Aries Horoscope 2024: ಮೇಷ ರಾಶಿಯಲ್ಲಿ ಜನಿಸಿದವರು ಅಶ್ವಿನಿ ನಕ್ಷತ್ರದ ನಾಲ್ಕು ಚರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕ ನಕ್ಷತ್ರದ ಮೊದಲನೆ ಚರಣದಲ್ಲಿ ಜನಿಸಿರುತ್ತಾರೆ. ಮೇಷ ರಾಶಿಯಲ್ಲಿ ಜನಿಸಿದವರ 2024ರ ರಾಶಿ ಭವಿಷ್ಯದ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮ ಮುಂದೆ ಇಡಲಾಗಿದೆ.
ಮೇಷ ರಾಶಿಯ ಲಾಂಛನ ಆಡು ಆಗಿರುತ್ತದೆ, ಮೇಷ ರಾಶಿ ಅಗ್ನಿ ತತ್ವದ ರಾಶಿ ಆಗಿರುತ್ತದೆ. ಈ ರಾಶಿಯ ಅಧಿಪತಿ ಕುಜ ಆಗಿದ್ದು ಈ ರಾಶಿಯ ರತ್ನ ಹವಳ ಆಗಿರುತ್ತದೆ. ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಆಗಿರುತ್ತದೆ, ಭಾನುವಾರ ಮತ್ತು ಮಂಗಳವಾರ ಅದೃಷ್ಟದ ವಾರವಾಗಿರುತ್ತದೆ. ಆಂಜನೇಯ ಸ್ವಾಮಿ ಹಾಗೂ ಮಹಾಶಿವ ಮೇಷ ರಾಶಿಯವರ ಅದೃಷ್ಟದ ದೇವರಾಗಿರುತ್ತಾರೆ. ಇವರ ಅದೃಷ್ಟದ ಸಂಖ್ಯೆ ಆರು ಮತ್ತು ಒಂಭತ್ತು ಆಗಿದ್ದರೆ 9 27 ಅದೃಷ್ಟದ ದಿನಾಂಕಗಳಾಗಿರುತ್ತವೆ.
Aries Horoscope 2024
ಈ ರಾಶಿಯ ಮಿತ್ರ ರಾಶಿಗಳು ಸಿಂಹ, ಧನಸ್ಸು, ತುಲಾ ಆಗಿರುತ್ತದೆ ಹಾಗೂ ಮಿಥುನ ಹಾಗೂ ಕನ್ಯಾ ರಾಶಿಗಳು ಶತ್ರು ರಾಶಿಗಳಾಗಿರುತ್ತವೆ. ಮೇಷ ರಾಶಿಯವರು ಕೋಪಿಷ್ಟರು ಹಾಗೂ ಹಠಮಾರಿ ಸ್ವಭಾವವನ್ನು ಹೊಂದಿರುತ್ತಾರೆ. ಗುರು 2024ನೆ ಇಸ್ವಿಯಲ್ಲಿ ಮೇಷ ರಾಶಿಯಲ್ಲಿಯೆ ಇರುವುದರಿಂದ ಮೇಷ ರಾಶಿಯಲ್ಲಿ ಜನಿಸಿದವರಿಗೆ ಹಣಕಾಸಿನ ತೊಂದರೆ ಕೆಲವು ಅನಾವಶ್ಯಕ ತೊಂದರೆಗಳು ಎದುರಾಗಬಹುದು. ಈ ಸಮಯದಲ್ಲಿ ಮೇಷ ರಾಶಿಯವರು ಸಾಲದ ಬಾಧೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. 2024ರಲ್ಲಿ ಮೇಷ ರಾಶಿಯವರ ಮೇಲೆ ಶನಿ ಮಹಾತ್ಮನ ಅನುಗ್ರಹ ದೊರೆಯಲಿದ್ದು ಕೀರ್ತಿ ಪ್ರತಿಷ್ಠೆ ಸಿಗಲಿದೆ.
ಮೇಷ ರಾಶಿಯವರು ಈ ವರ್ಷದಲ್ಲಿ ಆಸ್ತಿ ಖರೀದಿ ಮಾಡುವ ಸಾಧ್ಯತೆ ಇದೆ, ಉದ್ಯೋಗ ಹುಡುಕುತ್ತಿರುವ ಯುವಕರು ಈ ವರ್ಷ ಸಿಹಿ ಸುದ್ದಿಯನ್ನು ಪಡೆಯುತ್ತಾರೆ. ರಾಜಕೀಯದಲ್ಲಿ ಕೆಲಸ ಮಾಡುತ್ತಿರುವ ಮೇಷ ರಾಶಿಯವರಿಗೆ ಒಳ್ಳೆಯದಾಗುತ್ತದೆ. 2024ರಲ್ಲಿ ಮೇಷ ರಾಶಿಯ ಶತ್ರುಗಳಿಗೆ ವಿನಾಶ ಉಂಟಾಗುತ್ತದೆ. ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಗುರುವಿನ ಅನುಗ್ರಹ ಕಡಿಮೆ ಇದೆ ಆದರೆ ಶನಿ ಮಹಾದೇವನ ಅನುಗ್ರಹ ಹೆಚ್ಚಾಗಿದ್ದು ಸವಾಲುಗಳ ನಡುವೆಯೂ ಇವರು ಸಾಧನೆ ಮಾಡುತ್ತಾರೆ. ಇವರು 2024ರಲ್ಲಿ ಮಹಾ ಮೃತ್ಯುಂಜಯ ಜಪವನ್ನು ಮಾಡುವುದು ಒಳ್ಳೆಯದು. ಮನೆದೇವರು ಹಾಗೂ ಕುಲದೇವರ ಆರಾಧನೆ ಮಾಡುವುದರಿಂದಲೂ ಒಳ್ಳೆಯದಾಗುತ್ತದೆ ಈ ಮಾಹಿತಿಯನ್ನು ನೀವು ಓದಿ ನಿಮ್ಮ ಪರಿಚಯಸ್ತರಿಗೂ ತಿಳಿಸಿ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.