ಚಿರಂಜೀವಿ ಸರ್ಜಾ ಕನ್ನಡ ಚಿತ್ರರಂಗದಲ್ಲಿ ಮರೆಯಲಾರದ ಹೆಸರು ಇತ್ತೀಚಿಗೆ ಅವರ ಮಗನ ನಾಮಕರಣ ನಡೆಯಿತು ಆ ಕುರಿತು ಅನೇಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು ಆ ಕುರಿತು ಕೆಲವೊಂದು ಸಂದರ್ಶನಗಳಲ್ಲಿ ಮೇಘನಾ ರಾಜ್ ಅವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವುದರ ಜೊತೆಗೆ ಚಿರಂಜೀವಿ ಸರ್ಜಾ ಅವರ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಮೇಘನಾರಾಜ್ ಅವರು ಚಿರಂಜೀವಿ ಅವರ ಬಗ್ಗೆ ಏನು ಹೇಳಿದ್ದಾರೆ ಚಿರಂಜೀವಿ ಅವರು ಇಲ್ಲದೆ ಅವರ ಮನೆಯಲ್ಲಿ ಹಬ್ಬಗಳನ್ನು ಹೇಗೆ ಆಚರಿಸುತ್ತಿದ್ದಾರೆ ಎಂಬುದರ ಬಗ್ಗೆ ಮತ್ತು ಚಿರಂಜೀವಿ ಅವರು ಹೇಗೆ ಜೀವನವನ್ನು ಖುಷಿಯಿಂದ ಅನುಭವಿಸುತ್ತಿದ್ದರು ಎಂಬುದರ ಕೆಲವೊಂದು ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಚಿರಂಜೀವಿ ಸರ್ಜಾ ಅವರು ಕುಟುಂಬದವರೊಂದಿಗೆ ತುಂಬಾ ಪ್ರೀತಿಯಿಂದ ಸಲುಗೆಯಿಂದ ಯಾವಾಗಲೂ ನಗುನಗುತ್ತಾ ಇದ್ದವರು ತಾವು ಕುಟುಂಬದ ಸದಸ್ಯರೊಂದಿಗೆ ಆಟಗಳನ್ನು ಆಡುತ್ತಾ ತುಂಬಾ ಖುಷಿಯಿಂದ ಕಳೆದ ಕ್ಷಣಗಳು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಎಲ್ಲರನ್ನು ನಗಿಸುವ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಅಂತಹ ಚಿರಂಜೀವಿ ಅವರು ಇಲ್ಲದೆ ಅವರ ಮನೆಗಳಲ್ಲಿ ಹಬ್ಬ ಸಂಭ್ರಮಗಳು ಯಾವ ರೀತಿಯಲ್ಲಿ ನಡೆಯುತ್ತವೆ ಎಂಬುದನ್ನು ಮೇಘನರಾಜ್ ಅವರು ಹೇಳಿಕೊಂಡಿದ್ದಾರೆ.

ಅವರು ಹೇಳುವ ಪ್ರಕಾರ ಚಿರಂಜೀವಿ ಮನೆಯವರ ಜೊತೆ ತುಂಬಾ ಖುಷಿಯಿಂದ ಇರುತ್ತಿದ್ದರು ಎಲ್ಲಾ ಹಬ್ಬಗಳನ್ನು ಆಚರಣೆಗಳನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಿದ್ದರು ಅವರು ಕಾಲವಾದ ಒಂದು ವರ್ಷದವರೆಗೆ ಅವರ ಮನೆಯಲ್ಲಿ ಯಾವುದೇ ರೀತಿಯ ಸಂಭ್ರಮ ಆಚರಣೆಗಳನ್ನು ಮಾಡಿರಲಿಲ್ಲ ಆದರೆ ಈಗ ಚಿರಂಜೀವಿ ಅವರ ಮಗ ರಾಯನ್ ಗಾಗಿ ಮನೆಯಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಇನ್ನು ಮುಂದೆ ತಮ್ಮ ಮನೆಯಲ್ಲಿ ಏನೇ ಮಾಡಿದರೂ ಅದು ರಾಯನ್ ಗಾಗಿ ಮಾತ್ರ ಎಂದು ಮೇಘನಾ ರಾಜ್ ಅವರು ಹೇಳಿದ್ದಾರೆ.

