ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೆಚ್ಚು ಕೇಳಿಬರುತ್ತಿರುವ ಹೆಸರು ಡಾಲಿ ಧನಂಜಯ್ ಅವರದ್ದು. ನಾಯಕನಾಗಿ ಖಳನಾಯಕನಾಗಿ ನಟಿಸುವ ಮೂಲಕ ಅನೇಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಒಂದಾದ ಮೇಲೊಂದರಂತೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಮೂಲಕ ವೀಕ್ಷಕರಿಗೆ ತಮ್ಮ ಅದ್ಭುತ ನಟನಾ ಕೌಶಲ್ಯವನ್ನು ತಿಳಿಸಿದ್ದಾರೆ. ಜೆಸ್ಸಿ ರಾಟೆ ಟಗರು ಪಾಪ್ ಕಾರ್ನ್ ಮಂಕಿ ಟೈಗರ್ ಬಡವ ರಾಸ್ಕಲ್ ರತ್ನನ್ ಪರ್ಪಂಚ ಇನ್ನು ಅನೇಕ ಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ.

ನಾಯಕನಟನಾಗಿ ನಟಿಸುತ್ತಿದ್ದ ಅವರು ಟಗರು ಚಿತ್ರದಲ್ಲಿ ಖಳನಾಯಕನ ಪಾತ್ರವನ್ನು ಮಾಡುವ ಮೂಲಕ ಹೆಚ್ಚು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದರು ಕನ್ನಡ ಚಿತ್ರರಂಗದಲ್ಲಿ ಎತ್ತರದ ಸ್ಥಾನಕ್ಕೆ ಏರುತ್ತಿರುವ ಧನಂಜಯ್ ಅವರು ಹೇಳಿರುವ ಕೆಲವು ಮಾತುಗಳನ್ನು ನಿಮಗೆ ತಿಳಿಸುತ್ತೇವೆ.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಧನಂಜಯ್ ಅವರು ಸಿನಿಮಕ್ಕಾಗಿ ತಮ್ಮನ ಮುಡಿಪಾಗಿಟ್ಟು ಕೊಂಡಿದ್ದಾರೆ ಯಾವುದೇ ಪಾತ್ರವಿರಲಿ ಆ ಪಾತ್ರಕ್ಕೆ ಬೇಕಾದ ಸಂಪೂರ್ಣ ತಯಾರಿಯನ್ನು ನಡೆಸಿಕೊಂಡು ಆ ಪಾತ್ರಕ್ಕೆ ಜೀವವನ್ನ ತುಂಬುತ್ತಾರೆ ಆ ಮೂಲಕ ತಮ್ಮ ಅದ್ಭುತ ನಟನೆಯಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಯಾವುದೇ ಒಂದು ಸಿನಿಮಾವನ್ನು ಅವರಿಗೆ ವಹಿಸಿದರು ಆ ಸಿನಿಮಾದಲ್ಲಿ ಅವರಿಗೆ ನೀಡುವ ಪಾತ್ರಕ್ಕೆ ಬೇಕಾದ ರೀತಿಯಲ್ಲಿ ತಮ್ಮ ಸ್ಟೈಲ್ ಅನ್ನು ಬದಲಾಯಿಸಿಕೊಳ್ಳುತ್ತಾರೆ.

ಧನಂಜಯ್ ಅವರಿಗೆ ನಾನು ಒಬ್ಬ ನಟನಾಗಿ ಬೇರೆ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುವುದಿಲ್ಲ ಎಂಬ ಯಾವ ಮನೋಭಾವ ಇಲ್ಲ ಅವರಿಗೆ ಸಿನಿಮಾದ ಕಥೆ ಇಷ್ಟವಾದರೆ ಅಲ್ಲಿ ಪಾತ್ರ ಚಿಕ್ಕದಿರಲಿ ದೊಡ್ಡದಿರಲಿ ಆ ಪಾತ್ರಕ್ಕೆ ತಮ್ಮ ಅಭಿನಯದ ಮೂಲಕ ಜೀವತುಂಬುತ್ತಾರೆ.

ಅವರು ಹೇಳುವ ಪ್ರಕಾರ ಈಗಿನ ದಿನದಲ್ಲಿ ಒಂದು ಒಳ್ಳೆಯ ಸಿನಿಮಾ ಒಳ್ಳೆಯ ಕಥೆ ಒಳ್ಳೆಯ ಚಿತ್ರತಂಡ ಸಿಗುವುದು ಬಹಳ ಅಪರೂಪ ಹಾಗಾಗಿ ಅವರಿಗೆ ಒಳ್ಳೆಯ ಕಥೆಗಳು ಒಳ್ಳೆಯ ತಂಡಗಳು ಸಿಕ್ಕಾಗ ಅವಕಾಶವನ್ನು ಬಳಸಿಕೊಳ್ಳುತ್ತಾರೆ ಅದನ್ನ ಬಿಟ್ಟುಕೊಡುವುದಿಲ್ಲ ಹಾಗಾಗಿ ಸಾಲು ಸಾಲು ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ.

ಅನೇಕ ಸಿನಿಮಾಗಳಲ್ಲಿ ಪ್ರಮುಖ ನಾಯಕ ಪಾತ್ರವನ್ನು ಮಾಡಿದ್ದರು ಕೂಡ ಬೇರೆ ಬೇರೆ ಸಿನಿಮಾಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿಯೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಅದಕ್ಕೆ ಕಾರಣ ದೊಡ್ಡ ದೊಡ್ಡ ನಟರ ಜೊತೆ ಪಾತ್ರ ಮಾಡುವುದಕ್ಕೆ ಅವಕಾಶ ಸಿಕ್ಕಾಗ ಅವರ ಜೊತೆ ಬರೆಯಬಹುದು ಅವರಿಂದ ಹೊಸ ಹೊಸ ವಿಷಯಗಳನ್ನು ಕಲಿಯುವುದಕ್ಕೆ ಅವಕಾಶ ಸಿಗುತ್ತದೆ ಎಂದು ಹೇಳುತ್ತಾರೆ.

ಧನಂಜಯ್ ಅವರು ಕನ್ನಡ ಚಿತ್ರರಂಗದ ಪ್ರಮುಖ ನಾಯಕನಟರಾದ ದುನಿಯಾ ವಿಜಯ್ ಪುನೀತ್ ರಾಜಕುಮಾರ್ ಶಿವರಾಜ್ ಕುಮಾರ್ ದರ್ಶನ್ ಅವರ ಜೊತೆ ನಟಿಸಿದ್ದಾರೆ ಅಂತಹ ದೊಡ್ಡ ದೊಡ್ಡ ನಾಯಕ ನಟರನ್ನು ನೋಡುತ್ತಾ ಬೆಳೆದು ಬಂದ ಇವರಿಗೆ ಅವರ ಜೊತೆ ನಟನೆ ಮಾಡಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ ಅವರ ಜೊತೆ ಕೆಲಸ ಮಾಡಿರುವುದಕ್ಕೆ ತುಂಬಾ ಖುಷಿಯಾಗುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಅವರೆಲ್ಲರಿಗೂ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ ಅನುಭವಗಳಿವೆ ಹಾಗಾಗಿ ಅವರಿಂದ ಕಲಿತುಕೊಳ್ಳಲು ಸಾಕಷ್ಟು ವಿಷಯಗಳಿವೆ ಎಂದು ಹೇಳಿಕೊಂಡಿದ್ದಾರೆ.

ಉತ್ತಮ ನಾಯಕರ ಜೊತೆ ನಟನೆ ಮಾಡುವುದಕ್ಕೆ ತುಂಬಾ ಖುಷಿಯಾಗುತ್ತದೆ ಅಲ್ಲದೆ ತಮ್ಮ ಜೀವನದಲ್ಲಿ ಕೆಲವೊಂದು ಕನಸುಗಳಿವೆ ಅವುಗಳನ್ನು ನನಸು ಮಾಡಿಕೊಳ್ಳುವುದಕ್ಕೆ ಸಿನಿಮಾಗಳಲ್ಲಿ ನಟನೆ ಮಾಡುವುದರಿಂದ ಸಹಾಯವಾಗುತ್ತದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಅವರು ದುನಿಯಾ ವಿಜಯ್ ಅವರ ಸಲಗ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರ ಈಗಾಗಲೇ ಬಿಡುಗಡೆಯಾಗಬೇಕಾಗಿತ್ತು ಆದರೆ ಕರೋನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆಯನ್ನು ಮುಂದು ಹಾಕಲಾಗಿದೆ.

ಇದೇ ರೀತಿ ಧನಂಜಯ್ ಅವರು ನಟಿಸಿರುವ ಅನೇಕ ಚಿತ್ರಗಳು ಇನ್ನೂ ಬಿಡುಗಡೆ ಆಗಬೇಕಿದೆ. ಧನಂಜಯ ಅವರನ್ನು ಕನ್ನಡ ಚಿತ್ರರಂಗದ ಬಹುಮುಖಪ್ರತಿಭೆ ಅದ್ಭುತ ಕಲಾವಿದ ಎಂದು ಹೇಳಬಹುದು ಇವರಿಗೆ ಇನ್ನಷ್ಟು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಗಲಿ ಇವರ ಕನಸುಗಳು ನನಸಾಗಲಿ ಇವರು ಇನ್ನೂ ಎತ್ತರದ ಸ್ಥಾನಕ್ಕೆ ಹೋಗಿ ಒಬ್ಬ ಯಶಸ್ವಿ ನಟನಾಗಲಿ ಎಂದು ನಾವೆಲ್ಲರೂ ಹಾರೈಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *