ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಇದರಲ್ಲಿ ಮಹಿಳೆಯರು ಮಾತ್ರವೇ ಸುಂದರವಾಗಿ ಕಾಣಬೇಕು ಪುರುಷರು ತಾವೂ ಕೂಡಾ ಸುಂದರವಾಗಿ ಕಾಣಲು ಆಸೆ ಪಡಬಾರದು ಎಂಬ ಬೇಧವಿಲ್ಲ. ಮಹಿಳೆಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಅನೇಕ ಬಗೆಯ ಸೌಂದರ್ಯ ವರ್ಧಕಗಳು ಮತ್ತು ಮೇಕಪ್ ಬಳಕೆ ಮಾಡುತ್ತಾರೆ. ಇದರಿಂದಾಗಿ ಮುಖದ ಮೇಲೆ ಅನೇಕ ಮೊಡವೆಗಳು ಕಾಣಿಸಿಕೊಳ್ಳುತ್ತವೆ ಹಾಗೂ ಕಲೆಗಳೂ ಆಗಿರುತ್ತವೆ ಮೇಕಪ್ ಮಾಡಿಕೊಂಡು ಇವುಗಳನ್ನು ಸ್ವಲ್ಪ ಮಟ್ಟಿಗೆ ಅಡಗಿಸಿಕೊಳ್ಳಬಹುದು. ಇನ್ನು ಮಹಿಳೆಯರಿಗೆ ಮಾತ್ರ ಅಲ್ಲದೆ ಪುರುಷರಿಗೂ ಕೂಡಾ ಮುಖದ ಮೇಲೆ ಕಪ್ಪು ಕಲೆಗಳು ಉಂಟಾಗುತ್ತವೆ ಅವುಗಳನ್ನು ಹೇಗೆ ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ತಮ್ಮ ಮುಖದ ಮೇಲೆ ಆಗಿರುವಂತಹ ಕಲೆಗಳನ್ನು ತೆಗೆಯಲು ಪುರುಷರೂ ಕೂಡಾ ಸಾಕಶ್ಟು ಹರಸಾಹಸ ಪಡುವುದು ಉಂಟು. ಆದರೆ ಏನೂ ಪ್ರಯೋಜನ ಆಗುವುದಿಲ್ಲ. ಪುರುಷರು ಹೊರಗಡೆ ಬಿಸಿಲಿನಲ್ಲಿ ಹೆಚ್ಚಾಗಿ ತಿರುಗಾಡುವ ಕಾರಣ ಕಲೆಗಳು ಆಗುತ್ತವೆ. ಮಹಿಳೆಯರಿಗೆ ತಮ್ಮ ಮುಖದ ಮೇಲೆ ಆದ ಮೊಡವೆ ನಿವಾರಣೆಗೆ ಕಲೆಗಳ ನಿವಾರಣೆಗೆ ಸಾಕಷ್ಟು ಕ್ರೀಮ್ ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ ಆದರೆ ಪುರುಷರಿಗೆ ಅಷ್ಟೊಂದು ಕ್ರೀಮ್ ಗಳ ಲಭ್ಯತೆ ಇಲ್ಲ. ಹಾಗಾಗಿ ಪುರುಷರು ಕೂಡಾ ಮಹಿಳೆಯರು ಬಳಸುವ ಕ್ರೀಮ್ ಗಳನ್ನೇ ಬಳಕೆ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರಿಗೆ ಎಂದೇ ಬೇರೆ ಬೇರೆ ರೀತಿಯ ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯ ಆಗುತ್ತಿವೆ. ಮಹಿಳೆಯರ ಕ್ರೀಮ್ ಪುರುಷರಿಗೆ ಹೆಚ್ಚು ಪ್ರಯೋಜನಕಾರಿ ಎನ್ನಿಸುವುದಿಲ್ಲ ಕಾರಣ ಪುರುಷರ ಚರ್ಮ ಮಹಿಳೆಯರ ಚರ್ಮಕ್ಕಿಂತ ಇಪ್ಪತ್ತೈದು ಪಟ್ಟು ದಪ್ಪವಾಗಿ ಇರುತ್ತದೆ.

ಇನ್ನು ಪುರುಷರ ಚರ್ಮ ಮಹಿಳೆಯರ ಚರ್ಮಕ್ಕಿಂತ ಹೆಚ್ಚಿನ ಕಾಲಾಜನ್ ಬಿಡುಗಡೆ ಮಾಡುವುದರಿಂದ ಪುರುಷರ ಚರ್ಮ ಗಡುಸಾಗಿ ಇರುತ್ತದೆ. ಅಷ್ಟೇ ಅಲ್ಲದೆ ಇದು ವಯಸ್ಸಾದ ಲಕ್ಷಣವನ್ನು ಕಡಿಮೆ ಮಾಡುತ್ತದೆ. ಪುರುಷರು ಈ ಕೆಲವು ನೈಸರ್ಗಿಕ ಚಿಕಿತ್ಸೆಗಳನ್ನು ಬಳಸಿಕೊಂಡು ತಮ್ಮ ಸೌಂದರ್ಯ ಕಾಪಾಡಿಕೊಳ್ಳಬಹುದು. ಹಾಗಾದರೆ ಆ ನೈಸರ್ಗಿಕ ಚಿಕಿತ್ಸೆಗಳು ಏನು ಅನ್ನೋದನ್ನ ನೋಡೋಣ. ಮೊದಲಿನ ನೈಸರ್ಗಿಕ ಚಿಕಿತ್ಸೆ ಎಂದರೆ ನಿಂಬೆ ಹಣ್ಣು ಹಾಗೂ ಮೊಸರಿನ ಚಿಕಿತ್ಸೆ. ಒಂದು ನಿಂಬೆ ಹಣ್ಣಿನ ರಸವನ್ನು ತೆಗೆದುಕೊಂಡು ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ಮೊಸರು ಸೇರಿಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಮುಖ ತೊಳೆಯಬೇಕು. ಇದೆ ರೀತಿ ವಾರದಲ್ಲಿ ಎರಡು ಮೂರು ಬಾರಿ ಮಾಡಬೇಕು.

ಎರಡನೇ ನೈಸರ್ಗಿಕ ಚಿಕಿತ್ಸೆ ಎಂದರೆ ಆಲಿವ್ ಆಯಿಲ್ ಮತ್ತು ವಿನೆಗರ್. ಎರಡು ಚಮಚ ಆಲಿವ್ ಆಯಿಲ್ ಮತ್ತು ಒಂದು ಚಮಚ ವಿನಿಗರ್ ಇವೆರಡನ್ನೂ ಒಂದು ಬೌಲ್ನಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ಚರ್ಮಕ್ಕೆ ಹಚ್ಚಿಕೊಳ್ಳಬೇಕು. ನಂತರ ಅರ್ಧ ಗಂಟೆಯ ಕಾಲ ಹಾಗೆಯೇ ಬಿಟ್ಟು ಆಮೇಲೆ ತಣ್ಣೀರಿನಿಂದ ಮುಖ ತೊಳೆಯಬೇಕು. ಇದನ್ನು ವಾರಕ್ಕೆ ಒಮ್ಮೆಯಾದರೂ ಮಾಡಲೇಬೇಕು. ಇನ್ನೊಂದು ನೈಸರ್ಗಿಕ ಚಿಕಿತ್ಸೆ ಎಂದರೆ ಕಡಲೆ ಹಿಟ್ಟು ಮತ್ತು ಮಜ್ಜಿಗೆ. ಚರ್ಮದ ಹೊಳಪನ್ನು ಹೆಚ್ಚಿಸಲು ಕಡಲೆ ಹಿಟ್ಟು ಬಳಕೆ ಉತ್ತಮ. ಎರಡು ಚಮಚ ಕಡಲೆ ಹಿಟ್ಟು , ಒಂದು ಚಮಚ ಮಜ್ಜಿಗೆ ಒಂದು ಚಮಚ ಟೊಮೆಟೊ ಜ್ಯೂಸ್ ಮತ್ತು ಅರ್ಧ ಚಮಚ ಅರಿಶಿಣ ಇವೆಲ್ಲವನ್ನೂ ಸೇರಿಸಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ನಂತರ ತಣ್ಣನೆಯ ನೀರಿನಲ್ಲಿ ಮುಖ ತೊಳೆಯಬೇಕು. ಇದನ್ನು ಪ್ರತೀ ದಿನ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಈ ಸುಲಭವಾದ ಸರಳವಾದ ಅಡ್ಡಪರಿಣಾಮ ಇಲ್ಲದ ನೈಸರ್ಗಿಕ ಚಿಕಿತ್ಸೆ ಮಾಡಿಕೊಳ್ಳುವ ಮೂಲಕ ಮುಖದ ಹೊಳಪನ್ನು ಹೆಚ್ಚಿಸಿಕೊಳ್ಳಬಹುದು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave a Reply

Your email address will not be published. Required fields are marked *