ಚಿರಂಜೀವಿ ಅವರು ಯಾವುದೇ ಸಣ್ಣ ವಿಷಯವನ್ನಾದರೂ ತುಂಬಾ ಸಂಭ್ರಮಿಸಿ ಖುಷಿ ಪಡುವಂತಹ ವ್ಯಕ್ತಿಯಾಗಿದ್ದರು ಅಂದರೆ ಯಾವುದೇ ಒಂದು ಚಿತ್ರವನ್ನು ಒಪ್ಪಿಕೊಂಡರು ಅದಕ್ಕೊಂದು ಸಂಭ್ರಮಾಚರಣೆಯನ್ನು ಮಾಡುತ್ತಿದ್ದರು ಯಾರಾದರೂ ಕಥೆ ಹೇಳಲು ಮನೆಗೆ ಬರುತ್ತಿದ್ದಾರೆ ಎಂದರೆ ಅದನ್ನು ಒಂದು ಆಚರಿಸುತ್ತಿದ್ದರು ಹೊಸ ಬಟ್ಟೆಯನ್ನ ತೆಗೆದುಕೊಂಡರು ಅದಕ್ಕೆ ಸಲಬ್ರೇಷನ್ ಮಾಡುವಂತಹ ವ್ಯಕ್ತಿ ಚಿರಂಜೀವಿ ಆಗಿದ್ದರು ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಅನುಭವಿಸಿ ಖುಷಿಯನ್ನು ಪಡುತ್ತಿದ್ದರು. ಚಿರಂಜೀವಿ ಅವರು ಜೀವನದಲ್ಲಿ ಅತ್ತಿರುವುದು ತುಂಬಾ ಕಮ್ಮಿ ಅವರು ಅತ್ತಿರುವುದನ್ನು ಯಾರು ನೋಡಿಲ್ಲ ಯಾವಾಗಲೂ ಖುಷಿ ಖುಷಿಯಿಂದ ಜೀವನವನ್ನು ಅನುಭವಿಸುತ್ತಿದ್ದರು ಯಾರಿಗೂ ನೋವುಂಟು ಮಾಡದೆ ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದರು.

ಇನ್ನು ರಾಯನ್ ಗೆ ಟಿವಿಯಲ್ಲಿ ಯೂಟ್ಯೂಬ್ನಲ್ಲಿ ಚಿರುವಿನ ಹಾಡುಗಳನ್ನು ಮೇಘನಾ ರಾಜ್ ತೋರಿಸುತ್ತಾರೆ ತಂದೆಯ ಸಿನಿಮಾಗಳ ಹಾಡನ್ನು ನೋಡಿ ಖುಷಿ ಪಡುತ್ತಾನೆ ಅವನು ಚಿರುವಿನ ವಾಟ್ ಎ ಬ್ಯೂಟಿಫುಲ್ ಹುಡುಗಿ ಹಾಡು ತುಂಬಾ ಇಷ್ಟಪಟ್ಟು ನೋಡುತ್ತಾನಂತೆ. ಚಿರು ಇಲ್ಲದ ಜೀವನವನ್ನು ಮೇಘನಾ ರಾಜ್ ಅವರು ತುಂಬಾ ಕಷ್ಟಪಟ್ಟು ಸಾಗಿಸುತ್ತಿದ್ದಾರೆ. ದೇವರು ತನಗೆ ಏಕೆ ಹೀಗೆ ಮಾಡಿದ ತನಗೆ ಯಾವ ತಪ್ಪಿಗಾಗಿ ಶಿಕ್ಷೆಯನ್ನು ನೀಡಿದ ಎಂದು ಕೆಲವೊಮ್ಮೆ ಚಿಂತಿಸುತ್ತಾರೆ. ಕೆಲವೊಮ್ಮೆ ಚಿರು ಮಗುವಿನ ಮುಖವನ್ನಾದರೂ ನೋಡಬಹುದಿತ್ತು ಎಂದು ಅವರಿಗೆ ಅನಿಸುತ್ತದೆ ಅಂತೆ. ಈಗ ಮೇಘನಾ ರಾಜ್ ಅವರಿಗೆ ಚೀರುವಿನ ಕೆಲವೊಂದು ಆಸೆಗಳನ್ನು ಈಡೇರಿಸಬೇಕು ತಮ್ಮ ಜೀವನದ ಗುರಿಗಳನ್ನು ತಲುಪಬೇಕು ಇದರ ಜೊತೆಗೆ ಮಗನ ಜವಾಬ್ದಾರಿಯನ್ನು ವಿಚಾರದಲ್ಲಿ ಇಟ್ಟುಕೊಳ್ಳಬೇಕು.

