ಮಳೆ ಬೇಕು ಎನ್ನುವವರು ಹೆಚ್ಚು ಆದರೆ ಮಳೆ ನೀರನ್ನು ಸದುಪಯೋಗ ಮಾಡಬೇಕು ಎನ್ನುವವರು ಕಡಿಮೆ ಚಿಕ್ಕನಾಯಕನಹಳ್ಳಿಯಿಂದ ಪಶ್ಚಿಮದ ಈಶಾನ್ಯ ಮೂಲೆಗೆ ಮೂವತ್ತೈದು ಕಿಲೋ ಮೀಟರ್ ದೂರದಲ್ಲಿ ಬೋರನ ಕಣಿವೆ ಅಣೆಕಟ್ಟು ಕಂಡುಬರುತ್ತದೆ .ಇದೊಂದು ಚಿಕ್ಕ ಡ್ಯಾಂ ಉತ್ತರ ದಕ್ಷಿಣದ ಉದ್ದಕ್ಕೆ ಮೈಚಾಚಿಕೊಂಡಿರುವ ಒಂದು ದೊಡ್ಡ ಗುಡ್ಡಸಾಲು ಮತ್ತು ಚಿಕ್ಕನಾಯಕನ ಹಳ್ಳಿಯ ಮದಲಿಂಗನ ಕಣಿವೆಯ ಬೆಟ್ಟಸಾಲಿನ ಮುಂದುವರಿದ ಭಾಗದಂತೆ ಮಧ್ಯೆ ಬಿಡುವು ಕೊಟ್ಟು ಬೆಳೆದು ಹಬ್ಬಿರುವ ಬೆಟ್ಟಸಾಲು ಇದಾಗಿರುತ್ತದೆ

ಇದರ ಉತ್ತರ ಭಾಗದಲ್ಲಿ ಮತ್ತೆ ಬಿಡುವು ಕೊಟ್ಟಂತೆ ಹರಿದ ಒಂದು ಕಣಿವೆ ಪ್ರದೇಶ ಕಂಡು ಬರುತ್ತದೆ ಈ ಕಣಿವೆಯ ಎರಡೂ ಬದಿಯಲ್ಲಿ ಎರಡು ದೊಡ್ಡ ಬೆಟ್ಟಗಳು ಕಾಣಿಸುತ್ತದೆ ಮೈಸೂರು ಸಂಸ್ಥಾನದ ವರ ಜನಪರ ಕಾರ್ಯವನ್ನು ಮರೆಯುವಂತಿಲ್ಲ ಮೈಸೂರು ಸಂಸ್ಥಾನದ ರಾಜರು ಜನರಿಗೆ ಅಭಿಪ್ರಾಯಕ್ಕೆ ಬೆಂಬಲ ನೀಡುತ್ತಿದ್ದರು ನಾವು ಈ ಲೇಖನದ ಮೂಲಕ ಬೊರನ ಜಲಾಶದ ಬಗ್ಗೆ ತಿಳಿದುಕೊಳ್ಳೋಣ.

ಗಂಗರು ಕದಂಬರು ಹೊಯ್ಸರು ಮೈಸೂರು ಸಂಸ್ಥಾನ ಹೀಗೆ ಹಲವಾರು ರಾಜ ಮನೆತನಗಳು ನಮ್ಮ ಕನ್ನಡ ಮಣ್ಣನ್ನು ಆಳಿ ತಮ್ಮದೇ ಆದ ಛಾಪನ್ನು ಮೂಡಿಸಿ ಕುರುಹುಗಳನ್ನು ಇಟ್ಟಿದೆ ಕೆರೆ ಕಟ್ಟೆಗಳನ್ನು ಮತ್ತು ಅರಮನೆ ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ ಕರ್ನಾಟಕ ರಾಜ್ಯವನ್ನು ಆಳಿದ ರಾಜಮನೆತನಗಳು ಯುದ್ದ ಮಾಡಿದಷ್ಟೇ ಅಲ್ಲದೆ ಜನಪರ ಕಾರ್ಯವನ್ನು ಮಾಡಿದೆ ಅದರಲ್ಲೂ ಮೈಸೂರು ಸಂಸ್ಥಾನದವರು ಜನಪರ ಕಾರ್ಯವನ್ನು ಮರೆಯುವಂತಿಲ್ಲ ಮೈಸೂರು ಸಂಸ್ಥಾನದ ರಾಜರು ಜನರಿಗೆ ಅಭಿಪ್ರಾಯಕ್ಕೆ ಬೆಂಬಲ ನೀಡುತ್ತಿದ್ದರು

ತುಮಕೂರು ಸಮೀಪದ ಚಿಕ್ಕನಾಯಕನ ಹಳ್ಳಿ ಕೂ ಯ ಬೊರನ ಕಣಿವೆ ಜಲಾಶಯವನ್ನೂ ನಿರ್ಮಿಸಿದರು ಎರಡು ಗುಡ್ಡಗಳ ನಡುವೆ ಕಟ್ಟಲ್ಪಟ್ಟ ಅಣೆಕಟ್ಟು ಕೆ ಅರ್ ಎಸ್ ಕಟ್ಟುವ ಮೊದಲೇ ನಿರ್ಮಿಸಿದ ಅಣೆಕಟ್ಟು ಇದ್ದಾಗಿದೆ ಒಂದು ಸಾವಿರದ ಎಂಟು ನೂರಾ ಎಂಬತ್ತೆಂಟರಲ್ಲಿ ನಿರ್ಮಾಣವಾಗಿದೆ ಕೇವಲ ನಾಲ್ಕು ವರ್ಷದಲ್ಲಿ ನಿರ್ಮಾಣ ಕಾರ್ಯ ಪೂರ್ಥಿಗೊಂಡಿದೆ ಈ ಅಣೆಕಟ್ಟು ನಿರ್ಮಾಣದ ಹಿಂದೆ ಒಂದು ರೋಚಕ ಕಥೆಯಿದೆ.

ಮೈಸೂರು ಸಂಸ್ಥಾನದ ಜಯಚಾಮರಾಜ ಒಡೆಯರ್ ಆಳ್ವಿಕೆ ಮಾಡಿತ್ತಿದ್ದ ಸಮಯದಲ್ಲಿ ಮಳೆ ಬಂದು ಹೋದ ಮೇಲೆ ನೀರು ವ್ಯರ್ಥವಾಗುದನ್ನುನೋಡುತ್ತಿದ್ದ ಬೊರ ಎಂಬ ಕುರಿ ಕಾಯುವವನು ಮಹಾರಾಜರ ಬಳಿ ನಮ್ಮ ಊರಿಗೆ ಒಂದು ಕೆರೆ ಕಟ್ಟಿಸಿ ಕೊಡಿ ಮಳೆ ನೀರು ಸುಮ್ಮನೆ ವ್ಯರ್ಥ ವಾಗತ್ತಿದೆ ಕೆರೆ ಕಟ್ಟಿಸಿದರೆ ಮಳೆ ಇರದೆ ಇರುವಾಗ ನೀರು ಉಪಯೋಗಕ್ಕೆ ಬರುತ್ತದೆ ನೀರನ್ನು ಉಪಯೋಗಿಸಿಕೊಂಡು ಬದುಕುತ್ತೇನೆ ಎಂದು ಹೇಳುತ್ತಾನೆ ಅವನ ಮತ್ತು ಕೇಳಿ ಮಹಾರಾಜರೂ ತನ್ನ ಪ್ರಜೆ ಗಳಿಗೆ ಎಂದಿಗೂ ನೀರಿನ ಸಮಸ್ಯೆ ಆಗಬಾರದು ಎಂದು ಕೊಂಡು ತುಮಕೂರು ಸಮೀಪದ ಚಿಕ್ಕನಾಯಕನ ಹಳ್ಳಿಯಲ್ಲಿ ಅಣೆಕಟ್ಟು ನಿರ್ಮಿಸುವ ಯೋಚನೆ ಮಾಡಿದರು

ಮಹಾರಾಜರ ಆಲೋಚನೆಗೆ ಅನುಗುಣವಾಗಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಪುಟ್ಟ ಜಲಾಶಯವನ್ನು ನಿರ್ಮಿಸಲಾಗಿದೆ ಕರ್ನಲ್ ರಾಘವ ನಾಯ್ಡು ಮತ್ತು ಇನ್ನಿತರರ ಎಂಜಿನಿಯರಿಂಗ ನೇತೃತ್ವದಲ್ಲಿ ಅಣೆಕಟ್ಟನ್ನು ನಿರ್ಮಿಸಲಾಯಿತು ಹಾಗೆಯೇ ಆಗಿನ ಕಾಲದಲ್ಲಿಯೇ ಎರಡು ಲಕ್ಷದ ಇಪ್ಪತ್ತು ಸಾವಿರ ಖರ್ಚು ಜಲಾಶಯ ನಿರ್ಮಾಣಕ್ಕೆ ತಗುಲಿತ್ತು .

ಕಲ್ಲು ಮತ್ತು ಮಣ್ಣು ಗಾರೆ ಯಿಂದ ಜಲಾಶಯವನ್ನು ನಿರ್ಮಿಸಲಾಗಿದೆ ಎರಡು ಸಾವಿರದ ಎರಡು ಎಕರೆ ಇಪ್ಪತ್ತು ಗಂಟೆ ಪ್ರದೇಶವನ್ನು ಹೊಂದಿದೆ ಅಣೆಕಟ್ಟು ಕಟ್ಟುವಾಗ ಶೇಷಾದ್ರಿ ಅಯಾರ್ ಅವರು ಮೈಸೂರು ಸಂಸ್ಥಾನದ ದಿವಾನ ರಾಗಿದ್ದರು ಬೋರಾ ಎಂಬ ಕುರಿ ಕಾಯುವವನ ಮೇರೆಗೆ ಡ್ಯಾಮ ನಿರ್ಮಿಸಲಾಗಿದೆ ಹೀಗಾಗಿ ಬೊರಣ ಜಲಾಶಯ ಎಂದೇ ಕರೆಯಲಾಗುತ್ತದೆ ಈ ಜಲಾಶಯದ ಮುಂಭಾಗದಲ್ಲಿ ಭೈರವೇಶ್ವರ ದೇವಸ್ಥಾನವಿದೆ ಭೈರವಕಣಿವೆ ಎಂದು ಇದ್ದ ಕಣಿವೆ ಕಾಲ ನಂತರ ಬೋರನ ಕಣಿವೆ ಎಂದು ಕರೆಯಲಾಯಿತು ಹಾಗೂ ನೂರಾ ಇಪ್ಪತ್ತೈದು ವರ್ಷದಷ್ಟು ಹಳೆಯ ಜಲಶಯವಾಗಿದೆ ಸ್ವಲ್ಪ ವರ್ಷದ ಹಿಂದೆ ಸಾಯಿಬಾಬಾ ಮಂದಿರವನ್ನು ನಿರ್ಮಿಸಿದ್ದು ಇದು ಒಂದು ಧಾರ್ಮಿಕ ತಾಣವಾಗಿದೆ ಬೋರಣ ಕಣಿವೆ ನೋಡಲು ನಿತ್ಯ ನೂರಾರು ಜನರು ಬರುತ್ತಾರೆ ಡ್ಯಾಮನಲ್ಲಿ ನಿಂತು ನೋಡಿದರೆ ಹನ್ನೆರಡು ಕಿಲೋಮೀಟರ್ ವರೆಗೆ ನೀರು ನಿಲ್ಲುವ ವಿಸ್ತಾರವಾದ ನೋಟ ವನ್ನು ನೋಡಬಹುದು ಪ್ರವಾಸೋದ್ಯಮದ ಕೇಂದ್ರವಾಗಿ ಈ ಜಲಾಶಯವು ಗುರುತಿಸಿಕೊಂಡಿದೆ ಕುರಿ ಕಾಯುವವನ ಮಾತಿಗೆ ಬೆಂಬಲ ನೀಡಿದ ಜಯಚಾಮರಾಜ ಒಡೆಯರ್ ಪಡೆದ ಕನ್ನಡ ನಾಡಿಗೆ ಹೆಮ್ಮೆ ಪಡೆದ ವಿಷಯವಾಗಿದೆ.

Leave a Reply

Your email address will not be published. Required fields are marked *