Ultimate magazine theme for WordPress.

ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆತ, ನಟ ಧನ್ವಿರ್ ಬೇಸರದಿಂದ ಹೇಳಿದ್ದೇನು ನೋಡಿ

0 1

kranthi movie 2nd Song release Hospete: ಕ್ರಾಂತಿ ಸಿನಿಮಾದ ಎರಡನೇ ಹಾಡಾಗಿರುವ ಬೊಂಬೆ ಬೊಂಬೆ ಸಾಂಗ್ ರಿಲೀಸ್ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೇರಿದಂತೆ ಕ್ರಾಂತಿ ಚಿತ್ರತಂಡ ಹೊಸಪೇಟೆಗೆ ಆಗಮಿಸಿತ್ತು. ಆದರೆ ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ನಡೆದಿರುವಂತಹ ಹ’ಲ್ಲೆ ಯತ್ನ ನಿಜಕ್ಕೂ ಇಡೀ ಕನ್ನಡ ಚಿತ್ರರಂಗವೇ ತಲೆತಗ್ಗಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಹೌದು ಮಿತ್ರರೇ ವೇದಿಕೆ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ಅವರ ಮೇಲೆ ಚಪ್ಪಲಿಯನ್ನು ಎಸೆದಿದ್ದಾರೆ.

ಕೇವಲ ಇಷ್ಟು ಮಾತ್ರವಲ್ಲದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರಿನ ಮೇಲೂ ಕೂಡ ಕಲ್ಲನ್ನು ಎಸೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕನ್ನಡ ಚಿತ್ರರಂಗದ ಒಬ್ಬ ಘನವೆತ್ತ ನಾಯಕ ನಟನ ವಿರುದ್ಧ ಈ ರೀತಿ ಪಿತೂರಿ ಮಾಡಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗ ತಲೆತಗ್ಗಿಸುವಂತೆ ಮಾಡಿದೆ ಎನ್ನಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಅಭಿಮಾನಿಗಳ ನಡುವಿನ ಜಗಳ ಈಗ ನಿಜ ಸ್ವರೂಪವನ್ನು ಪಡೆದುಕೊಂಡು ಈ ರೀತಿ ನಡೆದಿರುವುದು ನಿಜಕ್ಕೂ ಕೂಡ ಶೋಚನೀಯವಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ವಿಚಾರದ ಕುರಿತಂತೆ ಇನ್ನು ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ ಆದರೆ ಇದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಹಾಗೂ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟ ಆಗಿರುವ ಧನ್ವೀರ್ ಅವರು ಈ ಕುರಿತಂತೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ಹೊಸಪೇಟೆಯ ಕಾರ್ಯಕ್ರಮದಲ್ಲಿ ಪಿತೂರಿ ನಡೆದಿದ್ದು ಇದರ ಹಿಂದಿನ ರೂವಾರಿಗಳಿಗೆ ಒಳ್ಳೆಯದಾಗಲಿ ಯಾಕೆಂದರೆ ಡಿ ಬಾಸ್ ಕೂಡ ಕೆಟ್ಟವರಿಗು ಒಳ್ಳೆಯದನ್ನೇ ಬಯಸುತ್ತಾರೆ ಹಾಗೂ ಕರ್ಮ ಎನ್ನುವುದು ಖಂಡಿತವಾಗಿ ಮತ್ತೊಮ್ಮೆ ಮರಳಿ ಬರದೇ ಇರದು ಎಂಬುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ ಧನ್ವೀರ್ ಅವರು ಹೇಳಿದ್ದಾರೆ. ಹೊಸಪೇಟೆಯಲ್ಲಿ ನಡೆದಿರುವಂತಹ ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.