ಮೇಘನರಾಜ ಆಗಲಿ ಚಿರಂಜೀವಿ ಸರ್ಜಾ ಆಗಲಿ ಇಬ್ಬರಿಗೂ ಇದ್ದ ಆಸೆ ತಮ್ಮ ಮಗುವಿಗೆ ಉತ್ತಮವಾದ ಶಿಕ್ಷಣವನ್ನು ಕೊಡಬೇಕು ಎನ್ನುವುದು ಮತ್ತು ತಮ್ಮ ಮಗು ಸರಳವಾಗಿ ಬೆಳೆಯಬೇಕು ಎಂಬುದು. ಆದರೆ ಮೇಘನಾ ರಾಜ್ ಅವರಿಗೆ ರಾಯನ್ ಬಗ್ಗೆ ಇರುವ ಒಂದೇ ಹೆದರಿಕೆ ಎಂದರೆ ಅವನಿಗೆ ಇನ್ನು ಕೇವಲ ಹತ್ತು ತಿಂಗಳು ಆದರೆ ಎಲ್ಲರಿಗೂ ಅವನ ಪರಿಚಯವಿದೆ ಎಲ್ಲರೂ ಅವನನ್ನ ಗುರುತಿಸುತ್ತಾರೆ ಅವನಿನ್ನು ಚಿಕ್ಕವನಿರುವಾಗಲೇ ಎಲ್ಲರೂ ಅವನನ್ನ ಗುರುತಿಸುತ್ತಾರೆ ಅವನ ದೊಡ್ಡವನಾಗುತ್ತಾ ಅವನ ತಲೆಯಲ್ಲಿ ಅದು ಕುಳಿತುಕೊಳ್ಳಬಹುದು. ಚಿರುವಾಗಲಿ ಮೇಘನರಾಜ ಆಗಲಿ ಸರಳವಾದ ಜೀವನದಿಂದ ಮುಂದೆ ಬಂದವರು ಅದೇ ರೀತಿಯಲ್ಲಿ ರಾಯನ್ ಬೆಳೆಯಬೇಕು ಅವನು ಜೀವನದಲ್ಲಿ ಎಲ್ಲಾ ವಿಷಯಗಳನ್ನು ಹಂತ ಹಂತವಾಗಿ ಕಲಿಯಬೇಕು ಎಂಬುದು ಮೇಘನಾರಾಜ್ ಅವರ ಅಭಿಪ್ರಾಯ.

ಸದ್ಯದ ಪರಿಸ್ಥಿತಿಯಲ್ಲಿ ಜನರು ಮಾತನಾಡಿಕೊಳ್ಳುತ್ತಿರುವುದು ಮೇಘನರಾಜ ಅವರು ತಂದೆಯ ಮನೆಯಲ್ಲೇ ಇರುತ್ತಾರೆ ಚಿರು ಅವರ ಮನೆಗೆ ಹೋಗುವುದಿಲ್ಲ ಅಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಎಂಬುದು. ಅದರ ಕುರಿತು ಮೇಘನಾರಾಜ್ ಏನು ಹೇಳುತ್ತಾರೆಂದರೆ, ಯಾರ ಮನೆಯಲ್ಲಿ ಇರಬೇಕು ಎಂಬುದರ ಬಗ್ಗೆ ಮೇಘನರಾಜ ಅವರು ಇನ್ನೂ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿಲ್ಲ ಅಲ್ಲದೆ ಸದ್ಯ ಅವರ ಬಾಣಂತನ ಇನ್ನೂ ತಾಯಿಯ ಮನೆಯಲ್ಲಿ ನಡೆಯುತ್ತಿದೆ ಎರಡು ಕುಟುಂಬದವರು ಮೇಘನಾ ಇಲ್ಲಿರಬೇಕು ಅಲ್ಲಿರಬೇಕು ಎಂದು ಯಾವುದೇ ರೀತಿಯ ಹೇರಿಕೆಯನ್ನು ಅವರ ಮೇಲೆ ಹಾಕುತ್ತಿಲ್ಲ ಅದು ಮೇಘನಾರಾಜ್ ಅವರೇ ಆಯ್ಕೆ ಮಾಡಿಕೊಳ್ಳಬೇಕು.

ಆದರೆ ಆ ಬಗ್ಗೆ ಇನ್ನೂ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿಲ್ಲ ಅವರು ಹೇಳುವ ಪ್ರಕಾರ ಎರಡು ಕುಟುಂಬದವರು ಚೆನ್ನಾಗಿ ಹೊಂದಿಕೊಂಡಿದ್ದೇವೆ ಎರಡು ಕುಟುಂಬಗಳು ಚೆನ್ನಾಗಿರುವುದನ್ನು ನೋಡುವುದಕ್ಕೆ ಆಗದೆ ಮೂರನೇ ವ್ಯಕ್ತಿಗಳು ಅವರ ಮಧ್ಯೆ ಹುಳಿ ಹಿಂಡಲು ನೋಡುತ್ತಿದ್ದಾರೆ ಆದರೆ ಅದು ಸಾಧ್ಯವಿಲ್ಲ ನಾನು ಚಿರು ಕುಟುಂಬದ ಸದಸ್ಯರೊಡನೆ ಚೆನ್ನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಚಿರು ಇಲ್ಲದೆ ಜೀವನ ನಡೆಸುವುದು ಮೇಘನಾ ಅವರಿಗೆ ಕಷ್ಟವಾದರೂ ರಾಯನ್ ಮುಖವನ್ನು ನೋಡಿ ಖುಷಿಪಡುತ್ತಾರೆ ಚಿರು ತನ್ನ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಹಲವಾರು ಆಸೆಗಳನ್ನು ಇಟ್ಟುಕೊಂಡಿದ್ದರು ಅದನ್ನು ನಾನು ಈಡೇರಿಸುತ್ತೇನೆ ಇಂದು ಮೇಘನಾ ಅವರು ಹೇಳಿಕೊಳ್ಳುತ್ತಾರೆ . ಚಿರು ಇಲ್ಲದ ಜೀವನ ನಡೆಸುವುದು ಮೇಘನಾ ಅವರಿಗೆ ಕಷ್ಟ ಆದರೆ ತಮ್ಮ ಮಗುವಿನ ಮುಖವನ್ನು ನೋಡಿ ಖುಷಿ ಪಡುತ್ತಿದ್ದಾರೆ ಅವನನ್ನು ಉತ್ತಮ ರೀತಿಯಲ್ಲಿ ಬೆಳೆಸಬೇಕು ಎಂಬ ಆಸೆಯನ್ನು ಹೊಂದಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *