Ultimate magazine theme for WordPress.

ಚಂದನ್ ಹಾಗೂ ಕವಿತಾ ಗೌಡ ಮದುವೆ ಫಿಕ್ಸ್

0 1

ಈಗ ಸ್ವಲ್ಪ ತಿಂಗಳುಗಳ ಹಿಂದೆ ಕಲರ್ಸ್ ಕನ್ನಡ ಎಂಬ ಚಾನಲ್ ನಲ್ಲಿ ಲಕ್ಷ್ಮೀ ಬಾರಮ್ಮ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಇದನ್ನು ಸೋಮವಾದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರ ಮಾಡಲಾಗುತ್ತಿತ್ತು. ಇದರ ಮೊದಲ ಹೀರೊ ಚಂದನ್ ಅವರು ಆಗಿದ್ದರು. ಆಗ ಪ್ರತಿಯೊಂದು ಹುಡುಗಿಯರ ನೆಚ್ಚಿನ ನಟ ಇವರು ಆಗಿದ್ದರು. ಆದರೆ ನಂತರದಲ್ಲಿ ಇವರು ಇದನ್ನು ಬಿಟ್ಟು ಹೋದರು. ಹಾಗೆಯೇ ಅದರಲ್ಲಿ ನಾಯಕಿಯಾಗಿ ಕವಿತಾ ಅವರು ಲಕ್ಷ್ಮೀ ಪಾತ್ರವನ್ನು ವಹಿಸಿದ್ದರು. ಆದ್ದರಿಂದ ನಾವು ಇಲ್ಲಿ ಅವರಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಚಂದನ್ ಆರಂಭದಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದರು. ನಂತರದಲ್ಲಿ ಪ್ರೇಮ ಬರಹ ಎಂಬ ಸಿನೆಮಾದಲ್ಲಿ ನಟನೆ ಮಾಡಿದರು. ಇದರಲ್ಲಿ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅವರ ಜೊತೆ ನಟಿಸಿದ್ದಾರೆ. ಆಮೇಲೆ ಈ ಸೀರಿಯಲ್‌ನಿಂದ ಅವರು ಹೊರಬಂದರು. ನಟಿ ಕವಿತಾ ಗೌಡ ಇದರಲ್ಲಿ ಲಕ್ಷ್ಮೀ ಪಾತ್ರದಲ್ಲಿ ಕೆಲ ವರ್ಷಗಳ ಕಾಲ ಕಾಣಿಸಿಕೊಂಡು ಆಮೇಲೆ ಅವರು ಕೂಡ ಈ ಧಾರಾವಾಹಿಯನ್ನು ತ್ಯಜಿಸಿದರು. ಹೀಗಾಗಿ ಇವರಿಬ್ಬರು ಒಂದೇ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದರು.

ಇಂದು ಕೂಡ ಅದೇ ಆತ್ಮೀಯತೆ ಮತ್ತು ಸ್ನೇಹ ಉಳಿದುಕೊಂಡಿದೆ. ಕೆಲ ದಿನಗಳ ಹಿಂದೆ ಕವಿತಾ ಗೌಡ ಹುಟ್ಟುಹಬ್ಬವಿದ್ದಾಗ ಚಂದನ್ ಕುಮಾರ್ ಅವರು ಮಧ್ಯರಾತ್ರಿ ಕವಿತಾ ಮನೆಗೆ ಭೇಟಿ ಕೊಟ್ಟು ಸರ್ಪ್ರೈಸ್ ನೀಡಿದ್ದರು. ಈ ಸರ್ಪ್ರೈಸ್ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕವಿತಾ ಗೌಡಗೆ ನಟ ದಿಲೀಪ್ ಶೆಟ್ಟಿ ಕೂಡ ಆತ್ಮೀಯರು. ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ಕವಿತಾ ಮತ್ತು ದಿಲೀಪ್ ಒಟ್ಟಾಗಿ ನಟಿಸಿದ್ದರು.

ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯವಾಗಿ ವರ್ಷಗಳು ಕಳೆಯುತ್ತ ಬಂತು. ಆದರೆ ಈ ಸೀರಿಯಲ್‌ನಲ್ಲಿ ನಟಿಸಿದವರು ಇಂದು ಕೂಡ ಸ್ನೇಹಿತರಾಗಿ ತಮ್ಮ ಆತ್ಮೀಯತೆಯನ್ನು ಉಳಿಸಿಕೊಂಡಿದ್ದಾರೆ. ತಿಂಗಳಿನಲ್ಲಿ ಎರಡು ಬಾರಿ ಈ ಸೀರಿಯಲ್ ಕಲಾವಿದರು ಟ್ರಿಪ್ ಹೋಗಿ ಬಂದಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಬಹಳ ಇಷ್ಟಪಟ್ಟಿದ್ದಾರೆ. ಈಗ ನಟ ಚಂದನ್ ಕುಮಾರ್ ಅವರಿಗೆ ನಟಿ ಕವಿತಾ ಗೌಡ ಅವರ ಜೊತೆ ಮದುವೆ ದಿನಾಂಕ ಫಿಕ್ಸ್ ಆಗಿದೆ. ಇಂದು ಅವರ ಮದುವೆ ಇದೆ. ಆದ್ದರಿಂದ ಇವರು ನೂರು ಕಾಲ ಸುಖವಾಗಿ ಬಾಳಲಿ ಎಂದು ಹಾರೈಸೋಣ.

Leave A Reply

Your email address will not be published.