ಖುಷಿ ಸುದ್ದಿ ಹಂಚಿ ಕೊಂಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ

0 0

ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದಾದ್ಯಂತ ಪ್ರಸಿದ್ಧಿಯಾಗಿರುವ ನಯನಾ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಹುಬ್ಬಳ್ಳಿ ಮೂಲದ ನಯನಾ ತಂದೆ ಪೇಂಟ್ ಕಾಂಟ್ರಾಕ್ಟರ್ ಮತ್ತು ತಾಯಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾಮಿಡಿ ಕಿಲಾಡಿಗಳಿಗೂ ಮುಂಚೆ ಹಲವಾರು ಅಡಿಷನ್‌ಗಳಲ್ಲಿ ನಿನಗೆ ಗ್ಲ್ಯಾಮ್ ಲುಕ್ ಇಲ್ಲ, ವಾಯ್ಸ ಕ್ವಾಲಿಟಿ ಇಲ್ಲ,ತುಂಬಾ ಕುಳ್ಳಿ ಇದ್ದೀಯಾ ಎಂದು ಹೀಗೆ ಹಲವು ಕಾರಣ ನೀಡಿ ತಿರಸ್ಕರಿಸಲಾಗಿತ್ತು. ಹಾಗೇಯೇ ಮನೆಯಲ್ಲಿ ತಂದೆಯ ವಿರೋಧ ಕೂಡ ಇತ್ತು. ಕಾಮಿಡಿ ಕಿಲಾಡಿ ಅಡಿಷನ್‌ಗೆ ಬಂದಿದ್ದು ಸ್ನೇಹಿತರು ಮತ್ತು ತಾಯಿಯ ಒತ್ತಾಯದಿಂದ. ನಂತರ ಕಾಮಿಡಿ ಕಿಲಾಡಿಗಳು ಸೀಸನ್ ಒಂದರಲ್ಲಿ ತಮ್ಮ ನಟನೆಯನ್ನು ತೋರುವ ಮೂಲಕ ಕನ್ನಡಿಗರ ಮನ ಗೆದ್ದ ನಯನಾ ಸಾಕಷ್ಟು ಜನಪ್ರಿಯತೆಯನ್ನು ಹೊಂದಿ ಈಗ ಒಂದು ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ.

ಕನ್ನಡದ ಅನೇಕ ರಿಯಾಲಿಟಿ ಶೋ, ಕಾಮಿಡಿ ಶೋ, ಡ್ರಾಮಾ ಜೂನಿಯರ್ ನಂತ ಶೋಗಳು ಅನೇಕ ಕಲಾವಿದರನ್ನು ಬೆಳಕಿಗೆ ತಂದೆದೆ ಎನ್ನಬಹುದು. ಸರಿಗಮಪ , ಕನ್ನಡ ಕೋಗಿಲೆಯಂತಹ ಸಿಂಗಿಂಗ್ ಶೋ ಮೂಲಕ ಕನ್ನಡಕ್ಕೆ ಅನೇಕ ಗಾಯಕ ಗಾಯಕಿಯರು ದೊರೆತರೆ ಕಾಮಿಡಿ ಕಿಲಾಡಿಗಳು ಹಾಗೂ ಇನ್ನಿತರ ಶೋಗಳ ಮೂಲಕ ಬಹಳಷ್ಟು ನಟ ನಟಿಯರು ದೊರೆತರು. ಅದರಲ್ಲಿ ಕಾಮಿಡಿ ಕಿಲಾಡಿಗಳು ನಯನಾ ಕೂಡ ಒಬ್ಬರು. ಕಾಮಿಡಿ ಕಿಲಾಡಿ ಸೀಸನ್ ಒಂದರಲ್ಲಿ ಭಾಗವಹಿಸಿದ್ದ ನಯನಾ ಶಿವರಾಜ್ ಕೆ ಆರ್ ಪೇಟೆ ಅಪ್ಪಣ್ಣ ಸೇರಿದಂತೆ ಬಹಳಷ್ಟು ಕಲಾವಿದರ ಬದುಕೇ ಬದಲಾಯಿತೆನ್ನಬಹುದು. ಎಲ್ಲರೂ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಯೇ ಸಹ ಕಲಾವಿದರಾಗಿ ಕಾಣಿಸಿಕೊಂಡರು.. ಶಿವರಾಜ್ ಕೆ ಆರ್ ಪೇಟೆ ನಾಯಕನಟನಾಗಿಯೂ ಅಭಿನಯಿಸಿದ್ದು ನಾನು ಮತ್ತು ಗುಂಡ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆಯನ್ನೂ ಸಹ ಪಡೆದುಕೊಂಡಿತು..

ಇನ್ನು ನಯನಾ ಅವರ ವಿಚಾರಕ್ಕೆ ಬಂದರೆ ಕಾಮಿಡಿ ಕಿಲಾಡಿ ಶೋ ನಲ್ಲಿ ಮೊದಲ ಸಂಚಿಕೆಯಲ್ಲಿಯೇ ತನ್ನ ಅಭಿನಯದ ಮೂಲಕ‌ ಮೋಡಿ ಮಾಡಿ ಫಿನಾಲೆ ಹಂತದವರೆಗೂ ತಲುಪಿದರು. ಶೋ ಮುಗಿದ ಬಳಿಕ ಸಾಲು ಸಾರು ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿಯೇ ಅಭಿನಯಿಸಿದರು. ನಿಖಿಲ್ ಅವರ ಸೀತಾರಾಮ ಕಲ್ಯಾಣ , ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಡೆಯ ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ಮಿಂಚಿದರೆನ್ನಬಹುದು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ತುಂಬಾನೇ ಸಕ್ರಿಯರಾಗಿರುವ ನಯನಾ ತಮ್ಮ ಕೆಲಸದ ವಿಚಾರ, ಕುಟುಂಬದ ಫೋಟೋ ಅಥವಾ ಫೋಟೋ ಶೂಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಅಷ್ಟೇ ಅಲ್ಲದೆ ಇದಕ್ಕೊಂದೆರೆಡು ಸಾಲುಗಳನ್ನು ಬರೆದು ಪೋಸ್ಟ್‌ ಮಾಡುತ್ತಾರೆ. ಆದರೆ ಇತ್ತೀಚಿಗೆ ಅಪ್ಲೋಡ್ ಮಾಡಿದ ಫೋಟೋಗೆ ಇಂಗ್ಲಿಷ್‌ನಲ್ಲಿ ಸಾಲುಗಳನ್ನು ಬರೆದಿರುವುದಕ್ಕೆ ಅಭಿಮಾನಿಯೊಬ್ಬ ಕಾಮೆಂಟ್‌ ಮಾಡಿದ್ದಾರೆ. ಈ ಕಾಮೆಂಟ್‌ಗೆ ನಯನಾ ಪ್ರತಿಕ್ರಿಯಿಸಿರುವ ರೀತಿ ತುಂಬಾನೇ ವೈರಲ್ ಆಗುತ್ತಿದೆ. ಇನ್ನು ಈ ನಡುವೆ ನಯನಾ ಅವರು ಶರತ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತಾರೆಯರು ಸ್ನೇಹಿತರು ಸಂಭದಿಕರು ಎಲ್ಲರೂ ನಯನಾ ಅವರ ಮದುವೆಯಲ್ಲಿ ಭಾಗವಹಿಸಿ ಶುಭ ಹಾರೈಸಿದ್ದರು. ಇನ್ನು ಮದುವೆಯ ಸಣ್ಣ ಬ್ರೇಕ್ ನ ನಂತರ ಮತ್ತೆ ತೆರೆಯ ಮೇಲೆ ಬಂದ ನಯನಾ ಅವರು ಸಾಲು ಸಾಲು ಶೋಗಳ ನಿರೂಪಣೆ ಜೊತೆಗೆ ಸಿನಿಮಾಗಳಲ್ಲಿಯೂ ಬ್ಯುಸಿ ಆದರು. ಆದರೆ ಕೆಲ ತಿಂಗಳ ಹಿಂದಷ್ಟೇ ವ್ಯಕ್ತಿಯೊಬ್ಬರು ಕನ್ನಡದಲ್ಲಿ ಪೋಸ್ಟ್ ಮಾಡಿ ಎಂಬ ಮಾತಿಗೆ ಏಕವಚನದಲ್ಲಿ ಪ್ರತಿಕ್ರಿಯೆ ಕೊಟ್ಟು ಟ್ರೋಲ್ ಆಗಿದ್ದು ಉಂಟು.

