Darshan Slipper Shot Hospete: ಡಿಸೆಂಬರ್ 18 ಕನ್ನಡ ಚಿತ್ರರಂಗದ ಪಾಲಿಗೆ ಒಂದು ಲೆಕ್ಕದಲ್ಲಿ ಕಪ್ಪು ಚುಕ್ಕೆ ದಿನ ಎಂದರೆ ತಪ್ಪಾಗಲಾರದು ಯಾಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾದ ಎರಡನೇ ಹಾಡಾಗಿರುವ ಬೊಂಬೆ ಹಾಡನ್ನು ಹೊಸಪೇಟೆಯಲ್ಲಿ ಡಿ ಬಾಸ್ ಸೇರಿದಂತೆ ಕ್ರಾಂತಿ ಚಿತ್ರತಂಡ ರಿಲೀಸ್ ಮಾಡಲು ಹೋಗಿತ್ತು. ಆದರೆ ಅಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಪ್ಪು ಅಭಿಮಾನಿಗಳು ಚಪ್ಪಲಿಯನ್ನು ಎಸೆದು ಅವಮಾನ ಮಾಡಿದ್ದರು.

ಇದು ಈಗ ಎಲ್ಲರ ಅಸಮಾಧಾನ ಹಾಗೂ ಬೇಸರಕ್ಕೆ ಕಾರಣವಾಗಿದ್ದು (Challenging Star Darshan) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಇದರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಕನ್ನಡ ಚಿತ್ರರಂಗದ ಘನವೆತ್ತ ನಾಯಕನಟನ ವಿರುದ್ಧ ಈ ರೀತಿಯ ಹೇಯ ಕೃತ್ಯವನ್ನು ಮಾಡಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗಕ್ಕೆ ಮಾಡಿರುವ ಅಪಚಾರವಾಗಿದೆ. ಅಭಿಮಾನಿಗಳ ನಡುವಿನ Social media fan ಸೋಶಿಯಲ್ ಮೀಡಿಯಾ ಫ್ಯಾನ್ ವಾರ್ ನಿಜರೂಪವನ್ನು ಪಡೆದು ಒಬ್ಬ ನಾಯಕ ನಟನ ಮೇಲೆ ಈ ರೀತಿಯ ಕೃತ್ಯ ಎಸಗಿರುವುದು ನಿಜಕ್ಕೂ ಕೂಡ ಅಕ್ಷಮ್ಯ ಅಪರಾಧ.

ಇನ್ನು ನಿಮಗೆಲ್ಲರಿಗೂ ಗೊತ್ತಿರಬಹುದು power star punith ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೇ ಆಗಲಿ ಅಥವಾ ಕರುನಾಡ ಚಕ್ರವರ್ತಿ ಶಿವಣ್ಣ ಅವರಾಗಲಿ ಅಣ್ಣಾವ್ರ ಕುಟುಂಬದ ಪ್ರತಿಯೊಬ್ಬರು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಿದ್ದರೂ ಕೂಡ ಇದು ಅವರ ಅಭಿಮಾನಿಗಳ ನಡುವೆ ಯಾಕೆ ತಿಳಿಯುತ್ತಿಲ್ಲ ಎಂಬುದು ನಿಜಕ್ಕೂ ಕೂಡ ತಲೆಕೆಡಿಸಿಕೊಳ್ಳಬೇಕಾಗಿರುವಂತಹ ವಿಚಾರವಾಗಿದೆ. ಈ ಘಟನೆಯ ಬಗ್ಗೆ ದೊಡ್ಮನೆಯ ಹಿರಿ ಪುತ್ರ ಆಗಿರುವ ಶಿವಣ್ಣ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ದರ್ಶನ್ ನಾವೆಲ್ಲರೂ ಚಿತ್ರರಂಗ ಒಂದೇ ಕುಟುಂಬ ಇದ್ದಂತೆ. ಚಿತ್ರರಂಗದಲ್ಲಿ ಯಾರಿಗೆ ಕೂಡ ಹೀಗೆ ಆದರೂ ಅದು ಇಡೀ ಕುಟುಂಬಕ್ಕೆ ಬೇಸರ ಉಂಟು ಮಾಡಿದಂತೆ ಎಂಬುದಾಗಿ ಶಿವಣ್ಣ ಹೇಳಿದ್ದು, ಅಭಿಮಾನವಿದ್ದರೆ ಪ್ರೀತಿಯನ್ನು ತೋರಿಸಿ ದ್ವೇಷವನ್ನಲ್ಲ ಎಂಬುದಾಗಿ ಹೇಳುವ ಮೂಲಕ ದರ್ಶನ್ ಅವರ ಬೆಂಬಲಕ್ಕೆ (shivanna) ಶಿವಣ್ಣ ನಿಂತುಕೊಂಡಿದ್ದು ಈ ರೀತಿ ಮಾಡಿರುವ ಕಿಡಿಗೇಡಿಗಳ ವಿರುದ್ಧ ತಮ್ಮ ಅಸಮಾಧಾನವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುವ ಮೂಲಕ ಶಿವಣ್ಣ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *