Capricorn Horoscope: ಮಕರ ರಾಶಿಯವರು ಡಿಸೆಂಬರ್ ತಿಂಗಳಲ್ಲಿ ಇಂತಹ ವ್ಯಕ್ತಿಗಳಿಂದ ದೂರ ಇರಿ ಯಾಕೆಂದರೆ..

0 31,695

Capricorn Horoscope December 2023: ಮಕರ ರಾಶಿಯವರ ಡಿಸೆಂಬರ್ ತಿಂಗಳ ಮಾಸ ಭವಿಷ್ಯವನ್ನು ನಾವು ಇಲ್ಲಿ ತಿಳಿಸಿಕೊಡುತ್ತಿದ್ದೇವೆ. ಡಿಸೆಂಬರ್ ತಿಂಗಳಲ್ಲಿ ಮಕರ ರಾಶಿಯವರಿಗೆ ಯಾವೆಲ್ಲ ಶುಭಫಲಗಳು ಮತ್ತು ಲಾಭ ನಷ್ಟಗಳ ಬಗ್ಗೆ ನಾವು ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ.

ಮಕರ ರಾಶಿಯವರ ಅದೃಷ್ಟ ಬಣ್ಣ ನೀಲಿ ಹಾಗೂ ಕಪ್ಪು ಆಗಿರುತ್ತದೆ ಮತ್ತು ಇವರ ಅದೃಷ್ಟ ದೇವತೆ ಶ್ರೀ ಶನೇಶ್ಚರ ಆಗಿರುತ್ತಾನೆ. ಮಿತ್ರ ರಾಶಿ ಕುಂಬವಾದರೆ ಇವರಿಗೆ ಶತ್ರು ರಾಶಿ ಸಿಂಹವಾಗಿರುತ್ತದೆ. ಮಕರ ರಾಶಿಯವರನ್ನು ಒಳ್ಳೆಯ ಆಡಳಿತಕಾರರು ಎಂದು ಹೇಳಬಹುದು ಏಕೆಂದರೆ ಯಾವುದೇ ಸವಾಲಿನ ಸಮಸ್ಯೆಗಳು ಬಂದರೂ ಎದುರಿಸುವಂತಹ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ. ಇವರಿಗೆ ಯಾವೆಲ್ಲಾ ದಿನ ಶುಭಕಾರಿಯಾಗಿದೆ ಎಂದರೆ 1,10,17,28,30 ಮತ್ತು 31 ತಾರೀಕಿನಂದು ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಯಶಸ್ಸನ್ನು ಕಾಣುತ್ತೀರಿ. ಮಕರ ರಾಶಿಯವರದ್ದು ಮುಗ್ದ ವ್ಯಕ್ತಿತ್ವ ಹಾಗೂ ಸರಳ ಜೀವಿಗಳು.

ಪ್ರಯತ್ನಪಟ್ಟರೆ ನೀವು ಮಾಡುವಂತ ಪ್ರತಿ ಕೆಲಸವು ಸಫಲವಾಗುತ್ತದೆ ಹಾಗಾಗಿ ಈ ಸಂದರ್ಭವನ್ನು ನೀವು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಆದಾಯಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಮತ್ತು ಕಷ್ಟದ ದಿನಗಳು ಹಂತ ಹಂತವಾಗಿ ದೂರವಾಗುತ್ತದೆ. ಭೂಮಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ನೀವು ಲಾಭವನ್ನು ಗಳಿಸುತ್ತೀರಾ ಮತ್ತು ಕೆಲವರಿಗೆ ಕಾನೂನಿನ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ ಅಂತವರಿಗೆ ಈ ತಿಂಗಳಲ್ಲಿ ಪರಿಹಾರ ಸಿಗಲಿದೆ. ನಿಮ್ಮ ಎಲ್ಲ ಗುಟ್ಟುಗಳನ್ನು ನಿಮ್ಮ ಆತ್ಮೀಯರ ಜೊತೆ ಹಂಚಿಕೊಳ್ಳಬೇಡಿ ಏಕೆಂದರೆ ಅದರಿಂದ ನಿಮಗೆ ತೊಂದರೆ ಆಗಬಹುದು. ಜನಗಳಿಂದ ತೊಂದರೆಯಾಗುವ ಸಾಧ್ಯತೆಗಳು ಕೂಡ ಜಾಸ್ತಿ ಇದೆ ಹಾಗಾಗಿ ಬುದ್ಧಿವಂತಿಕೆಯಿಂದ ಮತ್ತು ತಾಳ್ಮೆಯಿಂದ ಎಲ್ಲವನ್ನು ಎದುರಿಸಿ.

ಮಕರ ರಾಶಿಯವರಿಗೆ ಮಾಡುವಂತಹ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಆದರೆ ಅಷ್ಟೇ ಸವಾಲುಗಳನ್ನು ಕೂಡ ಎದುರಿಸಬೇಕಾಗುತ್ತದೆ. ಎಚ್ಚರದಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮ ಪಾಲಾಗುತ್ತದೆ ಹಾಗೂ ಎಲ್ಲಾ ರೀತಿಯ ಧನ ಲಾಭಗಳು ಕೂಡ ನಿಮಗೆ ಸಿಗುತ್ತದೆ. ರಾಜಕಾರಣಿಗಳು ಇರುವಂತಹ ಹುದ್ದೆಯನ್ನು ಉಳಿಸಿಕೊಳ್ಳಲು ಅಥವಾ ಬೇರೆ ಯಾವುದೇ ಹುದ್ದೆಗೆ ಪ್ರಯತ್ನ ಪಡುತ್ತಿದ್ದರೆ ಅಂತವರಿಗೆ ಶುಭಫಲಗಳು ದೊರಕಬಹುದು. ಕಲಾವಿದರಿಗೆ ಕಲೆಯನ್ನು ಪ್ರದರ್ಶನ ಮಾಡಿಕೊಳ್ಳಲು ಇದು ಒಂದು ಒಳ್ಳೆಯ ಸಮಯ. ಆರೋಗ್ಯದಲ್ಲಿ ತುಂಬಾ ಅಭಿವೃದ್ಧಿಯನ್ನು ಕಾಣುತ್ತೀರ.

ಈ ತಿಂಗಳಲ್ಲಿ ನಿಮಗೆ ಆತಂಕ ಜಂಜಾಟ ಸಂತೋಷ ದುಃಖ ಎಲ್ಲ ರೀತಿಯ ಅನುಭವಗಳು ಕೂಡ ಆಗುತ್ತದೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಮಕ್ಕಳು ಯಾರಾದರೂ ಕೆಲಸವನ್ನು ಹುಡುಕುತ್ತಿದ್ದಾರೆ ಅಂತವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ. ಅನಿರೀಕ್ಷಿತವಾದ ಧನ ಲಾಭಗಳು ಸಿಗುತ್ತವೆ ಆದರೆ ಯಾವುದೇ ರೀತಿಯ ಸಾಲವನ್ನು ಮಾಡಲು ಹೋಗಬೇಡಿ.

16ನೇ ತಾರೀಖಿನ ನಂತರ ರಾಜಕಾರಣಿಯವರಿಗೆ ಒಳ್ಳೆಯ ಸಮಯ, ಇವರಿಗೆ ಸನ್ಮಾನಗಳು ಸಿಗುವ ಸಾಧ್ಯತೆ ಇದೆ. ದಿನಸಿ ವ್ಯಾಪಾರ ಮಾಡುವಂತವರಿಗೆ ಮತ್ತು ವೈದ್ಯಕೀಯ ವೃತ್ತಿ ಮಾಡುವಂತವರಿಗೆ ಕೆಲವು ಚಿಂತನೆ ಹಾಗೂ ಸವಾಲುಗಳು ಕಂಡುಬರುತ್ತವೆ ಎಚ್ಚರದಿಂದ ನಿಭಾಯಿಸಿದರೆ ನಿಮಗೆ ಒಳ್ಳೆಯದಾಗುತ್ತದೆ. ಅನಿರೀಕ್ಷಿತ ಖರ್ಚುಗಳು ಆಗುವ ಸಾಧ್ಯತೆಗಳು ಕೂಡ ಜಾಸ್ತಿ ಇದೆ. ವಾಹನ ಖರೀದಿ ಮಾಡಲು ಒಳ್ಳೆಯ ಸಮಯ. ಈ ತಿಂಗಳಲ್ಲಿ ಬರುವಂತಹ ಸಮಸ್ಯೆಗಳಿಗೆ ಪರಿಹಾರವೇನೆಂದರೆ ವಿಷ್ಣುದೇವಾಲಯಕ್ಕೆ ಕರ್ಪೂರ ಹಾಗೂ ತುಳಸಿಯನ್ನು ನೀಡಿ ಮತ್ತು ದೇವರ ಆರಾಧನೆಯನ್ನು ಜಾಸ್ತಿ ಮಾಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.