ಇನ್ನು ಇದೀಗ ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಪ್ರಸಾರ ಆರಂಭಿಸಿದ ಕಾಮಿಡಿ ಕಿಲಾಡಿಗಳು ಹೊಸ ಸೀಸನ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ನಯನಾ ಹೊಸದೊಂದು ಸುದ್ದಿಯ ಜೊತೆಗೆ ಸಂತೋಷ ಹಂಚಿಕೊಂಡಿದ್ದಾರೆ. ಹೌದು ನಯನಾ ಅವರು ಇದೇ ಮೊದಲ ಬಾರಿಗೆ ಧಾರಾವಾಹಿಯೊಂದರಲ್ಲಿ‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಎಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ್ದಾರೆ. ಅಷ್ಟಕ್ಕೂ ಆ ಧಾರಾವಾಹಿಯಾದರೂ ಯಾವುದು? ಎಂದು ನೋಡುವುದಾದರೆ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀ ಯಡಿಯೂರು ಸಿದ್ದಂಲಿಂಗೇಶ್ವರ ಸ್ವಾಮಿ ಧಾರಾವಾಹಿಯಲ್ಲಿ ನಯನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ತಿಳಿಸಿ ಸಂತೋಷ ಹಂಚಿಕೊಂಡಿದ್ದಾರೆ. ನಟ ನಿರ್ದೇಶಕ ನವೀನ್ ಕೃಷ್ಣ ಅವರು ನಿರ್ದೇಶನ ಮಾಡುತ್ತಿರುವ ಭಕ್ತಿ ಪ್ರಧಾನ ಧಾರಾವಾಹಿ ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದ್ದು ಹರೀಶ್ ರಾಜ್ , ನಯನಾ ಸೇರಿದಂತೆ ಬಹಳಷ್ಟು ಕಲಾವಿದರು ಬಣ್ಣ ಹಚ್ಚಿದ್ದಾರೆ. ಇನ್ನು ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಉಘೇ ಉಘೇ ಮಹದೇಶ್ವರ , ರಾಧಾ ಕಲ್ಯಾಣ ಧಾರಾವಾಹಿ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನವೀನ್ ಕೃಷ್ಣ ಅವರು ಇದೀಗ ಸ್ಟಾರ್ ಸುವರ್ಣ ವಾಹಿನಿಗೆ ಬಂದಿದ್ದು ಮತ್ತೊಮ್ಮೆ ಭಕ್ತಿ ಪ್ರಧಾನವಾದ ಧಾರಾವಾಹಿ ನಿರ್ದೇಶನ‌ ಮಾಡುವ ಮೂಲಕ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಯ ಕತೆಯನ್ನು ಜನರ ಮುಂದೆ ಇಡುತ್ತಿದ್ದಾರೆ. ಅದಾಗಲೇ ಕೆಲ ದಿನಗಳ ಹಿಂದಷ್ಟೇ ಬದಲಾವಣೆಯ ಬೆಳಕು ಎಂಬ ಕಾರ್ಯಕ್ರಮ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿಯೇ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ಧಾರಾವಾಹಿಯನ್ನು ಉದ್ಘಾಟನೆ ಮಾಡಿಸಿದ್ದು ಸಿದ್ಧಗಂಗಾ ಶ್ರೀಗಳು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಗಡೆ ಅವರು ಸೇರಿದಂತೆ ನಾಡಿನ ಅನೇಕ ಸ್ವಾಮಿಜಿಗಳು ಧಾರಾವಾಹಿಗೆ ಶುಭ ಹಾರೈಸಿದ್ದು ಪ್ರತಿದಿನ ರಾತ್ರಿ ಎಂಟು ಗಂಟೆಗೆ ಧಾರಾವಾಹಿ ಪ್ರಸಾರವಾಗುತ್ತಿದೆ. ಅತ್ತ ಕನ್ನಡ ಕಿರುತೆರೆಯ ಟಾಪ್ ಒನ್ ಧಾರಾವಾಹಿಯಾಗಿರುವ ಗಟ್ಟಿಮೇಳ ಹಾಗೂ ಇತ್ತ ಕಲರ್ಸ್ ಕನ್ನಡದಲ್ಲಿಯೂ ಒಳ್ಳೆಯ ರೇಟಿಂಗ್ ಪಡೆಯುತ್ತಿರುವ ಗೀತಾ ಧಾರಾವಾಹಿಯ ನಡುವೆ ಇದೀಗ ಪೌರಾಣಿಕ ಧಾರಾವಾಹಿಯೊಂದು ಪ್ರಸಾರವಾಗುತ್ತಿದ್ದು ಜನರು ಮಹಾಭಾರತ ಧಾರಾವಾಹಿಯಂತೆ ಸ್ವೀಕರಿಸಿ ಯಾವ ಮಟ್ಟದಲ್ಲಿ ರೇಟಿಂಗ್ ಪಡೆಯಬಹುದು ಎಂದು ಕಾದು ನೋಡಬೇಕಿದೆ.

Leave A Reply

Your email address will not be published.