರುತ್ತದೆ. ಕ್ರಿಸ್ ಮಸ್ ಹಬ್ಬಕ್ಕೂ ಮುನ್ನವೇ ಕೇಕ್ ತಯಾರಿಸಿದ್ದಾರೆ. ಅವರು ಮೈಸೂರಿನ ಸಂದೇಶ ಹೋಟೆಲ್ ನಲ್ಲಿ ಕೇಕ್ ತಯಾರಿಸಿದ್ದಾರೆ. ದರ್ಶನ್ ಜೊತೆ ಕೇಕ್ ಮೇಕಿಂಗ್ ನಲ್ಲಿ ನಿರ್ಮಾಪಕ ಸಂದೇಶ್ ಸಾಥ ನೀಡಿದ್ದಾರೆ. ದರ್ಶನ್ ಅವರು ಕೇಕ್ ತಯಾರಿಸಿದಷ್ಟೇ ಅಲ್ಲದೇ ಮುನಿರತ್ನ ಪರ ಆರ್ ಆರ್ ನಗರದ ಚುನಾವಣೆ ಪ್ರಚಾರದಲ್ಲಿಯೂ ಪಾಲ್ಗೊಂಡಿದ್ದರು.

ಅವರು ಅಡುಗೆ ಮಾಡುವುದರಲ್ಲಿ ಎತ್ತಿದ ಕೈ ಬಹಳ ಚೆನ್ನಾಗಿ ಅಡುಗೆ ಮಾಡುತ್ತಾರೆ. ಅವರ ರಾಬರ್ಟ್ ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅವರಿಗೆ ಒಬ್ಬ ಮಗನಿದ್ದು ಅವನನ್ನು ಬಹಳ ಪ್ರೀತಿಯಿಂದ ನೋಡುತ್ತಾರೆ. ಒಟ್ಟಿನಲ್ಲಿ ಬಾಣಸಿಗನಾದ ದರ್ಶನ್ ಅವರ ಅಭಿಮಾನಿಗಳಿಗೆ ಅವರು ಅಡುಗೆ ಮಾಡಿರುವುದು ಸಂತಸ ತಂದಿದೆ. ಅವರು ಸುಖವಾಗಿರಲಿ ಇನ್ನೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ತಣಿಸಲಿ ಎಂದು ಆಶಿಸೋಣ. ಈ ಮಾಹಿತಿಯನ್ನು ದರ್ಶನ್ ಅವರ ಅಭಿಮಾನಿಗಳಿಗೆ ‌ತಿಳಿಸಿ.

Leave A Reply

Your email address will not be published.